ಜಲಿಯನ್ ವಾಲಾಬಾಗ್ ದುರಂತ ನೆನಪಿಸುವ ಕೇಸರಿ–2 ಸಿನಿಮಾ ಜನರಿಗೆ ಇಷ್ಟವಾಯ್ತಾ; ಇಲ್ಲಿದೆ ಟ್ವಿಟರ್ ರಿವ್ಯೂ
ಕೇಸರಿ ಚಾಪ್ಟರ್ 2 ಟ್ವಿಟರ್ ರಿವ್ಯೂ: ಅಕ್ಷಯ್ ಕುಮಾರ್, ಆರ್. ಮಾಧವನ್ ಹಾಗೂ ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೇಸರಿ ಚಾಪ್ಟರ್ 2 ಸಿನಿಮಾ ಇಂದು ಬಿಡುಗಡೆಯಾಗಲಿದೆ. ಜಲಿಯನ್ ವಾಲಾಬಾಗ್ ದುರಂತ ನೆನಪಿಸುವ ಈ ಚಿತ್ರ ಹೇಗಿದೆ, ಟ್ವಿಟರ್ನಲ್ಲಿ ಸಿನಿ ಪ್ರೇಕ್ಷಕರು ಏನಂದ್ರು ನೋಡಿ.

ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ ಹಾಗೂ ಆರ್. ಮಾಧವನ್ ನಟಿಸಿರುವ ಕೇಸರಿ ಚಾಪ್ಟರ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ 106 ನೇ ವಾರ್ಷಿಕೋತ್ಸವದ ದಿನವಾದ ಇಂದು (ಏಪ್ರಿಲ್ 18) ಬಿಡುಗಡೆಯಾಗಿದೆ. ‘ಕೇಸರಿ ಚಾಪ್ಟರ್ 2: ದಿ ಅನ್ಟೋಲ್ಡ್ ಸ್ಟೋರಿ ಆಫ್ ಜಲಿಯನ್ ವಾಲಾಬಾಗ್‘ ಎಂಬುದು ಈ ಚಿತ್ರ ಪೂರ್ಣ ಶೀರ್ಷಿಕೆ. ಐತಿಹಾಸಿಕ ಕಥಾಹಂದರ ಹಾಗೂ ನ್ಯಾಯಾಲಯ ಹಿನ್ನೆಲೆಯುಳ್ಳ ಈ ಚಿತ್ರಕ್ಕೆ ಸಿಂಗ್ ತ್ಯಾಗಿ ನಿರ್ದೇಶನವಿದೆ. ಧರ್ಮ ಪ್ರೊಡಕ್ಷನ್, ಲಿಯೊ ಮಿಡಿಯಾ ಕಲೆಕ್ಟಿವ್ ಮತ್ತು ಕೇಪ್ ಆಫ್ ಗುಡ್ ಫಿಲ್ಮಸ್ ಚಿತ್ರದ ನಿರ್ಮಾಣ ಹೊಣೆಯನ್ನು ಹೊತ್ತಿವೆ. ರಘು ಪಾಲಟ್ ಮತ್ತು ಪುಷ್ಪಾ ಪಾಲಟ್ ಅವರ‘ದಿ ಕೇಸ್ ದಟ್ ಶಾಕ್ ದಿ ಎಂಪೈರ್‘ ಪುಸ್ತಕವನ್ನು ಆಧರಿಸಿದೆ. ಇದು ಸಿ. ಶಂಕರನ್ ನಾಯರ್ ಮತ್ತು 1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸುತ್ತ ಕೇಂದ್ರೀಕೃತವಾಗಿದೆ.
ಜಲಿಯನ್ ವಾಲಾಬಾಗ್ ದುರಂತದ ಕಥೆ ಹೇಳುವ ಕೇಸರಿ ಚಾಪ್ಟರ್ 2 ಚಿತ್ರ ಇಂದು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಎಲ್ಲೆಡೆ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಅಕ್ಷಯ್, ಮಾಧವನ್ ಹಾಗೂ ಅನನ್ಯಾ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಇದೊಂದು ಅದ್ಭುತ ಸಿನಿಮಾ ಎಂದಿದ್ದಾರೆ ಮಾತ್ರವಲ್ಲ ಈ ಚಿತ್ರದಲ್ಲಿನ ನಟನೆಗೆ ಅಕ್ಷಯ್ ಕುಮಾರ್ಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
‘ಚಿತ್ರದ ಫಸ್ಟ್ ಹಾಫ್ ಸೂಪರ್ ಆಗಿದೆ, ಬ್ಲಾಕ್ ಬಸ್ಟರ್. ಅಕ್ಷಯ್ ಕುಮಾರ್ ಈಸ್ ಬ್ಯಾಕ್. ಚಿತ್ರ ಭಾವನಾತ್ಮಕವಾಗಿದೆ ಮತ್ತು ಪರಿಣಾಮಾತ್ಮಕವಾಗಿದೆ, ಎರಡನೇ ಭಾಗಕ್ಕೆ ಕಾಯಿರಿ‘ ಎಂದು ಚಿತ್ರ ನೋಡಿದ ನೆಟ್ಟಿಗರು ಬರೆದುಕೊಂಡಿದ್ದಾರೆ.
‘ಕೇಸರಿ ಚಾಪ್ಟರ್ 2 ಸಿನಿಮಾ ಅದ್ಭುತವಾಗಿದೆ. ಸತ್ಯ ಹೊರ ಬಿದಿದ್ದೆ. ಜನರಲ್ ಡಯರ್ ಬಣ್ಣ ಬದಲಾಗಿದೆ. ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ, ಮಾಧವನ್ ಅದ್ಭುತವಾಗಿ ನಟಿಸಿದ್ದಾರೆ‘ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
‘ಕೇಸರಿ ಚಾಪ್ಟರ್ 2 ಬಹಳ ಅದ್ಭುತ ಸಿನಿಮಾ. ನಮ್ಮ ಇತಿಹಾಸದ ಒಂದು ಅದ್ಭುತ ಅಧ್ಯಾಯವನ್ನು ತೆರೆ ಮೇಲೆ ತಂದಿದ್ದಾರೆ. ರಾಷ್ಟ್ರೀಯತೆ, ದೇಶಭಕ್ತಿ, ಶೌರ್ಯ ಈ ಎಲ್ಲವೂ ಕೇಸರಿ ಚಾಪ್ಟರ್ 2 ನಲ್ಲಿದೆ. ಅಕ್ಷಯ್ ಕುಮಾರ್ ಅವರ ವೃತ್ತಿಜೀವನದ ಅದ್ಭುತ ಚಿತ್ರ. ತಪ್ಪದೇ ನೋಡಿ‘ ಎಂದು ಎಕ್ಸ್ನಲ್ಲಿ ಬರೆಯಲಾಗಿದೆ.
‘ಈ ಚಿತ್ರ ನನಗೆ ನಿರಾಸೆ ಮೂಡಿಸಿದೆ‘ ಎಂದು ಸಿನಿ ಪ್ರೇಮಿಯೊಬ್ಬರು ಬರೆದುಕೊಂಡಿದ್ದಾರೆ.
‘ಕೇಸರಿ ಅಧ್ಯಾಯ 2 ಸಂಪೂರ್ಣವಾಗಿ ಅದ್ಭುತವಾಗಿದೆ. ಭಾರತದ ಅದಮ್ಯ ಚೈತನ್ಯಕ್ಕೆ ಒಂದು ಪ್ರಬಲ ಗೌರವ. ಅಕ್ಷಯ್, ಮಾಧವನ್ ಹಾಗೂ ಅನನ್ಯಾ ಅದ್ಭುತವಾಗಿ ನಟಿಸಿದ್ದಾರೆ. ದೇಶಭಕ್ತಿಯಿಂದ ಕೂಡಿದ ಈ ಸಿನಿಮಾವನ್ನು ಎಲ್ಲರೂ ನೋಡಬೇಕು‘ ಇನ್ನೊಬ್ಬರು ಬರೆದುಕೊಂಡಿದ್ದಾರೆ.
‘ಕೇಸರಿ ಚಾಪ್ಟರ್ 2 ಹೃದಯ ಸ್ಪರ್ಶಿ ದೃಶ್ಯಗಳನ್ನು ಹೊಂದಿರುವ ಸಿನಿಮಾ. ಕೆಲವು ಕಥೆಗಳನ್ನು ನಾವು ಆಚರಿಸಬೇಕು. ಶಂಕರನ್ ನಾಯರ್ ಹೇಳಿದ ಈ ಕಥೆ ಅಂತವುಗಳಲ್ಲಿ ಒಂದು. ಕೇಸರಿ ಭಾಗ 2 ರಲ್ಲಿ ಭಾವನೆ, ದೇಶಭಕ್ತಿ, ಪ್ರಬಲ ಕೋರ್ಟ್ ದೃಶ್ಯ, ಚಪ್ಪಾಳೆ ತಟ್ಟುವ ಈ ಎಲ್ಲಾ ಸಂಭಾಷಣೆಗಳಿಂದ ಕೂಡಿದೆ‘ ಎಂದು ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.