ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಚೇತನ್‌ ಅಹಿಂಸಾ ಹೀಗಂದ್ರು
ಕನ್ನಡ ಸುದ್ದಿ  /  ಮನರಂಜನೆ  /  ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಚೇತನ್‌ ಅಹಿಂಸಾ ಹೀಗಂದ್ರು

ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಚೇತನ್‌ ಅಹಿಂಸಾ ಹೀಗಂದ್ರು

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದಿದ್ದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಇದೀಗ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿಭಾನ್ವಿತ ನಿರ್ದೇಶಕರಾಗಿರುವ ಕಶ್ಯಪ್, ಇಂತಹ ಪ್ರಶ್ನಾರ್ಹ ಪದಗಳಿಗೆ ಕ್ಷಮೆಯಾಚಿಸಬೇಕು" ಎಂದಿದ್ದಾರೆ.

ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಚೇತನ್‌ ಅಹಿಂಸಾ ಹೀಗಂದ್ರು
ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೇಳಿಕೆಗೆ ಚೇತನ್‌ ಅಹಿಂಸಾ ಹೀಗಂದ್ರು

ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಬಾಲಿವುಡ್‌ ನಟ ನಿರ್ದೇಶಕ ಅನುರಾಗ್‌ ಕಶ್ಯಪ್‌ ನೀಡಿದ ಹೇಳಿಕೆ ಚರ್ಚೆಯ ವಿಷಯವಾಗಿದೆ. ಬ್ರಾಹ್ಮಣ ಸಮುದಾಯದ ಬಗ್ಗೆ ಕಟುವಾಗಿ ಕಾಮೆಂಟ್‌ ಹಾಕಿರುವ ಅವರ ನಡೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಅವರ ವಿರುದ್ಧ ದೂರು ನೀಡುವ ಕೆಲಸವಾಗುತ್ತಿದೆ. ಈ ನಡುವೆ ಇದೇ ಅನುರಾಗ್‌ ಕಶ್ಯಪ್‌ ಹೇಳಿಕೆ ಬಗ್ಗೆ ಸ್ಯಾಂಡಲ್‌ವುಡ್‌ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಾಗಿರುವ ಕಶ್ಯಪ್, ಇಂತಹ ಪ್ರಶ್ನಾರ್ಹ ಪದಗಳಿಗೆ ಕ್ಷಮೆಯಾಚಿಸಬೇಕು" ಎಂದಿದ್ದಾರೆ.

ನಟ ಚೇತನ್‌ ಅಹಿಂಸಾ ಸಿನಿಮಾ ನಟನಾದರೂ, ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ತಮ್ಮದೇ ಆದ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ರಾಜಕೀಯ, ಸಿನಿಮಾ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಮಾತನಾಡುವ ಭರದಲ್ಲಿ ಟೀಕೆಗಳನ್ನೂ ಎದುರಿಸಿದ ಉದಾಹರಣೆಗಳಿವೆ. ಇದೀಗ ಬ್ರಾಹ್ಮಣರ ಬಗ್ಗೆ ಅನುರಾಗ್‌ ಕಶ್ಯಪ್ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಚೇತನ್‌ ಅಹಿಂಸಾ ಹೇಳಿದ್ದೇನು?

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಚೇತನ್‌ ಅಹಿಂಸಾ, "ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ’ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ. ಕಶ್ಯಪ್ ಅವರು ಬ್ರಾಹ್ಮಣರಾಗಿ ಹುಟ್ಟಿರಬಹುದು ಮತ್ತು ಸ್ವವಿಮರ್ಶೆ ಶ್ಲಾಘನೀಯವಾಗಿದ್ದರೂ, ಈ ಪದಗಳು ಅವಹೇಳನಕಾರಿ ಮತ್ತು ಅಮಾನವೀಯವಾಗಿವೆ. ಇನ್ನೊಬ್ಬ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುವುದನ್ನು ಅಥವಾ ಮೂತ್ರ ವಿಸರ್ಜಿಸುವುದಾಗಿ ಬೆದರಿಕೆ ಹಾಕುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಾಗಿರುವ ಕಶ್ಯಪ್, ಇಂತಹ ಪ್ರಶ್ನಾರ್ಹ ಪದಗಳಿಗೆ ಕ್ಷಮೆಯಾಚಿಸಬೇಕು" ಎಂದಿದ್ದಾರೆ.

ʻಫುಲೆʼ ಸಿನಿಮಾದಿಂದ ಶುರುವಾದ ವಿವಾದ

ಅನಂತ್ ಮಹಾದೇವನ್ ನಿರ್ದೇಶಿಸಿದ ʻಫುಲೆʼ ಸಿನಿಮಾ ಇನ್ನೇನು ಬಿಡುಗಡೆಗೆ ಸನಿಹದಲ್ಲಿದೆ. ಈ ಚಿತ್ರದಲ್ಲಿ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಪಾತ್ರದಲ್ಲಿ ಪ್ರತೀಕ್‌ ಗಾಂಧಿ ನಟಿಸಿದರೆ, ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ಪತ್ರಲೇಖ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಏ. 25ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇದೇ ಸಿನಿಮಾದ ಬಗ್ಗೆ ಸೆನ್ಸಾರ್‌ ಬೋರ್ಡ್‌ ನೀಡಿದ ಒಂದಷ್ಟು ಬದಲಾವಣೆಗಳನ್ನು ಖಂಡಿಸಿದ ಅನುರಾಗ್‌ ಕಶ್ಯಪ್‌, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

"ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಏಕೆ ಇದ್ದರು? ಮೋದಿಜಿಯವರು ಹೇಳುವಂತೆ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದಾದರೆ, ನಿಮ್ಮ ಬ್ರಾಹ್ಮಣತ್ವವೂ ಅಸ್ತಿತ್ವದಲ್ಲಿಲ್ಲ ಎಂದರ್ಥ, ಅಥವಾ ಎಲ್ಲರೂ ಮೂರ್ಖರಾಗುತ್ತಿದ್ದಾರೆ. ಭಾರತದಲ್ಲಿ ಜಾತಿ ಪದ್ಧತಿ ಇದೆಯೋ ಇಲ್ಲವೋ ಎಂದು ಒಮ್ಮೆ ನಿರ್ಧರಿಸಿ. ಜನರು ಮೂರ್ಖರಲ್ಲ. ನೀವು ಬ್ರಾಹ್ಮಣರಾ ಅಥವಾ ನಿರ್ಧಾರ ತೆಗೆದುಕೊಳ್ಳುವವರು ಬ್ರಾಹ್ಮಣರೇ? ಈಗ ನಿರ್ಧರಿಸಿ ಎಂದಿದ್ದರು. ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಒಂದಷ್ಟು ಮಂದಿ ಈ ಪೋಸ್ಟ್‌ಗೆ ಖಾರವಾಗಿ ಕಾಮೆಂಟ್‌ ಹಾಕಿದ್ದರು. ಬಳಕೆದಾರರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ್ದ ಅನುರಾಗ್‌ ಕಶ್ಯಪ್‌, ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?ʼ ಎಂದು ಪ್ರತಿಯಾಗಿ ಕಾಮೆಂಟ್‌ ಹಾಕಿದ್ದರು.

ಕ್ಷಮೆ ಕೇಳಿದ ಅನುರಾಗ್..‌ ಆದರೆ,

"ನನ್ನ ಪೋಸ್ಟ್‌ಗಾಗಿ ಅಲ್ಲ, ಬದಲಾಗಿ ನಾನು ಬಳಸಿದ ಒಂದು ಸಾಲಿಗೆ ಕ್ಷಮೆಯಾಚಿಸುತ್ತೇನೆ.' ಕುಟುಂಬ, ಸ್ನೇಹಿತರು, ಮಗಳು ಮತ್ತು ಸಹೋದ್ಯೋಗಿಗಳಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಾಗ ಅವರ ಮುಂದೆ ಯಾವುದೇ ಕ್ರಮ, ಯಾವುದೇ ಮಾತು ಮುಖ್ಯವಲ್ಲ. ತಮ್ಮನ್ನು ತಾವು ಸುಸಂಸ್ಕೃತರೆಂದು ಕರೆದುಕೊಳ್ಳುವವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ. ಹೇಳಿದ್ದನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಮತ್ತು ನಾನು ಸಹ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ, ಆದರೆ ನೀವು ನನ್ನನ್ನು ಎಷ್ಟು ಬೇಕಾದರೂ ನಿಂದಿಸಿ"

"ನನ್ನ ಕುಟುಂಬ ಏನೂ ಹೇಳಿಲ್ಲ, ಹೇಳುವುದೂ ಇಲ್ಲ. ಹಾಗಾಗಿ ನೀವು ನನ್ನಿಂದ ಕ್ಷಮೆಯಾಚನೆ ಬಯಸಿದರೆ, ಇದು ನನ್ನ ಕ್ಷಮೆಯಾಚನೆ. ಬ್ರಾಹ್ಮಣರೇ, ದಯವಿಟ್ಟು ಮಹಿಳೆಯರನ್ನು ಬಿಡಿ. ಇಷ್ಟೊಂದು ಸಂಸ್ಕೃತಿ ಧರ್ಮಗ್ರಂಥಗಳಲ್ಲಿಯೂ ಇದೆ, ಅದು ಕೇವಲ ಮನುವಾದದಲ್ಲಿ ಮಾತ್ರವಲ್ಲ. ನೀವು ಯಾವ ರೀತಿಯ ಬ್ರಾಹ್ಮಣ ಎಂದು ನೀವೇ ನಿರ್ಧರಿಸಿ, ಉಳಿದಂತೆ ನನ್ನ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.