ಕನವರಿಸೋ ಹೆಸರೊಂದು ಬರುತಿದೆ ನನ್ನ ಜೊತೆಯಲ್ಲೇ...; ಕರ್ಣ ಧಾರಾವಾಹಿ ಹಾಡಿನ ಸಾಹಿತ್ಯ ಕನವರಿಸಿ
ಜೀ ಕನ್ನಡದ ಬಹುನಿರೀಕ್ಷಿತ ಕರ್ಣ ಧಾರಾವಾಹಿಯ ಪ್ರೊಮೊಗಳು ಬಿಡುಗಡೆಯಾಗಿವೆ. ಇದೇ ಸಮಯದಲ್ಲಿ ಕರ್ಣ ಧಾರಾವಾಹಿಯ ಶೀರ್ಷಿಕೆ ಗೀತೆಯೂ ಕಾಡುವಂತೆ ಇದೆ. ಅಂದಹಾಗೆ ಈ ಹಾಡನ್ನು ಬರೆದವರು ವಿಕಾಸ್ ನೇಗಿಲೋಣಿ. ಮನು ಜಿಎಚ್ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ಗಾಯನ ಇರುವ ಈ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿ ನೀಡಲಾಗಿದೆ.

ಕನ್ನಡ ಧಾರಾವಾಹಿಗಳಲ್ಲಿ ಕಾಡುವಂತಹ ಹಾಡು ಅಥವಾ ಹಾಡುಗಳು ಇರುತ್ತವೆ. ಅಂತಹ ಹಾಡುಗಳು ಸೀರಿಯಲ್ನ ಕುರಿತು ವೀಕ್ಷಕರಿಗೆ ಒಂದು ನವಿರಾದ ಭಾವ ಮೂಡಿಸುತ್ತವೆ. ಅಮೃತಧಾರೆ ಧಾರಾವಾಹಿಯ "ನಾ ಭುವಿಯಂತೆ ಕಾದೆ, ನೀ ಜಿನುಗೋ ಹನಿಯಾದೆ... ಒಲವ ಅಮೃತಧಾರೆ, ನನ್ನೊಲವ ಅಮೃತಧಾರೆ " ಇರಬಹುದು. ಶಾರದೆ ಧಾರಾವಾಹಿಯ ಶೀರ್ಷಿಕೆ ಗೀತೆ "ಸಹನೆಗೂ ಸಹನೆ ಕಲಿಸೋ ಜಗದ ಒಡಲು ಇವಳು" ಇರಬಹುದು. ಸೀತಾರಾಮ ಧಾರಾವಾಹಿಯ ಯಾರ ಜೀವ ಯಾರನ್ನೋ ಸೇರೋದು, ಬಾಳ ತೀರ್ಮಾನ.. ಅದನು ಮೀರಿ ಸಾಗದು ಈ ಜೀವನ ಇರಬಹುದು.
ಈಟಿವಿಯ ಮೂಡಲ ಮನೆ ಸೀರಿಯಲ್ನ ರೆಂಬೆ ಕೊಂಬೆಯ ಮ್ಯಾಲ ಗೂಡು ಕಟ್ಟಿದ್ದಾವ ರೆಕ್ಕಿ ಬಲಿತ ಹಕ್ಕಿ..., ಪ್ರೀತಿ ಇಲ್ಲದ ಮೇಲೆ ಸೀರಿಯಲ್ನ "ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ, ಮೋಡ ಕಟ್ಟಿತು ಹೇಗೆ" ಎಂಬ ಹಾಡುಗಳೂ ನಿಮಗೆ ನೆನಪಿರಬಹುದು. ಮುಕ್ತ ಧಾರಾವಾಹಿಯ "ಮುಕ್ತ... ಮುಕ್ತ... ಮುಕ್ತ..." ಎಂಬ ಸಿ. ಅಶ್ವತ್ ಧ್ವನಿ ಈಗಲೂ ಹೃದಯದಲ್ಲಿ ಮೊಳಗುತ್ತಿರಬಹುದು. ಪುಟ್ಟ ಗೌರಿ ಸೀರಿಯಲ್ನ ಹಾಡಂತೂ ಅಕ್ಕ ಪಕ್ಕದ ಮನೆಗಳಲ್ಲಿ ಕೇಳುವಾಗ "ಸೀರಿಯಲ್ ಶುರುವಾಯಿತು" ಎಂದು ಜನರು ತಮ್ಮ ಟಿವಿ ಆನ್ ಮಾಡುತ್ತಿರಬಹುದು.
ಹೀಗೆ ಸೀರಿಯಲ್ಗಳ ಶೀರ್ಷಿಕೆ ಗೀತೆಗಳು ಪ್ರೇಕ್ಷಕರ ಮನದಲ್ಲಿ ನವಿರಾದ ಭಾವ ಮೂಡಿಸುತ್ತವೆ. ಜತೆಗೆ, ಸೀರಿಯಲ್ ಜತೆಗೆ ಅವಿನಾಭವ ಬಂಧ ಉಂಟು ಮಾಡಲು ನೆರವಾಗುತ್ತವೆ. ಜೀ ಕನ್ನಡದ ಬಹುನಿರೀಕ್ಷಿತ ಕರ್ಣ ಧಾರಾವಾಹಿಯ ಪ್ರೊಮೊಗಳು ಬಿಡುಗಡೆಯಾಗಿವೆ. ಇದೇ ಸಮಯದಲ್ಲಿ ಕರ್ಣ ಧಾರಾವಾಹಿಯ ಶೀರ್ಷಿಕೆ ಗೀತೆಯೂ ಕಾಡುವಂತೆ ಇದೆ. ಅಂದಹಾಗೆ ಈ ಹಾಡನ್ನು ಬರೆದವರು ವಿಕಾಸ್ ನೇಗಿಲೋಣಿ. ಮನು ಜಿಎಚ್ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ಗಾಯನ ಇರುವ ಈ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿ ನೀಡಲಾಗಿದೆ.
ಕರ್ಣ ಧಾರಾವಾಹಿಯ ಶೀರ್ಷಿಕೆ ಗೀತೆಯ ಲಿರಿಕ್ಸ್
ಕನವರಿಸೋ
ಹೆಸರೊಂದು
ಬರುತಿದೆ ನನ್ನ ಜೊತೆಯಲ್ಲೇ
ಅನುಸರಿಸೋ
ಉಸಿರೊಂದು
ನಿಂತಿದೆ ನೋಡು ಬಳಿಯಲ್ಲೇ
ಈ ಜೀವಕೆ
ಒಂದೇ ಕೋರಿಕೆ
ನೀ ಪ್ರತಿಕ್ಷಣ ಸನಿಹ ಇರುವಂತೆ
ನಾ ಕಾವಲು ನಿನ್ನ ದಾರಿಗೆ
ನೀ ಸುಖವಾಗಿರುವಂತೆ
ಯಾಥರ ಬಂಧುವೋ ನೀ
ಈ ಥರ ಬಂದೆಯೋ ನೀ
ಜೀವನ ಸುಂದರ ನೀ ಇರುವಾಗ
ಈ ಹಾಡಿನ ವಿಡಿಯೋ ಕೂಡ ಆಕರ್ಷಕವಾಗಿದೆ. ವೈದ್ಯರ ಮುಷ್ಕರದ ನಡುವೆ ಆಸ್ಪತ್ರೆಗೆ ಬರುವ ದಂಪತಿ, ಆ ಆಸ್ಪತ್ರೆಯಲ್ಲಿ ಮಗುವಿನ ಜನನ, ಕರ್ಣ ಧಾವಿಸಿ ಬಂದು ಆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುವುದು... ಅಲ್ಲೇ ಇದ್ದ ಮೆಡಿಕಲ್ ವಿದ್ಯಾರ್ಥಿನಿ ನಾಯಕಿಗೆ ಅನುರಾಗ ಅರಳುವುದು... ಈ ದೃಶ್ಯಗಳಿಗೆ ಸಾಥ್ ನೀಡುವಂತೆ "ಕನವರಿಸೋ ಹೆಸರೊಂದು ಬರುತಿದೆ ನನ್ನ ಜೊತೆಯಲ್ಲೇ ಅನುಸರಿಸೋ ಉಸಿರೊಂದು ನಿಂತಿದೆ ನೋಡು ಬಳಿಯಲ್ಲೇ" ಎಂಬ ಹಾಡು ಮೂಡಿ ಬಂದಿದೆ.
ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್ಗೆ ಜೋಡಿಯಾಗಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಈ ಹಿಂದೆಯೇ ಕರ್ಣ ಸೀರಿಯಲ್ನಲ್ಲಿ ಕಿರಣ್ ರಾಜ್ಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅಧಿಕೃತವಾಗಿ ಎರಡನೇ ಪ್ರೋಮೋದಲ್ಲಿ ಭವ್ಯಾ ಗೌಡ ಕಂಡಿದ್ದಾರೆ. ಅಂದಹಾಗೆ, ಕರ್ಣ ಸೀರಿಯಲ್ನಲ್ಲಿ ಮೆಡಿಕಲ್ ಕಲಿಯುವ ವಿದ್ಯಾರ್ಥಿಯಾಗಿ ಭವ್ಯಾ ಗೌಡ ಅವರ ಪಾತ್ರ ಸಾಗುತ್ತದೆ. ಅವರಿಗಿಲ್ಲಿ ನಿಧಿ ಹೆಸರಿನ ಪಾತ್ರವಿದೆ. ಎಲ್ಲ ಜೀವಗಳ ನೋವಿಗೂ ಮಿಡಿಯುವವನಾಗಿ ಕರ್ಣ ಕಂಡರೆ, ಆ ಕರ್ಣನ ಹೆಸರೇ ನಿಧಿಯ ಉಸಿರು ಎಂಬಂತೆ ಪ್ರೋಮೋದಲ್ಲಿ ಚಿತ್ರೀಕರಿಸಲಾಗಿದೆ.