ಕನ್ನಡ ಸುದ್ದಿ  /  Entertainment  /  Daali Dhananjay And Ramya S Twitter Chat Was Like This

Ramya -Daali Twitter Chatting: ಡಾಲಿಗೆ ಕಾರ್‌ ಸಿಕ್ಕಿದ್ದೇ ತಡ, ರೌಂಡ್ಸ್‌ಗೆ ರಮ್ಯಾ ಆಹ್ವಾನ.. ಟ್ವಿಟರ್‌ನಲ್ಲೇ ನಡೀತು ಚಾಟಿಂಗ್‌..

ಹೊಸ ಕಾರಲ್ಲಿ ರಮ್ಯಾ ಅವರನ್ನು ಕರೆದುಕೊಂಡು ಬಿಸಿ ಚಾಕಲೇಟ್‌ ಮಿಠಾಯಿ, ಐಸ್‌ಕ್ರೀಮ್‌ ಕೊಡಿಸ್ತಾರಂತೆ ಧನಂಜಯ್.‌ ಹಾಗಂತ ಇದು ಡಾಲಿ ಆಸೆ ಅಲ್ಲ, ರಮ್ಯಾ ಬೇಡಿಕೆ..

ಡಾಲಿಗೆ ಕಾರ್‌ ಸಿಕ್ಕಿದ್ದೇ ತಡ, ರೌಂಡ್ಸ್‌ಗೆ ರಮ್ಯಾ ಆಹ್ವಾನ.. ಟ್ವಿಟರ್‌ನಲ್ಲೇ ನಡೀತು ಚಾಟಿಂಗ್‌..
ಡಾಲಿಗೆ ಕಾರ್‌ ಸಿಕ್ಕಿದ್ದೇ ತಡ, ರೌಂಡ್ಸ್‌ಗೆ ರಮ್ಯಾ ಆಹ್ವಾನ.. ಟ್ವಿಟರ್‌ನಲ್ಲೇ ನಡೀತು ಚಾಟಿಂಗ್‌..

Ramya -Daali Twitter Chatting: ಸ್ಯಾಂಡಲ್‌ವುಡ್‌ ನಟ ರಾಕ್ಷಸ ಡಾಲಿ ಧನಂಜಯ್‌ಗೆ ಡಬಲ್‌ ಧಮಾಕಾ! ಒಂದು ಕಡೆ ಸಿನಿಮಾ ರಿಲೀಸ್‌ ಆಗಿ ಒಳ್ಳೆಯ ಓಟದಲ್ಲಿದ್ದರೆ, ಇತ್ತ ಗುರುದೇವ್‌ ಹೊಯ್ಸಳ ಸಿನಿಮಾ ತಂಡದ ಕಡೆಯಿಂದಲೂ ಭರ್ಜರಿ ಟ್ರೀಟ್‌ ಸಿಕ್ಕಿದೆ. ಬರೋಬ್ಬರಿ 1 ಕೋಟಿ ಬೆಲೆಯ ಟೊಯೋಟೊ ಕಾರ್‌ ಸಿಕ್ಕಿದೆ. ಇದೆಲ್ಲದರ ನಡುವೆ ಮೋಹಕ ತಾರೆಯಿಂದಲೂ ಡಾಲಿ ಬಳಿ ಕೋರಿಕೆಯೊಂದು ಬಂದಿದೆ. ಅದಕ್ಕೆ ಧನಂಜಯ್‌ ಸಹ ಯೆಸ್‌ ಎಂದಿದ್ದಾರೆ.

ಹೌದು, ಹೊಯ್ಸಳ ಸಿನಿಮಾ ನಿರ್ಮಾಣ ಮಾಡಿರುವ ಕೆಆರ್‌ಜಿ ಸ್ಟುಡಿಯೋಸ್‌ ಸಂಸ್ಥೆ ವತಿಯಿಂದ ಧನಂಜಯ್‌ಗೆ ಕಾರ್‌ ಉಡುಗೊರೆಯಾಗಿ ಸಿಕ್ಕಿದೆ. ಹೀಗೆ ಗಿಫ್ಟ್‌ ಪಡೆದ ಧನಂಜಯ್‌, ಆ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼನನ್ನ 25ನೇ ಸಿನಿಮಾಕ್ಕೆ ನಿರ್ಮಾಪಕರಿಂದ ಸಿಕ್ಕ ವಿಶೇಷ ಉಡುಗೊರೆಯಿದು. ಒಟ್ಟಿಗೆ ಮತ್ತಷ್ಟು ಕೆಲಸ ಮಾಡೋಣ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಇದು ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ" ಎಂದು ಫೋಟೋ ಸಮೇತ ಹೇಳಿಕೊಂಡಿದ್ದರು.

ಧನಂಜಯ್‌ಗೆ ಗಿಫ್ಟ್‌ ನೀಡಿದ ಕೆಆರ್‌ಜಿ ಸಂಸ್ಥೆಯ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿದ ರಮ್ಯಾ,"ನಿಮ್ಮ ಹೊಸ ಕಾರಿಗೆ ಅಭಿನಂದನೆಗಳು. ಮತ್ತು ಹೊಯ್ಸಳ ಯಶಸ್ಸಿಗೂ ಬಿಗ್‌ ಅಭಿನಂದನೆಗಳು ಧನು. ನೀವೀಗ ನಮ್ಮನ್ನು ನಿಮ್ಮ ಹೊಸ ಕಾರಿನಲ್ಲಿ ರೌಂಡ್ಸ್‌ಗೆ ಕರೆದೊಯ್ಯಬೇಕು. ಬಿಸಿ ಚಾಕಲೇಟ್‌ ಮಿಠಾಯಿ ಟ್ರೀಟ್‌ ನೀಡಬೇಕು. ಯಾವಾಗ್ ಕರ್ಕೊಂಡ್ ಹೋಗ್ತೀರಾ?" ಎಂದು ರಮ್ಯಾ ಟ್ವಿಟ್‌ ಮಾಡಿದ್ದಾರೆ.

"ಈಗಲೇ ಈ ಕ್ಷಣದಲ್ಲೇ ಹೋಗಣ ಬನ್ನಿ.." ಎಂದು ಧನಂಜಯ್‌ ಉತ್ತರಿಸಿದ್ದಾರೆ. “ಸುಮ್ನೆ ಹೇಳ್ಬೇಡಿ.. ನಾನು ಐಸ್‌ಕ್ರೀಮ್‌ಗಾಗಿ 24\7 ಯಾವಾತ್ತಿದ್ದರೂ ರೆಡಿ ಎಂದು ಮರು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಬಂದೇ ಇರಿ, 10 ಮಿನಟ್ಸ್‌ ರೆಡಿ ಆಗ್ಬುಡಿ.. ಹೋಗಣ.. " ಎಂದಿದ್ದಾರೆ ಧನಂಜಯ್.‌

ಕೊನೆಗೆ ಲೋಲ್‌ ಎಂದು ನಗಾಡಿದ್ದಾರೆ ರಮ್ಯಾ.. ಹೀಗೆ ಈ ಜೋಡಿ ಟ್ವಿಟರ್‌ನಲ್ಲಿ ಚಾಟಿಂಗ್‌ ಮಾಡುತ್ತಿದ್ದಂತೆ ಏನಿದು ಮಾತುಕತೆ ಎಂದು ನೆಟ್ಟಿಗರು ಕುತೂಹಲದಿಂದಲೇ ಗಮನಿಸಿದ್ದಾರೆ. ಇವರಿಬ್ಬರ ಚಾಟಿಂಗ್‌ ನೋಡಿ ತಮಗನಿಸಿದ್ದನ್ನೂ ಕಮೆಂಟ್‌ ಮೂಲಕ ರವಾನಿಸುತ್ತಿದ್ದಾರೆ. ಕೆಲವರು ನಾವೂ ಬರ್ತಿವಿ ಎಂದರೆ, ಅಣ್ಣಂಗೇ ಲವ್‌ ಆಗಿದೆ ಎಂದೂ ನೆಟ್ಟಿಗರು ಕಮೆಂಟ್‌ ಹಾಕುತ್ತಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ಹೊಯ್ಸಳ ಚಿತ್ರಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಳೆಯೇ ಹರಿದು ಬರುತ್ತಿದೆ. ಸೋಷಿಯಲ್ ಮೆಸೇಜ್ ಹೊತ್ತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ನಿರ್ದೇಶಕ ವಿಜಯ್. ಎನ್ ಚಿತ್ರ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

IPL_Entry_Point