Thalapathy Vijay: ಅಪ್ಪನ ಪರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ರಾ ಸಂಜಯ್...ಏನಿದು ಗೊಂದಲ...?
ಸಂಜಯ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ಖಾತೆಯನ್ನು ಹೊಂದಿಲ್ಲ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಹಾಗಿದ್ದರೆ ಸಂಜಯ್ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆಗೆದು ಅವರೇ ಪೋಸ್ಟ್ ಮಾಡುತ್ತಿರುವಂತೆ ನಂಬಿಸಲಾಗಿದೆ ಎಂಬ ಮಾತು ಕೇಳಿಬಂದಿದೆ.
ಸ್ಟಾರ್ ನಟನ ಸಿನಿಮಾಗಳ ಪೈರಸಿ, ಸಿನಿಮಾ ಚಿತ್ರೀಕರಣದ ಸೆಟ್ ವಿಡಿಯೋಗಳು ಲೀಕ್ ಆಗುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಆದ್ದರಿಂದಲೇ ಕೆಲವೊಂದು ಸಿನಿಮಾ ಸೆಟ್ಗಳಲ್ಲಿ ಹೀರೋ ಹೀರೋಯಿನ್ ಹೊರತುಪಡಿಸಿ ಯಾರೂ ಮೊಬೈಲ್ ತರಬಾರದು ಎಂಬ ಸ್ಟ್ರಿಕ್ಟ್ ಕಂಡಿಷನ್ ಇರುತ್ತದೆ. ಇಷ್ಟಾದರೂ ಕೆಲವೊಂದು ವಿಡಿಯೋ, ಫೋಟೋಗಳು ಲೀಕ್ ಆಗುತ್ತವೆ. ಇದೀಗ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗೆ ಇದೇ ಸಮಸ್ಯೆ ಎದುರಾಗಿದೆ.
ಸದ್ಯಕ್ಕೆ ತಮಿಳು ನಟ ವಿಜಯ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 'ವರಿಸು' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಸಿನಿಮಾ ಚಿತ್ರೀಕರಣ ಹೈದರಾಬಾದ್ನಲ್ಲಿ ಭರದಿಂದ ಸಾಗಿದೆ. ಇತ್ತೀಚೆಗೆ ವೈಜಾಗ್ನಲ್ಲಿ ಕೂಡಾ ಚಿತ್ರದ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ ಚಿತ್ರೀಕರಣ ಸೆಟ್ನಲ್ಲಿ ಬಿಗಿ ಭದ್ರತೆ ಇದ್ದರೂ ಕೆಲವೊಂದು ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಚಿತ್ರತಂಡಕ್ಕೆ ತಲೆ ನೋವಾಗಿ ಪರಿಣಿಮಿಸಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ರೊಮ್ಯಾಂಟಿಕ್ ದೃಶ್ಯವೊಂದರ ಫೋಟೋ ಲೀಕ್ ಆಗಿತ್ತು. ಜೊತೆಗೆ ವಿಜಯ್, ಪ್ರಭು ಹಾಗೂ ಇನ್ನಿತರರು ಭಾಗಿಯಾಗಿದ್ದ ಆಸ್ಪತ್ರೆ ದೃಶ್ಯವೊಂದರ ವಿಡಿಯೋ ಕೂಡಾ ಲೀಕ್ ಆಗಿತ್ತು. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ಪುತ್ರ ಸಂಜಯ್, ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ. ವರಿಸು ಸಿನಿಮಾಗೆ ಸಂಬಂಧಿಸಿದಂತೆ ಲೀಕ್ ಆದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಷೇರ್ ಮಾಡಬೇಡಿ ಎಂದು ಸಂಜಯ್ ತಮ್ಮ ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
ಆದರೆ ಇಲ್ಲೂ ಒಂದು ಗೊಂದಲ ಇದೆ. ಸಂಜಯ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ಖಾತೆಯನ್ನು ಹೊಂದಿಲ್ಲ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಹಾಗಿದ್ದರೆ ಸಂಜಯ್ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆಗೆದು ಅವರೇ ಪೋಸ್ಟ್ ಮಾಡುತ್ತಿರುವಂತೆ ನಂಬಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ಜಾಸನ್ ವಿಜಯ್, ಕೆನಡಾದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಈಗಾಗಲೇ ಸಂಜಯ್ ಕೆಲವೊಂದು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡಿ ನಟನೆ ಕೂಡಾ ಮಾಡಿದ್ದಾರೆ. ಶೀಘ್ರದಲ್ಲೇ ಸಂಜಯ್ ಕಾಲಿವುಡ್ಗೆ ಎಂಟ್ರಿ ಕೊಡಲಿದ್ದಾರಂತೆ.
ಏಪ್ರಿಲ್ನಲ್ಲಿ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾ ನೋಡಿದವರು ಇದು ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ' ಸಿನಿಮಾದಂತೆ ಇದೆ ಎಂದಿದ್ದರು. ಸದ್ಯಕ್ಕೆ 'ವರಿಸು' ಚಿತ್ರದಲ್ಲಿ ವಿಜಯ್ ಬ್ಯುಸಿ ಇದ್ದಾರೆ. ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ನಿರ್ಮಿಸುತ್ತಿದ್ದು ವಂಶಿ ಪೈಡಿಪಲ್ಲಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ರಶ್ಮಿಕಾ, ವಿಜಯ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮನ್.ಎಸ್ ಸಂಗೀತ ನೀಡುತ್ತಿದ್ದಾರೆ. ಶರತ್ ಕುಮಾರ್, ಪ್ರಕಾಶ್ ರಾಜ್, ಜಯಸುಧಾ, ಶ್ರೀಕಾಂತ್, ಖುಷ್ಪೂ, ಯೋಗಿಬಾಬು ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.