ಕನ್ನಡ ಸುದ್ದಿ  /  Entertainment  /  Director Parasuram Getting Ready For Geetha Govindam 2

Geetha Govindam 2: ಶೀಘ್ರದಲ್ಲೇ ಬರ್ತಿದೆ 'ಗೀತ ಗೋವಿಂದಂ' ಸೀಕ್ವೆಲ್‌...ಮತ್ತೆ ಜೊತೆಯಾಗಿ ನಟಿಸಲಿದ್ದಾರಾ ರಶ್ಮಿಕಾ-ವಿಜಯ್‌ ದೇವರಕೊಂಡ?

ಅಲ್ಲು ಅರವಿಂದ್‌ ಅವರ ಗೀತಾ ಆರ್ಟ್ಸ್‌ 'ಗೀತ ಗೋವಿಂದಂ' ಚಿತ್ರವನ್ನು ನಿರ್ಮಿಸಿದ್ದು ಪರಶುರಾಮ್‌ ಕಥೆ ಬರೆದು ನಿರ್ದೇಶನ ಮಾಡಿದ್ದರು. 15 ಆಗಸ್ಟ್‌ 2018 ರಂದು ಸಿನಿಮಾ ತೆರೆ ಕಂಡಿತ್ತು. ಚಿತ್ರದ ಹಾಡುಗಳಿಗೆ ಗೋಪಿ ಸುಂದರ್‌ ಸಂಗೀತ ನೀಡಿದ್ದರು.

'ಗೀತ ಗೋವಿಂದಂ' ಸೀಕ್ವೆಲ್‌ಗೆ ರೆಡಿ ಆಗುತ್ತಿದ್ದಾರೆ ನಿರ್ದೇಶಕ ಪರಶುರಾಮ್
'ಗೀತ ಗೋವಿಂದಂ' ಸೀಕ್ವೆಲ್‌ಗೆ ರೆಡಿ ಆಗುತ್ತಿದ್ದಾರೆ ನಿರ್ದೇಶಕ ಪರಶುರಾಮ್

2018 ರಲ್ಲಿ ತೆರೆ ಕಂಡಿದ್ದ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಅಭಿನಯದ 'ಗೀತ ಗೋವಿಂದಂ' ಎಷ್ಟು ದೊಡ್ಡ ಹಿಟ್‌ ಆಗಿತ್ತು ಅನ್ನೋದು ತಿಳಿದ ವಿಚಾರ. 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ 132 ಕೋಟಿ ರೂಪಾಯಿ ಲಾಭ ಮಾಡಿತ್ತು. ಇದೀಗ ಟಾಲಿವುಡ್‌ನಲ್ಲಿ 'ಗೀತ ಗೋವಿಂದಂ' ಸೀಕ್ವೆಲ್‌ ಭಾರೀ ಸದ್ದು ಮಾಡುತ್ತಿದೆ.

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಹೈಲೈಟ್ ಆಗಿತ್ತು. ಇವರಿಬ್ಬರ ಜೋಡಿ ಹಾಗೂ ಲವ್ ಸ್ಟೋರಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ವಿಜಯ್ ಮತ್ತು ರಶ್ಮಿಕಾ ಅವರ ಪಾತ್ರಗಳನ್ನು ಆಧರಿಸಿ ನಿರ್ದೇಶಕ ಪರಶುರಾಮ್ ಸೀಕ್ವೆಲ್‌ ಮಾಡಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಸ್ಕ್ರಿಪ್ಟ್‌ ಕೆಲಸ ನಡೆಯುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆಯಂತೆ. ಚಿತ್ರದಲ್ಲಿ ವಿಜಯ್‌ ದೇವರಕೊಂಡ ನಾಯಕನಾಗಿ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೋ ಅಥವಾ ಆ ಜಾಗಕ್ಕೆ ಬೇರೆ ನಟಿ ಬರಲಿದ್ದಾರೋ ಎಂಬುದು ಇನ್ನೂ ಸೀಕ್ರೇಟ್‌ ಆಗಿ ಉಳಿದಿದೆ.

ಅಲ್ಲು ಅರವಿಂದ್‌ ಅವರ ಗೀತಾ ಆರ್ಟ್ಸ್‌ 'ಗೀತ ಗೋವಿಂದಂ' ಚಿತ್ರವನ್ನು ನಿರ್ಮಿಸಿದ್ದು ಪರಶುರಾಮ್‌ ಕಥೆ ಬರೆದು ನಿರ್ದೇಶನ ಮಾಡಿದ್ದರು. 15 ಆಗಸ್ಟ್‌ 2018 ರಂದು ಸಿನಿಮಾ ತೆರೆ ಕಂಡಿತ್ತು. ಚಿತ್ರದ ಹಾಡುಗಳಿಗೆ ಗೋಪಿ ಸುಂದರ್‌ ಸಂಗೀತ ನೀಡಿದ್ದರು. ಈ ರೊಮ್ಯಾಂಟಿಕ್‌ ಕಾಮಿಡಿ ಚಿತ್ರದಲ್ಲಿ ರಶ್ಮಿಕಾ-ವಿಜಯ್‌ ದೇವರಕೊಂಡ ಜೊತೆಗೆ ನಾಗ ಬಾಬು, ವೆನ್ನಿಲ ಕಿಶೋರ್‌, ರವಿ ಪ್ರಕಾಶ್‌ ನಟಿಸಿದ್ದರು.

ಮಹೇಶ್ ಬಾಬು ಅವರ 'ಸರ್ಕಾರುವಾರಿ ಪಾಟ' ಚಿತ್ರದ ನಂತರ ನಿರ್ದೇಶಕ ಪರಶುರಾಮ್ ನಾಗ ಚೈತನ್ಯ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಆದರೆ ಸ್ಕ್ರಿಪ್ಟ್ ವರ್ಕ್ ಔಟ್ ಆಗದ ಕಾರಣ ಈ ಚಿತ್ರವನ್ನು ತಾತ್ಕಾಲಿಕವಾಗಿ ಸಿನಿಮಾ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ನಾಗ ಚೈತನ್ಯ ಚಿತ್ರವನ್ನು ಕೈ ಬಿಟ್ಟಿರುವ ಪರಶುರಾಮ್, ಈಗ ಗೀತ ಗೋವಿಂದಂ ಸೀಕ್ವೆಲ್ ಮೇಲೆ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಖುಷಿ ಚಿತ್ರದ ರೆಗ್ಯುಲರ್ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರೇಮಕಥೆಯಾಗಿ ತಯಾರಾಗುತ್ತಿರುವ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಪುರಿ ಜಗನ್ನಾಥ್‌ ಜೊತೆ ಘೋಷಿಸಿದ್ದ ಜನಗಣಮನ ಚಿತ್ರದ ಅಪ್‌ಡೇಟ್‌ ಇನ್ನೂ ಸಿಕ್ಕಿಲ್ಲ. ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ಜೊತೆ ಸ್ಪೈ ಆಕ್ಷನ್ ಸಿನಿಮಾ ಕೂಡಾ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾ ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ವಿಜಯ್‌ ಜೊತೆ ನಟಿಸಿದ್ದ 'ವಾರಿಸು' ಸಿನಿಮಾ ತಮಿಳು, ತೆಲುಗಿನಲ್ಲಿ ತೆರೆ ಕಂಡಿತ್ತು. ಸದ್ಯಕ್ಕೆ ಅನಿಮಲ್‌, ಪುಷ್ಪ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಬಾಲಿವುಡ್‌ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಇನ್ನೂ ಅಧಿಕೃತವಾಗಿ ಅನೌನ್ಸ್‌ ಆಗಿಲ್ಲ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ