Entertainment News in Kannada Live December 27, 2024: Akshatha Kuki: ಬಿಗ್ಬಾಸ್ನಲ್ಲಿ ಮಿಂಚಿದ್ದ ಅಕ್ಷತಾ ಕುಕಿ ಪ್ಯಾರಿಸ್ನಲ್ಲಿ ಏನ್ಮಾಡ್ತಿದ್ದಾರೆ, ಫಾರಿನ್ ಲೈಫ್ ಹೇಗಿದೆ? ಸಂದರ್ಶನ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 27 Dec 202401:37 PM IST
- ಸಂದರ್ಶನ- ಪದ್ಮಶ್ರೀ ಭಟ್: ʼಬಿಗ್ ಬಾಸ್ʼ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿರೋ ದಾಂಡೇಲಿ ಹುಡುಗಿ ಅಕ್ಷತಾ ಕುಕಿ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ದೊಡ್ಮನೆಯಲ್ಲಿ ಐಫೆಲ್ ಟವರ್ ನೋಡುವ ಆಸೆ ಹೊಂದಿದ್ದ ಅಕ್ಷತಾ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ವಿದೇಶದಲ್ಲಿ ಅವರ ಜೀವನ ಹೇಗಿದೆ? ಈ ವಿಷಯಗಳ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.
Fri, 27 Dec 202412:38 PM IST
- ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಚರಿತ್ ಬಾಳಪ್ಪ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಪರಿಚಿತ ಯುವತಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಮಾಡಿರುವ ಆರೋಪದಡಿಯಲ್ಲಿ ಚರಿತ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Fri, 27 Dec 202411:12 AM IST
- ಟಾಲಿವುಡ್ ನಟ ನಾನಿ ತಮ್ಮ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 'HIT3' ಸಿನಿಮಾ ಪೋಸ್ಟರ್ ಜೊತೆ ಬಿಡುಗಡೆ ದಿನಾಂಕವನ್ನೂ ಹಂಚಿಕೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲೇ ಇದೆ ಗಮನಿಸಿ.
Fri, 27 Dec 202411:07 AM IST
- Max Box Office Collection Day 2: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿ. 25ರಂದು ಬಿಡುಗಡೆ ಆಗಿದೆ. ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಎರಡನೇ ದಿನ ಕೊಂಚ ಡಲ್ ಹೊಡೆದಿದೆ. ವಾರಾಂತ್ಯ ಇನ್ನಷ್ಟೇ ಶುರುವಾಗಲಿರುವುದರಿಂದ ಮುಂದಿನ ಮೂರು ದಿನ ಒಳ್ಳೆಯ ಕಮಾಯಿ ಆಗುವ ಸಾಧ್ಯತೆ ಜಾಸ್ತಿ.
Fri, 27 Dec 202409:22 AM IST
- Kannada Serial TRP Ratings: ಕನ್ನಡ ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಟಿಆರ್ಪಿಯಲ್ಲಿ ಕಳೆದ ವಾರ ಗೆದ್ದಿದ್ದು ಯಾರು? ಕನ್ನಡದ ಟಾಪ್ 10 ಧಾರಾವಾಹಿಗಳು ಯಾವವು, ಬಿಗ್ಬಾಸ್ ಕನ್ನಡ 11ಕ್ಕೆ ಸಿಕ್ಕ ಟಿಆರ್ಪಿ ಎಷ್ಟು, ಸರಿಗಮಪ ಗ್ರ್ಯಾಂಡ್ ಓಪನಿಂಗ್ಗೆ ಸಿಕ್ಕ ನಂಬರ್ ಎಷ್ಟು? ಎಂಬಿತ್ಯಾದಿ ಕಿರುತೆರೆಯ ಪೂರ್ಣ ವಿವರ ಇಲ್ಲಿದೆ.
Fri, 27 Dec 202407:58 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 26ರ ಎಪಿಸೋಡ್ನಲ್ಲಿ ಪಿತೂರಿ ಮಾಡಿ ಸೌಪರ್ಣಿಕಾ, ರವಿಗೆ ಕಿವಿ ಊದಿದ ಸಂತೋಷ್ ಕೊನೆಗೂ ಖುಷಿಯನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗುತ್ತಾನೆ. ವಿಚಾರ ತಿಳಿದು ಶ್ರೀನಿವಾಸ್ ಹಾಗೂ ಲಕ್ಷ್ಮೀ ಬೇಸರ ವ್ಯಕ್ತಪಡಿಸುತ್ತಾರೆ.
Fri, 27 Dec 202407:55 AM IST
- ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮಹಾತಿರುವು, ಹಸೆಮಣೆ ಏರುವ ಮೊದಲೇ ಶ್ರಾವಣಿ ಕತ್ತಲ್ಲಿ ತಾಳಿ. ಇದಕ್ಕೆಲ್ಲ ಕಾರಣ ಎಂಬ ಪ್ರಶ್ನೆಗೆ ಶ್ರಾವಣಿ ಕೊಟ್ಟ ಉತ್ತರ ಮಾತ್ರ ಸುಬ್ಬು. ಈ ನಿರ್ಧಾರದಿಂದ ಇಬ್ಬರ ಬದುಕೇ ಬದಲಾಗಲಿದೆ.
Fri, 27 Dec 202406:43 AM IST
- ಸಲ್ಮಾನ್ ಖಾನ್ ಅವರ ಜನ್ಮದಿನವಾದ ಇಂದು (ಡಿಸೆಂಬರ್ 27) ಅವರ ಹೊಸ ಸಿನಿಮಾ ‘ಸಿಕಂದರ್’ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಟೀಸರ್ ಬಿಡುಗಡೆಯನ್ನು ಡಿಸೆಂಬರ್ 28ಕ್ಕೆ ಮುಂದೂಡಲಾಗಿದೆ. ಇದಕ್ಕೆ ಕಾರಣ ಏನು ನೀವೇ ನೋಡಿ.
Fri, 27 Dec 202406:39 AM IST
- Amruthadhaare serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ (ಡಿಸೆಂಬರ್ 27) ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಭಾಗ್ಯಮ್ಮ-ಗೌತಮ್ ಭೇಟಿಯನ್ನು ಶಕುಂತಲಾ ತಪ್ಪಿಸಿದ್ದಾರೆ. ಜೈದೇವ್ ಮತ್ತು ರಾಜೇಂದ್ರ ಭೂಪತಿ ಒಂದಾಗಿದ್ದಾರೆ. ಇದೇ ಸಮಯದಲ್ಲಿ ಭೂಪತಿಗೆ ಸಹಾಯ ಮಾಡೋಲ್ಲ ಎಂದು ಸುಧಾ ಖಡಾಖಂಡಿತವಾಗಿ ಹೇಳಿದ್ದಾಳೆ.
Fri, 27 Dec 202405:52 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿಗೆ ಹೋದಾಗಿನಿಂದ ಅವಳನ್ನು ಯಾರೂ ಮಾತನಾಡಿಸಿರಲಿಲ್ಲ. ಆದರೆ ಈಗ ಕೃಷ್ಣ ಅವಳನ್ನು ನೋಡಿಕೊಂಡು ಬರಲು ಹೋಗುತ್ತಿದ್ದಾನೆ.
Fri, 27 Dec 202404:50 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 26ರ ಎಪಿಸೋಡ್ನಲ್ಲಿ ಇಷ್ಟವಿಲ್ಲದಿದ್ದರೂ ಭಾಗ್ಯಾ ಒತ್ತಾಯದ ಮೇರೆಗೆ ತನ್ವಿ ಕಾಲೇಜಿಗೆ ಬರುವ ತಾಂಡವ್ ತನಗೂ ಮಗಳ ವಿಚಾರಕ್ಕೂ ಏನೂ ಸಂಬಂಧ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಾನೆ. ಫೋನ್ ಸೈಲೆಂಟ್ ಇಡುವಂತೆ ಹೇಳಿದ ಪ್ರಿನ್ಸಿಪಾಲ್ ಮೇಲೆ ತಾಂಡವ್ ರೇಗಾಡುತ್ತಾನೆ.
Fri, 27 Dec 202404:22 AM IST
- ಕಾಲು ಮುಟ್ಟಿ ನಮಸ್ಕರಿಸಲು ಬಂದ ವಿಜಯಾಂಬಿಕಾ ಮೇಲೆ ಮುನಿಸಿಕೊಂಡ ಲಲಿತಾದೇವಿ. ಮಗಳ ಮದುವೆ ಸಂದರ್ಭ ಅಪ್ಪ ಹೇಗಿರಬೇಕು ಎಂದು ಅಳಿಯನಿಗೆ ಅತ್ತೆಯ ಪಾಠ. ಮಗನ ಮದುವೆ ದಿನ ನಾಲ್ಕು ಹಸೆಮಣೆ ಇರಬೇಕು ಎಂದು ಹೇಳಿ, ಶ್ರೀವಲ್ಲಿ ಜತೆ ಸುಬ್ಬು ಮದುವೆ ಮಾಡಿಕೊಡಿ ಎಂದು ಕೇಳಿದ ಇಂದ್ರಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್ 27ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ
Fri, 27 Dec 202402:57 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ತಂಗಿ ರತ್ನಾಳನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ. ಆದರೆ ಈ ಬಾರಿ ರತ್ನಾಳಿಗೆ ಮತ್ತೆ ಅವಮಾನ ಆಗಿದೆ. ರಶ್ಮಿಗೂ ಆಶ್ಚರ್ಯ ಆಗಿದೆ. ಶಿವಣ್ಣ ಮುಂದೇನ್ಮಾಡ್ತಾನೆ ನೋಡಿ.
Fri, 27 Dec 202401:52 AM IST
- ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಇಂದು (ಡಿಸೆಂಬರ್ 27) ಸಲ್ಮಾನ್ ಖಾನ್ ಜನ್ಮದಿನದಂದು ಟೀಸರ್ ಕೂಡ ರಿಲೀಸ್ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.