Entertainment News in Kannada Live December 29, 2024: ಪುಷ್ಪ 2 ಆಯ್ತು, ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಈ ಚಿತ್ರಕ್ಕೆ ಹೊಸ ಬಾಡಿ ಲ್ಯಾಂಗ್ವೇಜ್ ಬೇಕಂತೆ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 29 Dec 202401:33 PM IST
- Allu Arjun Upcoming Movie: ಪುಷ್ಪ 2 ಸಿನಿಮಾ ಪ್ರಾಜೆಕ್ಟ್ ಮುಗೀತು. ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಈ ಸಂದೇಹಕ್ಕೆ ಈಗ ಉತ್ತರ ದೊರಕಿದೆ. 2020ರಿಂದ ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್ ಜತೆಗೆ ಇದ್ದರು. ಇದೀಗ ತನ್ನ ಮುಂದಿನ ಪ್ರಾಜೆಕ್ಟ್ಗಾಗಿ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಕೆಲಸ ಮಾಡಲಿದ್ದಾರಂತೆ.
Sun, 29 Dec 202412:59 PM IST
- Nooru Janmaku Serial Song Lyrics: ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಹೊಸ ಧಾರಾವಾಹಿ ನೂರು ಜನ್ಮಕೂ. ಈಗ ಇದೇ ಸೀರಿಯಲ್ ವೀಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸೀರಿಯಲ್ ಕಥೆ ಮಾತ್ರವಲ್ಲದೆ ಇದೇ ಧಾರಾವಾಹಿಯ ಇಂಟ್ರೋ ಹಾಡು ಸಹ ಕಿವಿಗಿಂಪು. ಇಲ್ಲಿದೆ ಈ ಹಾಡಿನ ಸಾಹಿತ್ಯ.
Sun, 29 Dec 202412:02 PM IST
- ಇದು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ರಿಯಾಲಿಟಿ ಶೋ. ಸಾವಿರಾರು ಸ್ಪರ್ಧಿಗಳು ಭಾಗವಹಿಸುವ ಈ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ 4 ದಶಲಕ್ಷ ಡಾಲರ್ ನಗದು ಬಹುಮಾನ ದೊರಕುತ್ತದೆ. ಒಂದು ಖಾಸಗಿ ದ್ವೀಪವೂ ಬಹುಮಾನವಾಗಿ ದೊರಕುತ್ತದೆ.
Sun, 29 Dec 202411:44 AM IST
ಮಲಯಾಳಿ ಕಿರುತೆರೆ ನಟ ದಿಲೀಪ್ ಶಂಕರ್ ತಿರುವನಂತಪುರಂನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ದಿಲೀಪ್ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದವು ಎಂದು ಅವರ ಆಪ್ತರು ಪೊಲೀಸರಿಗೆ ತಿಳಿಸಿದ್ದಾರೆ.
Sun, 29 Dec 202410:56 AM IST
- Bigg Boss Kannada 11: ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚ ಸುದೀಪ್ ನೀಡಿದ ಆಕ್ಟಿವಿಟಿಯಲ್ಲಿ ರಜತ್ ಕಿಶನ್ ವಿರುದ್ಧ ಕಹಳೆ ಮೊಳಗಿಸಿದ್ದಾರೆ ಹನುಮಂತ ಲಮಾಣಿ. ಸುತ್ತಿಗೆಯಿಂದ ರಜತ್ ಭಾವಚಿತ್ರವಿರುವ ತಟ್ಟೆಗೆ ಹೊಡೆದು, ಸಿಟ್ಟು ಕಡಿಮೆ ಮಾಡಿಕೋ ಎಂದು ಸಲಹೆ ನೀಡಿದ್ದಾರೆ.
Sun, 29 Dec 202409:57 AM IST
- ದಿನಕರ್ ತೂಗುದೀಪ ನಿರ್ದೇಶನದಲ್ಲಿ ಮೂಡಿಬಂದಿರುವ ರಾಯಲ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ. ಇದೀಗ ಇದೇ ಸಿನಿಮಾ ಚಿತ್ರಮಂದಿರಗಳಿಗೆ ಬರಲು ಅಣಿಯಾಗಿದೆ. ವಿರಾಟ್- ಸಂಜನಾ ನಟನೆಯ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಲಿದೆ.
Sun, 29 Dec 202409:15 AM IST
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಧನರಾಜ್ ಆಚಾರ್ ಶುದ್ಧ ಸಸ್ಯಾಹಾರಿಗಳು. ಸಸ್ಯಾಹಾರ ಬಿಟ್ಟು ಅಪ್ಪಿತಪ್ಪಿಯೂ ಬೇರೆ ಪದಾರ್ಥ ಮುಟ್ಟದ ಸ್ಪರ್ಧಿಗಳಿವರು. ಇಂತಿಪ್ಪ ಸ್ಪರ್ಧಿಗಳು ಕಳೆದ ವಾರ ಪರೋಕ್ಷವಾಗಿ ಮಾಂಸಾಹಾರ ಸೇವನೆ ಮಾಡಿದ್ದಾರೆ. ಆ ವಿಚಾರವೀಗ ಕಿಚ್ಚ ಸುದೀಪ್ ಅವರ ವಾರಾಂತ್ಯ ಸಂಚಿಕೆಯಲ್ಲಿ ಪ್ರಸ್ತಾಪವಾಗಿದೆ.
Sun, 29 Dec 202407:52 AM IST
- Max box office Collection Day 4: ಮ್ಯಾಕ್ಸ್ ಸಿನಿಮಾ ನಾಲ್ಕನೇ ದಿನ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಮೊದಲ ದಿನ 8.75 ರೂ. ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ ಅದಾದ ಬಳಿಕ ಎರಡು ದಿನ ಇಳಿಕೆ ಕಂಡಿತ್ತು. ಇದೀಗ ಶನಿವಾರ ಮತ್ತೆ ಹಳೇ ಲಯಕ್ಕೆ ಮರಳಿದೆ. ಭಾನುವಾರದ ಗಳಿಕೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದೂ ಹೇಳಲಾಗುತ್ತಿದೆ.
Sun, 29 Dec 202405:55 AM IST
- Kannada Television: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಓಪನ್ ಆಗಿಯೇ ಕಟುವಾಗಿ ಕಾಮೆಂಟ್ ಹಾಕುವವರು ಸಾಕಷ್ಟು ಮಂದಿ. ಅದೇ ರೀತಿ ನಟಿ, ನಿರೂಪಕಿ ಜಾಹ್ನವಿ ಗಂಡನಿಂದ ದೂರವಾದ ಬಳಿಕ ಅಂಥ ಎಷ್ಟೋ ಕಟು ಕಾಮೆಂಟ್ಗಳನ್ನು ಎದುರಿಸಿದ್ದಾರೆ. ಹಾಗೇ ಟೀಕೆ ಮಾಡುವ ಮನಸ್ಥಿತಿಗಳ ಬಗ್ಗೆ ಇದೀಗ ಮತ್ತೆ ಮಾತನಾಡಿದ್ದಾರೆ.
Sun, 29 Dec 202405:23 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 28ರ ಎಪಿಸೋಡ್ನಲ್ಲಿ ಶ್ರೇಷ್ಠಾ, ಆತ್ಮಹತ್ಯೆ ನಾಟಕವಾಡಿ ತಾಂಡವ್ನನ್ನು ಬ್ಲಾಕ್ಮೇಲ್ ಮಾಡುತ್ತಾಳೆ. ಅವಳಿಗೆ ಹೆದರಿ ತಾಂಡವ್ ಮನೆಗೆ ಕರೆದುಕೊಂಡು ಹೋಗಲು ಒಪ್ಪುತ್ತಾನೆ. ಫೇಸ್ಬುಕ್ ಲೈವ್ ನೋಡಿದ ಕುಸುಮಾ ನೆರೆಮನೆಯ ಸರೋಜಮ್ಮ ಈ ವಿಚಾರವನ್ನು ಅವರಿಗೆ ತಿಳಿಸುತ್ತಾರೆ. ವಿಚಾರ ತಿಳಿದು ಭಾಗ್ಯಾ ಬೇಸರಗೊಳ್ಳುತ್ತಾಳೆ.
Sun, 29 Dec 202404:34 AM IST
- ಔಟ್ ಆಫ್ ಸಿಲಬಸ್ ಸಿನಿಮಾ ವಿಮರ್ಶೆ: ಪಠ್ಯ ಪುಸ್ತಕದಲ್ಲಿ ಇರುವುದೆಲ್ಲವೂ ಜೀವನಕ್ಕೆ ಉಪಯುಕ್ತವಾ? ಓದಿದ್ದಕ್ಕೂ ಪ್ರಸ್ತುತ ಜೀವನಕ್ಕೂ ನಂಟಿದೆಯೇ? ಎಂಬ ವಿಚಾರಗಳನ್ನು ಪ್ರೇಮಕಥೆಯೊಂದರ ಚುಂಗು ಹಿಡಿದು ಔಟ್ ಆಫ್ ಸಿಲಬಸ್ ಸಿನಿಮಾದಲ್ಲಿ ಹೇಳಿ ಮುಗಿಸಿದ್ದಾರೆ ನಿರ್ದೇಶಕ ಪ್ರದೀಪ್ ದೊಡ್ಡಯ್ಯ.
Sun, 29 Dec 202404:30 AM IST
- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸುಧಾ ಇನ್ಫಾರ್ಮರ್ ಎಂಬ ಸಂಗತಿಯನ್ನು ಜೈದೇವ್ ಖುದ್ದಾಗಿ ತಿಳಿದುಕೊಳ್ಳುತ್ತಾನೆ. ಸಾಕ್ಷಿ ಸಮೇತ ಈ ವಿಚಾರವನ್ನು ಶಕುಂತಲಾಗೆ ತಿಳಿಸುತ್ತಾನೆ.