Entertainment News in Kannada Live December 31, 2024: Annayya Serial: ಮದುವೆ ಬಗ್ಗೆ ನಾಚಿಕೊಂಡೇ ಸಮ್ಮತಿಸಿದ ರಶ್ಮಿ; ತಾಯಿ ಸ್ಥಾನದಲ್ಲಿ ನಿಂತ ಪಾರುಗೆ ಎಲ್ಲವೂ ಅರ್ಥ ಆಗುತ್ತೆ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 31 Dec 202403:27 PM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರತ್ನಾ ತನ್ನ ಸುಖಕ್ಕಿಂತ ಉಳಿದರವ ಸುಖವೇ ಮುಖ್ಯ ಎಂಬ ಒಳ್ಳೆಯ ವಿಚಾರವನ್ನು ಹೊಂದಿದ್ದಾಳೆ. ಈಗ ರಶ್ಮಿ ಮದುವೆ ಆಗುವ ಎಲ್ಲ ಲಕ್ಷಣ ತೋರುತ್ತಿದೆ.
Tue, 31 Dec 202401:38 PM IST
- ಹೊಸ ವರ್ಷದ ಆರಂಭಕ್ಕೆ ಪಾರ್ಟಿ, ಡಾನ್ಸ್, ಸಿಂಗಿಂಗ್ ಎಲ್ಲ ಜೋರಾಗಿಯೇ ಇರುತ್ತದೆ. ಈ ರಾತ್ರಿಯ ಮೆರಗು ಹೆಚ್ಚಿಸಲು ಹೊಸ ವರ್ಷದ ಖುಷಿಯನ್ನು ಇಮ್ಮಡಿಗೊಳಿಸಲು ಕನ್ನಡ ಹಾಡುಗಳನ್ನು ಪ್ಲೇ ಮಾಡಿ. ಸ್ಯಾಂಡಲ್ವುಡ್ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್.
Tue, 31 Dec 202401:11 PM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ದೇವರಿಗೆ ಮುಡಿ ಕೊಡುತ್ತೇನೆ ಎಂದು ದೇವಸ್ಥಾನಕ್ಕೆ ಬಂದಿದ್ದಾಳೆ. ಆದರೆ ಆ ವಿಚಾರ ವೈಶಾಖಾ ಹಾಗೂ ರುಕ್ಕು ಇಬ್ಬರಿಗೆ ಮಾತ್ರ ಗೊತ್ತಿತ್ತು. ಈಗ ಜಾನಕಿ ವಿಷಯ ತಿಳಿದು ದೇವಸ್ಥಾನಕ್ಕೆ ಓಡಿ ಬಂದಿದ್ದಾಳೆ.
Tue, 31 Dec 202412:03 PM IST
- Lakshmi Baramma Serial: ಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಗಂಡ ವೈಷ್ಣವ್ಗಾಗಿ ಹೋರಾಡಲು ಸಿದ್ಧಳಾಗಿ ಬಂದಿದ್ದಾಳೆ. ಪ್ರೆಸ್ ಮೀಟ್ ಕರೆದು ಎಲ್ಲರ ಎದುರು ಸತ್ಯ ಬಯಲು ಮಾಡಲು ಕಾದಿದ್ದಾಳೆ. ಅನನ್ಯಾಳ ನಾಟಕಕ್ಕೆ ಬ್ರೇಕ್ ಬೀಳಲು ಕೆಲವೇ ಸಮಯ ಬಾಕಿ ಇದೆ.
Tue, 31 Dec 202411:05 AM IST
The Sabarmati Report Movie OTT: ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿದ ನೈಜ ಘಟನೆ ಆಧರಿತ ಥ್ರಿಲ್ಲರ್ ಡ್ರಾಮಾ ದಿ ಸಾಬರಮತಿ ರಿಪೋರ್ಟ್ ಸಿನಿಮಾ ಶೀಘ್ರದಲ್ಲಿ ಒಟಿಟಿಗೆ ಆಗಮಿಸಿಲಿದೆ. ಈ ಚಿತ್ರವನ್ನು ಪ್ರಧಾನಿ ಮೋದಿ ಸಂಸತ್ನಲ್ಲಿ ವೀಕ್ಷಿಸಿದ್ದರು.
Tue, 31 Dec 202411:00 AM IST
- Tejasvi Surya: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬ್ಯಾಚುಲರ್ ಸಂಸದ ತೇಜಸ್ವಿ ಸೂರ್ಯ ಯಾವಾಗ ಮದುವೆ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅವರನ್ನು ಮದುವೆಯಾಗುವ ಹುಡುಗಿ ಯಾರು ಎಂಬ ಮಾಹಿತಿಯೂ ಇಲ್ಲಿದೆ.
Tue, 31 Dec 202409:17 AM IST
- Manada Kadalu Movie Songs: ಮನದ ಕಡಲು ಚಿತ್ರದ, ಹೂ ದುಂಬಿಯ ಕಥೆಯ.. ಎಂದು ಶುರುವಾಗುವ ಈ ಮೆಲೋಡಿ ಹಾಡು, ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಸುಮುಖ್ ಮತ್ತು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಮೈ ಚಳಿ ಬಿಟ್ಟು, ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.
Tue, 31 Dec 202408:08 AM IST
- ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. 18 ವರ್ಷಗಳ ಹಿಂದೆ ಡಿಸೆಂಬರ್ 29ರಂದು ಮುಂಗಾರು ಮಳೆ ಸಿನಿಮಾ ರಿಲೀಸ್ ಆಗಿತ್ತು. ಈಗ ಅದೇ ದಿನದಂದೇ ಮನದ ಕಡಲು ಚಿತ್ರದ ಮೆಲೋಡಿ ಹಾಡನ್ನು ಹೊತ್ತು ತಂದಿದೆ ಚಿತ್ರತಂಡ.
Tue, 31 Dec 202407:08 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 30ರ ಎಪಿಸೋಡ್ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಮತ್ತೆ ಖುಷಿಯನ್ನು ಮನೆಗೆ ಕರೆತರುತ್ತಾರೆ. ಮತ್ತೊಂದೆಡೆ ಜಯಂತ್ ತಾನು ಸೇಫ್ ಆಗುವುದಕ್ಕೆ ಗೆಳೆಯ ಸಚಿನ್ ಬಳಿ ಹೆಂಡತಿ ಜಾನುವನ್ನೇ ಕೆಟ್ಟವಳನ್ನಾಗಿ ಮಾಡುತ್ತಾನೆ.
Tue, 31 Dec 202406:53 AM IST
- ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ಸಂಚಲನ ಮೂಡಿಸಿದೆ. ಶೂಟಿಂಗ್ ವೇಳೆ ಎಷ್ಟೇ ಕಾಳಜಿವಹಿಸಿದರೂ, ಕಿಡಿಗೇಡಿಗಳ ಈ ಕೆಲಸ ಸದ್ಯ ಚಿತ್ರತಂಡಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.
Tue, 31 Dec 202405:49 AM IST
- Seetha Rama Serial: ಸಿಹಿ ಇಲ್ಲ ಅನ್ನೋ ನೋವನ್ನು ಭರಿಸಲು ಸೀತಾಳ ಪ್ರಪಂಚಕ್ಕೆ ಸುಬ್ಬಿಯ ಆಗಮನವಾಗಿದೆ. ಅಚ್ಚರಿಯ ರೀತಿಯಲ್ಲಿ ಸೀತಾಳ ಕೈಗೆ ಸುಬ್ಬಿ ಸಿಕ್ಕಿಬಿದ್ದಿದ್ದಾಳೆ. ಆದರೆ, ಇವಳು ಸಿಹಿಯಲ್ಲ ಅನ್ನೋ ಸತ್ಯ ಮಾತ್ರ ಸೀತಾಗೆ ಇನ್ನೂ ತಿಳಿದಿಲ್ಲ.
Tue, 31 Dec 202405:03 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 30ರ ಎಪಿಸೋಡ್ನಲ್ಲಿ ಶ್ರೇಷ್ಠಾ ಹಾಗೂ ತಾಂಡವ್ಗೆ ಯಾರೂ ಊಹಿಸಲಾಗದಂಥ ಸ್ವಾಗತ ದೊರೆಯುತ್ತದೆ. ಶ್ರೇಷ್ಠಾಳನ್ನು ಮತ್ತೆ ಮನೆಯಲ್ಲಿ ನೋಡಿ ಮಕ್ಕಳು ಕೂಡಾ ಕೋಪಗೊಳ್ಳುತ್ತಾರೆ. ಶ್ರೇಷ್ಠಾ ಇಲ್ಲಿ ಇರುವವರೆಗೂ ಅವಳು ಈ ಮನೆ ಸೊಸೆ, ಭಾಗ್ಯಾ ಈ ಮನೆಯ ಅತಿಥಿ ಎಂದು ಕುಸುಮಾ ಹೇಳುತ್ತಾಳೆ.
Tue, 31 Dec 202404:40 AM IST
- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಡಿಸೆಂಬರ್ 30) ಕೆಲವು ಮಹತ್ವದ ಘಟನೆಗಳು ನಡೆದಿವೆ. ಸುಧಾ ಈ ಮನೆಗೆ ಮೋಸ ಮಾಡಿದ್ದಾಳೆ ಎಂದು ತಿಳಿದ ಗೌತಮ್ ಕೋಪಗೊಂಡಿದ್ದಾನೆ. ಮನೆಯಿಂದ ಸುಧಾಳನ್ನು ಹೊರಹಾಕಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾಳಿಗೆ ನಡೆದ ಘಟನೆಯ ಕುರಿತು ಸುಧಾ ಮಾಹಿತಿ ನೀಡಿದ್ದಾಳೆ.
Tue, 31 Dec 202404:08 AM IST
- ಇಂದ್ರಮ್ಮ ಮದುವೆ ಪ್ರಸ್ತಾಪ ಮಾಡಿದ್ದೇ ತಡ ಸುಬ್ಬುವಿನ ತಾಯಿ, ಅಕ್ಕ–ತಂಗಿ ತಮ್ಮ ಸ್ವಾರ್ಥಕ್ಕೆ ಶ್ರೀವಲ್ಲಿಯನ್ನ ಮದುವೆಯಾಗಲು ಒಪ್ಪುವಂತೆ ಒತ್ತಾಯಿಸುತ್ತಾರೆ. ತಂದೆ ಮಾತ್ರ ಮಗನಿಗೆ ಮನಸ್ಸಿಗೆ ತೋಚಿದಂತೆ ಮಾಡು ಎನ್ನುತ್ತಾರೆ. ಇತ್ತ ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಲಲಿತಾದೇವಿ ಕೆಂಡಾಮಂಡಲ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್ 30ರ ಸಂಚಿಕೆ.
Tue, 31 Dec 202404:04 AM IST
- ಬಿಗ್ ಬಾಸ್ ಫಿನಾಲೆಗೆ ಹತ್ತಿರ ಬರ್ತಿದ್ದಂತೆ, ಇದೇ ಬಿಗ್ ಮನೆಗೆ ಅಚ್ಚರಿಯ ರೀತಿಯಲ್ಲಿ ಸ್ಪರ್ಧಿಗಳ ಅಮ್ಮಂದಿರ ಆಗಮನವಾಗಿದೆ. ಅಮ್ಮನನ್ನು ನೇರವಾಗಿ ಭೇಟಿ ಮಾಡಲು ಬಿಡದ ಬಿಗ್ ಬಾಸ್, ಒಂದು ಚಟುವಟಿಕೆ ನೀಡಿ ಟ್ವಿಸ್ಟ್ ಕೊಟ್ಟಿದ್ದಾರೆ. ಹೀಗಿರುವಾಗ ನಿಗದಿತ ಸಮಯದಲ್ಲಿ ಪಜಲ್ ಪೂರ್ಣಗೊಳಿಸದ ತ್ರಿವಿಕ್ರಂಗೆ ಅಮ್ಮನ ಭೇಟಿಯ ಅವಕಾಶ ಸಿಕ್ಕಿಲ್ಲ.
Tue, 31 Dec 202403:11 AM IST
- OTT Releases This Week: ಹೊಸ ವರ್ಷದ ಪ್ರಯುಕ್ತ ಒಟಿಟಿಯಲ್ಲಿ ಸಾಲು ಸಾಲು ಹಾಲಿವುಡ್ ಮತ್ತು ಭಾರತೀಯ ಸಿನಿಮಾ, ವೆಬ್ಸಿರೀಸ್ಗಳು ಬಿಡುಗಡೆ ಆಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಸಿನಿಮಾಗಳೂ ಈ ವಾರ ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಅಂಥ ಸಿನಿಮಾ ಮತ್ತು ವೆಬ್ಸಿರೀಸ್ಗಳ ಕುರಿತ ಮಾಹಿತಿ ಇಲ್ಲಿದೆ.
Tue, 31 Dec 202402:10 AM IST
- ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಅವರ ಅಭಿಮಾನಿಗಳು ಸಿಂಹದ ಹಾದಿ ಎಂಬ ಟೆಲಿಫಿಲಂ ಮೂಲಕ ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಜಿಕೆ ಸಿನಿ ಫೈಲ್ಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಜಿ. ಕೆ. ಶಶಿರಾಜ್ ದೊರೈ ಸಿಂಹದ ಹಾದಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.ಡ
Tue, 31 Dec 202401:20 AM IST
- ಬಾಸಿಸಂ ಕೇಕ್ ವಿವಾದದ ಬಗ್ಗೆ ಮ್ಯಾಕ್ಸ್ ಸಿನಿಮಾ ಸಂತೋಷಕೂಟದಲ್ಲಿ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಾವ್ಯಾರೂ ಇಲ್ಲಿ ಟಾಂಟ್ ಕೊಟ್ಟಿಲ್ಲ. ಅಷ್ಟಕ್ಕೂ ನಾವೇನು ಛತ್ರಪತಿಗಳಾ, ಚಕ್ರವರ್ತಿಗಳಾ? ಯಶ್, ದರ್ಶನ್, ಧ್ರುವ, ಶಿವಣ್ಣ, ಉಪ್ಪಿ ಸರ್.. ಎಲ್ಲರೂ ಸೇರಿದರೆ ಮಾತ್ರ ಚಿತ್ರರಂಗ ಎಂದಿದ್ದಾರೆ.