
Entertainment News in Kannada Live January 14, 2025: ಶಿವ ರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 14 Jan 202501:01 PM IST
- 45 Movie Release date: ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ 45 ಚಿತ್ರದಿಂದ ದೊಡ್ಡ ಅಪ್ಡೇಟ್ ಸಿಕ್ಕಿದೆ. ಚಿತ್ರದ ಅನಿಮೇಟೆಡ್ ಹಾಡಿನ ಝಲಕ್ ಮೂಲಕ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಅರ್ಜುನ್ ಜನ್ಯ ಬಹಿರಂಗಪಡಿಸಿದ್ದಾರೆ.
Tue, 14 Jan 202512:18 PM IST
- ಹುಡುಗನೋ ಹುಡುಗಿಯೋ ಹನ್ನೆರಡರ ವಯಸ್ಸಿನಲ್ಲಿಯೇ ಡೇಟಿಂಗ್ ಹೋಗುವುದು ತಪ್ಪಲ್ಲವೇ ಎಂದು ಯೋಚಿಸುವ ಬದಲು ಹುಡುಗನಾದರೆ ಸರಿ ಹುಡುಗಿಯಾದರೆ ತಪ್ಪು ಎನ್ನುವ ಮನಸ್ಥಿತಿಯೇ ಹೆಣ್ಣುಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣ. ನಿಜಕ್ಕೂ ಬೇಸರದ ವಿಷಯ. - ದೀಪಾ ಹಿರೇಗುತ್ತಿ ಬರಹ
Tue, 14 Jan 202511:40 AM IST
- Mahavatar Narsimha teaser: ಪೌರಾಣಿಕ ಹಿನ್ನೆಲೆಯ ಮಹಾವತಾರ್ ನರಸಿಂಹ ಎಂಬ ಅನಿಮೇಷನ್ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್. ಈಗ ಈ ಚಿತ್ರದ ಮೊದಲ ಟೀಸರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ.
Tue, 14 Jan 202510:37 AM IST
- ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ನೋಡಿ ಕಿರುತೆರೆ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಜೀವ ಪಾತ್ರದಾರಿ ಶಶಿ ಹೆಗ್ಗಡೆ ಬದಲು ಹೊಸ ಜೀವ ಕಾಣಿಸಿಕೊಂಡಿದ್ದಾರೆ. ಪಾತ್ರ ಮಾತ್ರ ಬದಲಾಯಿಸದೆ ಪಾತ್ರದಾರಿಯ ಗುಣವನ್ನೂ ಬದಲಾಯಿಸಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಏನಿದು ಹೊಸ ಟ್ವಿಸ್ಟ್?
Tue, 14 Jan 202509:49 AM IST
- Box Office Collection report: ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಮತ್ತು ರಾಮ್ ಚರಣ್ ಅವರ ಗೇಮ್ ಚೇಂಜರ್ ಸಿನಿಮಾಗಳು ಸಂಕ್ರಾಂತಿ ಹಬ್ಬದ ಖುಷಿ ಹೆಚ್ಚಿಸಿವೆ. ಪಾಸಿಟಿವ್ ಪ್ರತಿಕ್ರಿಯೆ ಪಡೆದ ಈ ಸಿನಿಮಾಗಳ ಈ ವರೆಗಿನ ಕಲೆಕ್ಷನ್ ಎಷ್ಟು, ಗೆದ್ದವರು ಯಾರು? ಇಲ್ಲಿದೆ ಮಾಹಿತಿ.
Tue, 14 Jan 202507:37 AM IST
Los Angeles Wildfires: ಕಳೆದ ವಾರ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು 12 ಜನರನ್ನು ಬಲಿ ಪಡೆದಿದೆ. ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡಾ ಲಾಸ್ ಏಂಜಲೀಸ್ನಲ್ಲಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Tue, 14 Jan 202506:29 AM IST
- Seetha Rama Serial Today Episode: ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾಗಷ್ಟೇ ಅಲ್ಲದೆ ರಾಮನಿಗೂ ಸುಬ್ಬಿಯ ಮುಖದರ್ಶನವಾಗಿದೆ. ಇಷ್ಟು ದಿನ ಸೀತಾಗೆ ಮಾತ್ರ ಕಂಡಿದ್ದ ಸುಬ್ಬಿ, ಇದೀಗ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸುಬ್ಬಿಯನ್ನು ಕಂಡು ಅಕ್ಷರಶಃ ನಿಬ್ಬೆರಗಾಗಿದ್ದಾನೆ.
Tue, 14 Jan 202505:37 AM IST
- ಮೊಮ್ಮಗಳ ಬಳಿ ಕ್ಷಮೆ ಕೇಳಿದ್ರು ಲಲಿತಾದೇವಿ. ವರಲಕ್ಷ್ಮೀ ಮದುವೆಗೂ ತಾವೇ ಬಟ್ಟೆ ಕೊಡಿಸುತ್ತೇವೆ ಅಂದ್ರು ಮಿನಿಸ್ಟರ್ ವೀರೇಂದ್ರ. ಮದುವೆ ಸೀರೆ ಖರೀದಿಗೆ ಸುಬ್ಬು ಜೊತೆ ಹೋಗಿ, ಅವನ ಆಯ್ಕೆಯ ಸೀರೆಯನ್ನು ಮೆಚ್ಚಿಕೊಂಡ ಶ್ರಾವಣಿ. ಸುಬ್ಬು ಗೊಂದಲಕ್ಕಿನ್ನೂ ಸಿಕ್ಕಿಲ್ಲ ಪರಿಹಾರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 13ರ ಸಂಚಿಕೆಯಲ್ಲಿ ಏನೇನಾಯ್ತು?
Tue, 14 Jan 202505:26 AM IST
- Nithya Menon About Period Pain: ಸಿನಿಮಾರಂಗದಲ್ಲಿ ನಟಿಯರು ಎದುರಿಸುವ ಸಮಸ್ಯೆಗಳ ಬಗ್ಗೆ ನಿತ್ಯಾ ಮೆನನ್ ಮಾತನಾಡಿದ್ದಾರೆ. ಅನಾರೋಗ್ಯ ಇರಲಿ, ಮುಟ್ಟಿನ ಸಮಸ್ಯೆಯೇ ಇರಲಿ.. ಶೂಟಿಂಗ್ನಲ್ಲಿ ಭಾಗವಹಿಸಲೇಬೇಕು. ನಿಜಕ್ಕೂ ಇದೊಂದು ಅಮಾನವೀಯ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಿತ್ಯಾ ಮೆನನ್.
Tue, 14 Jan 202505:25 AM IST
- Bigg boss kannada season 11 winner prediction: ಬಿಗ್ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಈ ಬಾರಿ ಯಾರಿಗೆ ವಿನ್ನರ್ ಕಿರೀಟ ದೊರಕಲಿದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ. ಚಾಟ್ಜಿಪಿಟಿ, ಜೆಮಿನಿ ಎಐ ಪ್ರಕಾರ ಈ ಬಾರಿ ಬಿಗ್ಬಾಸ್ ಕನ್ನಡದಲ್ಲಿ ಯಾರು ವಿನ್ನರ್ ಆಗಬಹುದು ಎಂದು ತಿಳಿದುಕೊಳ್ಳೋಣ.
Tue, 14 Jan 202505:05 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 13ರ ಎಪಿಸೋಡ್ನಲ್ಲಿ ಕೆಲಸದವಳಿಂದ ಅಮ್ಮನಿಗೆ ಅವಮಾನವಾಗಿದೆ, ಮನೆಯವರ ಬಗ್ಗೆ ಕೇವಲವಾಗಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಶ್ರೇಷ್ಠಾಗೆ ತಾಂಡವ್ ಕಪಾಳಮೋಕ್ಷ ಮಾಡುತ್ತಾನೆ. ಮಗ ನಮ್ಮ ಪರ ಬಂದ ಎಂದು ಕುಸುಮಾ ಖುಷಿಯಾಗುತ್ತಾಳೆ.
Tue, 14 Jan 202504:32 AM IST
- Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಹಣವಂತರು ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಸಮಾಜಮುಖಿ ಆಲೋಚನೆ ಹಂಚಿಕೊಳ್ಳಲಾಗಿದೆ. ಗೌತಮ್ ದಿವಾನ್ ಲಚ್ಚಿ ಓದುತ್ತಿರುವ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.