
Entertainment News in Kannada Live January 22, 2025: ಛಾವಾ ಟ್ರೈಲರ್: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ ರಶ್ಮಿಕಾ ಮಂದಣ್ಣ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 22 Jan 202504:42 PM IST
Chhaava Trailer: ಐತಿಹಾಸಿಕ ಸಿನಿಮಾ ಛಾವಾದ ಟ್ರೈಲರ್ ಗಮನಿಸಿದರೆ, ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ.
Wed, 22 Jan 202502:44 PM IST
Chhaava trailer: ಬಹುನಿರೀಕ್ಷಿತ ಛಾವಾ ಸಿನಿಮಾದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಇದಾಗಿದ್ದು, ಇತಿಹಾಸದ ಕಡೆಗೆ ಇಣುಕುನೋಟ ಬೀರುವ ಸುಳಿವು ನೀಡಿದೆ. ಛತ್ರಪತಿ ಸಂಭಾಜಿ ಪಾತ್ರದಲ್ಲಿ ಸಿಂಹದೊಂದಿಗೆ ಸೆಣಸಾಡಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ ಛಾವಾ ಟ್ರೈಲರ್ನಲ್ಲಿದೆ.
Wed, 22 Jan 202512:55 PM IST
ಮಹಿಳಾ ಆಯೋಗದ ಒತ್ತಾಯದ ಮೇರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪೋಶ್ (POSH-Prevention of Sexual Harassment) ಕಮಿಟಿಯನ್ನು ರಚನೆ ಮಾಡಿದೆ. ರಾಜ್ಯದಲ್ಲಿ ಮಿ ಟೂ, ಕಾಸ್ಟಿಂಗ್ ಕೌಚ್ ಪ್ರಕರಣಗಳು ಸದ್ದು ಮಾಡಿದ ಹಿನ್ನೆಲೆ ಎಲ್ಲದಕ್ಕೂ ಕಡಿವಾಣ ಹಾಕಲು 7 ಸದಸ್ಯರಿರುವ ಆಂತರಿಕ ಕಮಿಟಿಯನ್ನು ರಚಿಸಲಾಗಿದೆ.
Wed, 22 Jan 202512:39 PM IST
- 2019ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. ‘ಪೈಲ್ವಾನ್’ ಚಿತ್ರದ ಮೂಲಕ ಕಿಚ್ಚ ಸುದೀಪ್ ಅತ್ಯುತ್ತಮ ನಾಯಕ ನಟ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Wed, 22 Jan 202511:03 AM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಎಂದು ಏಕವಚನದಲ್ಲಿ ಕಿಟ್ಟಿ ಚಾರುವನ್ನು ಕೂಗುತ್ತಿದ್ದಾನೆ. ಅದರೆ ಇಷ್ಟು ದಿನ ಅವಳ ಮೇಲೆ ಕಿಟ್ಟಿಗೆ ಬಹಳ ಗೌರವ ಇತ್ತು. ಇಂದು ಯಾಕೆ ಏಕೆ ವಚನದಲ್ಲಿ ಕೂಗಿದ್ದಾನೆ ಎಂದು ಎಲ್ಲರಿಗೂ ಆಶ್ಚರ್ಯ ಆಗಿದೆ. ಜಾನಕಿ ಬೈದಿದ್ದಾಳೆ.
Wed, 22 Jan 202510:13 AM IST
ಬಿಗ್ ಬಾಸ್ ಸೀಸನ್ 11 ಇದೇ ಭಾನುವಾರ ಅಂತ್ಯಗೊಳ್ಳುತ್ತಿದೆ. ಈ ನಡುವೆ ಮನೆಗೆ ಬಂದ ಮಹರ್ಷಿ ದರ್ಶನ ಖ್ಯಾತಿಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ , ಇಲ್ಲಿಂದ ಹೋಗುತ್ತಿದ್ದಂತೆ ನಿನ್ನ ಮದುವೆ ಆಗಲಿದೆ, ಒಳ್ಳೆ ಸಂಗಾತಿ ಸಿಗುತ್ತಾಳೆ, ವೃತ್ತಿ ಜೀವನವೂ ಚೆನ್ನಾಗಿರುತ್ತದೆ ಎಂದು ಉಗ್ರಂ ಮಂಜು ಬಗ್ಗೆ ಭವಿಷ್ಯ ನುಡಿದಿದ್ದಾರೆ.
Wed, 22 Jan 202509:42 AM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ತನ್ನ ಪ್ರೇಯಸಿ ಜತೆ ಇರುವುದನ್ನು ರಶ್ಮಿ ಕಂಡಿದ್ದಾಳೆ. ಇತ್ತ ಶಿವು ಗುಟ್ಟಾಗಿ ಹಣದ ವಿಚಾರ ಮಾತಾಡುವಾಗ ಪಾರು ಅವನ ಹಿಂದೆ ಹೋಗಿ ನಿಂತಿದ್ದಾಳೆ.
Wed, 22 Jan 202508:54 AM IST
- Naa Ninna Bidalaare: ಜೀ ಕನ್ನಡದಲ್ಲಿ ಇದೇ ಜನವರಿ 27ರಿಂದ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಶುರುವಾಗಲಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಈ ಸೀರಿಯಲ್ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.
Wed, 22 Jan 202507:09 AM IST
- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು (ಜನವರಿ 22) ಹೈದ್ರಾಬಾದ್ ಏರ್ಪೋರ್ಟ್ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಕಾರಿನಿಂದಿಳಿದು ವೀಲ್ಚೇರ್ನಲ್ಲಿ ಅವರು ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ.
Wed, 22 Jan 202506:37 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 21ರ ಎಪಿಸೋಡ್ನಲ್ಲಿ ತಾಯವ್ವನನ್ನು ಹೊಸ ಆಫೀಸ್ ಉದ್ಘಾಟನೆಗೆ ಆಹ್ವಾನಿಸಲು ಸಿಂಚನಾ, ತವರು ಮನೆಗೆ ಬರುತ್ತಾಳೆ. ಮನೆಗೆ ಬಂದ ಅಳಿಯನಿಗೆ ಗೌರವವನ್ನೂ ಕೊಡದೆ ತಾಯವ್ವ, ಹರೀಶನಿಗೆ ಅವಮಾನ ಮಾಡುತ್ತಾಳೆ.
Wed, 22 Jan 202506:08 AM IST
- Saif Ali Khan: ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕ ಭಜನ್ ಸಿಂಗ್ ರಾಣಾಗೆ ಉಡುಗೊರೆ ನೀಡಲಾಗಿದೆ. ಅಂದು ರಾತ್ರಿ ಆ ಸಮಯಕ್ಕೆ ಸ್ವಂದಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
Wed, 22 Jan 202505:47 AM IST
- ಸುಬ್ಬು ಮನೆಯಲ್ಲಿ ಅರಿಸಿನ ಶಾಸ್ತ್ರ ಮುಗಿದು ಮನೆಯವರ ಖುಷಿಯ ಕ್ಷಣಗಳು, ಶ್ರಾವಣಿ ಬಳೆ ಶಾಸ್ತ್ರದಲ್ಲೂ ವಿಜಯಾಂಬಿಕಾ ನಿಂತಿಲ್ಲ ವಿಜಯಾಂಬಿಕಾ ಫೋನ್ ವ್ಯವಹಾರ. ದೊಡ್ಮನೆಯ ಪರಂಪರೆಯ ಬಂದ ಅತ್ತೆ ತೊಡಿಸಿಬೇಕಿದ್ದ ಬಳೆಯನ್ನು ಶ್ರಾವಣಿಗೆ ತೊಡಿಸುವ ವಿಶಾಲಾಕ್ಷಿ. ರೌಡಿಗಳಿಂದ ಬಚಾವ್ ಆದ ಪೃಥ್ವಿರಾಜ್. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 21ರ ಸಂಚಿಕೆಯ ವಿವರ.
Wed, 22 Jan 202504:53 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 21ರ ಎಪಿಸೋಡ್ನಲ್ಲಿ ನನ್ನ ಮಗ ಮನೆಗೆ ವಾಪಸ್ ಬಂದೇ ಬರುತ್ತಾನೆ ಎಂದು ಕುಸುಮಾ, ಮನೆಯವರ ಬಳಿ ಹೇಳುತ್ತಿದ್ದಂತೆ ತಾಂಡವ್, ಬಾಗಿಲಿನ ಬಳಿ ಪ್ರತ್ಯಕ್ಷವಾಗುತ್ತಾನೆ. ಅಪ್ಪ-ಅಮ್ಮನನ್ನು ಬಿಟ್ಟಿರಲಾಗದೆ ಮನೆಗೆ ವಾಪಸ್ ಬಂದೆ ಎಂದು ನಾಟಕ ಮಾಡುತ್ತಾನೆ.
Wed, 22 Jan 202504:35 AM IST
- ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಅಪೇಕ್ಷಾ ಕುಡಿದು ಮಾಡಿದ ರಂಪಾಟವೇ ಪ್ರಮುಖ ಹೈಲೈಟ್. ಪರೋಕ್ಷವಾಗಿ ಶಕುಂತಲಾದೇವಿ ನೀಡಿದ ಸೂಚನೆಯಂತೆ ಅಪೇಕ್ಷಾ ಕುಡಿದಿದ್ದಾಳೆ. ಬಳಿಕ ಏನಾಯಿತು ಎಂದು ನೋಡೋಣ.
Wed, 22 Jan 202504:22 AM IST
- Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್, ವೀಕ್ಷಕರಿಗೆ ಶಾಕ್ ನೀಡಿದೆ. ಇಷ್ಟು ದಿನ ರತ್ರಿ 9:30ಕ್ಕೆ ಪ್ರಸಾರವಾಗುತ್ತಿದ್ದ ಈ ಸೀರಿಯಲ್, ಇದೀಗ ಬದಲಾದ ಸಮಯದಲ್ಲಿ ಪ್ರಸಾರ ಕಾಣಲಿದೆ. ಸಮಯ ಬದಲಾಗಿದ್ದೇ ತಡ, ವೀಕ್ಷಕರ ವಲಯದಲ್ಲಿಯೂ ಬೇಸರ ಮನೆ ಮಾಡಿದೆ.