Entertainment News in Kannada Live January 7, 2025: Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್ ಕುಮಾರ್! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 07 Jan 202502:06 PM IST
- Ajith Race Car Accident: ಕಾಲಿವುಡ್ ನಟ ಅಜಿತ್ ಕುಮಾರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದುಬೈನಲ್ಲಿ ನಡೆದ ಕಾರ್ ರೇಸ್ ಟ್ರೇನಿಂಗ್ ವೇಳೆ, ಭಾರೀ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಅಜಿತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಮೈ ಜುಂ ಎನಿಸುವ ಆ ಆಕ್ಸಿಡೆಂಟ್ನ ವಿಡಿಯೋ ಇಲ್ಲಿದೆ.
Tue, 07 Jan 202512:34 PM IST
- Vadhu Serial Cast and Crew: ಕಲರ್ಸ್ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿರುವ ವಧು ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಸೀರಿಯಲ್ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ. ಬಿಗ್ ಬಾಸ್ ಮುಗೀತಿದ್ದಂತೆ ಈ ಸೀರಿಯಲ್ ಪ್ರಸಾರವಾಗುವ ಸಾಧ್ಯತೆ ಇದೆ.
Tue, 07 Jan 202512:01 PM IST
- ಈಗಾಗಲೇ ಟೀಸರ್ ಮೂಲಕ ಗಮನಸೆಳೆದ ನಾಗಬಂಧಂ ಸಿನಿಮಾ, ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ರುದ್ರ ಅನ್ನೋ ಪಾತ್ರವನ್ನು ಪರಿಚಯಿಸುತ್ತಿದೆ. ಇಂದು (ಜ 7) ಇದೇ ಚಿತ್ರದ ಪ್ರೀ ಲುಕ್ ಬಿಡುಗಡೆ ಆಗಿದೆ. ಈ ಪ್ಯಾನ್ ಇಂಡಿಯನ್ ಚಿತ್ರವನ್ನು ಅಭಿಷೇಕ್ ನಾಮ ನಿರ್ದೇಶನ ಮಾಡುತ್ತಿದ್ದಾರೆ.
Tue, 07 Jan 202510:37 AM IST
- Oscar Awards 2025: ಅಚ್ಚರಿಯ ರೀತಿಯಲ್ಲಿ ಕಾಲಿವುಡ್ನಲ್ಲಿ ನಿರ್ಮಾಣವಾದ ಕಂಗುವ ಸಿನಿಮಾ ಆಸ್ಕರ್ ಪ್ರಶಸ್ತಿಯ ರೇಸ್ಗೆ ಇಳಿದಿದೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಎಲ್ಲರು ಹುಬ್ಬೇರಿಸಿದ್ದಾರೆ.
Tue, 07 Jan 202509:17 AM IST
- Apaayavide Eccharike Teaser: ಅಮೃತಧಾರೆ ಸೀರಿಯಲ್ ಮಲ್ಲಿ ಖ್ಯಾತಿಯ ರಾಧಾ ಭಗವತಿ ಮತ್ತು ಅಣ್ಣಯ್ಯ ಧಾರಾವಾಹಿ ಶಿವಣ್ಣ ಖ್ಯಾತಿಯ ವಿಕಾಶ್ ಉತ್ತಯ್ಯ ಜೋಡಿಯಾಗಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಅಪಾಯವಿದೆ ಎಚ್ಚರಿಕೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
Tue, 07 Jan 202509:03 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 6ರ ಎಪಿಸೋಡ್ನಲ್ಲಿ ಜಯಂತ್ ತನ್ನ ಸ್ನೇಹಿತ ಸಚಿನ್ನನ್ನು ಹೆದರಿಸಿ ಮನೆಯಿಂದ ಕಳಿಸುತ್ತಾನೆ, ವೆಂಕಿ ಹುಡುಕುತ್ತಿರುವ ಸ್ನೇಹಿತ, ಜಯಂತ್ ಎಂಬ ವಿಚಾರ ಅಜ್ಜಿಗೆ ತಿಳಿಯುತ್ತದೆ. ಅಜ್ಜಿಯನ್ನು ಜಯಂತ್ ಕತ್ತು ಹಿಸುಕಿ ಸಾಯಿಸುವ ಪ್ರಯತ್ನ ಮಾಡುತ್ತಾನೆ.
Tue, 07 Jan 202508:35 AM IST
- ಜೀ ಕನ್ನಡ ವಾಹಿನಿ ಕಥೆ, ಚಿತ್ರಕಥೆ ಸೇರಿ ಬರವಣಿಗೆ ಹಿನ್ನೆಲೆಯಿದ್ದವರಿಗೆ ಒಂದೊಳ್ಳೆಯ ಅವಕಾಶವನ್ನು ನೀಡುತ್ತಿದೆ. ಕಥಗಾರರನ್ನು, ಸಂಭಾಷಣೆಗಾರರನ್ನು ಹೈರಿಂಗ್ ಮಾಡಿಕೊಳ್ಳುತ್ತಿದೆ. ನಿಮಗೆ ಬರವಣಿಗೆ ಮೇಲೆ ಹಿಡಿತವಿದ್ದರೆ, ಅದರಲ್ಲೂ ಅಚ್ಚ ಕನ್ನಡವನ್ನು ಚೆಂದವಾಗಿ ಬರೆದು ಒಪ್ಪಿಸುವ ಕೆಲಸ ನಿಮಗೆ ಗೊತ್ತಿದ್ದರೆ ರೈಟರ್ಸ್ ಆಡಿಷನ್ಸ್ನಲ್ಲಿ ಭಾಗವಹಿಸಿ.
Tue, 07 Jan 202506:11 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನಗೆ ಎಲ್ಲ ಸತ್ಯ ಗೊತ್ತಾಗಿದೆ ಎಂದು ಹೇಳುತ್ತಿದ್ದಾನೆ. ಆದರೆ ಅವನಿಗೆ ಯಾವ ಸತ್ಯ ಗೊತ್ತಾಗಿದೆ ಎಂದು ಪೂರ್ತಿಯಾಗಿ ಲಕ್ಷ್ಮೀಗೆ ಅರ್ಥ ಆಗುತ್ತಿಲ್ಲ. ಅವನು ಮಾತಿನಿಂದ ಗೊಂದಲದಲ್ಲಿದ್ದಾಳೆ. ಇನ್ನು ಕಾವೇರಿ ಜೈಲಿನಿಂದ ಕಾಲ್ ಮಾಡಿದ್ದಾಳೆ.
Tue, 07 Jan 202505:46 AM IST
- Seetha Rama Serial Today Episode: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ, ಸಿಹಿ ಸಾವಿನ ಹಿಂದಿನ ಸತ್ಯ ತಿಳಿಯಲು ಸತ್ಯ ಚಿಕ್ಕಪ್ಪ ಮತ್ತು ಅಶೋಕ ಒಂದಾಗಿದ್ದಾರೆ. ಮತ್ತೊಂದು ಕಡೆ, ಸಿಹಿಯ ಮಾತು ಸುಬ್ಬಿಗೂ ಕೇಳಿದೆ. ಹಾಗಾದ್ರೆ, ಇವರಿಬ್ಬರೂ ಒಂದಾಗ್ತಾರಾ? ಮುಂಬರುವ ಸಂಚಿಕೆಯಲ್ಲಿ ಇದು ರಿವೀಲ್ ಆಗಲಿದೆ.
Tue, 07 Jan 202505:10 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 6ರ ಎಪಿಸೋಡ್ನಲ್ಲಿ ಸ್ಕೂಟರ್ನಲ್ಲಿ ಹೊರಗೆ ಹೋದ ಧರ್ಮರಾಜ್ಗೆ ಆಕ್ಸಿಡೆಂಟ್ ಆಗುತ್ತದೆ, ಅದಕ್ಕೂ ಭಾಗ್ಯಾಳೇ ಕಾರಣ ಎಂದು ತಾಂಡವ್ ಆರೋಪಿಸುತ್ತಾನೆ. ಗಂಡನ ಮಾತುಗಳಿಂದ ಬೇಸರಗೊಂಡ ಭಾಗ್ಯಾ, ಮಾವನಿಗೆ ಕಾರು ಕೊಡಿಸಲು ನಿರ್ಧರಿಸುತ್ತಾಳೆ.
Tue, 07 Jan 202505:10 AM IST
- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಸದಾಶಿವ ಕುಟುಂಬ ಮರುಪ್ರವೇಶವಾಗಿದೆ. ಕಳೆದ ಹಲವು ತಿಂಗಳುಗಳಿಂದ ಸದಾಶಿವ ಕುಟುಂಬ ಸೀರಿಯಲ್ನಲ್ಲಿ ಇರಲಿಲ್ಲ. ಪಾರ್ಥನ ಮದುವೆ ಬಳಿಕ ಸದಾಶಿವ ಮನೆ ಬಿಟ್ಟು ಹೊರಗೆ ಹೋಗಿದ್ದರು.
Tue, 07 Jan 202505:03 AM IST
- ಡಿಸೆಂಬರ್ 5ರಂದು ಬಿಡುಗಡೆಯಾದ ಮೊದಲ ದಿನವೇ 294 ಕೋಟಿ ಗಳಿಸಿದ್ದ ಪುಷ್ಪ 2 ಸಿನಿಮಾ ಇದೀಗ ಕಲೆಕ್ಷನ್ ವಿಚಾರದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಬಾಹುಬಲಿ-2 ಚಿತ್ರವನ್ನು ಹಿಂದಿಕ್ಕಿದೆ. ಪುಷ್ಪ 32 ದಿನಗಳಲ್ಲಿ ವಿಶ್ವಾದ್ಯಂತ 1831 ಕೋಟಿ ರೂ ಗಳಿಸಿ ಈ ದಾಖಲೆ ನಿರ್ಮಿಸಿದೆ.
Tue, 07 Jan 202503:59 AM IST
Game changer Movie first Review: ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಚಿತ್ರದ ಮೊದಲ ವಿಮರ್ಶೆ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಸಾಗರೋತ್ತರ ಸೆನ್ಸಾರ್ ಮಂಡಳಿಯ ವಿಮರ್ಶೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
Tue, 07 Jan 202501:43 AM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಶಿವು ಪ್ರೀತಿ ಮಾಡುತ್ತಿದ್ದ ಹುಡುಗಿ ಯಾರು ಎಂಬ ಸತ್ಯ ಅರಿವಾಗಿದೆ. ಆದರೆ ಅವಳು ಶಿವುವನ್ನು ಪ್ರೀತಿಸುವ ಬದಲಾಗಿ ಅವನನ್ನು ದ್ವೇಷ ಮಾಡಲು ಆರಂಭಿಸಿದ್ದಾಳೆ.
Tue, 07 Jan 202501:30 AM IST
- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಇದೀಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ, ಬೆಂಗಳೂರು ಪೋಲಿಸರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Tue, 07 Jan 202501:17 AM IST
- Nayanthara Chandramukhi controversy: ಧನುಷ್ ಬಳಿಕ ಇದೀಗ ಚಂದ್ರಮುಖಿ ಚಿತ್ರತಂಡವು ಲೇಡಿ ಸೂಪರ್ಸ್ಟಾರ್ ನಯನತಾರಾಗೆ ಲೀಗಲ್ ನೋಟಿಸ್ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ಎಂಬ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಚಂದ್ರಮುಖಿ ಸಿನಿಮಾದ ಕೆಲವು ಸೆಕೆಂಡ್ಗಳ ದೃಶ್ಯಗಳಿರುವುದು ಇದಕ್ಕೆ ಕಾರಣ.