
Entertainment News in Kannada Live October 28, 2024: ಪುಷ್ಪ 2 ಸಿನಿಮಾ ಟಿಕೆಟ್ ದರ 200 ಮೀರುವಂತಿಲ್ಲ; ಹೆಚ್ಚಾದ್ರೆ ಕರ್ನಾಟಕದಲ್ಲಿ ಬಿಡುಗಡೆಗೆ ತಡೆಯೊಡ್ಡುವ ಎಚ್ಚರಿಕೆ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 28 Oct 202405:26 PM IST
- ಕನ್ನಡದ ಸಿನಿಮಾಗಳಿಗಿಂತ ಪರಭಾಷೆಯ ಸಿನಿಮಾಗಳೇ ಕರ್ನಾಟಕದ ಥಿಯೇಟರ್ಗಳ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿದ ಸಾಕಷ್ಟು ಉದಾಹರಣೆ ಇದೆ. ಆದರೆ ಈಗ ಪುಷ್ಪ 2 ಸಿನಿಮಾ ಟಿಕೆಟ್ ದರ 200 ಮೀರುವಂತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
Mon, 28 Oct 202402:57 PM IST
- ಪುನೀತ್ ರಾಜ್ಕುಮಾರ್ ಅಗಲಿ 3 ವರ್ಷವಾದರೂ ಅವರ ನಗು ಮಾತ್ರ ಇನ್ನೂ ಹಸನಾಗಿದೆ. ಸಿನಿಮಾರಂಗವೊಂದೇ ಅಲ್ಲದೇ, ಅಪ್ಪು ಅವರನ್ನು ಹಲವು ಸಂಗತಿಗಳು ಮಿಸ್ ಮಾಡಿಕೊಂಡಿವೆ. ಅಭಿಮಾನಿಗಳ ಹೃದಯದಲ್ಲಿ 'ಪರಮಾತ್ಮ'ನಾಗಿ ನೆಲೆಸಿರುವ ಪುನೀತ್ ರಾಜಕುಮಾರ್ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ.
Mon, 28 Oct 202401:01 PM IST
- ಸಿನಿಮಾಕ್ಕೆ ನಿರ್ಮಾಪಕರು ಸಿಗದೇ ಹೋದರೆ, ಕಟ್ಟಿದ ಕನಸಿನ ಮಹಲು ನೆಲಕ್ಕಪ್ಪಳಿಸುತ್ತದೆ. ಆದರೆ, ನಾವೇ ನಿರ್ಮಾಪಕರಾದರೆ ಹೇಗೆ? ಇಂಥದ್ದೊಂದು ಸಾಹಸ ಮತ್ತು ಸಾಧನೆಗೆ ಮುಂದಾಗಿದೆ ಹೊಸಬರ ಸಿನಿಮಾ ತಂಡ. ಅಷ್ಟಕ್ಕೂ ಅವರು ಮಾಡಹೊರಟ ಕೆಲಸ ಏನಿರಬಹುದು? ಇಲ್ಲಿದೆ ಓದಿ.
Mon, 28 Oct 202412:30 PM IST
- ರಾಮಾಚಾರಿ ಮನೆಯಲ್ಲೇ ಇದ್ದರೂ ಚಾರು ಮತ್ತು ಮುರಾರಿ ತಡ ಮಾಡುವುದು ಬೇಡ ಎಂದುಕೊಂಡು ರುಕ್ಕುವನ್ನು ಹುಡುಕಲು ಹೋಗಿದ್ದಾರೆ. ಆದರೆ ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಚಾರು ಹಾಗೂ ರಾಮಾಚಾರಿ ಇಬ್ಬರಿಗೂ ಭಯವಿದೆ.
Mon, 28 Oct 202412:26 PM IST
- kichcha Sudeep: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಸುದೀಪ್ ಅವರಿಗೆ ಪತ್ರವೊಂದು ಬಂದಿದೆ. ಅಮ್ಮನ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ.
Mon, 28 Oct 202412:00 PM IST
- ಜೀ ಕುಟುಂಬ ಅವಾರ್ಡ್ಸ್ 2024: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಗಿಲ್ಲಿ ಅವರಿಗೆ ಪ್ರಶಸ್ತಿ ಲಭಿಸಿದೆ. ಅವರ ಬದುಕಿನ ಬಗ್ಗೆ ಒಂದು ಚಿಕ್ಕ ವಿಡಿಯೋ ತುಣುಕನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ.
Mon, 28 Oct 202411:20 AM IST
- Meiyazhagan Movie: ಮೇಯಳಗನ್ ಸಿನಿಮಾ ಕನ್ನಡಿಗರ ಮನಸೂರೆಗೊಂಡಿದೆ. ಕಾರ್ತಿ, ಅರವಿಂದ್ ಸ್ವಾಮಿ ಅಭಿನಯದಲ್ಲಿ ಮೈದುಂಬಿಕೊಂಡಿರುವ ಭಾವಲೋಕ ಆಸ್ವಾದಿಸಿರುವ ಕನ್ನಡಿಗರು ಫೇಸ್ಬುಕ್ನಲ್ಲಿ ಮನದುಂಬಿ ಬರೆದಿದ್ದಾರೆ. ಅಂಥ ಕೆಲ ಪೋಸ್ಟ್ಗಳ ಸಂಗ್ರಹ ಇಲ್ಲಿದೆ.
Mon, 28 Oct 202410:22 AM IST
- Agent OTT: ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಅವರ ಏಜೆಂಟ್ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಕುರಿತು ಮತ್ತೊಂದು ಹೊಸ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಿ ಲಿವ್ ಹೊರತುಪಡಿಸಿ ಹೊಸ OTT ಮೂಲಕ ಈ ಚಿತ್ರವು ನವೆಂಬರ್ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
Mon, 28 Oct 202410:08 AM IST
- ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನಯನತಾರಾ ಅವರು ತನ್ನ ಸೌಂದರ್ಯದ ಕುರಿತು ಮಾತನಾಡಿದ್ದಾರೆ. ಕಳೆದ ಹಲವು ವರ್ಷಗಳಲ್ಲಿ ನನ್ನ ಮುಖವು ಸಾಕಷ್ಟು ಬದಲಾವಣೆಯಾಗಿದೆ ಎಂದು ಜನರು ಏಕೆ ಅಂದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು "ನನ್ನ ಮುಖದಲ್ಲಿ ಯಾವುದೇ ಪ್ಲಾಸ್ಟಿಕ್ ಇಲ್ಲ" ಎಂದು ತಮಾಷೆಯಾಗಿ ಹೇಳಿದ್ದಾರೆ.
Mon, 28 Oct 202409:45 AM IST
ಅಕ್ಟೋಬರ್ 29 ರಂದು ಹರಿಪ್ರಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ವಿದೇಶದಲ್ಲಿ ಬರ್ತ್ಡೇ ಆಚರಿಸಿಕೊಳ್ಳಲು ಹರಿಪ್ರಿಯಾ, ಪತಿ ವಸಿಷ್ಠ ಸಿಂಹ ಜೊತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. ಪ್ರಯಾಣದ ಫೋಟೋಗಳನ್ನು ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
Mon, 28 Oct 202409:20 AM IST
- Akka Anu: ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಅಕ್ಕ ಅನು, ತಮ್ಮ ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಚಿರಪರಿತರು. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು, ಹುಟ್ಟಿದ ಊರನ್ನು ಬಿಟ್ಟು, ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಮರು ಜೀವ ತುಂಬುತ್ತಿದ್ದಾರೆ. ಹೀಗಿರುವಾಗ ಇದೇ ಯುವತಿಗೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದುರುಳರು ಕಾಟ ಕೊಟ್ಟಿದ್ದಾರೆ.
Mon, 28 Oct 202408:25 AM IST
Zee Kutumaba awards 2024: ಮೂರು ದಿನಗಳ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ವಾಹಿನಿ ಕಾರ್ಯಕ್ರಮದ ತುಣುಕುಗಳನ್ನು ಪ್ರೋಮೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕುರಿ ಪ್ರತಾಪ್ ಫನ್ನಿ ಮಾತುಕತೆ ಗಮನ ಸೆಳೆದಿದೆ.
Mon, 28 Oct 202407:38 AM IST
- Bigg Boss Kannada 11: ಬಿಗ್ ಬಾಸ್ ಮನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ಯೋಗರಾಜ್ ಭಟ್ ಉತ್ತರ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿಯ ವಿಷಯ ಕೇಳಿ ಸ್ಪರ್ಧಿಗಳು ಭಾವುಕರಾಗಿದ್ದಾರೆ.
Mon, 28 Oct 202406:46 AM IST
ನಿರ್ದೇಶಕ ಓಂ ಸಾಯಿ ಪ್ರಕಾಶ್ ಪೊಲೀಸನ ಹೆಂಡತಿ, ಗೋಲ್ ಮಾಲ್ ರಾಧಾಕೃಷ್ಣ, ಅಣ್ಣ ತಂಗಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ನಿರ್ದೇಶಕ ರಘುರಾಮ್ ಅವರ ಕನಸುಗಳ ಕಾರ್ಖಾನೆ ಯೂಟ್ಯೂಬ್ ಚಾನೆಲ್ನ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಓಂ ಸಾಯಿ ಪ್ರಕಾಶ್, ತಮ್ಮ ಜೀವನದ ಅನೇಕ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Mon, 28 Oct 202406:00 AM IST
ಅಣ್ಣಯ್ಯ ಧಾರಾವಾಹಿ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿಯ ಕರಿಮಣಿ ಶಾಸ್ತ್ರ ಆರಂಭವಾಗಿದೆ. ಇನ್ನು ತಂಗಿಯರು ಮೊಬೈಲ್ ಇಟ್ಟುಕೊಂಡ ವಿಷಯ ಅಣ್ಣಯ್ಯನಿಗೆ ತಿಳಿದು ತಂಗಿಯರು ಭಯದಲ್ಲಿದ್ದಾರೆ. ಹೀಗಿರುವಾಗ ತಂಗಿಯರಿಗೆ ಗಾಬರಿ ಹೆಚ್ಚಾಗಿದೆ.
Mon, 28 Oct 202405:14 AM IST
- Guardian OTT release date: ಗುರು ಶರವನನ್ ಮತ್ತು ಶಬರಿ ನಿರ್ದೇಶನದ, ಹನ್ಸಿಕಾ ಮೋಟ್ವಾನಿ, ಸುರೇಶ್ ಮೆನನ್, ಶ್ರೀಮಾನ್ ಮುಂತಾದವರು ನಟಿಸಿರುವ ಗಾರ್ಡಿಯನ್ ಎಂಬ ಭಯಾನಕ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ದೀಪಾವಳಿ ವಾರಾಂತ್ಯದಲ್ಲಿ ಹಾರರ್ ಸಿನಿಮಾ ನೋಡಲು ಬಯಸುವವರಿಗೆ ಇದು ಸೂಕ್ತವಾಗಿದೆ.
Mon, 28 Oct 202404:58 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 27ರ ಎಪಿಸೋಡ್ನಲ್ಲಿ ಭಾಗ್ಯಾ, ಧರ್ಮರಾಜ್ಗೆ ಡ್ಯಾನ್ಸ್ ಕ್ಲಾಸ್ನಲ್ಲಿ ಅವಮಾನವಾಗಿರುವುದು ಕುಸುಮಾಗೆ ಗೊತ್ತಾಗುತ್ತದೆ. ಶಿಕ್ಷಕಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಸುಮಾ, ಆಕೆಯನ್ನು ಮನೆಗೆ ಆಹ್ವಾನಿಸುತ್ತಾಳೆ.
Mon, 28 Oct 202404:58 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ಅವಮಾನ ಆಗಿದೆ. ಆದರೂ ಎಚ್ಚೆತ್ತುಕೊಳ್ಳದ ಕಾವೇರಿ ಮತ್ತೆ ಮೋಸ ಮಾಡಲು ಹೊರಟಿದ್ದಾಳೆ. ಲಕ್ಷ್ಮೀಯನ್ನು ಈ ಬಾರಿ ಕಾಪಾಡಲು ಯಾರು ಬರುತ್ತಾರೆ?
Mon, 28 Oct 202404:30 AM IST
- Amruthadhaare Serial: ಗೌತಮ್ ತಾಯಿ ಮತ್ತು ತಂಗಿ ಬದುಕಿರುವಂತಹ ಸತ್ಯವನ್ನು ಶಕುಂತಲಾದೇವಿ ಬಳಿ ಧನ್ಯ ಹೇಳುತ್ತಾಳೆ. ಈ ಸಮಯದಲ್ಲಿ ಧನ್ಯಳನ್ನು ರೌಡಿಗಳು ಹಿಡಿಯುತ್ತಾರೆ. ಆ ರೌಡಿಗಳಿಂದ ಪಾರಾಗುವಂತಹ ಸವಾಲು ಧನ್ಯಳಿಗೆ ಎದುರಾಗಿದೆ.
Mon, 28 Oct 202404:21 AM IST
- Bigg Boss Kannada 11: ಉಗ್ರಂ ಮಂಜು ಅವರ ಮಾತು ಕೇಳಿ ಮೋಕ್ಷಿತಾ ತ್ರಿವಿಕ್ರಂ ಹತ್ತಿರ ಜಗಳ ಮಾಡುತ್ತಿದ್ದಾರೆ. ಕೇವಲ ಹತ್ತು ವಾರಗಳ ಕಾಲ ಮಾತ್ರ ಇವರೆಲ್ಲ ಮನೆಯಲ್ಲಿ ಇರೋದು ಅದಾದ ನಂತರ ಇವರ ಅವಶ್ಯಕತೆ ಇಲ್ಲ ಎಂದು ಅವರು ಹೇಳಿರುತ್ತಾರೆ.
Mon, 28 Oct 202403:54 AM IST
The Lady Killer: ಅರ್ಜುನ್ ಕಪೂರ್ , ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ಲೇಡಿ ಕಿಲ್ಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಆದ ನಂತರ ಒಟಿಟಿಯಲ್ಲೂ ರಿಜೆಕ್ಟ್ ಆಗಿತ್ತು. ಇದೀಗ ಈ ಸಿನಿಮಾ ಯೂಟ್ಯೂಬ್ನಲ್ಲಿ ಲಭ್ಯವಿದ್ದು ಒಂದು ತಿಂಗಳಲ್ಲಿ 2.4 ಮಿಲಿಯನ್ ವೀಕ್ಷಣೆ ಗಳಿಸಿದೆ. ಅರ್ಜುನ್ ಕಪೂರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Mon, 28 Oct 202402:52 AM IST
ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಡಿಸ್ನಿ ಹಾಟ್ಸ್ಟಾರ್, ಜೀ5 ಸೇರಿದಂತೆ ವಿವಿಧ ಒಟಿಟಿ ವೇದಿಕೆಗಳಲ್ಲಿ ಅಕ್ಟೋಬರ್ 27 ರಿಂದ ನವೆಂಬರ್ 3ವರೆಗೆ ಸಿನಿಮಾಗಳು, ವೆಬ್ ಸೀರಿಸ್ ಸೇರಿದಂತೆ ವಿವಿಧ ಕಂಟೆಂಟ್ಗಳು ಸ್ಟ್ರೀಮ್ ಆಗಲಿವೆ. ಅವುಗಳಲ್ಲಿ ತಂಗಲಾನ್, ಲಬ್ಬರ್ ಪಾಂಡು, ಮೇಯಳಗನ್ ಸಿನಿಮಾಗಳು ಪ್ರಮುಖವಾಗಿವೆ.
Mon, 28 Oct 202401:36 AM IST
- Meiyazhagan Review: ತಮಿಳಿನ 96 ಚಿತ್ರದಲ್ಲಿ ರಾಮ್ ಮತ್ತು ಜಾನುವಿನ ಪ್ರೀತಿಯನ್ನು ನಾಸ್ಟಾಲ್ಜಿಕ್ ರುಚಿಯೊಂದಿಗೆ ನೀಡಿದ ನಿರ್ದೇಶಕ ಪ್ರೇಮಕುಮಾರ್, ಈಗ ಅದೇ ಟೆಂಪ್ಲೇಟ್ನಲ್ಲಿ ಮೇಯಳಗನ್ ಚಿತ್ರವನ್ನು ಪ್ರೇಕ್ಷಕನ ಮುಂದಿರಿಸಿದ್ದಾರೆ. ಭಾವನೆಗಳನ್ನೇ ಭರ್ತಿಯಾಗಿಯೇ ಬೆರೆಸಿ ನೋಡುಗರ ತಟ್ಟಿಗೆ ಬಡಿಸಿದ್ದಾರೆ. ಇಲ್ಲಿದೆ ಈ ಚಿತ್ರದ ವಿಮರ್ಶೆ.
Mon, 28 Oct 202401:15 AM IST
Bigg Boss Kannada 11: ಸೃಜನ್ ಲೋಕೇಶ್ ನಡೆಸಿಕೊಟ್ಟ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮಾನಸಾ, ಉಗ್ರಂ ಮಂಜು,ಗೌತಮಿ ಜಾಧವ್ ಸೇಫ್ ಆದರೆ, ಮೋಕ್ಷಿತಾ ಪೈ ಹಾಗೂ ಹಂಸ ಡೇಂಜರಸ್ ಜೋನ್ಗೆ ಸೇರಿದರು. ಇಬ್ಬರಿಗೂ ಮುಂದಿನ ವಾರಕ್ಕೆ ಒಬ್ಬರನ್ನು ನೇರ ನಾಮಿನೇಟ್ ಮಾಡುವ ಅಧಿಕಾರ ನೀಡಲಾಯ್ತು. ಮೋಕ್ಷಿತಾ, ತ್ರಿವಿಕ್ರಮ್ ಹಾಗೂ ಹಂಸ, ಹನುಮಂತನನ್ನು ನಾಮಿನೇಟ್ ಮಾಡಿದರು.