ಕನ್ನಡ ಸುದ್ದಿ  /  Entertainment  /  Garuda Ram Brother Venkat Raj Acting In Dollars Pete As Palani

Dollars Pete New Update: 'ಡಾಲರ್ಸ್‌ ಪೇಟೆ' ಯಲ್ಲಿ ಸದ್ದು ಮಾಡಲು ಸಿದ್ಧರಾದ 'ಕೆಜಿಎಫ್‌' ಗರುಡ ರಾಮ್‌ ಸಹೋದರ....ಫಸ್ಟ್‌ ಲುಕ್‌ ರಿವೀಲ್‌

ಚಿತ್ರೀಕರಣ ಮುಗಿಸಿ ರೀ ರೆಕಾರ್ಡಿಂಗ್ ಹಂತದಲ್ಲಿರುವ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಮೋಹನ್ ಎನ್ ಮುನಿನಾರಾಯಣಪ್ಪ ಇದಕ್ಕೂ ಮುನ್ನ 'ಮಾರ್ಫಿ', 'ಮದಗಜ' ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು 'ಡಾಲರ್ಸ್ ಪೇಟೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಗರುಡ ರಾಮ್‌, ಸಹೋದರ ವೆಂಕಟ್‌ ರಾಜ್
ಗರುಡ ರಾಮ್‌, ಸಹೋದರ ವೆಂಕಟ್‌ ರಾಜ್ (‌PC: Garuda Ram, Harish Harish Arasu)

'ಕೆಜಿಎಫ್‌' ಚಿತ್ರದಲ್ಲಿ ವಿಲನ್‌ ಆಗಿ ಖದರ್‌ ತೋರಿಸಿದ್ದ ಗರುಡ ರಾಮ್‌ ಸಿನಿಪ್ರಿಯರಿಗೆ ಬಹಳ ಇಷ್ಟ. ಇದೀಗ ಇವರ ಸಹೋದರ ಕೂಡಾ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 'ಡಾಲರ್ಸ್‌ ಪೇಟೆ' ಚಿತ್ರದಲ್ಲಿ ಗರುಡ ರಾಮ್‌ ಸಹೋದರ ವೆಂಕಟ್‌ ರಾಜ್‌ ನಟಿಸುತ್ತಿದ್ದಾರೆ. ಇವರ ಪಳನಿ ಪಾತ್ರದ ಫಸ್ಟ್‌ ಲುಕ್‌ ಕೂಡಾ ಬಿಡುಗಡೆ ಆಗಿದೆ.

ಡಾಲರ್ಸ್ ಪೇಟೆ ಚಿತ್ರವನ್ನು ಮೋಹನ್ ಎನ್ ಮುನಿನಾರಾಯಣಪ್ಪ ನಿರ್ದೇಶಿಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರವಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್‌ ಒಂದರಲ್ಲಿ ಲೂಸಿಯಾ ನಿರ್ದೇಶಕ ಪವನ್‌ ಕುಮಾರ್‌ ಪತ್ನಿ ಸೌಮ್ಯ ಗಮನ ಸೆಳೆದಿದ್ದರು. ಇದೀಗ ಪಳನಿ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ ಆಗಿದ್ದು ವೆಂಕಟ್ ರಾಜ್ ಲುಕ್‌ಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಣ್ಣನಂತೆ ತಮ್ಮ ಕೂಡಾ ಚಿತ್ರರಂಗದಲ್ಲಿ ಮಿಂಚಲಿ ಎಂದು ಹಾರೈಸುತ್ತಿದ್ದಾರೆ.

ಚಿತ್ರೀಕರಣ ಮುಗಿಸಿ ರೀ ರೆಕಾರ್ಡಿಂಗ್ ಹಂತದಲ್ಲಿರುವ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಮೋಹನ್ ಎನ್ ಮುನಿನಾರಾಯಣಪ್ಪ ಇದಕ್ಕೂ ಮುನ್ನ 'ಮಾರ್ಫಿ', 'ಮದಗಜ' ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು 'ಡಾಲರ್ಸ್ ಪೇಟೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ 'ಡಾಲರ್ಸ್ ಪೇಟೆ' ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್, ಕಮಲ, ವೆಂಕಟ್ ರಾಜ್, ಕುಶಾಲ್. ಎಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘವೇಂದ್ರ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ವೆಂಕಟ್‌ ರಾಜ್‌ ಫಸ್ಟ್‌ ಲುಕ್‌ ಪೋಸ್ಟರ್
ವೆಂಕಟ್‌ ರಾಜ್‌ ಫಸ್ಟ್‌ ಲುಕ್‌ ಪೋಸ್ಟರ್

'ಡಾಲರ್ಸ್ ಪೇಟೆ' ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಕ್ಯಾಮೆರಾ ಕೆಲಸ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ. ಈ ಚಿತ್ರವನ್ನು ಎ. ಪೆಂಟ್ರಿಕ್ಸ್ ಎಂಟರ್ಟೈನ್ಮೆಂಟ್‌ ಬ್ಯಾನರ್ ಅಡಿ ಪೂಜಾ. ಟಿ. ವೈ ನಿರ್ಮಾಣ ಮಾಡಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಕಿರಿಕ್‌ ಕೀರ್ತಿ...ನಿಮಗಿಂತ ಕಷ್ಟ ಇರೋರನ್ನ ನೋಡಿ ಎಂದ ನೆಟಿಜನ್ಸ್

ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಸೆಲೆಬ್ರಿಟಿಗಳ ಜೀವನ ಬಹಳ ಸಂತೋಷವಾಗಿರುತ್ತದೆ ಅನ್ನೋದು ಎಲ್ಲರ ತಪ್ಪು ಅಭಿಪ್ರಾಯ. ಆದರೆ ಅವರಿಗೂ ಸಮಸ್ಯೆಗಳಿರುತ್ತವೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೀರ್ತಿ ಕೂಡಾ ಕೆಲವೊಂದು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖಿನ್ನತೆ ಅನುಭವಿಸಿದ್ದರಂತೆ. ಇದೇ ವೇಳೆ ಆತ್ಮಹತ್ಯೆ ನಿರ್ಧಾರ ಮಾಡಿ ಡೆತ್‌ ನೋಟ್‌ ಕೂಡಾ ಬರೆದಿಟ್ಟಿದ್ದರಂತೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ನಗಿಸೋಕೆ ಮಾತ್ರವಲ್ಲ ಅದ್ಭುತ ಚಿತ್ರಕಲೆ ಕೂಡಾ ಗೊತ್ತು...ಬ್ರಹ್ಮಾನಂದಂ ಬರೆದಿರುವ ಚಿತ್ರಗಳನ್ನೊಮ್ಮೆ ನೋಡಿ

ತಮ್ಮ ಕಾಮಿಡಿ ಪಂಚ್‌ ಮೂಲಕವೇ ನೋಡುಗರನ್ನು ನಕ್ಕು ನಲಿಸುವ ಈ ಅದ್ಬುತ ನಟನಿಗೆ ನಗಿಸಲು ಮಾತ್ರವಲ್ಲ, ಅಷ್ಟೇ ಅದ್ಭುತವಾಗಿ ಚಿತ್ರಕಲೆ ಬರೆಯೋಕೆ ಕೂಡಾ ಗೊತ್ತು. ತಾವು ಬರೆದ ಚಿತ್ರವನ್ನು ಇವರು ತಮ್ಮ ಆತ್ಮೀಯರಿಗೆ ಗಿಫ್ಟ್‌ ಆಗಿ ನೀಡಿದ್ದಾರೆ. ಗ್ಯಾಲರಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point