ಯೂಟ್ಯೂಬರ್‌ನ ಕಥೆ ವ್ಯಥೆಯ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾ ಏಪ್ರಿಲ್‌ 25ರಂದು ತೆರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ಯೂಟ್ಯೂಬರ್‌ನ ಕಥೆ ವ್ಯಥೆಯ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾ ಏಪ್ರಿಲ್‌ 25ರಂದು ತೆರೆಗೆ

ಯೂಟ್ಯೂಬರ್‌ನ ಕಥೆ ವ್ಯಥೆಯ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾ ಏಪ್ರಿಲ್‌ 25ರಂದು ತೆರೆಗೆ

ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಚಿತ್ರ ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಮೊದಲು 'ಭಾವಚಿತ್ರ' ಎಂಬ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಮೂರನೇ ಪ್ರಯತ್ನವಾಗಿ ಈ ಚಿತ್ರಕ್ಕೆ ಆ್ಯಕ್ಷನ್- ಕಟ್ ಹೇಳುವ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ.

ಯೂಟ್ಯೂಬರ್‌ನ ಕಥೆ ವ್ಯಥೆಯ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾ ಏಪ್ರಿಲ್‌ 25ರಂದು ತೆರೆಗೆ
ಯೂಟ್ಯೂಬರ್‌ನ ಕಥೆ ವ್ಯಥೆಯ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾ ಏಪ್ರಿಲ್‌ 25ರಂದು ತೆರೆಗೆ

ವಿಭಿನ್ನ ಕಥಾಹಂದರ ಹೊಂದಿರುವ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಮೊದಲು 'ಭಾವಚಿತ್ರ' ಎಂಬ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಮೂರನೇ ಪ್ರಯತ್ನವಾಗಿ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುವ ಜೊತೆಗೆ ನಾಯಕನಾಗಿಯೂ ನಟನೆ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಉಗ್ರಂ ಖ್ಯಾತಿಯ ತಿಲಕ್ ಶೇಖರ್ ಅಭಿನಯಿಸಿದ್ದಾರೆ. ವುಡ್‌ ಕ್ರೀಪರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಕಮ್ ನಟ ಗಿರೀಶ್ ಕುಮಾರ್ 'ನಮ್ಮ ಚಿತ್ರವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ಯೂಟ್ಯೂಬರ್ ಕಥೆಯಾಗಿದ್ದು, ಫ್ರಾಂಕ್ ವಿಡಿಯೋ ಮಾಡಿಕೊಂಡು ಇರುವವನ ಸಿನಿಮಾ. ಜೊತೆಗೆ ಇದೊಂದು ಆ್ಯಕ್ಷನ್, ಕಾಮಿಡಿ ಚಿತ್ರ ಕೂಡ. ಇದರಲ್ಲಿ ನಾನು ಫ್ರಾಂಕ್‌ಸ್ಟರ್ ಆಗಿದ್ರೆ ತಿಲಕ್ ಅವರು ಗ್ಯಾಂಗ್‌ಸ್ಟರ್ ಆಗಿರುತ್ತಾರೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬುವವರಿಗೆ ಈ ಚಿತ್ರ ಸ್ಫೂರ್ತಿ ಆಗಲಿದೆ ಎನ್ನುತ್ತಾರೆ.

'ನಾನಿಲ್ಲಿ ಶೃತಿ ಎಂಬ ಕಾಲೇಜ್ ಹುಡುಗಿ ಪಾತ್ರ ಮಾಡಿದ್ದೇನೆ. ಈ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಇದೆ. ನಾವೀಗ ಫ್ರಾಂಕ್ ವಿಡಿಯೋಗಳ ಮೂಲಕ ಪ್ರಮೋಷನ್ ಮಾಡುತ್ತಾ ಇದ್ದು, ಚಿತ್ರತಂಡ ನನಗೆ ಗೊತ್ತಿಲ್ಲದಂತೆ ನನ್ನನ್ನು ಫ್ರಾಂಕ್ ಮಾಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ' ಎಂದರು ನಾಯಕಿ ವಿರಾನಿಕ ಶೆಟ್ಟಿ.

ವೇದಿಕೆಯಲ್ಲಿ ಕಲಾವಿದರಾದ ಯುವ ಕಿಶೋರ್, ಲೋಕೇಂದ್ರ, ಸೂರಜ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಏಪ್ರಿಲ್ 25ರಂದು ಸುಮಾರು 60 ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್‌ ಆಗಲಿದೆ. ಚಿತ್ರಕ್ಕೆ ಜಾನ್ ಕೆನಡಿ ಸಂಗೀತ ಸಂಯೋಜಿಸಿದ್ದು, ಅಜಯ್ ಕುಮಾರ್ ಛಾಯಾಗ್ರಹಣ, ರತೀಶ್ ಕುಮಾರ್ ಸಂಕಲನವಿದೆ. ಬಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ಮಜಾ ಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.