ಕನ್ನಡ ಧಾರಾವಾಹಿಗಳ ಆಪ್ತಮಿತ್ರರಿಗೆ ಜೈಹೋ: ಅಮೃತಧಾರೆ ಗೌತಮ್‌- ಆನಂದ್‌ ಮಾತ್ರವಲ್ಲ ಇನ್ನಷ್ಟು ಜೋಡಿಗಳ ವಿವರ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಧಾರಾವಾಹಿಗಳ ಆಪ್ತಮಿತ್ರರಿಗೆ ಜೈಹೋ: ಅಮೃತಧಾರೆ ಗೌತಮ್‌- ಆನಂದ್‌ ಮಾತ್ರವಲ್ಲ ಇನ್ನಷ್ಟು ಜೋಡಿಗಳ ವಿವರ

ಕನ್ನಡ ಧಾರಾವಾಹಿಗಳ ಆಪ್ತಮಿತ್ರರಿಗೆ ಜೈಹೋ: ಅಮೃತಧಾರೆ ಗೌತಮ್‌- ಆನಂದ್‌ ಮಾತ್ರವಲ್ಲ ಇನ್ನಷ್ಟು ಜೋಡಿಗಳ ವಿವರ

ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಹಾಗೂ ಆನಂದ್ ಫ್ರೆಂಡ್‌ಶಿಪ್ ಕಂಡು ಜನ ಸ್ನೇಹ ಅಂದ್ರೆ ಹೀಗಿರಬೇಕು ಅಂತ ಮಾತಾಡ್ತಾ ಇದಾರೆ. ಆದರೆ ಇದೇ ಥರ ಆನಸ್ಕ್ರೀನ್ ಮೇಲೆ ಸ್ನೇಹದ ಮೂಲಕ ಮೋಡಿ ಮಾಡಿದ ಹಲವು ಜೋಡಿಗಳಿವೆ. ಅವರ ಬಗ್ಗೆ ನಾವಿಲ್ಲಿ ಹೇಳಿದ್ದೇವೆ.

ಕನ್ನಡ ಧಾರಾವಾಹಿಗಳ ಆಪ್ತಮಿತ್ರರಿಗೆ ಜೈಹೋ: ಅಮೃತಧಾರೆ ಗೌತಮ್‌- ಆನಂದ್‌ ಮಾತ್ರವಲ್ಲ ಇನ್ನಷ್ಟು ಜೋಡಿಗಳ ವಿವರ
ಕನ್ನಡ ಧಾರಾವಾಹಿಗಳ ಆಪ್ತಮಿತ್ರರಿಗೆ ಜೈಹೋ: ಅಮೃತಧಾರೆ ಗೌತಮ್‌- ಆನಂದ್‌ ಮಾತ್ರವಲ್ಲ ಇನ್ನಷ್ಟು ಜೋಡಿಗಳ ವಿವರ

ಈ ಜಗತ್ತಿನ ಬೆಸ್ಟ್ ರಿಲೇಷನ್‌ಶಿಪ್ ಅಂದ್ರೆ ಅದು ಫ್ರೆಂಡ್‌ಶಿಪ್ ಅಂತ ಹಲವರು ಹೇಳೋದನ್ನು ನೀವು ಕೇಳಿರಬಹುದು. ಫ್ರೆಂಡ್‌ಶಿಪ್‌ನಲ್ಲಿ ಸ್ವಾರ್ಥ, ಅಸೂಯೆ ಇರೋಲ್ಲ. ನನ್ ಫ್ರೆಂಡ್‌ಗಾಗಿ ನಾನು ಏನ್ ಮಾಡೋಕು ಸಿದ್ಧ ಅನ್ನೋ ಮನೋಭಾವ ಇರುತ್ತೆ. ಕನ್ನಡ ಧಾರಾವಾಹಿಗಳಲ್ಲೂ ಇಂಥ ಫ್ರೆಂಡ್ಸ್‌ಗಳನ್ನು ನೀವು ನೋಡಬಹುದು. ಇದ್ರೆ ಇಂಥ ಫ್ರೆಂಡ್ಸ್‌ ನಮಗೂ ಇರಬೇಕು ಅನ್ನೋ ಥರದ ಫ್ರೆಂಡ್ಸ್ ಆನ್‌ಸ್ಕ್ರೀನ್‌ನಲ್ಲಿ ಇದ್ದಾರೆ. ಅವರ ಒಡನಾಟ ನೋಡಿ ಕಿರುತೆರೆ ಪ್ರೇಮಿಗಳು ಮೆಚ್ಚಿಕೊಳ್ಳುತ್ತಿದ್ದಾರೆ . ಕಿರುತೆರೆಯ ಬೆಸ್ಟ್ ಫ್ರೆಂಡ್ಸ್ ಜೋಡಿಗಳು ಯಾರು ನೋಡಿ.

ಗೌತಮ್‌–ಆನಂದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ‘ ಧಾರಾವಾಹಿಯ ಗೌತಮ್‌ ದಿವಾನ್‌ ಹಾಗೂ ಆನಂದ್‌ ಸ್ನೇಹದ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಜೋಡಿ ತೆರೆ ಮೇಲೆ ಬಂತು ಎಂದರೆ ಸಖತ್ ಮಜಾ ಇರುತ್ತೆ. ನಲಿವಲ್ಲಿ ಮಾತ್ರವಲ್ಲ, ನೋವಲ್ಲೂ ಜೊತೆ ಇರುವ ಆನಂದ್ ಹಾಗೂ ಗೌತಮ್ ಸ್ನೇಹವನ್ನು ಕೃಷ್ಣ ಹಾಗೂ ಕುಚೇಲನಿಗೂ ಹೋಲಿಸುತ್ತಾರೆ. ಗೌತಮ್ ದಿವಾನ್‌ಗೆ ಸದಾ ನೆರಳಾಗಿರುವ ಆನಂದ್ ಒಡಹುಟ್ಟಿದ ಸಹೋದರನ ರೀತಿ ಕಾವಲಿರುತ್ತಾನೆ. ತೆರೆ ಮೇಲೆ ಇವರ ಬಾಂಡಿಂಗ್ ಕಂಡು ಇದ್ದರೆ ಎಂಥ ಸ್ನೇಹ ಇರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ರಾಮ–ಅಶೋಕ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಅಶೋಕ್ ಸ್ನೇಹ ಎಂಥವರಿಗೂ ಇಷ್ಟವಾಗಬೇಕು. ರಾಮನ ಜೀವದ ಗೆಳೆಯನಾಗಿರುವ ಅಶೋಕ, ರಾಮನ ತಾತ ಸೂರಿಗೂ ಬೆಸ್ಟ್ ಫ್ರೆಂಡ್‌. ರಾಮನ ಭಂಟ ಹನುಮಂತ ಇರುವಂತೆ ಧಾರಾವಾಹಿಯಲ್ಲಿ ಶ್ರೀರಾಮನಿಗೆ ರಕ್ಷೆಯಾಗಿ ಅಶೋಕ ಇರುತ್ತಾನೆ. ಇವರ ಸ್ನೇಹ ಕೂಡ ಕಿರುತೆರೆ ವೀಕ್ಷಕರು ಮೆಚ್ಚಿದ ಬೆಸ್ಟ್ ಫ್ರೆಂಡ್‌ಶಿಪ್ ಜೋಡಿಯಾಗಿದೆ.

ಜೀವಾ–ಬಾಲ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯ ಬಾಲ ಹಾಗೂ ಜೀವಾ ಓರಗೆಯಲ್ಲಿ ಭಾವ–ಭಾಮೈದ, ಆದರೆ ಇವರು ಆಪ್ತ ಸ್ನೇಹಿತರು. ತಂಗಿ ಸತ್ತ ಮೇಲೆ ಅಪ್ಪನನ್ನು ಎದುರು ಹಾಕಿಕೊಂಡು ಮನೆ ಬಿಟ್ಟು ಬಂದು ಜೀವನ ಜೊತೆ ಇರುವ ಬಾಲ ಸ್ನೇಹಕ್ಕೆ, ಅವನು ಬಾಲನ ಮೇಲೆ ಇಟ್ಟಿರುವ ಪ್ರೀತಿಗೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.

ರಾಮಾಚಾರಿ–ಮುರಾರಿ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಮುರಾರಿ ಆಪ್ತ ಸ್ನೇಹಿತರು. ರಾಮಾಚಾರಿ ಮನೆಯ ಮಗನಂತಿರುವ ಮುರಾರಿ ರಾಮಾಚಾರಿಯ ಹಿತೈಷಿ. ಅವನ ಎಲ್ಲಾ ಕಷ್ಟದಲ್ಲೂ ಜೊತೆ ಇರುವ ಕುಚಿಕು. ಈ ಸ್ನೇಹದ ಜೋಡಿಯು ಸೀರಿಯಲ್ ಪ್ರೇಮಿಗಳಿಗೆ ಅಚ್ಚುಮೆಚ್ಚು.

ಅಜಿತ್– ಸತ್ಯಣ್ಣ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಪೊಲೀಸ್‌ ಪಾತ್ರ ಮಾಡುವ ಅಜಿತ್ ಹಾಗೂ ಲಾಯರ್ ಪಾತ್ರ ಮಾಡುವ ಸತ್ಯಣ್ಣ ಆಪ್ತ ಸ್ನೇಹಿತರು. ನನ್ನ ಮಾಜಿ ಪ್ರೇಮಿಯ ಅಣ್ಣನೇ ಆಗಿರುವ ಸತ್ಯಣ್ಣ ಜೊತೆ ಅಜಿತ್‌ಗೆ ಬಿಡಿಸಲಾಗದ ಸ್ನೇಹ ಸಂಬಂಧ. ಅಜಿತ್ ಬದುಕಿನ ಸಕಲವನ್ನೂ ತಿಳಿದಿರುವ ಸತ್ಯಣ್ಣ ಕೂಡ ಸ್ನೇಹಕ್ಕಾಗಿ ಪ್ರಾಣವನ್ನೂ ಕೊಡುವವರು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.