ಜಾಹ್ನವಿ ಒತ್ತಾಯದ ಮೇರೆಗೆ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಭಾವನಾ-ಸಿದ್ದೇಗೌಡ್ರು; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಜಾಹ್ನವಿ ಒತ್ತಾಯದ ಮೇರೆಗೆ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಭಾವನಾ-ಸಿದ್ದೇಗೌಡ್ರು; ಲಕ್ಷ್ಮೀ ನಿವಾಸ ಧಾರಾವಾಹಿ

ಜಾಹ್ನವಿ ಒತ್ತಾಯದ ಮೇರೆಗೆ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಭಾವನಾ-ಸಿದ್ದೇಗೌಡ್ರು; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್‌ 29ರ ಸಂಚಿಕೆಯಲ್ಲಿ ಭಾವನಾ , ಸಿದ್ದೇಗೌಡ್ರ ಜೊತೆ ಅಮ್ಮನ ಮನಗೆ ಔತಣಕ್ಕೆ ಬರುತ್ತಾಳೆ. ಮನೆಯವರಿಗೆ ಗೊತ್ತಾಗಬಾರದೆಂಬ ಕಾರಣ ಇಬ್ಬರೂ ಪ್ರೀತಿ ಇರುವಂತೆ ನಟಿಸುತ್ತಾರೆ. ಜಾಹ್ನವಿ ಒತ್ತಾಯ ಮಾಡಿದ್ದರಿಂದ ಒಬ್ಬರಿಗೊಬ್ಬರು ಸಿಹಿ ತಿನ್ನಿಸುತ್ತಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ: ಅಕ್ಟೋಬರ್‌ 29ರ ಸಂಚಿಕೆಯಲ್ಲಿ ಭಾವನಾ-ಸಿದ್ದೇಗೌಡ್ರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುತ್ತಿರುವುದು
ಲಕ್ಷ್ಮೀ ನಿವಾಸ ಧಾರಾವಾಹಿ: ಅಕ್ಟೋಬರ್‌ 29ರ ಸಂಚಿಕೆಯಲ್ಲಿ ಭಾವನಾ-ಸಿದ್ದೇಗೌಡ್ರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುತ್ತಿರುವುದು (PC: Zee Kannada Facebook)

Lakshmi Nivasa Serial: ಸಿದ್ದೇಗೌಡ್ರು ಹಾಗೂ ಭಾವನಾಗೆ ತವರು ಮನೆಯಲ್ಲಿ ಅದ್ದೂರಿ ಸ್ವಾಗತ ದೊರೆಯುತ್ತದೆ. ಮಗಳು ಅಳಿಯ ಮನೆಗೆ ಬಂದಿರುವುದಕ್ಕೆ ಶ್ರೀನಿವಾಸ್‌ ಖುಷಿ ಪಟ್ಟರೂ, ಲಕ್ಷ್ಮೀಗೆ ಸಿದ್ದೇಗೌಡನ ಬಗ್ಗೆ ಬೇಸರ ಇರುತ್ತದೆ. ಅವನನ್ನು ಅಳಿಯ ಎಂದು ಒಪ್ಪಿಕೊಳ್ಳಲು ಅವಳ ಸಿದ್ಧಳಿಲ್ಲ. ಬಲವಂತದ ನಗುವಿನಿಂದ , ಒಂದು ಮಾತೂ ಆಡದೆ ಸಿದ್ದುವನ್ನು ಬರಮಾಡಿಕೊಳ್ಳುತ್ತಾಳೆ.

ಭಾವನಾಗೆ ಕಾಲುಂಗುರ ತೊಡಿಸುವ ಸಿದ್ದು

ಜಯಂತ್‌-ಜಾಹ್ನವಿ, ವೀಣಾ-ಸಂತೋಷ್‌ ಹೊಸ ಜೋಡಿಗೆ ಗಿಫ್ಟ್‌ ಕೊಡುತ್ತಾರೆ. ನಾವು ಮದುವೆ ನೋಡಲಾಗಲಿಲ್ಲ ಈಗಲಾದರೂ ಅಕ್ಕನ ಮದುವೆ ನೋಡಬೇಕೆಂಬ ಆಸೆ ಅಕ್ಕನಿಗೆ ತಾಳಿ ಕಟ್ಟಿ ಎಂದು ಜಾಹ್ನವಿ ಸಿದ್ದೇಗೌಡನಿಗೆ ಹೇಳುತ್ತಾನೆ. ಯಾರಿಗೂ ಗೊತ್ತಾಗದಂತೆ ತಾಳಿ ಕಟ್ಟಿದ್ದರೂ ಮತ್ತೊಮ್ಮೆ ಎಲ್ಲರ ಮುಂದೆ ತಾಳಿ ಕಟ್ಟಲು ಸಿದ್ದು ಮುಜುಗರಪಡುತ್ತಾನೆ. ಆದರೂ ಎಲ್ಲರೂ ಒತ್ತಾಯ ಮಾಡುವುದರಿಂದ ಸಿದ್ದು ಮತ್ತೆ ಭಾವನಾಗೆ ತಾಳಿ ಕಟ್ಟುತ್ತಾನೆ. ನಂತರ ಜಾಹ್ನವಿ ಕಾಲುಂಗರ ಹಾಕುವಂತೆ ಹೇಳುತ್ತಾಳೆ. ನಾನೇ ಹಾಕಿಕೊಳ್ಳುತ್ತೇನೆ ಎಂದು ಭಾವನಾ ಹೇಳುತ್ತಾಳೆ. ಅದು ಹೇಗೆ ಸಾಧ್ಯ? ಅದು ಗಂಡ ಮಾಡಬೇಕಾದ ಶಾಸ್ತ್ರ ಎಂದು ಜಯಂತ್‌ ಹೇಳುತ್ತಾನೆ. ಸಿದ್ದು ಭಾವನಾಗೆ ಕಾಲುಂಗುರ ತೊಡಿಸುತ್ತಾನೆ.

ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಭಾವನಾ-ಸಿದ್ದೇಗೌಡ್ರು

ನಂತರ ಎಲ್ಲರೂ ಊಟಕ್ಕೆ ಕೂರುತ್ತಾರೆ. ಭಾವನಾ-ಸಿದ್ದೇಗೌಡನಿಗಾಗಿ ಲಕ್ಷ್ಮೀ ಹಾಗೂ ವೀಣಾ ಸೇರಿ ವಿವಿಧ ಅಡುಗೆಗಳನ್ನು ತಯಾರಿಸಿರುತ್ತಾರೆ. ಎಲ್ಲರೂ ಊಟಕ್ಕೆ ಕೂರುತ್ತಾರೆ. ಶ್ರೀನಿವಾಸ್‌ ಪಕ್ಕ ಕುಳಿತು ಊಟ ಮಾಡುವಂತೆ ಲಕ್ಷ್ಮೀಗೆ ಎಲ್ಲರೂ ಒತ್ತಾಯಿಸುತ್ತಾರೆ. ಸಿದ್ದೇಗೌಡ ಕೂಡಾ ಬನ್ನಿ ಅತ್ತೆ ಎನ್ನುತ್ತಾನೆ. ಅದರೆ ಆತನ ಮಾತಿಗೆ ಲಕ್ಷ್ಮೀ ಪ್ರತಿಕ್ರಿಯಿಸುವುದಿಲ್ಲ. ಯಾರೂ ಕೂರಬೇಡಿ ನಾನೇ ಕೂರುತ್ತೇನೆ ಎಂದು ಮಂಗಳ, ಅಪ್ಪನ ಪಕ್ಕ ಕುಳಿತು ಊಟ ಮಾಡುತ್ತಾಳೆ. ತಮ್ಮ ಪಾಡಿಗೆ ತಾವು ಊಟ ಆರಂಭಿಸುವ ಭಾವನಾ-ಸಿದ್ದೇಗೌಡ್ರಿಗೆ ಜಾಹ್ನವಿ ಒಬ್ಬರಿಗೊಬ್ಬರು ತಿನ್ನಿಸುವಂತೆ ಹೇಳುತ್ತಾಳೆ. ಮೊದಲು ಸಿದ್ದೇಗೌಡ ಮುಜುಗರದಿಂದಲೇ ಭಾವನಾಗೆ ಸಿಹಿ ತಿನ್ನಿಸುತ್ತಾನೆ. ನಂತರ ಭಾವನಾ ಸಿದ್ದೇಗೌಡನಿಗೆ ತಿನ್ನಿಸುತ್ತಾಳೆ.

ಔತಣಕ್ಕೆ ಖರ್ಚಾಗಿದ್ದಕ್ಕೆ ಬೇಸರ ವ್ಯಕ್ತಪಡಿಸುವ ಸಂತೋಷ್

ಊಟ ಮುಗಿಸಿ ಹರೀಶ್‌ ಹಾಗೂ ಸಂತೋಷ್‌ ಹೊರಗೆ ಮಾತನಾಡಲು ಕೂರುತ್ತಾರೆ. ನನಗೆ ಗೊತ್ತಿಲ್ಲದಂತೆ ವೀಣಾ, ಭಾವನಾಗೆ ಸೀರೆ ಗಿಫ್ಟ್‌ ಕೊಟ್ಟಿದ್ದಾಳೆ. ಇವಳೇ ನನ್ನ ದುಡ್ಡು ಕದ್ದದ್ದು ಅಂತ ಈಗ ಅನ್ನಿಸ್ತಿದೆ. ಸಿದ್ದೇಗೌಡ ಏನು ಸಾಧನೆ ಮಾಡಿದ್ದಾನೆ ಅಂತ ಇಷ್ಟು ಅಡುಗೆ ಮಾಡಬೇಕಿತ್ತು, ಈಗಲೇ ಇಷ್ಟು ಖರ್ಚಾಗಿದೆ, ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ಮುಂದೆ ಇಂಥ ಔತಣ ನಡೆಯುತ್ತಲೇ ಇರುತ್ತದೆ ಎಂದು ಖರ್ಚಿನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. ಅಣ್ಣನ ಮಾತಿಗೆ ಪ್ರತಿಕ್ರಿಯಿಸುವ ಹರೀಶ, ಸಿದ್ದೇಗೌಡ ಅಲ್ಲದಿದ್ದರೂ ಅಕ್ಕನಿಗಾಗಿ ಇದೆಲ್ಲಾ ಮಾಡಲೇಬೇಕಲ್ವಾ ಎನ್ನುತ್ತಾನೆ.‌

ಲಕ್ಷೀಗೆ ಮಗಳದ್ದೇ ಚಿಂತೆ

ಊಟ ಮುಗಿಸಿ ಭಾವನಾ-ಸಿದ್ದೇಗೌಡ ಹೊರಡಲು ಸಿದ್ಧರಾಗುತ್ತಾರೆ. ಭಾವನಾ ಹೊರಡಲು ಸಜ್ಜಾದಾಗ ಲಕ್ಷ್ಮೀ ದುಖಃ ವ್ಯಕ್ತಪಡಿಸುತ್ತಾಳೆ. ನನಗೆ ನಿನ್ನದೇ ಚಿಂತೆ ಎನ್ನುತ್ತಾಳೆ. ಭಾವನಾ ಭಾವುಕಳಾಗಿ ಅಮ್ಮನನ್ನು ಅಪ್ಪಿಕೊಳ್ಳುತ್ತಾಳೆ. ಅತ್ತಿಗೆ ವೀಣಾ, ಎಲ್ಲಾ ಹೆಣ್ಣು ಮಕ್ಳಳಿಗೂ ಗಂಡನ ಮನೆಯೇ ಆಸರೆ, ನಾವು ಎಲ್ಲಿ ಹುಟ್ಟಿ ಬೆಳೆದರೂ ಕೊನೆಗೆ ಗಂಡನ ಮನೆಗೆ ಸೇರಬೇಕು ಎನ್ನುತ್ತಾಳೆ. ಬೇಸರದಿಂದಲೇ ಎಲ್ಲರೂ ಮನೆ ಮಗಳು-ಅಳಿಯನನ್ನು ಕಳಿಸಿಕೊಡುತ್ತಾರೆ. ಗಂಡನ ಮನೆಯಲ್ಲಿ ಭಾವನಾ ಸುಖವಾಗಿಲ್ಲ ಎಂದು ಲಕ್ಷ್ಮೀ , ಶ್ರೀನಿವಾಸ್‌ ಬಳಿ ಹೇಳಿಕೊಳ್ಳುತ್ತಾಳೆ. ಆ ದಿನ ಜವರೇಗೌಡ ಮಾಡಿದ ಅವಮಾನ ನೆನೆದು ಶ್ರೀನಿವಾಸ್‌ ಕೂಡಾ ಬೇಸರಗೊಳ್ಳುತ್ತಾನೆ. ಆದರೆ ಅಲ್ಲಿ ನಡೆದ ಘಟನೆಯನ್ನು ಹೆಂಡತಿ ಬಳಿ ಹೇಳಿಕೊಳ್ಳುವುದಿಲ್ಲ.

ಲಕ್ಷ್ಮೀನಿವಾಸ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ