ನಟನೆ ಜತೆಗೆ ನಿರ್ಮಾಣದಲ್ಲೂ ಛಾಪು ಮೂಡಿಸಿದ ಕನ್ನಡದ ಸೀರಿಯಲ್‌ ಕಲಾವಿದರು; ಮೇಘಾ ಶೆಟ್ಟಿಯಿಂದ ಗಟ್ಟಿಮೇಳದ ರಕ್ಷ್‌ವರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ನಟನೆ ಜತೆಗೆ ನಿರ್ಮಾಣದಲ್ಲೂ ಛಾಪು ಮೂಡಿಸಿದ ಕನ್ನಡದ ಸೀರಿಯಲ್‌ ಕಲಾವಿದರು; ಮೇಘಾ ಶೆಟ್ಟಿಯಿಂದ ಗಟ್ಟಿಮೇಳದ ರಕ್ಷ್‌ವರೆಗೆ

ನಟನೆ ಜತೆಗೆ ನಿರ್ಮಾಣದಲ್ಲೂ ಛಾಪು ಮೂಡಿಸಿದ ಕನ್ನಡದ ಸೀರಿಯಲ್‌ ಕಲಾವಿದರು; ಮೇಘಾ ಶೆಟ್ಟಿಯಿಂದ ಗಟ್ಟಿಮೇಳದ ರಕ್ಷ್‌ವರೆಗೆ

ಕನ್ನಡದ ವಿವಿಧ ವಾಹಿನಿಗಳಲ್ಲಿ ಪ್ರಸಾರವಾದ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿರುವ ಕೆಲವು ನಟ–ನಟಿಯರು ಧಾರಾವಾಹಿ ನಿರ್ಮಾಣ ಮಾಡುವ ಮೂಲಕವೂ ಸೈ ಎನ್ನಿಸಿಕೊಂಡಿದ್ದಾರೆ. ಅಂತಹ ಕೆಲವು ಪ್ರಸಿದ್ಧ ನಟ–ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ.

ನಟನೆ ಜತೆಗೆ ನಿರ್ಮಾಣದಲ್ಲೂ ಛಾಪು ಮೂಡಿಸಿದ ಕನ್ನಡದ ಸೀರಿಯಲ್‌ ಕಲಾವಿದರು; ಮೇಘಾ ಶೆಟ್ಟಿಯಿಂದ ಗಟ್ಟಿಮೇಳದ ರಕ್ಷ್‌ವರೆಗೆ
ನಟನೆ ಜತೆಗೆ ನಿರ್ಮಾಣದಲ್ಲೂ ಛಾಪು ಮೂಡಿಸಿದ ಕನ್ನಡದ ಸೀರಿಯಲ್‌ ಕಲಾವಿದರು; ಮೇಘಾ ಶೆಟ್ಟಿಯಿಂದ ಗಟ್ಟಿಮೇಳದ ರಕ್ಷ್‌ವರೆಗೆ

ಕನ್ನಡ ಕಿರುತೆರೆಯಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ–ನಟಿಯರು ತಾವು ನಟಿಸುವುದಕ್ಕೆ ಮಾತ್ರವಲ್ಲ ನಿರ್ಮಾಣಕ್ಕೂ ಸೈ ಎಂದಿದ್ದಾರೆ. ಧಾರಾವಾಹಿ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುವ ಮೂಲಕ ತಮ್ಮದೇ ಪ್ರೊಡಕ್ಷನ್‌ನಲ್ಲಿ ಧಾರಾವಾಹಿಗಳನ್ನು ಹೊರ ತರುತ್ತಿದ್ದಾರೆ. ಖ್ಯಾತ ನಿರ್ಮಾಪಕಿ ಶೃತಿ ನಾಯ್ಡುಯಿಂದ ಹಿಡಿದು ಇತ್ತೀಚಿನ ಮೇಘಾಶೆಟ್ಟಿವರೆಗೆ ಹಲವರು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ನಂತರ ನಿರ್ಮಾಣ ಜವಾಬ್ದಾರಿ ಹೊತ್ತ ಕೆಲವು ನಟ–ನಟಿಯರ ಪರಿಚಯ ಇಲ್ಲಿದೆ.

ಶ್ರುತಿ ನಾಯ್ಡು

ನಟಿಯಾಗಿ ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಮಿಂಚಿದ್ದ ಶ್ರುತಿ ನಾಯ್ಡು ಈಗ ಖ್ಯಾತ ನಿರ್ಮಾಪಕಿ. ಇವರು ಬ್ರಹ್ಮಗಂಟು, ದೇವಿ, ಮಹಾದೇವಿ, ಮನಸ್ಸೆಲ್ಲಾ ನೀನೆ ಮುಂತಾದ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರೀಮಿಯರ್‌ ಪದ್ಮಿನಿ ಎಂಬ ಸಿನಿಮಾವನ್ನು ಕೂಡ ನಿರ್ಮಾಣ ಮಾಡಿರುವ ಅಯ್ಯನ ಮನೆ ಎಂಬ ವೆಬ್‌ಸರಣಿಯ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ರಕ್ಷ್

ಗಟ್ಟಿಮೇಳ ಧಾರಾವಾಹಿಯ ವೇದಾಂತ್‌ ನಟನೆಯಿಂದ ಮಾತ್ರವಲ್ಲ, ಧಾರಾವಾಹಿ ನಿರ್ಮಾಣ ಮಾಡಿಯೂ ಸೈ ಎನ್ನಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅಪಾರ ಜನಮನ್ನಣೆ ಗಳಿಸಿದ ಗಟ್ಟಿಮೇಳ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದು ಇದೇ ರಕ್ಷ್‌.

ಮೇಘಾ ಶೆಟ್ಟಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರಿಗೆ ಹತ್ತಿರವಾದ ನಟಿ ಮೇಘಾ ಶೆಟ್ಟಿ ಕೂಡ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಗೆ ಮೇಘಾ ಶೆಟ್ಟಿಯೇ ನಿರ್ಮಾಪಕಿ.

ಜಗನ್ನಾಥ್‌ ಚಂದ್ರಶೇಖರ್

ಜಗನ್ ಅಲಿಯಾಸ್ ಜಗ್ಗಾ ಸೀತಾ ವಲ್ಲಭ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದವರು. ಇವರು ರಕ್ಷಾಬಂಧನ ಹಾಗೂ ಲಕ್ಷಣ ಎನ್ನುವ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಲಕ್ಷಣ ಧಾರಾವಾಹಿಯಲ್ಲಿ ಜಗನ್ ನಾಯಕನಾಗಿಯೂ ನಟಿಸಿದ್ದರು.

ಸುಪ್ರಿತಾ ಶೆಟ್ಟಿ

ಕನ್ನಡದ ಖ್ಯಾತ ನಟ ಪ್ರಮೋದ್ ಶೆಟ್ಟಿ ಮಡದಿ ಸುಪ್ರಿತಾ ಶೆಟ್ಟಿ ಕಿರುತೆರೆ ಕಲಾವಿದೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಇವರಿಗೆ ಕುಲವಧು ಧಾರಾವಾಹಿಯ ಕಾಂಚಾನಾ ಪಾತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ನೆಗೆಟಿವ್ ರೋಲ್ ಮೂಲಕ ಜನರಿಗೆ ಇಷ್ಟವಾದ ಇವರು ಈಗ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಗೆ ಸುಪ್ರಿತಾ ಶೆಟ್ಟಿ ನಿರ್ಮಾಪಕಿ.

ದಿಲೀಪ್ ರಾಜ್

ನಟ ದಿಲೀಪ್ ರಾಜ್ ಸಿನಿಮಾಗಳಲ್ಲಿ ನಟನೆ ಮಾಡಿ, ಕಿರುತೆರೆಯಲ್ಲೂ ಹೆಸರು ಗಳಿಸಿದವರು. ಇವರು ನಟಿಸಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಾನ ಗಳಿಸಿದೆ. ಇವರು ವಿದ್ಯಾ ವಿನಾಯಕ, ಪಾರು, ಹಿಟ್ಲರ್ ಕಲ್ಯಾಣ ಮುಂತಾದ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ.

ಸಪ್ನಾ ಕೃಷ್ಣ

ನಟಿಯಾಗಿದ್ದ ಸಪ್ನಾಕೃಷ್ಣ ಸದ್ಯ ಕನ್ನಡ ಕಿರುತೆರೆಯ ಪ್ರಸಿದ್ಧ ನಿರ್ದೇಶಕಿಯೂ ಹೌದು. ತಮ್ಮದೇ ಪ್ರೊಡಕ್ಷನ್ ಹೌಸ್ ಹೊಂದಿರುವ ಇವರು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ. ಸುಬ್ಬುಲಕ್ಷ್ಮೀ ಸಂಸಾರ, ಸತ್ಯ, ಅಂತರಪಟ ಮುಂತಾದ ಧಾರಾವಾಹಿಗಳನ್ನು ಇವರು ನಿರ್ಮಾಣ ಮಾಡಿದ್ದಾರೆ.

ನಿರ್ಮಲಾ ಚೆನ್ನಪ್ಪ

ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದ ನಿರ್ಮಲಾ ಚೆನ್ನಪ್ಪ ಪತಿ ಸತ್ಯ ಜೊತೆಗೂಡಿ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್‌ ಸೀಸನ್‌ 8ರ ಸ್ಪರ್ಧಿಯಾ‌ಗಿದ್ದ ಇವರು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.