Kantara on Prime Video: ಕಾಂತಾರ ಮತ್ತೆ ಮತ್ತೆ ನೋಡಬೇಕೆನಿಸ್ತಿದೆಯಾ?; ಅಮೆಜಾನ್ ಪ್ರೈಮ್ನಲ್ಲಿ ಇವತ್ತು ರಿಲೀಸ್ ಆಗಿದೆ ನೋಡಿ!
Kantara on Prime Video: ದೇಶದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಸೂಪರ್ ಹಿಟ್ ಕನ್ನಡ ಸಿನಿಮಾ ʻಕಾಂತಾರʼ ಆಕ್ಷನ್ ಥ್ರಿಲ್ಲರ್ ಆಗಿದ್ದು, ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಿಸಿದ್ದಾರೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಭಾರತದ ಚಲನಚಿತ್ರ ರಂಗದಲ್ಲಿ ಭಾರಿ ಅಲೆಯನ್ನು ಎಬ್ಬಿಸಿ, ತನ್ನದೇ ಛಾಪು ಮೂಡಿಸಿದ ಸಿನಿಮಾ ಕಾಂತಾರ. ಇಂದಿಗೂ ಮಲ್ಟಿಪ್ಲೆಕ್ಸ್ ಮತ್ತು ಸಾಮಾನ್ಯ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಓಡುತ್ತಿರುವ ಚಿತ್ರ ಇದು. ದೇಶದ ಹಲವು ಭಾಷೆಗಳಿಗೆ ಡಬ್ ಆಗಿದ್ದು, ಅಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ.
ಇಂತಹ ಸನ್ನಿವೇಶದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋಕ್ಕೂ ಕಾಂತಾರ ಎಂಟ್ರಿಕೊಟ್ಟಿದೆ. ಸಿನಿಮಾದ ಕಥೆ ಅರ್ಥ ಆಗಿಲ್ಲ ಎಂದು ಮತ್ತೊಮ್ಮೆ ಮಗದೊಮ್ಮೆ ನೋಡಿದವರು ಒಂದೆಡೆ, ಸಿನಿಮಾದ ದೃಶ್ಯವೈಭವಕ್ಕೆ ಮಾರು ಹೋಗಿ ಪುನಃ ಪುನಃ ಸಿನಿಮಾ ನೋಡಿದವರು ಮತ್ತೊಂದೆಡೆ. ಇನ್ನೂ ಟಿಕೆಟ್ ಸಿಕ್ಕಿಲ್ಲ ಎಂದೋ, ಮತ್ತೊಮ್ಮೆ ನೋಡಲು ಟಿಕೆಟ್ ಸಿಕ್ಕಿಲ್ಲ ಎಂದೋ ಕೊರಗುತ್ತಿರುವವರೂ ಇದ್ದಾರೆ. ಈ ಸಿನಿಮಾ ಥಿಯೆಟರ್ನಲ್ಲಿ ನೋಡಿದರೇ ಚೆಂದ. ಮನೆಯಲ್ಲೇ ದೊಡ್ಡ ಸ್ಕ್ರೀನ್ ಇದ್ದು, ಉತ್ತಮ ಸೌಂಡ್ ಸಿಸ್ಟಮ್ ಇದ್ದರೆ ಇನ್ನೂ ಚೆಂದವಾಗಿ ಈ ಸಿನಿಮಾ ನೋಡಬಹುದು ಎಂದು ಹೇಳುವವರೂ ಇದ್ದಾರೆ.
ಇವೆಲ್ಲದರ ನಡುವೆ, ಈಗಾಗಲೇ ಘೋಷಿಸಿದಂತೆ ಇಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಾಂತಾರ ಸಿನಿಮಾ ಕಾಣಿಸಿಕೊಂಡಿದೆ. ನಾಲ್ಕು ಭಾಷೆಗಳಲ್ಲಿ ಅಂದರೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ನೋಡುಗರಿಗೆ ಈ ಸಿನಿಮಾ ಲಭ್ಯವಿದೆ.
ಇತ್ತೀಚಿನ ಲೆಕ್ಕಾಚಾರ ಪ್ರಕಾರ, ಹಿಂದಿ ಆವೃತ್ತಿಯೊಂದರಲ್ಲೇ ಚಿತ್ರ ಸುಮಾರು 80 ಕೋಟಿ ರೂಪಾಯಿ ಗಳಿಸಿತ್ತು. ಈ ತಿಂಗಳ ಆರಂಭದಲ್ಲಿ ಬಾಕ್ಸ್ ಆಫೀಸ್ನಲ್ಲಿ 47 ಕೋಟಿ ರೂಪಾಯಿ ಗಡಿ ದಾಟಿದಾಗ, ಇದು 2018 ರ ಆಕ್ಷನ್ ಚಿತ್ರ ಕೆಜಿಎಫ್- ಪಾರ್ಟ್ 1 ಮಾಡಿದ 44 ಕೋಟಿ ರೂಪಾಯಿ ದಾಖಲೆಯನ್ನು ಮುರಿಯಿತು. ಎರಡನೆಯದು ಹಿಂದಿ ಭಾಷಿಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಮೊದಲ ಕನ್ನಡ ಚಿತ್ರ ಇದು.
ಕಾಂತಾರ ಆಕ್ಷನ್ ಥ್ರಿಲ್ಲರ್ ಆಗಿದ್ದು, ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಿಸಿದ್ದಾರೆ. ಇದು ಕೆಜಿಎಫ್ ಫ್ರಾಂಚೈಸ್ಗೆ ಹೆಸರುವಾಸಿಯಾದ ಸಂಸ್ಥೆ. ಇದರಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
RRR, ಪುಷ್ಪ: ದಿ ರೈಸ್- ಭಾಗ ಒನ್ ಮತ್ತು ರಜನಿಕಾಂತ್ ಅವರ 2.0 ನಂತಹ ತೆಲುಗು ಮತ್ತು ತಮಿಳು ಚಿತ್ರಗಳ ಹಿಂದಿ ಡಬ್ಗಳ ದೊಡ್ಡ ಯಶಸ್ಸಿನ ನಂತರ, ಕನ್ನಡ ಚಿತ್ರರಂಗವು ಉತ್ತರ ಭಾರತದ ಮಾರುಕಟ್ಟೆಯ ಮೇಲೆಯೂ ಕಣ್ಣಿಟ್ಟಿದೆ. ಆಕ್ಷನ್ ಡ್ರಾಮಾ ಕೆಜಿಎಫ್: ಅಧ್ಯಾಯ 2 ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಗಳಲ್ಲಿ ಒಂದು. ಈ ಏಪ್ರಿಲ್ನಲ್ಲಿ ಬಿಡುಗಡೆಯಾದ ಕೆಜಿಎಫ್ 2 ಒಟ್ಟು 434.70 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಇತರ ಎರಡು ಚಿತ್ರಗಳು-777 ಚಾರ್ಲಿ ಮತ್ತು ವಿಕ್ರಾಂತ್ ರೋನಾ-- ಇತ್ತೀಚೆಗೆ ಹಿಂದಿಯಲ್ಲಿ ಪ್ರಭಾವ ಬೀರಿವೆ. ಕನ್ನಡ ಸಿನಿಮಾ ಉದ್ಯಮವು ಪ್ರದೇಶ-ನಿರ್ದಿಷ್ಟ ನಿರೂಪಣೆ ಮೀರಿ ಮುನ್ನಡೆದಿದೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನ ನಡೆದಿದೆ. ಯಶ್ ಮತ್ತು ಕಿಚ್ಚ ಸುದೀಪ್ ಅವರಂತಹ ಸ್ಟಾರ್ಗಳು ಉತ್ತರ ಭಾರತದಲ್ಲಿ ಮನ್ನಣೆ ಪಡೆಯುತ್ತಿದ್ದಾರೆ ಎಂಬುದು ಸಿನಿಮಾ ರಂಗದ ತಜ್ಞರ ಅಭಿಮತ.
ಕನ್ನಡ ಸಿನಿಮಾ ಉದ್ಯಮವು ತನ್ನ ಪರಿಧಿಯನ್ನು ವಿಸ್ತರಿಸಲು ಎರಡು ಅಂಶಗಳಿವೆ ಎಂದು ವ್ಯಾಪಾರ ತಜ್ಞರು ಹೇಳುತ್ತಾರೆ. ಮೊದಲನೆಯದು, OTT ಪ್ಲಾಟ್ಫಾರ್ಮ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳ ತ್ವರಿತ ಬೆಳವಣಿಗೆಯೊಂದಿಗೆ ಪ್ರೇಕ್ಷಕರು ಹೆಚ್ಚಿನ ಮಾಹಿತಿ ಮತ್ತು ವಿಷಯಕ್ಕೆ ತೆರೆದುಕೊಂಡಿರುವುದು. ಎರಡನೆಯದಾಗಿ, ಕೆಜಿಎಫ್ 2 ಮತ್ತು ವಿಕ್ರಾಂತ್ ರೋಣದಂತಹ ಚಲನಚಿತ್ರಗಳು ಹೆಚ್ಚಿನ ಜನಮನವನ್ನು ಪಡೆದಿವೆ ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿದೆ ಎಂಬುದು ಗಮನಾರ್ಹ ವಿಚಾರ.