ಸಿಂಚನಾ ಒಡವೆ ನಕಲಿ, ಐದು ಲಕ್ಷ ಹಣ ಕದ್ದಿರುವುದು ಎಲ್ಲವೂ ಹರೀಶನ ಕೆಲಸ ಎಂದು ಸಂತೋಷ್ಗೆ ಗೊತ್ತಾಗಿದೆ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಸಂತೋಷ್, ವೀಣಾಳ ಮಾಂಗಲ್ಯವನ್ನು ಕೊಂಡಿ ರಿಪೇರಿಗೆ ಚಿನ್ನದ ಅಂಗಡಿಗೆ ಕೊಂಡು ಹೋಗಿರುತ್ತಾನೆ. ಆಗ ಅವನಿಗೆ ಹರೀಶ ಅಲ್ಲಿ ಸಿಂಚನಾಳ ಒಡವೆಯನ್ನು ನಕಲಿ ಮಾಡಿಸಿರುವುದು ಗೊತ್ತಾಗುತ್ತದೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಸಂತೋಷ್, ವೀಣಾಳ ಮಾಂಗಲ್ಯ ಸರದ ಕೊಂಡಿ ಕಳಚಿರುವುದರಿಂದ, ಅದನ್ನು ತೆಗೆದುಕೊಂಡು ರಿಪೇರಿಗೆ ಹೋಗಿರುತ್ತಾನೆ. ಆಗ ಚಿನ್ನದ ಅಂಗಡಿಯವನ ಜೊತೆ ಹಾಗೂ ಹೀಗೂ ಮಾತುಕತೆ ಮಾಡುತ್ತಿರುವಾಗ, ಹರೀಶ ಅಲ್ಲಿ ಬಂದು ನಕಲಿ ಒಡವೆ ಮಾಡಿಸಿಕೊಂಡು ಹೋಗಿರುವುದು ಗೊತ್ತಾಗುತ್ತದೆ. ಆದರೂ, ಅದನ್ನೊಮ್ಮೆ ಮರುಪರಿಶೀಲಿಸಲು ಸಂತೋಷ್, ಜುವೆಲ್ಲರಿ ಶಾಪ್ನವರ ಬಳಿ ಫೋಟೊ ನೋಡಿಕೊಂಡು ದೃಢಪಡಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಅದು ಸಿಂಚನಾಳ ಒಡವೆ ಮತ್ತು ಹರೀಶ ಅದರ ನಕಲಿ ಮಾಡಿಸಿರುವುದು ಗೊತ್ತಾಗುತ್ತದೆ. ನಂತರ ಸಂತೋಷ ಅಲ್ಲಿಂದ ತೆರಳುತ್ತಾನೆ.
ಮನೆಗೆ ಮರಳುವ ದಾರಿಯಲ್ಲಿ, ಸಂತೋಷನಿಗೆ ಅದುವೇ ಯೋಚನೆಯಾಗಿರುತ್ತದೆ. ಅದರಲ್ಲೂ ತನ್ನ ಐದು ಲಕ್ಷ ರೂಪಾಯಿ ಹಣ ಕಳವಾಗಿರುವುದಕ್ಕೆ ಹರೀಶನೇ ಕಾರಣ ಎಂದು ಅವನಿಗೆ ಗೊತ್ತಾಗುತ್ತದೆ. ಹೀಗಾಗಿ ಅವನಿಗೆ ಅದುವೇ ತಲೆಯಲ್ಲಿ ಯೋಚನೆಯಾಗಿರುತ್ತದೆ. ಆದ್ದರಿಂದ ಅವನು ದಾರಿಯಲ್ಲಿ ಸಿಕ್ಕ ಪೊಲೀಸ್ ಠಾಣೆಗೆ ಹೋಗುತ್ತಾನೆ. ಹರೀಶನ ವಿರುದ್ಧ ದೂರು ನೀಡುವುದು, ಪೊಲೀಸ್ ವಿಚಾರಣೆ ನಡೆಸಿದರೆ ಅವನು ಎಲ್ಲವನ್ನೂ ಬಾಯಿಬಿಡುತ್ತಾನೆ ಎನ್ನುವುದು ಸಂತೋಷನ ಯೋಚನೆಯಾಗಿದೆ. ಆದರೆ ಪೊಲೀಸ್ ಠಾಣೆಗೆ ಬಂದ ಬಳಿಕ, ದೂರು ನೀಡುವುದು ಸರಿ, ಆದರೆ ಹರೀಶನೇ ಕಳವು ಮಾಡಿರಬಹುದು ಎನ್ನುವುದು ದೃಢಪಟ್ಟಿಲ್ಲ, ಹೀಗಾಗಿ ಅವನು ಕದ್ದಿಲ್ಲವಾದರೆ, ನನ್ನ ಮರ್ಯಾದೆ ಹೋಗಬಹುದು ಮತ್ತು ನನ್ನ ಬಳಿ ಐದು ಲಕ್ಷ ರೂ. ಹಣ ಇರುವುದು ಎಲ್ಲರಿಗೂ ಗೊತ್ತಾಗುತ್ತದೆ ಎಂದುಕೊಳ್ಳುತ್ತಾನೆ.
ನಂತರ ಮೆಲ್ಲನೆ ಅಲ್ಲಿಂದ ಎದ್ದು ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲಿ ಪೊಲೀಸ್ ಅಧಿಕಾರಿ ಬಂದು, ಸುಮ್ಮಸುಮ್ಮನೆ ಇಲ್ಲಿಗೆ ಬರಬೇಡಿ ಎಂದು ಗದರುತ್ತಾನೆ. ಅದಕ್ಕೆ ಸರಿ ಎಂದು ಸಂತೋಷ್ ಅಲ್ಲಿಂದ ಹೊರಡಲು ಅನುವಾಗುತ್ತಾನೆ, ಆದರೆ ಅದೇ ಪೊಲೀಸ್ ಠಾಣೆಯ ಸೆಲ್ನಲ್ಲಿದ್ದ ವೆಂಕಿಯನ್ನು ಅವನು ಗಮನಿಸುವುದಿಲ್ಲ. ವೆಂಕಿ ಕೂಡ ಸಂತೋಷ್ ಬಂದು ಹೋಗಿರುವುದನ್ನು ಗಮನಿಸುವುದಿಲ್ಲ. ಸಂತೋಷ್ ಅಲ್ಲಿಂದ ಹೊರಟು ಮನೆಗೆ ಬರುತ್ತಾನೆ.
ಇತ್ತ ಲಕ್ಷ್ಮೀ ನಿವಾಸದಲ್ಲಿ ಶ್ರೀನಿವಾಸ್, ಮನೆಯವರು ಎಲ್ಲರನ್ನೂ ಕರೆದು ಜಾಹ್ನವಿಯ ಶ್ರಾದ್ಧದ ಕಾಗದ ಕೊಡುತ್ತಾರೆ. ನಿಮ್ಮ ಪರಿಚಯದವರಿಗೆ ಕೊಡಿ, ಜಾಹ್ನವಿಯ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮಾಡೋಣ ಎಂದು ಹೇಳುತ್ತಾರೆ. ಮನೆಯವರು ಬೇಸರದಲ್ಲೇ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಅಷ್ಟರಲ್ಲಿ ಸಂತೋಷ್ ಮನೆಗೆ ಬಂದು, ಹರೀಶನತ್ತ ಅನುಮಾನದ ನೋಟ ಬೀರಿ ಕೋಣೆಗೆ ಹೋಗುತ್ತಾನೆ.
ಇನ್ನೊಂದೆಡೆ ಪೊಲೀಸರು, ಕೋರ್ಟ್ ಸೂಚನೆಯಂತೆ ವೆಂಕಿಯನ್ನು ಜೈಲಿಗೆ ಹಾಕಿದ್ದಾರೆ. ಅವನು ಬೇಡಿಕೊಂಡರೂ ಸುಮ್ಮನೆ ಬಿಟ್ಟಿಲ್ಲ. ಮತ್ತೊಂದೆಡೆ ಹರೀಶ ಮತ್ತು ಸಂತೋಷ್, ಮನೆಯ ಹಿಂಭಾಗದಲ್ಲಿ ಮಾತನಾಡುತ್ತಿರುವಾಗ, ನಕಲಿ ಬೀಗದ ಕೀ ವಿಚಾರ ಬರುತ್ತದೆ. ಅಷ್ಟರಲ್ಲೇ ಸಂತೋಷ, ಹರೀಶನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು, ನನ್ನ ಐದು ಲಕ್ಷ ರೂ. ಹಣ ಯಾಕೆ ಕದ್ದೆ ಎಂದು ಪ್ರಶ್ನಿಸುತ್ತಾನೆ, ಹರೀಶ ಹೆದರಿ ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಗುರುವಾರ ಏಪ್ರಿಲ್ 17ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ