ನರಸಿಂಹನ ಮನೆಗೆ ಬಂದು ಜಾಹ್ನವಿ ಸತ್ತಿದ್ದಾಳೆ ಎಂದ ಜಯಂತ; ಮರೆಯಲ್ಲಿ ನಿಂತು ಗಂಡನ ಮಾತು ಕೇಳಿಸಿಕೊಂಡ ಜಾನು: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಜಯಂತ ನರಸಿಂಹನ ಮನೆಗೆ ಬಂದಿದ್ದಾನೆ. ಅಲ್ಲಿ ನರಸಿಂಹನ ಕುಟುಂಬದ ಜತೆ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಅದನ್ನು ಜಾಹ್ನವಿ ಅಡುಗೆ ಮನೆಯಲ್ಲಿ ಅಡಗಿ ಕುಳಿತು ಕೇಳಿಸಿಕೊಂಡಿದ್ದಾಳೆ. ನಂತರ ಜಯಂತ್ ಅಲ್ಲಿಂದ ಹೋಗಿದ್ದಾನೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಜಯಂತ ನರಸಿಂಹನ ಮನೆಗೆ ಹೋಗಿದ್ದಾನೆ. ಅಲ್ಲಿ ಹೋಗಿ ನರಸಿಂಹನ ಮನೆಯವರಲ್ಲಿ ಮಾತನಾಡುತ್ತಾ, ಉಭಯ ಕುಶಲೋಪರಿ ಮಧ್ಯೆ, ಜಯಂತ ಬೇಸರದಲ್ಲಿರುವುದನ್ನು ನರಸಿಂಹ ಗಮನಿಸಿದ್ದಾನೆ. ಅಲ್ಲದೆ, ನಿಮ್ಮ ಪತ್ನಿ ಹೇಗಿದ್ದಾರೆ, ಅವಳ ಆರೋಗ್ಯ ಹೇಗಿದೆ, ಎಲ್ಲ ಕ್ಷೇಮವೇ ತಾನೆ ಎಂದು ಕೇಳಿದ್ದಾರೆ. ಆಗ ಜಯಂತ ಬೇಸರಪಟ್ಟುಕೊಂಡು, ಜಾಹ್ನವಿ ಇಂದು ನನ್ನೊಂದಿಗಿಲ್ಲ, ನನ್ನನ್ನು ಬಿಟ್ಟು ಹೋಗಿದ್ದಾಳೆ. ಅವಳು ತೀರಿಕೊಂಡಿದ್ದಾಳೆ. ಹೀಗಾಗಿ ಅವಳ ನೆನಪಿನಲ್ಲಿ ನಾನು ಕೊರಗುತ್ತಿದ್ದೇನೆ ಎಂದು ಹೇಳುತ್ತಾನೆ. ಅದನ್ನು ಕೇಳಿ ನರಸಿಂಹನ ಮನೆಯವರಿಗೆ ಶಾಕ್ ಆಗುತ್ತದೆ. ಅಷ್ಟೇ ಅಲ್ಲದೇ, ಅವರು ಎಲ್ಲರೂ ಜಯಂತ್ಗೆ ಸಮಾಧಾನ ಹೇಳುತ್ತಾರೆ.
ಜಯಂತ್ ಹೇಳಿದ ಮಾತು ಕೇಳಿ ವಿಶ್ವನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗುತ್ತದೆ. ಅವನು ಕೂಡಲೇ ತನ್ನ ರೂಮ್ಗೆ ಹೋಗುತ್ತಾನೆ. ಇತ್ತ ಜಯಂತನಿಗೆ ನರಸಿಂಹ ದೈರ್ಯದ ಮಾತು ಹೇಳುತ್ತಾರೆ. ಮತ್ತೊಂದೆಡೆ ಶ್ರೀನಿವಾಸ್, ಜಯಂತ್ಗೆ ಫೋನ್ ಮಾಡಿ, ಮನೆಗೆ ಬಂದು ಜಾಹ್ನವಿ ಶ್ರಾದ್ಧ ಮತ್ತು ಕಾರ್ಯದ ಕಾಗದ ತೆಗೆದುಕೊಂಡು ಹೋಗಿ, ಮನೆಗೆ ಬನ್ನಿ ಎಂದು ಕರೆಯುತ್ತಾರೆ. ಜಯಂತ್ ಸರಿ ಎಂದು ಹೇಳಿ ಕರೆ ಕಡಿತ ಮಾಡುತ್ತಾನೆ. ಬಳಿಕ ನರಸಿಂಹ ಯಾರು ಕರೆ ಮಾಡಿದ್ದಾರೆ ಎಂದು ಕೇಳುತ್ತಾರೆ. ಆಗ ಜಯಂತ್, ಜಾಹ್ನವಿ ಮನೆಯವರು ಕರೆ ಮಾಡಿರುವ ವಿಚಾರ ತಿಳಿಸುತ್ತಾನೆ. ಅದಕ್ಕೆ, ಫೋನ್ ಮಾಡಿ ಕೊಡಿ, ನಾನು ಕೂಡ ಅವರ ಜೊತೆ ಮಾತನಾಡುವೆ ಎಂದು ಹೇಳುತ್ತಾರೆ.
ನರಸಿಂಹನ ಮಾತು ಕೇಳಿ, ಜಯಂತ್ ಜಾಹ್ನವಿಯ ಅಮ್ಮ ಲಕ್ಷ್ಮೀಗೆ ಫೋನ್ ಮಾಡಿ, ನನಗೆ ತುಂಬಾ ಬೇಕಾದವರು ಒಬ್ಬರು ನಿಮ್ಮ ಬಳಿ ಮಾತನಾಡಬೇಕು ಎಂದು ಹೇಳುತ್ತಾನೆ. ಅದಕ್ಕವರು ಸರಿ ಎಂದು ಫೋನ್ ಕೊಡಿ ಎನ್ನುತ್ತಾರೆ. ನರಸಿಂಹ ಈಗ ಲಕ್ಷ್ಮೀ ಜೊತೆ ಮಾತನಾಡುತ್ತಿದ್ದಾನೆ, ಆದರೆ ಅವನಿಗೆ ಅದು ತನ್ನ ಸ್ವಂತ ತಂಗಿಯೇ ಎಂದು ಗೊತ್ತಾಗುವುದಿಲ್ಲ. ಆದರೆ ಲಕ್ಷ್ಮೀಗೆ ಅದು ನರಸಿಂಹ, ನನ್ನ ಅಣ್ಣನೇ ಎಂದು ಗೊತ್ತಾಗುತ್ತದೆ. ಜಾಹ್ನವಿ ಕಳೆದುಕೊಂಡಿರುವುದಕ್ಕೆ ಅವನು ಲಕ್ಷ್ಮೀಗೆ ಸಮಾಧಾನ ಹೇಳುತ್ತಾನೆ. ಲಕ್ಷ್ಮೀಯ ಕಣ್ಣು ತುಂಬಿ ಬರುತ್ತದೆ. ಅವಳು ನರಸಿಂಹನನ್ನು ಅಣ್ಣಾ ಎಂದು ಕರೆದು ಮಾತನಾಡಿಸುತ್ತಾಳೆ. ಆದರೆ ನರಸಿಂಹನಿಗೆ ಅದು ತನ್ನ ತಂಗಿ ಲಕ್ಷ್ಮೀ ಎಂದು ಗೊತ್ತಾಗುವುದಿಲ್ಲ.
ಇತ್ತ ಅಡುಗೆಮನೆಯ ಮರೆಯಲ್ಲಿ ನಿಂತುಕೊಂಡು ಜಾಹ್ನವಿ ಇವರೆಲ್ಲರ ಮಾತುಗಳನ್ನು ಕೇಳಿಸಿಕೊಂಡಿದ್ದಾಳೆ. ಬಳಿಕ ಜಯಂತ ಅಲ್ಲಿಂದ ಹೊರಟಿದ್ದಾನೆ, ಮನೆಗೆ ಹೋದ ಮೇಲೆ ಅವನಿಗೆ ನರಸಿಂಹನ ಮನೆಯಲ್ಲಿ ಕುಡಿದ ಕಾಫಿ, ಜಾಹ್ನವಿ ಮಾಡಿದ ಕಾಫಿಯ ಹಾಗೇ ಇತ್ತು ಎಂದು ನೆನಪಾಗುತ್ತದೆ.
ಇತ್ತ ಶ್ರೀನಿವಾಸ್ ಮನೆಯಲ್ಲಿ ಜಾಹ್ನವಿಯ 11ನೇ ದಿನದ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಏಪ್ರಿಲ್ 21ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ