ಭಯಾನಕ ಕನಸಿನಿಂದ ಎಚ್ಚರಗೊಂಡಳು ಜಾಹ್ನವಿ; ಸಂತೋಷನ ಹೊಸ ಮನೆ ವಿಚಾರ ತಿಳಿದುಕೊಂಡ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಯಾನಕ ಕನಸಿನಿಂದ ಎಚ್ಚರಗೊಂಡಳು ಜಾಹ್ನವಿ; ಸಂತೋಷನ ಹೊಸ ಮನೆ ವಿಚಾರ ತಿಳಿದುಕೊಂಡ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ

ಭಯಾನಕ ಕನಸಿನಿಂದ ಎಚ್ಚರಗೊಂಡಳು ಜಾಹ್ನವಿ; ಸಂತೋಷನ ಹೊಸ ಮನೆ ವಿಚಾರ ತಿಳಿದುಕೊಂಡ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ಜಾಹ್ನವಿಯ ಕೈಯನ್ನು ಜಯಂತ ಇನ್ನೇನು ಹಿಡಿದು ಎಳೆಯಲು ಯತ್ನಿಸುತ್ತಿರುವಾಗ ಅವಳಿಗೆ ಒಮ್ಮೆಲೆ ಎಚ್ಚರವಾಗಿದೆ. ಅಬ್ಬಾ ಎಂಥಾ ಕನಸು ಎಂದು ಜಾಹ್ನವಿ ಹೆದರಿಕೊಂಡು ನಿದ್ದೆಯಿಂದ ಎದ್ದು ಕುಳಿತಿದ್ದಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಏಪ್ರಿಲ್ 23ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಏಪ್ರಿಲ್ 23ರ ಸಂಚಿಕೆ (Zee Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ಜಾಹ್ನವಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದ ಜಯಂತ, ಅವಳನ್ನು ತನ್ನೊಡನೆ ಬರುವಂತೆ ಒತ್ತಾಯಿಸಿದ್ದಾನೆ. ನೀವಿಲ್ಲದೇ ನಾನಿರುವುದಿಲ್ಲ ಎಂದು ಜಯಂತ, ಜೋರಾಗಿ ಜಾಹ್ನವಿಯ ಕೈಯನ್ನು ಹಿಡಿದು ಎಳೆದಿದ್ದಾನೆ. ಆಗ ನಾನು ಎಲ್ಲಿಗೂ ಬರುವುದಿಲ್ಲ, ನಿಮ್ಮ ಜೊತೆ ಅಂತೂ ಖಂಡಿತವಾಗಿಯೂ ಬರಲ್ಲ ಎಂದು ಜೋರಾಗಿ ಕೈಯನ್ನು ಹಿಡಿದು ಜಾಹ್ನವಿ ಎಳೆದಿದ್ದಾಳೆ. ಅಷ್ಟರಲ್ಲಿ ಅವಳಿಗೆ ಎಚ್ಚರವಾಗಿದೆ, ಇಷ್ಟು ಹೊತ್ತು ನಡೆದಿದ್ದು ಎಲ್ಲವೂ ಕನಸು ಎಂದು ನಿದ್ದೆಯಿಂದ ಎದ್ದು ಭಯಗೊಂಡು ಕುಳಿತಿದ್ದಾಳೆ. ಈ ಕನಸು ಯಾವತ್ತೂ ನನಸಾಗುವುದು ಬೇಡ, ಕನಸಾಗಿಯೇ ಉಳಿಯಲಿ ಎಂದು ಹೇಳಿದ್ದಾಳೆ.

ಜಯಂತ ಮುಂದೆ ಯಾವತ್ತಾದರೂ ಹೀಗೇ ನನ್ನನ್ನು ಹುಡುಕಿಕೊಂಡು ಬರಬಹುದು, ಅದಕ್ಕೆ ಅವಕಾಶ ಕೊಡಬಾರದು, ಅವನಿರುವಲ್ಲಿಗೆ ನಾನು ಯಾವತ್ತೂ ಹೋಗುವುದಿಲ್ಲ ಎಂದು ಜಾಹ್ನವಿ ಆಶಿಸಿದ್ದಾಳೆ. ಅಲ್ಲದೆ, ಜಯಂತನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಳೆ, ಮುಂದೆ ಮತ್ತೆ ಹೀಗೆ ಅವನ ಬಳಿಗೆ ಮರಳಿ ಹೋಗುವುದು ಹೇಗೆ ಎಂದು ಅವಳು ಯೋಚಿಸಿದ್ದಾಳೆ. ಅಂತಹ ಪರಿಸ್ಥಿತಿ ಬಾರದಿರಲಿ ದೇವರೇ ಎಂದು ಅವಳು ದೇವರನ್ನು ಬೇಡಿಕೊಂಡಿದ್ದಾಳೆ.

ಇತ್ತ ಮನೆಯಲ್ಲಿ ಶ್ರೀನಿವಾಸ್, ಜಾಹ್ನವಿಯ ಕಾರ್ಯದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜವರೇಗೌಡರ ಮನೆಗೆ ಹೋಗಿ ಅವರಿಗೆ ಕಾಗದ ಕೊಟ್ಟು ಕರೆದು ಬಂದಿದ್ದಾರೆ. ನಂತರ ಮಗಳು ಭಾವನಾ ಮತ್ತು ಅಳಿಯ ಸಿದ್ದೇಗೌಡನ ಜತೆ ಕುಳಿತು ಊಟ ಮಾಡಿ, ಮನೆಗೆ ಮರಳಿದ್ದಾರೆ. ಅದಕ್ಕೂ ಮೊದಲು, ಜವರೇಗೌಡ್ರ ಬಳಿ, ವೆಂಕಿ ವಿಚಾರ ಪ್ರಸ್ತಾಪಿಸಿ, ಬೇಗನೇ ಅವನನ್ನು ಹುಡುಕಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಜವರೇಗೌಡರು ಚಿಂತಿಸಬೇಡಿ, ನಾನಿದ್ದೇನೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಹರೀಶ ಸ್ಕೂಟರ್‌ನಲ್ಲಿ ಎತ್ತಲೋ ಹೊರಟಿದ್ದಾನೆ. ಆಗ ಸಿಮೆಂಟ್ ಅಂಗಡಿಯಲ್ಲಿ ಸಂತೋಷ್ ಇರುವುದನ್ನು ಕಂಡು, ಅಲ್ಲಿಯೇ ಸ್ಕೂಟರ್ ನಿಲ್ಲಿಸಿ ಅವನನ್ನು ಫಾಲೋ ಮಾಡುತ್ತಾನೆ. ಸಂತೋಷ್, ಮನೆಗೆ ಸಿಮೆಂಟ್ ಹಾಕಿಸಲು ಆರ್ಡರ್ ಕೊಟ್ಟು, ಮನೆ ಕಟ್ಟಿಸುವಲ್ಲಿಗೆ ಹೋಗುತ್ತಿದ್ದಾನೆ, ಅವನ ಹಿಂದೆಯೇ ಹರೀಶ ಹಿಂಬಾಲಿಸಿಕೊಂಡು ಹೋಗುತ್ತಾನೆ. ಸಂತೋಷ್ ಮನೆಗೆ ಹೋಗಿ, ಅಲ್ಲಿ ಇರುವ ಮೇಸ್ತ್ರಿಗೆ ಸೂಚನೆ ಕೊಟ್ಟು ಮರಳುತ್ತಾನೆ, ಅವನು ಹರೀಶನನ್ನು ಗಮನಿಸಿರುವುದಿಲ್ಲ. ಇತ್ತ ಹರೀಶ, ಮೆಲ್ಲನೆ ಬಂದು ಮೇಸ್ತ್ರಿ ಬಳಿ ಮಾತನಾಡಿ, ಮನೆಯ ವಿವರ ತಿಳಿದುಕೊಳ್ಳುತ್ತಾನೆ, ಅದು ಸಂತೋಷನ ಮನೆಯೇ ಎಂದು ಹರೀಶನಿಗೆ ಖಚಿತವಾಗುತ್ತದೆ.

ನಂತರ ಮನೆಗೆ ಬಂದ ಬಳಿಕ, ಮನೆಯ ಹಿತ್ತಲಿನಲ್ಲಿ ಸಂತೋಷ್ ಮತ್ತು ಹರೀಶ್ ಮಾತನಾಡುತ್ತಾ ಇರುವಾಗ, ಮನೆಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಏಪ್ರಿಲ್ 23ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in