ಹೊಸ ಮನೆ ವಿಚಾರದಲ್ಲಿ ಅಣ್ಣ ಸಂತೋಷ್‌ನನ್ನೇ ಬ್ಲಾಕ್‌ಮೇಲ್ ಮಾಡಲಾರಂಭಿಸಿದ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೊಸ ಮನೆ ವಿಚಾರದಲ್ಲಿ ಅಣ್ಣ ಸಂತೋಷ್‌ನನ್ನೇ ಬ್ಲಾಕ್‌ಮೇಲ್ ಮಾಡಲಾರಂಭಿಸಿದ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ

ಹೊಸ ಮನೆ ವಿಚಾರದಲ್ಲಿ ಅಣ್ಣ ಸಂತೋಷ್‌ನನ್ನೇ ಬ್ಲಾಕ್‌ಮೇಲ್ ಮಾಡಲಾರಂಭಿಸಿದ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಹೊಸ ಮನೆ ಕಟ್ಟಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಹರೀಶ, ಅಣ್ಣ ಸಂತೋಷ್‌ನನ್ನೇ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಅವನ ಮಾತು ಕೇಳಿ ಸಂತೋಷ್ ಹೆದರಿಕೊಂಡಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಗುರುವಾರ ಏಪ್ರಿಲ್ 24ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಗುರುವಾರ ಏಪ್ರಿಲ್ 24ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಹೊಸ ಮನೆ ನಿರ್ಮಾಣ ಕುರಿತಂತೆ ಸಂತೋಷ್ ಮತ್ತು ಹರೀಶನ ಮಧ್ಯೆ ಕಲಹ ಉಂಟಾಗಿದೆ. ಮನೆ ನಿರ್ಮಾಣ ಮಾಡುವ ಬಗ್ಗೆ ಸಂತೋಷನ ಬಳಿ ಬಗೆಬಗೆಯಾಗಿ ಹರೀಶ ವಿಚಾರಿಸಿದ್ದಾನೆ. ಆಗ ಬೇರೆ ವಿಧಿಯಿಲ್ಲದೆ, ಅನಿವಾರ್ಯವಾಗಿ ಸಂತೋಷ್, ಹೌದು ನಾನು ಹೊಸ ಮನೆ ಕಟ್ಟಿಸುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಈ ವಿಚಾರ ಮನೆಯವರಿಗೆ ತಿಳಿದಿಲ್ಲ ಎಂದು ಕೂಡ ಹೇಳಿದ್ದಾನೆ. ಇದರಿಂದ ಅಣ್ಣ ಸಂತೋಷ್‌ನನ್ನು ಮಾತಿನಲ್ಲೇ ಕಟ್ಟಿ ಹಾಕಲು ಹರೀಶನಿಗೆ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಅವನು ಇದೇ ವಿಚಾರ ಇಟ್ಟುಕೊಂಡು ಅಣ್ಣ ಸಂತೋಷನನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ. ಸಂತೋಷ್‌ ಕೂಡ ಹರೀಶನ ಮಾತುಗಳಿಗೆ ಹೆದರಿ, ಬಾಯಿಮುಚ್ಚಿಕೊಂಡಿದ್ದಾನೆ.

ನೀನು ಮನೆಯವರಿಗೆ ಮೋಸ ಮಾಡಿದ್ದಿ, ನಿನ್ನ ಮಾತು ನಾವೆಲ್ಲ ನಂಬಿದ್ದೆವು, ಆದರೆ ನೀನು ಮಾತ್ರ ಗುಟ್ಟಾಗಿ ಮನೆ ಕಟ್ಟಿಸಿದ್ದಿ, ನಮ್ಮ ಅಪ್ಪ ಅಮ್ಮ ಇಲ್ಲಿ ನಮಗಾಗಿ ಇಷ್ಟೊಂದು ಕಷ್ಟ ಪಡುತ್ತಿದ್ದಾರೆ. ಅವರು ಒಂದು ಸ್ವಂತ ಮನೆ ಕಟ್ಟಬೇಕು ಎಂದು ಶ್ರಮಿಸುತ್ತಿದ್ದಾರೆ. ಆದರೆ ನೀನು ಮಾತ್ರ ಸ್ವಾರ್ಥಿಯಾಗುತ್ತಿದ್ದೀ ಎಂದು ಹರೀಶ ಹೇಳಿದ್ದಾನೆ. ಅದನ್ನು ಕೇಳಿ ಸಂತೋಷ್ ಬೆಚ್ಚಿಬಿದ್ದಿದ್ದಾನೆ. ಅಷ್ಟೇ ಅಲ್ಲದೆ, ನೀನು ಮನೆ ಕಟ್ಟಿಸುತ್ತಿರುವ ಸಂಗತಿಯನ್ನು ಎಲ್ಲರ ಬಳಿಯೂ ಹೇಳುವೆ ಎಂದು ಅಣ್ಣನನ್ನು ಭಾವನಾತ್ಮಕ ಮಾತುಗಳಿಂದ ಕಟ್ಟಿ ಹಾಕುತ್ತಾನೆ. ಹೀಗಾಗಿ ಸಂತೋಷ್ ಈಗ ಹೇಗಾದರೂ ಮಾಡಿ ಈ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿದ್ದಾನೆ. ಅಲ್ಲದೆ, ಅವನು ಹರೀಶನ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ನೀನು ಬೇಕಾದರೆ ದುಡ್ಡು ಕೊಡುವುದು ಬೇಡ, ಅಲ್ಲದೆ, ಸಿಂಚನಾ ಒಡವೆ ಕದ್ದಿರುವ ಸಂಗತಿಯನ್ನು ಕೂಡ ನಾನೂ ಯಾರಿಗೂ ಹೇಳುವುದಿಲ್ಲ ಎಂದು ಸಂತೋಷ ಹೇಳುತ್ತಾನೆ.

ಅದನ್ನು ಕೇಳಿದ ಬಳಿಕ ಹರೀಶನಿಗೆ ನೆಮ್ಮದಿಯಾಗಿದೆ. ಸದ್ಯ ನಾನು ಬಚಾವ್ ಆದೆ, ಅಣ್ಣ ನನಗೆ ಇನ್ನು ಮುಂದೆ ಹಣ ಮತ್ತು ಒಡವೆ ವಿಚಾರದಲ್ಲಿ ಕಿರಿಕಿರಿ ಮಾಡುವುದಿಲ್ಲ ಎಂದು ಅಂದುಕೊಂಡಿದ್ದಾನೆ. ಸಂತೋಷ್‌ಗೆ ಮಾತ್ರ ಈಗ ಒಳ್ಳೆ ಫಜೀತಿಯಾಗಿದೆ. ಅತ್ತ ಮನೆಯಲ್ಲಿ ಹೇಳಲೂ ಆಗದೇ, ಇತ್ತ ಮನೆಯಲ್ಲಿ ಇರಲೂ ಆಗದೆ, ಕಷ್ಟಪಡುವಂತಾಗಿದೆ.

ಇತ್ತ ಜಯಂತ, ಜಾಹ್ನವಿ ಕಾರ್ಯದ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಅವಳ ಫೋಟೊ ಹಾಕಿ ಜಾಹೀರಾತು ನೀಡಿದ್ದಾನೆ. ಜಾಹ್ನವಿ ಫೋಟೊವನ್ನು ನರಸಿಂಹನ ಮನೆಯಲ್ಲಿ ಪತ್ರಿಕೆಯಲ್ಲಿ ವಿಶ್ವ ನೋಡಿ ಬೇಸರಪಟ್ಟುಕೊಂಡಿದ್ದಾನೆ. ಜಾಹ್ನವಿ ಕೂಡ ಅದನ್ನು ನೋಡಿ, ಈ ಫೋಟೊ ಮನೆಯವರಿಗೆ ಕಾಣಿಸದ ಹಾಗೆ ಎತ್ತಿಟ್ಟುಕೊಂಡಿದ್ದಾಳೆ. ಅದನ್ನು ನರಸಿಂಹ ಗಮನಿಸಿಲ್ಲ.

ಇತ್ತ ಜಯಂತ, ಜಾಹ್ನವಿ ಬಗ್ಗೆಯೇ ಯೋಚಿಸುತ್ತಾ ದಿನ ಕಳೆಯುತ್ತಿದ್ದಾನೆ, ಶಾರದಮ್ಮನ ಜೊತೆ ಮತ್ತೆ ಹೊಸದಾಗಿ, ಜಾಹ್ನವಿ ಇನ್ನೂ ಬದುಕಿದ್ದಾಳೆ, ನನ್ನ ಪಾಲಿಗೆ ಅವಳು ಎಂದಿಗೂ ಸಾಯುವುದಿಲ್ಲ ಎಂದಿದ್ದಾನೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಗುರುವಾರ ಏಪ್ರಿಲ್ 24ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in