ಒಟಿಟಿಯಲ್ಲಿ ನೋಡಲೇಬೇಕಾದ ಪೃಥ್ವಿರಾಜ್ ಸುಕುಮಾರನ್ ನಟನೆಯ ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳಿವು
ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿರುವ ಅನೇಕ ಥ್ರಿಲ್ಲರ್ ಚಲನಚಿತ್ರಗಳು ಈಗ ಒಟಿಟಿಯಲ್ಲಿ ಲಭ್ಯವಿದೆ. ಅವರು ನಿರ್ದೇಶಿಸಿ ಮತ್ತು ನಟಿಸಿರುವ 'ಎಲ್2: ಎಂಪುರಾನ್' ಒಟಿಟಿಗೆ ಬರುವ ಮೊದಲು ಈ ಚಿತ್ರಗಳನ್ನು ವೀಕ್ಷಿಸಿ.

ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ 'ಎಲ್2: ಎಂಪುರಾನ್' ಸಿನಿಮಾ ಈಗಾಗಲೇ ಜಿಯೋ ಹಾಟ್ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ನಡುವೆ, ಇದೇ ಪೃಥ್ವಿರಾಜ್ ಸುಕುಮಾರನ್ ನಟನೆಯ ಇನ್ನೂ ಹಲವು ರೋಚಕ ಥ್ರಿಲ್ಲರ್ ಸಿನಿಮಾಗಳು ಕೆಲ ಒಟಿಟಿಯಲ್ಲಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
ಜನ ಗಣ ಮನ - ನೆಟ್ಫ್ಲಿಕ್ಸ್
ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಥ್ರಿಲ್ಲರ್ ಸಿನಿಮಾ 'ಜನ ಗಣ ಮನ'. ಈ ಸಿನಿಮಾ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ಕಾಲೇಜು ಪ್ರಾಧ್ಯಾಪಕನ ಹತ್ಯೆಯು ವಿಶ್ವವಿದ್ಯಾಲಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಾನೆ. ಮತ್ತೊಂದೆಡೆ, ಒಬ್ಬ ವಕೀಲ ನ್ಯಾಯಾಲಯದಲ್ಲಿ ಹೋರಾಡುತ್ತಾನೆ. ಇವರಿಬ್ಬರಲ್ಲಿ ಯಾರಿಗೆ ಗೆಲುವು ದಕ್ಕುತ್ತದೆ ಎಂಬುದೇ ಈ ಸಿನಿಮಾದ ಕಥೆ.
ಲೂಸಿಫರ್ - ಅಮೆಜಾನ್ ಪ್ರೈಮ್ ವೀಡಿಯೋ
ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಮೊದಲ ಸಿನಿಮಾ ಲೂಸಿಫರ್. ಇತ್ತೀಚೆಗೆ ಬಿಡುಗಡೆಯಾದ ಎಲ್2: ಎಂಪುರಾನ್ ಸಿನಿಮಾ ಇದರ ಮುಂದುವರಿದ ಭಾಗವಾಗಿದೆ. ಲೂಸಿಫರ್ ಒಂದು ಪೊಲಿಟಿಕಲ್ ಥ್ರಿಲ್ಲರ್ ಜಾನರ್ನ ಸಿನಿಮಾ. ರಾಜ್ಯದ ಮುಖ್ಯಮಂತ್ರಿಯ ಮರಣದಿಂದಾಗಿ ಆ ಸ್ಥಾನಕ್ಕಾಗಿ ಹೋರಾಟ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಲೂಸಿಫರ್ ಕಾಣಿಸಿಕೊಳ್ಳುತ್ತಾನೆ. ಈ ಚಿತ್ರದಲ್ಲಿ ಮಸೂದ್ ಪಾತ್ರದಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ.
ಕೋಲ್ಡ್ ಕೇಸ್ - ಅಮೆಜಾನ್ ಪ್ರೈಮ್ ವೀಡಿಯೋ
ಪೃಥ್ವಿರಾಜ್ ಸುಕುಮಾರನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಕೋಲ್ಡ್ ಕೇಸ್'. ಇದು ಒಂದು ಕ್ರೈಂ ಥ್ರಿಲ್ಲರ್ ಜಾನರ್ನ ಸಿನಿಮಾ. ಒಂದು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಚಿತ್ರ ಸಾಗುತ್ತದೆ. ಈ ಪ್ರಕರಣವನ್ನು ಪೊಲೀಸ್ ಅಧಿಕಾರಿ ಮತ್ತು ಪತ್ರಕರ್ತ ಏಕಕಾಲದಲ್ಲಿ ತನಿಖೆ ಮಾಡುತ್ತಾರೆ. ಅಂತಿಮವಾಗಿ ಈ ಪ್ರಕರಣ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥೆ.
ತಲಪ್ಪಾವು - ಸನ್ ನೆಕ್ಸ್ಟ್ ಒಟಿಟಿ
ಪೃಥ್ವಿರಾಜ್ ನಕ್ಸಲೈಟ್ ಪಾತ್ರದಲ್ಲಿ ನಟಿಸಿರುವ ಥ್ರಿಲ್ಲರ್ ಚಲನಚಿತ್ರ 'ತಲಪ್ಪಾವು'. 2008 ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ.ನಕ್ಸಲೈಟ್ ಕಾಮ್ರೇಡ್ ಜೋಸೆಫ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ.
ಅರ್ಜುನನ್ ಸಾಕ್ಷಿ - ಸನ್ ನೆಕ್ಸ್ಟ್ ಒಟಿಟಿ
ಈ 'ಅರ್ಜುನನ್ ಸಾಕ್ಷಿ' ಸಿನಿಮಾ ಸಹ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದಲ್ಲಿ ಜಾಯ್ ಮಾಥ್ಯೂ ಎಂಬ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಅವರನ್ನು ಹೈ ಪ್ರೊಫೈಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಅರ್ಜುನ್ ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಆದರೆ, ಮೃತ ವ್ಯಕ್ತಿಗೆ ನ್ಯಾಯ ದೊರೆಯಲು ಜಾಯ್ ಮಾಥ್ಯೂ, ಅರ್ಜುನ್ ಆಗಿ ಬದಲಾಗುತ್ತಾನೆ.