Zee Kannada Serial TRP: ವಾರ ಕಳೆದಂತೆ ಟಿಆರ್ಪಿಯಲ್ಲಿ ಹೆಚ್ಚು ಶೈನ್ ಆಗ್ತಿದೆ ಹೊಸ ಸೀರಿಯಲ್! ಅಮೃತಧಾರೆ ಸೀರಿಯಲ್ ಮಹಾಕುಸಿತ
ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಲಕ್ಷ್ಮೀ ನಿವಾಸ, ಶ್ರೀರಸ್ತು ಶುಭಮಸ್ತು, ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗಳ 9ನೇ ವಾರದ ಟಿಆರ್ಪಿ ಲೆಕ್ಕಾಚಾರ ಹೀಗಿದೆ.

Zee Kannada Serial TRP: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡದ ಸೀರಿಯಲ್ಗಳ ಪೈಕಿ ಒಂಭತ್ತನೇ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು? ಯಾವ ಸೀರಿಯಲ್ ಟಾಪ್, ಯಾವುದು ಕೊನೆಗೆ? ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಲಕ್ಷ್ಮೀ ನಿವಾಸ, ಶ್ರೀರಸ್ತು ಶುಭಮಸ್ತು, ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗಳ 9ನೇ ವಾರದ ಟಿಆರ್ಪಿ ಲೆಕ್ಕಾಚಾರ ಹೀಗಿದೆ.
- ನಾ ನಿನ್ನ ಬಿಡಲಾರೆ
ದೈವ ಶಕ್ತಿ ವರ್ಸಸ್ ದುಷ್ಟ ಶಕ್ತಿ ಈ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ನಾ ನಿನ್ನ ಬಿಡಲಾರೆ ಸೀರಿಯಲ್ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ. ಟಿಆರ್ಪಿಯಲ್ಲಿಯೂ ಮುಂದಡಿ ಇರಿಸಿರುವ ಈ ಸೀರಿಯಲ್, ಒಂಬತ್ತನೇ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಅದರಂತೆ, 8.5 ಟಿಆರ್ಪಿ ಪಡೆದು ಮೊದಲ ಸ್ಥಾನದಲ್ಲಿದೆ.
- ಶ್ರಾವಣಿ ಸುಬ್ರಮಣ್ಯ
ಇನ್ನು ಈ ವರ್ಷದ ಆರಂಭದಿಂದ ಒಟ್ಟು ನಾಲ್ಕು ವಾರಗಳ ಕಾಲ ಸತತವಾಗಿ ನಂಬರ್ 1 ಪಟ್ಟದಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಸೀರಿಯಲ್, ಕುಸಿತ ಕಾಣುತ್ತಿದೆ. ಎಂಟನೇ ವಾರವೂ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದ್ದ ಈ ಸೀರಿಯಲ್, ಇದೀಗ ಒಂಬತ್ತನೇ ವಾರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸೀರಿಯಲ್ಗೆ 7.7 ಟಿಆರ್ಪಿ ಸಿಕ್ಕಿದೆ. ನಗರ ಪ್ರದೇಶದಲ್ಲಿ ಈ ಸೀರಿಯಲ್ 6.8 ಟಿಆರ್ಪಿ ಪಡೆದಿದೆ.
- ಅಣ್ಣಯ್ಯ
ಅದೇ ರೀತಿ ನೋಡುಗರಿಗೆ ಹೊಸತನದ ತಾಜಾ ಅನುಭವ ನೀಡುತ್ತಿರುವ ಜೀ ಕನ್ನಡದ ಇನ್ನೊಂದು ಸೀರಿಯಲ್ ಅಣ್ಣಯ್ಯ. ಈ ಸೀರಿಯಲ್ ಎಂಟನೇ ವಾರದ ಟಿಆರ್ಪಿಯಲ್ಲಿ 8.4 ಟಿಆರ್ಪಿ ಪಡೆದು ಮೊದಲ ಸ್ಥಾನದಲ್ಲಿತ್ತು. ಇದೀಗ ಇದೇ ಸೀರಿಯಲ್ ಒಂಬತ್ತನೇ ವಾರಕ್ಕೆ 7.7 ಟಿಆರ್ಪಿ ಪಡೆದು ಮೂರನೇ ಸ್ಥಾನಕ್ಕೆ ಬಂದಿದೆ. ನಗರ ಪ್ರದೇಶದಲ್ಲಿ ಈ ಸೀರಿಯಲ್ 6.7 ಟಿಆರ್ಪಿ ಪಡೆದಿದೆ.
- ಲಕ್ಷ್ಮೀ ನಿವಾಸ
ಒಂದು ಗಂಟೆಯ ಸಂಚಿಕೆಯ ಮೂಲಕ ಹಲವು ಕಥೆಗಳನ್ನು ವೀಕ್ಷಕರ ಮುಂದಿಡುತ್ತಿರುವ ಜೀ ಕನ್ನಡದ ಮತ್ತೊಂದು ಮೆಗಾ ಧಾರಾವಾಹಿ ಲಕ್ಷ್ಮೀ ನಿವಾಸ. ಈ ಸೀರಿಯಲ್ ಒಂಬತ್ತನೇ ವಾರ 7.4 ಟಿಆರ್ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.
- ಬ್ರಹ್ಮಗಂಟು
ರಾತ್ರಿ 10 ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಸೀರಿಯಲ್, 9ನೇ ವಾರದ ಟಿಆರ್ಪಿಯಲ್ಲಿ ಕಮಾಲ್ ಮಾಡಿದೆ. ಈ ಮೊದಲು ಟಾಪ್ 10ರಲ್ಲಿ ಕಾಣಿಸುತ್ತಿದ್ದ ಈ ಸೀರಿಯಲ್ ಇದೀಗ ಟಾಪ್ ಐದರ ಅಂಗಳಕ್ಕೆ ಕಾಲಿರಿಸಿದೆ. 6.4 ಟಿಆರ್ಪಿ ಪಡೆದು ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ.
- ಅಮೃತಧಾರೆ
ರೋಚಕ ಟ್ವಿಸ್ಟ್ ಮೂಲಕ ಗಮನ ಸೆಳೆಯುತ್ತಿರುವ ಅಮೃತಧಾರೆ ಸೀರಿಯಲ್ ಇದೀಗ ಟಿಆರ್ಪಿಯಲ್ಲಿ ಮಹಾ ಕುಸಿತ ಕಂಡಿದೆ. ಈ ಹಿಂದೆ ನಂಬರ್ ಒನ್ ಸ್ಥಾನ ಮುಟ್ಟಿ ಬಂದಿದ್ದ ಈ ಸೀರಿಯಲ್, ಒಂಬತ್ತನೇ ವಾರ 6.0 ಟಿಆರ್ಪಿ ಪಡೆದು, ಆರನೇ ಸ್ಥಾನದಲ್ಲಿದೆ.
- ಪುಟ್ಟಕ್ಕನ ಮಕ್ಕಳು
ಒಂದು ಕಾಲದ ನಂಬರ್ ಒನ್ ಧಾರಾವಾಹಿ ಎನಿಸಿಕೊಂಡಿದ್ದ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್, ಹೊಸ ಸೀರಿಯಲ್ಗಳ ಮುಂದೆ ಪುಟಿದೇಳಲು ಹೆಣಗಾಡುತ್ತಿದೆ. ಈ ಸೀರಿಯಲ್ 4.7 ಟಿಆರ್ಪಿ ರೇಟಿಂಗ್ ಪಡೆದು ಏಳನೇ ಸ್ಥಾನದಲ್ಲಿದೆ.
- ಶ್ರೀರಸ್ತು ಶುಭಮಸ್ತು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಆರಕ್ಕೇರದೆ, ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಪ್ರತಿ ವಾರ 3.0 ಟಿಆರ್ಪಿ ಪಡೆದು, ಎಂಟನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.
- ಸೀತಾ ರಾಮ
ಜೀ ಕನ್ನಡದ ಜೋಡಿ ಜೀವಗಳ ಪ್ರೇಮಕಥೆ ಸೀತಾ ರಾಮ ಇದೀಗ, ಸಮಯ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಟಿಆರ್ಪಿಯಲ್ಲಿ ಮೇಲಕ್ಕೆ ಏಳದ ಈ ಸೀರಿಯಲ್, ಒಂಬತ್ತನೇ ವಾರ ಕೇವಲ 2.6 ಟಿಆರ್ಪಿ ಪಡೆದು, 9ನೇ ಸ್ಥಾನದಲ್ಲಿದೆ.

ವಿಭಾಗ