ʻಶ್ರಾವಣಿ ಸುಬ್ರಮಣ್ಯʼ ಕಡೆಯಿಂದ ನಂಬರ್ 1 ಸ್ಥಾನ ಕಸಿದುಕೊಂಡ ಹೊಸ ಸೀರಿಯಲ್; ಜೀ ಕನ್ನಡದ ಟಾಪ್ ಧಾರಾವಾಹಿಗಳಿವು
ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೀಗ ನಂಬರ್ 1 ಸ್ಥಾನದಿಂದ ಕೆಳಗಿಳಿದಿದೆ. ಆ ಸ್ಥಾನಕ್ಕೆ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ ಆಗಮಿಸಿದೆ. ಹಾಗಾದರೆ ಟಿಆರ್ಪಿ ಲೆಕ್ಕಾಚಾರದಲ್ಲಿ ಜೀ ಕನ್ನಡದ ಟಾಪ್ ಧಾರಾವಾಹಿಗಳು ಯಾವವು? ಇಲ್ಲಿದೆ ಮಾಹಿತಿ.

17ನೇ ವಾರದ ಟಿಆರ್ಪಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಂಬ್ಯಾಕ್ ಮಾಡಿದೆ ಮೂರು ತಿಂಗಳ ಹಿಂದಷ್ಟೇ ಶುರುವಾಗಿರುವ ಸೀರಿಯಲ್. ಲಾಂಚ್ ಆದ ವಾರದಿಂದ ಹಿಡಿದು ಸತತ ಮೂರು ವಾರ ಟಾಪ್ನಲ್ಲಿದ್ದ ʻನಾ ನಿನ್ನ ಬಿಡಲಾರೆʼ ಧಾರಾವಾಹಿ, ಅದಾದ ಮೇಲೆ 2 ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದೀಗ ಟಾಪ್ ಸ್ಥಾನಕ್ಕೆ ಮತ್ತೆ ಆಗಮಿಸಿದೆ. ಈ ಮೂಲಕ ನಂಬರ್ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿಯೇ ನಿಲ್ಲುತ್ತಿದ್ದ ʻಶ್ರಾವಣಿ ಸುಬ್ರಮಣ್ಯʼ ಸೀರಿಯಲ್ ಕುಸಿತ ಕಂಡಿದೆ.
ಟಾಪ್ ಸ್ಥಾನಕ್ಕೆ ಲಗ್ಗೆ ಇಟ್ಟ ಹಾರರ್ ಧಾರಾವಾಹಿ..
ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗದ ಮೂಲಕ ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ಧಾರಾವಾಹಿ ʻನಾ ನಿನ್ನ ಬಿಡಲಾರೆʼ. ಆರಂಭದ ಎರಡು ವಾರ ಟಾಪ್ ಟಿಆರ್ಪಿ ಪಡೆದ ಈ ಸೀರಿಯಲ್, ಅದಾದ ಮೇಲೆ ಮೊದಲ ಸ್ಥಾನಕ್ಕೆ ಏರಲು ಕೊಂಚ ತಡಕಾಡಿತು. ಎರಡು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿದ್ದು ಹೆಚ್ಚು . ಆಗೊಮ್ಮೆ ಈಗೊಮ್ಮೆ ಟಾಪ್ ಸ್ಥಾನಕ್ಕೆ ಬಂದು ಹೋಗಿತ್ತು. ಇದೀಗ ಮಗದೊಮ್ಮೆ ಅಗ್ರಸ್ಥಾನಕ್ಕೆ ಬಂದಿದೆ. 7.2 (ನಗರ ಪ್ಲಸ್ ಗ್ರಾಮೀಣ) ಟಿಆರ್ಪಿ ಪಡೆವ ಮೂಲಕ ಕೂದಲೆಳೆ ಅಂತರದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.
ಅಣ್ಣಯ್ಯನಿಗೂ ಅಷ್ಟೇ ರೇಟಿಂಗ್
ಜೀ ಕನ್ನಡದ ಇನ್ನೊಂದು ಟಾಪ್ ಸೀರಿಯಲ್ ಎಂದರೆ ಅದು ಅಣ್ಣಯ್ಯ. ರೋಚಕ ಟ್ವಿಸ್ಟ್ ಮೂಲಕ ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಈ ಸೀರಿಯಲ್ 17ನೇ ವಾರದ ಟಿಆರ್ಪಿಯಲ್ಲಿ ಕಮಾಲ್ ಮಾಡಿದೆ. ನಾ ನಿನ್ನ ಬಿಡಲಾರೆ ಧಾರಾವಾಹಿಯಿಂದ ಚೂರೇ ಚೂರು ಅಂತರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಣ್ಣಯ್ಯ ಸೀರಿಯಲ್ಗೆ 7.2 (ನಗರ ಪ್ಲಸ್ ಗ್ರಾಮೀಣ) ಟಿವಿಆರ್ ಸಿಕ್ಕರೂ, ಗ್ರಾಮೀಣ ಭಾಗದಲ್ಲಿ ಈ ಧಾರಾವಾಹಿ 6.0 ರೇಟಿಂಗ್ ಪಡೆದಿದೆ. ʻನಾ ನಿನ್ನ ಬಿಡಲಾರೆʼ ಸೀರಿಯಲ್ ಗ್ರಾಮೀಣ ಭಾಗದಲ್ಲಿ 6.3 ರೇಟಿಂಗ್ ಪಡೆದು ಮುಂದಡಿ ಇರಿಸಿದೆ.
ಶ್ರಾವಣಿ ಸುಬ್ರಮಣ್ಯನಿಗೆ 3ನೇ ಸ್ಥಾನ
ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಸತತವಾಗಿ ಮೊದಲ ಸ್ಥಾನದಲ್ಲಿಯೇ ಸಾಗುತ್ತಿತ್ತು. ಇದೀಗ 17ನೇ ವಾರ ಆ ಓಟಕ್ಕೆ ಬ್ರೇಕ್ ಬಿದ್ದಿದೆ. 7.1 ಟಿಆರ್ಪಿ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಗ್ರಾಮೀಣ ಭಾಗದಲ್ಲಿ 6.0 ರೇಟಿಂಗ್ ಪಡೆದಿದೆ ಈ ಸೀರಿಯ. ಇನ್ನುಳಿದಂತೆ, ಒಂದು ಗಂಟೆಯ ಮೆಗಾ ಧಾರಾವಾಹಿ ʻಲಕ್ಷ್ಮೀ ನಿವಾಸʼ 6.5 ಟಿಆರ್ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವಾರಗಳಿಂದ ಈ ಧಾರಾವಾಹಿಯೂ ಮೊದಲ ಸ್ಥಾನಕ್ಕೆ ಆಗಮಿಸಿಲ್ಲ.
ಅಮೃತಧಾರೆಗೆ ಸಿಕ್ಕ ನಂಬರ್ಸ್ ಎಷ್ಟು?
ಇನ್ನು ಕಿರುತೆರೆ ವೀಕ್ಷಕರ ಇಷ್ಟದ ಸೀರಿಯಲ್ಗಳಲ್ಲಿ ಒಂದಾದ ಅಮೃತಧಾರೆ ಸಹ ಮೊದಲಿನಂತೆ ಮೋಡಿ ಮಾಡುತ್ತಿಲ್ಲ. ಈ ಮೊದಲೆಲ್ಲ 7 ಟಿಆರ್ಪಿ ಪಡೆಯುತ್ತಿದ್ದ ಈ ಸೀರಿಯಲ್, 17ನೇ ವಾರದ ಟಿಆರ್ಪಿಯಲ್ಲಿ 5.9 ರೇಟಿಂಗ್ಸ್ ಪಡೆದಿದೆ. ಈ ಮೂಲಕ ಐದನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ʻಬ್ರಹ್ಮಗಂಟುʼ ಸೀರಿಯಲ್ ಆರನೇ ಸ್ಥಾನದಲ್ಲಿದೆ. ಈ ಧಾರಾವಾಹಿ 5.3 ಟಿಆರ್ಪಿ ಪಡೆದಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ 4.6 ಟಿಆರ್ಪಿ ಪಡೆದು ಏಳನೇ ಸ್ಥಾನದಲ್ಲಿದೆ.
ಇನ್ನು ಮುಕ್ತಾಯದ ಹಂತಕ್ಕೆ ತಲುಪಿರುವ ಸೀರಿಯಲ್ಗಳೆಂದರೆ ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ. ಈ ಎರಡು ಸೀರಿಯಲ್ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 2.6 ಟಿಆರ್ಪಿ ಪಡೆದು ಎಂಟನೇ ಸ್ಥಾನದಲ್ಲಿದರೆ, ಸೀತಾ ರಾಮ ಧಾರಾವಾಹಿ 2.0 ಟಿಆಪಿ ಪಡೆದು ಕೊನೇ ಮತ್ತು 9ನೇ ಸ್ಥಾನದಲ್ಲಿದೆ.
ಜೀ ಕನ್ನಡದ ಧಾರಾವಾಹಿಗಳ 17ನೇ ವಾರದ ಟಿಆರ್ಪಿ
- ನಾ ನಿನ್ನ ಬಿಡಲಾರೆ 7.2
- ಅಣ್ಣಯ್ಯ 7.2
- ಶ್ರಾವಣಿ ಸುಬ್ರಮಣ್ಯ 7.1
- ಲಕ್ಷ್ಮೀ ನಿವಾಸ 6.5
- ಅಮೃತಧಾರೆ 5.9
- ಬ್ರಹ್ಮಗಂಟು 5.3
- ಪುಟ್ಟಕ್ಕನ ಮಕ್ಕಳು 4.6
- ಶ್ರೀರಸ್ತು ಶುಭಮಸ್ತು 2.6
- ಸೀತಾ ರಾಮ 2.0
ವಿಭಾಗ