ಕನ್ನಡ ಸುದ್ದಿ  /  Entertainment  /  Navarasa Nayaka Jaggesh Tweet About Bangalore Rain Actor Jaggesh Tweet Actor Jaggesh Bmw 5 Car Drowned For Rain Rsm

Jaggesh: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಟ ಜಗ್ಗೇಶ್‌ ಐಷಾರಾಮಿ ಕಾರು ಮುಳುಗಡೆ; ಮಳೆ ಅವಾಂತರದ ಬಗ್ಗೆ ಟ್ವೀಟ್‌

ಬೆಂಗಳೂರಿನ ಅನೇಕ ಕಡೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಮನೆ ಗೋಡೆಗಳು, ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನವರಸನಾಯಕ ಜಗ್ಗೇಶ್‌ ಅವರ ಐಷಾರಾಮಿ ಕಾರು ಕೂಡಾ ನೀರಿನಲ್ಲಿ ಮುಳುಗಿದ್ದು ಇದರ ಸಂಬಂಧ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಧಾರಾಕಾರ ಮಳೆಗೆ ಜಗ್ಗೇಶ್‌ ಕಾರು ಮುಳುಗಡೆ
ಧಾರಾಕಾರ ಮಳೆಗೆ ಜಗ್ಗೇಶ್‌ ಕಾರು ಮುಳುಗಡೆ

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್‌ ತಮ್ಮ ಸಿನಿಮಾಗಳು ಹಾಗೂ ರಾಜಕೀಯ ಜೀವನದ ಅನೇಕ ವಿಚಾರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಆ ವಿಚಾರವನ್ನು ಕೂಡಾ ಜಗ್ಗೇಶ್‌ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಲವ್‌ ಬರ್ಡ್ಸ್‌ ವಿವಾದ; ಸಂಭಾವನೆ ಕೊಟ್ಟಿಲ್ಲ ಎಂದು ದೂರಿದ ನಿರ್ದೇಶಕ ಪಿಸಿ ಶೇಖರ್‌

ಸಿಲಿಕಾನ್‌ ಸಿಟಿಯಲ್ಲಿ ಶನಿವಾರ ಹಾಗೂ ಭಾನುವಾರ ಭಾರೀ ಮಳೆ ಸುರಿದಿದೆ. ರಾಜಾಜಿನಗರದಲ್ಲಿ 37 ಮಿಲಿ ಮೀಟರ್‌, ನಂದಿನಿ ಲೇ ಔಟ್‌ನಲ್ಲಿ 48 ಮಿಮೀ, ಕಾಟನ್‌ಪೇಟೆಯಲ್ಲಿ 33 ಮಿಮೀ ಹೀಗೆ ಒಂದೊಂದು ಕಡೆಯ ಮಳೆಯ ಪ್ರಮಾಣವನ್ನು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಮಳೆ, ಯುವತಿಯೊಬ್ಬರನ್ನು ಬಲಿ ಪಡೆದಿದೆ. ನಗರದ ಕೆಆರ್ ಸರ್ಕಲ್‌ ಬಳಿಯ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ಕಾರು ಮುಳುಗಡೆಯಾಗಿದ್ದು ಹೈದರಾಬಾದ್ ಮೂಲದ ಯುವತಿ ಮೃತಪಟ್ಟಿದ್ದಾರೆ. ಮೃತಪಟ್ಟ ಯವತಿಯನ್ನು ಬೆಂಗಳೂರಿನ ಇನ್ಫೋಸಿಸ್‌ ಉದ್ಯೋಗಿ ಭಾನುರೇಖ ಎಂದು ಗುರುತಿಸಲಾಗಿದೆ.

ಜೊತೆ ಜೊತೆಯಲಿ ಧಾರಾವಾಹಿ ಅಂತ್ಯ, ಇನ್ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ಹರಿಸುತ್ತೇನೆ; ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಇದರ ಜೊತೆಗೆ ಬೆಂಗಳೂರಿನ ಅನೇಕ ಕಡೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಮನೆ ಗೋಡೆಗಳು, ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನವರಸನಾಯಕ ಜಗ್ಗೇಶ್‌ ಅವರ ಐಷಾರಾಮಿ ಕಾರು ಕೂಡಾ ನೀರಿನಲ್ಲಿ ಮುಳುಗಿದ್ದು ಇದರ ಸಂಬಂಧ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ. ''ಮನೆಯ ರಿಪೇರಿ ಕಾರ್ಯ ನಡೆಯುತ್ತಿದ್ದರಿಂದ ತಮ್ಮ ಬಿಎಂಡಬ್ಲ್ಯೂ5 ಕಾರನ್ನು ಸ್ನೇಹಿತ ಮುರಳಿ ಮನೆಯ ಸೆಲ್ಲಾರ್‌ನಲ್ಲಿ ನಿಲ್ಲಿಸಿದ್ದೆ. ಆದರೆ ಅಕಾಲಿಕ ಮಳೆಯಿಂದ ಕಾರು ಮುಳುಗಡೆ ಆಯ್ತು. 5ಹೆಚ್‌ಪಿ ಮೋಟಾರ್‌ ಬಳಸಿ ನೀರನ್ನು ಹೊರ ಹಾಕಲಾಯ್ತು. ಇಂಥಹ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ'' ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ.

ರಾಜಕಾರಣಿಗಳು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ 30 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ; ಕಂಗನಾ ರನೌತ್‌

ಜಗ್ಗೇಶ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಅವರು ಅಭಿನಯಿಸಿದ್ದ 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾ ತೆರೆ ಕಂಡಿತ್ತು. ಕಳೆದ ವಾರ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋ ಒಟಿಟಿ ಕೂಡಾ ಪ್ರವೇಶಿಸಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶಿಸಿದ್ದಾರೆ. ಜಗ್ಗೇಶ್‌ಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್‌ ನಟಿಸಿದ್ದಾರೆ. 40 ಕಳೆದರೂ ಮದುವೆ ಆಗದ, ಹೋಟೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಜನರು ಹೇಗೆ ಹೀಯಾಳಿಸುತ್ತಾರೆ. ಮದುವೆ ಆದ ನಂತರ ತನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ಆತ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕಥೆ.

ಪ್ರೇಮಲೋಕದ ಪಾರಿಜಾತಕ್ಕೆ ಈಗ ವಯಸ್ಸು 49; ಹಳೆಯ ಹಾಟ್‌ ಫೋಟೋಗಳನ್ನು ಹಂಚಿಕೊಂಡ ಜಾಣ ಸಿನಿಮಾ ನಟಿ ಕಸ್ತೂರಿ ಶಂಕರ್‌

ಇದನ್ನು ಹೊರತುಪಡಿಸಿ ಜಗ್ಗೇಶ್‌ 'ರಂಗನಾಯಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಠ ಖ್ಯಾತಿಯ ಗುರುಪ್ರಸಾದ್‌ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಚಿತ ಮಹಾಲಕ್ಷ್ಮಿ ಜಗ್ಗೇಶ್‌ಗೆ ಜೋಡಿ ಆಗಿದ್ದಾರೆ. ಸಿನಿಮಾ ಶೂಟಿಂಗ್‌ ಹಂತದಲ್ಲಿದೆ.

IPL_Entry_Point

ವಿಭಾಗ