ಕನ್ನಡ ಸುದ್ದಿ  /  Entertainment  /  Netizens Comments About Pooja Hegde Cosmetic Surgery Decision

Pooja hegde Cosmetic surgery:ಸುಂದರವಾಗಿದ್ದೀರಿ, ಸರ್ಜರಿ ಎಲ್ಲಿಗೆ, ಏಕೆ ಅಂತಿದ್ದಾರೆ ನೆಟಿಜನ್ಸ್‌..ಪೂಜಾ ನಿರ್ಧಾರಕ್ಕೆ ಕಾರಣವೇನು?

ಈ ಸುದ್ದಿ ತಿಳಿದ ನೆಟಿಜನ್ಸ್‌, ವಿಭಿನ್ನ‌ ಕಮೆಂಟ್‌ ಮಾಡುತ್ತಿದ್ದಾರೆ. ನೀವು ಈಗಲೇ ಬಹಳ ಸುಂದರವಾಗಿದ್ದೀರ, ನಿಮ್ಮ ಮೂಗು ಕೂಡಾ ಚೆನ್ನಾಗಿದೆ. ಅನಾವಶ್ಯಕವಾಗಿ ಪ್ಲಾಸ್ಟಿಕ್‌ ಸರ್ಜರಿ ಬೇಡ ಎನ್ನುತ್ತಿದ್ದಾರೆ.

ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರಂತೆ ಪೂಜಾ ಹೆಗ್ಡೆ
ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರಂತೆ ಪೂಜಾ ಹೆಗ್ಡೆ

ಕರಾವಳಿ ಹುಡುಗಿ ಪೂಜಾ ಹೆಗ್ಡೆ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಈ ಚೆಲುವೆ ಈಗ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸ್ಟಾರ್‌ ನಟರ ಜೊತೆ ನಟಿಸಿದರೂ ಪೂಜಾ ಹೆಗ್ಡೆಗೆ ಬ್ರೇಕ್‌ ಸಿಕ್ಕಿಲ್ಲ. ಇದಕ್ಕಾಗಿ ಬೇಸರಗೊಂಡಿರುವ ಪೂಜಾ ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರಂತೆ.

ಚಿತ್ರರಂಗದಲ್ಲಿ ಸೌಂದರ್ಯವೇ ಮುಖ್ಯ. ಪ್ರತಿಭೆಗಿಂತ ಗ್ಲಾಮರ್‌ಗೆ ಹೆಚ್ಚಾಗಿ ಪ್ರಾಮುಖ್ಯತೆ ಕೊಡ್ತಾರೆ. ಅದಕ್ಕಾಗಿ ಪೂಜಾ ಹೆಗ್ಡೆ, ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ನಿರ್ಧಾರ ಮಾಡಿದ್ದಾರಂತೆ. ಅದಕ್ಕಾಗಿ ರೈನೋಪ್ಲಾಸ್ಟಿ ಮಾಡಿಸಿಕೊಳ್ಳಲು ಹೊರಟಿದ್ದಾರಂತೆ. ಹಾಗಂತ ಒಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ತಿಳಿದ ನೆಟಿಜನ್ಸ್‌, ವಿಭಿನ್ನ‌ ಕಮೆಂಟ್‌ ಮಾಡುತ್ತಿದ್ದಾರೆ. ನೀವು ಈಗಲೇ ಬಹಳ ಸುಂದರವಾಗಿದ್ದೀರ, ನಿಮ್ಮ ಮೂಗು ಕೂಡಾ ಚೆನ್ನಾಗಿದೆ. ಅನಾವಶ್ಯಕವಾಗಿ ಪ್ಲಾಸ್ಟಿಕ್‌ ಸರ್ಜರಿ ಬೇಡ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಸಿನಿಮಾದಲ್ಲಿ ಚೆನ್ನಾಗಿ ಆಕ್ಟ್‌ ಮಾಡಿ, ನಿಮ್ಮೊಂದಿಗೆ 12 ಮಂದಿ ಹೆಲ್ಪರ್ಸ್‌ ಕರೆದೊಯ್ಯುವುದನ್ನು ಬಿಡಿ, ಸಿನಿಮಾ ಖಂಡಿತ ಸಕ್ಸಸ್‌ ಆಗುತ್ತೆ ಅಂತ ಬುದ್ಧಿ ಮಾತು ಹೇಳುತ್ತಿದ್ದಾರೆ.

ಬ್ರೇಕ್‌ಗಾಗಿ ಕಾಯುತ್ತಿರುವ ಪೂಜಾಗೆ ಸತತ ಸೋಲು ಕಾಡುತ್ತಿದೆ. ಆಕೆ ಎಲ್ಲಿ ಶೂಟಿಂಗ್‌ ಹೋದರೂ ಹೇರ್‌ ಸ್ಟೈಲಿಸ್ಟ್‌, ಮೇಕಪ್‌ ಮ್ಯಾನ್‌, ಕಾಸ್ಟ್ಯೂಮ್‌ ಡಿಸೈನರ್‌ ಎಂದು ಒಟ್ಟು 12 ಮಂದಿಯನ್ನು ತಮ್ಮೊಂದಿಗೆ ಕರೆ ತರುತ್ತಾರೆ. ಇದು ನಿರ್ಮಾಪಕರಿಗೆ ಬಹಳ ಹೊರೆಯಾಗುತ್ತಿದೆ ಎಂಬ ಆರೋಪ ಕೂಡಾ ಆಕೆ ಮೇಲಿದೆ. ಜೊತೆಗೆ ಪೂಜಾಗೆ ಅದೃಷ್ಟ ಕೈ ಕೊಟ್ಟಿದೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿರುವುದು ಆಕೆಗೆ ಬೇಸರವಾಗಿದೆಯಂತೆ. ಅದಕ್ಕಾಗಿ ಆಕೆ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಕಾಸ್ಮೆಟಿಕ್ಸ್‌ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪೂಜಾ ಹೆಗ್ಡೆ ನಿಜಕ್ಕೂ ರೈನೋಪ್ಲಾಸ್ಟಿ ಮಾಡಿಸಿಕೊಳ್ಳುವುದೇ ಆದಲ್ಲಿ, ಅದರಿಂದ ಆಕೆಯ ಸಿನಿಮಾಗಳು ಗೆಲ್ಲಲಿದ್ಯಾ ಅನ್ನೋದನ್ನು ಕಾದು ನೋಡಬೇಕಿದೆ.

ಕೆಲವು ದಿನಗಳ ಹಿಂದಷ್ಟೇ ಮನೆ ದೇವರ ದೇವಾಲಯಕ್ಕೆ ಭೇಟಿ ನೀಡಿದ್ದ ಪೂಜಾ ಹೆಗ್ಡೆ

ಈ ವರ್ಷ, ಪ್ರಭಾಸ್‌ ಜೊತೆಗೆ ಅಭಿನಯಿಸಿದ್ದ 'ರಾಧೇಶ್ಯಾಮ್', ವಿಜಯ್‌ ಜೊತೆಗೆ ನಟಿಸಿದ್ದ ತಮಿಳಿನ 'ಬೀಸ್ಟ್‌' ಮತ್ತು ಚಿರಂಜೀವಿ ರಾಮ್‌ ಚರಣ್‌ ತೇಜ ನಟನೆಯ 'ಆಚಾರ್ಯ' ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಈ ಬಹುನಿರೀಕ್ಷಿತ ಸಿನಿಮಾಗಳು ಸೋಲು ಕಂಡಿದ್ದವು. ಅದರಲ್ಲೂ ಆಚಾರ್ಯ ಸಿನಿಮಾ ನಿರ್ಮಾಪಕರಿಗೆ, ವಿತರಕರಿಗೆ ಭಾರೀ ನಷ್ಟ ಉಂಟು ಮಾಡಿತ್ತು. ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆ ಇತ್ತೀಚೆಗೆ ಮನೆ ದೇವರ ದರ್ಶನ ಮಾಡಿದ್ದರು. ಮೂಲತಃ ಉಡುಪಿ ಜಿಲ್ಲೆ ಕಾರ್ಕಳದವರಾದ ಪೂಜಾ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಕೂಡಾ ಉಡುಪಿಯ ಕಾಪು ತಾಲೂಕಿನಲ್ಲಿರುವ ಮನೆ ದೇವರಾದ ಮಾರಿಗುಡಿಗೆ ಕುಟುಂಬದ ಸಮೇತ ಆಗಮಿಸಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು.

ಸದ್ಯ ಪೂಜಾ ಕೈಯಲ್ಲಿ ಮೂರು ಸಿನಿಮಾಗಳಿವೆ. ತೆಲುಗಿನಲ್ಲಿ 'ಎಫ್‌3' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ, ಹಿಂದಿಯಲ್ಲಿ ರಣವೀರ್‌ ಸಿಂಗ್‌ ಜೊತೆಗೆ 'ಸರ್ಕಸ್‌' ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದರ ಜತೆಗೆ ತೆಲುಗಿನಲ್ಲಿ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಅವರ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

IPL_Entry_Point

ವಿಭಾಗ