ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ

ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ

ಅತಿಮಾನುಷ ಶಕ್ತಿ ಹಾಗೂ ದೈವಿಕ ಶಕ್ತಿಯ ನಡುವಿನ ಹೋರಾಟದ ಕಥೆಯನ್ನು ಹೊಂದಿರುವ, ತಮನ್ನಾ ಭಾಟಿಯಾ ಹಾಗೂ ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರದ ಆರಂಭ ಅದ್ಭುತವಾಗಿದ್ದರೂ ದ್ವಿತಿಯಾರ್ಧದಲ್ಲಿ ಜನರನ್ನು ಸೆಳೆಯುವಲ್ಲಿ ಸೋತಿದೆ. ಇಲ್ಲಿದೆ ಓದೆಲಾ 2 ಚಿತ್ರ ವಿಮರ್ಶೆ.

ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ
ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ

ಓದೆಲಾ 2 ಚಿತ್ರ ವಿಮರ್ಶೆ: ತಮನ್ನಾ ಭಾಟಿಯಾ ಹಾಗೂ ಕನ್ನಡ ನಟ ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಒದೆಲಾ 2‘ ಚಿತ್ರ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. 2022ರಲ್ಲಿ ಬಿಡುಗಡೆಯಾದ ‘ಓದೆಲಾ ರೈಲ್ವೆ ಸ್ಟೇಷನ್‘ ಚಿತ್ರದ ಮುಂದುವರಿದ ಭಾಗವಿದು. ತಮನ್ನಾ ಫಸ್ಟ್‌ ಲುಕ್ ಕೂಡ ಚಿತ್ರದ ಮೇಲೆ ಭರವಸೆ ಹುಟ್ಟಿಸಿತ್ತು. ಆದರೆ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಮೊದಲಾರ್ಧದಲ್ಲಿ ಕೌತುಕಗಳಿದ್ದರೂ, ದ್ವಿತಿಯಾರ್ಧ ಮಂಕಾಗಿದ್ದು ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಸೋತಿದೆ.

ಓದೆಲಾ 2 ಚಿತ್ರ ಕಥೆಯೇನು?

ರಾಧಾ (ಹೆಬಾ ಪಾಟೇಲ್‌) ತನ್ನ ಗಂಡನನ್ನು ಕೊಂದು ನಂತರ ಜೈಲಿಗೆ ಹೋಗುವುದರೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಅವನ ದೌರ್ಜನ್ಯದಿಂದ ಬೇಸತ್ತ ಗ್ರಾಮಸ್ಥರು ಅವನಿಗೆ ಸರಿಯಾದ ಅಂತ್ಯಕ್ರಿಯೆಯನ್ನು ಮಾಡಿರುವುದಿಲ್ಲ. ಅವನನ್ನು ಕ್ರೂರವಾಗಿ ಸುಟ್ಟು ಹಾಕುತ್ತಾರೆ. ಆದರೆ ಇದು ಆ ಗ್ರಾಮಸ್ಥರಿಗೆ ಶಾಪವಾಗುತ್ತದೆ. ಬಂಧ ಮುಕ್ತಗೊಳ್ಳುವ ತಿರುಪತಿಯ ಆತ್ಮವು ಓದೆಲಾ ಗ್ರಾಮದ ಒಬ್ಬೊಬ್ಬರನ್ನೇ ಕೊಲ್ಲಲ್ಲು ಆರಂಭಿಸುತ್ತದೆ. ಆಗ ಬೇರೆ ದಾರಿ ಕಾಣದ ಗ್ರಾಮಸ್ಥರು ದೈವಿಕ ಶಕ್ತಿ ಇರುವ ಒಬ್ಬ ಸಾಧುವನ್ನು (ತಮನ್ನಾ) ತಮ್ಮ ಊರಿಗೆ ಕರೆ ತರುತ್ತಾರೆ. ಆಕೆಯ ದೈವಿಕ ಶಕ್ತಿಯಿಂದ ಊರನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದೇ, ತಿರುಪತಿಯ ಆತ್ಮದ ಅಟ್ಟಹಾಸವನ್ನು ಸಾಧ್ವಿಗೆ ನಿಲ್ಲಿಸಲು ಸಾಧ್ಯವಾಗುವುದೇ, ದುಷ್ಟ ಶಕ್ತಿಯನ್ನು ಆಕೆ ಹೇಗೆ ಮಟ್ಟ ಹಾಕುತ್ತಾಳೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ.

ಒಡೆಲಾ ರೈಲ್ವೆ ಸ್ಟೇಷನ್ ಒಂದು ಹಳ್ಳಿಯ ಕಥೆಯಾಗಿದ್ದು ಇದು ನೇರವಾಗಿ ಒಟಿಟಿ ವೇದಿಕೆ ಆಹಾದಲ್ಲಿ ಬಿಡುಗಡೆಯಾಗುತ್ತದೆ. ಈ ಚಿತ್ರದಲ್ಲಿ ಸಾಕಷ್ಟು ರೋಚಕ ಅಂಶಗಳಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಸಂಪತ್ ನಂದಿ ಚಿತ್ರಕಥೆ ಇರುವ ಈ ಚಿತ್ರಕ್ಕೆ ಅಶೋಕ್ ತೇಜ ನಿರ್ದೇಶನವಿತ್ತು. ಈಗ ಅದೇ ತಂಡ ಓದೆಲಾ 2 ಮೂಲಕ ಬಂದಿದೆ. ಆದರೆ ಈ ಬಾರಿ ಅತಿಮಾನುಷ ಶಕ್ತಿ ಮತ್ತು ಪೌರಾಣಿಕ ಅಂಶಗಳನ್ನು ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆ.

ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದು, ಗ್ಲಾಮರ್ ಇಲ್ಲದ ಪಾತ್ರಕ್ಕೆ ತಮನ್ನಾ ಜೀವ ತುಂಬಿದ್ದಾರೆ. ಅಲ್ಲದೇ ಇಡೀ ಸಿನಿಮಾಕ್ಕೆ ಆಕೆಯೇ ಕೇಂದ್ರಬಿಂದು. ಚಿತ್ರದ ಮೊದಲಾರ್ಧದಲ್ಲಿ ಸಂಪೂರ್ಣವಾಗಿ ತಿರುಪತಿ ಆತ್ಮ ಹೇಗೆ ಬಂಧಮುಕ್ತಗೊಳ್ಳುತ್ತದೆ ಮತ್ತು ಹಳ್ಳಿಗರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರಲ್ಲಿ ನಿರ್ದೇಶಕರು ದೆವ್ವ ಜನರನ್ನು ಕೊಲ್ಲಲ್ಲು ಹೊಸ ಹೊಸ ವಿಧಾನಗಳನ್ನು ಅನುಸರಿಸುವುದನ್ನು ತೋರಿಸಿದ್ದಾರೆ.

ದ್ವೆವ ಹಾಗೂ ಊರಿನ ಜನರ ನಡುವಿನ ಸಂಘರ್ಷ, ನಂತರ ಅವರು ಸಾಧುವನ್ನು (ತಮನ್ನಾ) ಭೇಟಿ ಮಾಡುವುದು, ತಮನ್ನಾರ ಪ್ರವೇಶ ಈ ಎಲ್ಲವೂ ಚಿತ್ರದಲ್ಲಿ ಆಕರ್ಷಣೀಯವಾಗಿದೆ. ಇದೆಲ್ಲವೂ ಬರುವುದು ಮೊದಲಾರ್ಧದಲ್ಲಿ. ಇದನ್ನು ನೋಡಿ ದ್ವಿತಿಯಾರ್ಧದಲ್ಲಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡರೆ ಅಪಾರ ನಿರಾಸೆ ಕಾಡುವುದು ಖಚಿತ. ದ್ವಿತಿಯಾರ್ಧದಲ್ಲಿ ಚಿತ್ರದ ಹಲವು ಸಮಸ್ಯೆಗಳು ಎದ್ದು ಕಾಣುತ್ತವೆ. ದುಷ್ಟಶಕ್ತಿ ತನ್ನನ್ನು ತಾನು ಬಿಂಬಿಸುವ ರೀತಿಯಿಂದ ಹಿಡಿದು ಎಲ್ಲವೂ ಅವಸರದಲ್ಲಿ ಸಾಗುತ್ತದೆ. ಇದು ಪ್ರೇಕ್ಷಕರ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಮೊದಲಾರ್ಧದಲ್ಲಿ ನಿರೂಪಣೆಗೆ ಹೆಚ್ಚು ಸಮಯ ವ್ಯಯಿಸುವುದರಿಂದ, ದ್ವಿತೀಯಾರ್ಧದ ಪ್ರಮುಖ ಕ್ಷಣಗಳನ್ನು ಹೈಲೈಟ್ ಮಾಡಲು ಸಮಯದ ಅಭಾವ ಕಾಡುತ್ತದೆ. ಎರಡನೇ ಭಾಗದಲ್ಲಿ ಎಲ್ಲವೂ ತುಂಬಾ ವೇಗವಾಗಿ ನಡೆಯುತ್ತದೆ. ಚಿತ್ರದ ಇನ್ನೊಂದು ಅಂಶವೆಂದರೆ ದ್ವಿತೀಯಾರ್ಧದ ಕಥೆಗಳು ತುಂಬಾ ಸುಲಭವಾಗಿ ಹೀಗೆ ನಡೆಯುತ್ತದೆ ಎಂದು ನೀವು ಊಹಿಸಬಹುದಾಗಿದೆ.

ಕಥೆಯ ನಿರೂಪಣೆ ಸಡಿಲವಾಗಿದ್ದು, ಯಾವುದೇ ಪ್ರಮುಖ ತಿರುವುಗಳಿಲ್ಲ. ದುಷ್ಟಶಕ್ತಿಯ ವಿನಾಶಕಾರಿ ಶಕ್ತಿಗೆ ಸಂಬಂಧಿಸಿದ ಹೆಚ್ಚಿನ ದೃಶ್ಯಗಳನ್ನು ತೋರಿಸಬೇಕಾಗಿತ್ತು, ಇದರಿಂದ ಚಿತ್ರ ಆಸಕ್ತಿದಾಯಕವಾಗಿ ಮೂಡಿಬರುತ್ತದೆ. ಚಿತ್ರದಲ್ಲಿ ಭಾವನಾತ್ಮಕ ಕೋನವೂ ದುರ್ಬಲವಾಗಿದೆ. ಗ್ರಾಮಸ್ಥರು ಸಾಕಷ್ಟು ಆಘಾತಗಳನ್ನು ಎದುರಿಸುತ್ತಾರೆ, ಆದರೆ ಅದನ್ನು ಎಲ್ಲಿಯೂ ಮನಸ್ಸಿಗೆ ಮುಟ್ಟುವಂತೆ ತೋರಿಸಿಲ್ಲ. ಕ್ಲೈಮ್ಯಾಕ್ಸ್‌ನ ತಿರುವುಗಳು ಮತ್ತು ದೈವಿಕ ಶಕ್ತಿಯ ಪ್ರವೇಶವು ತುಂಬಾ ಚೆನ್ನಾಗಿದೆ. ಇದರೊಂದಿಗೆ ಒದೆಲಾ 3 ಬರುವ ಸೂಚನೆಯನ್ನೂ ಚಿತ್ರದ ಕೊನೆಯಲ್ಲಿ ನೀಡಿದ್ದಾರೆ. ಆದರೆ ಅದನ್ನು ತೋರಿಸಿದ ರೀತಿಯೂ ಪರಿಣಾಮಕಾರಿಯಾಗಿಲ್ಲ.

ನಟನೆಯ ವಿಷಯಕ್ಕೆ ಬರುವುದಾದರೆ ನಾ ನುವ್ವೆಯಂತಹ ಚಿತ್ರಗಳನ್ನು ಮಾಡಿರುವ ತಮನ್ನಾ, ಈ ಚಿತ್ರದ ಪ್ರಮುಖ ಹೈಲೈಟ್. ಇಲ್ಲಿಯವರೆಗೆ ನಾವು ಅವರನ್ನು ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲಿ ನೋಡಿದ್ದೇವೆ, ಆದರೆ ಅವರು ಯು-ಟರ್ನ್ ತೆಗೆದುಕೊಂಡು ಅಭಿನಯಕ್ಕೆ ಮಾತ್ರ ಅವಕಾಶವಿರುವ ಪಾತ್ರವನ್ನು ಮಾಡಿದ್ದಾರೆ. ತಮನ್ನಾ ಅಂತಹ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಬಗ್ಗೆ ಹಲವು ಅನುಮಾನಗಳಿದ್ದವು, ಆದರೆ ಅವರು ಸಾಕಷ್ಟು ಚೆನ್ನಾಗಿ ನಟಿಸಿದ್ದಾರೆ. ಅವರ ಅಭಿವ್ಯಕ್ತಿಗಳು, ದೇಹ ಭಾಷೆ ಅಥವಾ ಸಂಭಾಷಣೆ ಎಲ್ಲವೂ ಅದ್ಭುತವಾಗಿದೆ.

ಕನ್ನಡದ ನಟ ವಸಿಷ್ಠ ಸಿಂಹ ಅವರಿಗೆ ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರ ಸಿಕ್ಕಿದ್ದು, ಅವರು ಅದ್ಭುತವಾಗಿ ನಟಿಸಿದ್ದಾರೆ. ಅತಿಮಾನುಷ ಶಕ್ತಿ ಪಾತ್ರದಲ್ಲಿ ವಶಿಷ್ಠ ಬಹಳ ಪ್ರಬುದ್ಧ ನಟನೆ ನೀಡಿದ್ದಾರೆ. ಮುರಳಿ ಶರ್ಮಾ ಅವರ ಪ್ರಮುಖ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಮತ್ತು ಹೆಬಾ ಪಟೇಲ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯಕ್ಕೆ ಒದಗಿಸಿದ್ದಾರೆ.

‘ಕಾಂತಾರ‘ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಒದೆಲಾ 2 ಚಿತ್ರಕ್ಕಿದೆ. ಅವರ ಹಿನ್ನೆಲೆ ಸಂಗೀತವು ತುಂಬಾ ಚೆನ್ನಾಗಿದೆ ಮತ್ತು ರೋಮಾಂಚನ ನೀಡುತ್ತದೆ. ಈ ಚಿತ್ರದ ದೊಡ್ಡ ಆಸ್ತಿಗಳಲ್ಲಿ ಒಂದು ಕ್ಯಾಮೆರಾವರ್ಕ್, ಇದು ಸಾಕಷ್ಟು ಪ್ರಭಾವಶಾಲಿಯಾಗಿದೆ. ವಿಎಫ್‌ಎಕ್ಸ್‌ಗೆ ವಿಶೇಷ ಉಲ್ಲೇಖದ ಅಗತ್ಯವಿದೆ, ಮತ್ತು ಫ್ಯಾಂಟಸಿ ಸೆಟಪ್ ಹೊಂದಿರುವ ದೃಶ್ಯಗಳನ್ನು ಅದ್ಭುತವಾಗಿ ಹೈಲೈಟ್ ಮಾಡಲಾಗಿದೆ.

ದುಷ್ಟ ಶಕ್ತಿ ತಪ್ಪಿಸಿಕೊಳ್ಳುವ ರೀತಿ, ಅದರ ಶಕ್ತಿಯ ಸ್ವರೂಪ ಈ ಎಲ್ಲವನ್ನೂ ಬಹಳ ಚೆನ್ನಾಗಿ ತೋರಿಸಲಾಗಿದೆ. ಸಂಪತ್ ನಂದಿ ಉತ್ತರಭಾಗಕ್ಕೆ ಹೆಚ್ಚಿನ ಅಲೌಕಿಕ ಸ್ಪರ್ಶವನ್ನು ಸೇರಿಸಿದ್ದಾರೆ, ಆದರೆ ಅವರು ಹೊಸದೇನೂ ಪ್ರದರ್ಶಿಸಿಲ್ಲ. ಮೊದಲಾರ್ಧದಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದರೂ ದ್ವಿತಿಯಾರ್ಧ ನೀರಸವಾಗಿ ಸಾಗುತ್ತದೆ.

ಒಟ್ಟಾರೆಯಾಗಿ, ಒಡೆಲಾ 2 ಟೀಸರ್ ಮತ್ತು ಟ್ರೈಲರ್ ಮೂಲಕ ಹುಟ್ಟಿಸಿದ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಕಥೆ ಹಾಗೂ ನಿರೂಪಣೆ ಎರಡಲ್ಲೂ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವಲ್ಲಿ ಚಿತ್ರ ಸೋತಿದೆ. ಈ ಚಿತ್ರದಲ್ಲಿ ತಮನ್ನಾ ಅಭಿನಯ ಮಾತ್ರ ನೋಡಲೇಬೇಕು.

ಚಿತ್ರ ವಿಮರ್ಶೆ: ಅವದ್ ಮಹಮದ್‌

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.