ಕನ್ನಡ ಸುದ್ದಿ  /  Entertainment  /  One More Complaint Lodged Against Sreeleela Mother

Complaint against Sreeleela Mother: ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು: ಪತ್ನಿ ವಿರುದ್ದ ಸುಧಾಕರ್‌ ರಾವ್‌ ಆರೋಪ

ಸುಧಾಕರ್‌ ರಾವ್‌ಗೆ ಸೇರಿದ ಒಂದು ಅಪಾರ್ಟ್‌ಮೆಂಟ್‌ ಬೆಂಗಳೂರಿನ ಕೋರಮಂಗಲದಲ್ಲಿದೆ. ಡಾ. ಸ್ವರ್ಣಲತಾ, ಈ ಅಪಾರ್ಟ್‌ಮೆಂಟ್‌ ಒಳನುಗ್ಗಿರುವುದು ಅಲ್ಲದೆ, ಅಲ್ಲಿನ ರೂಮ್‌ವೊಂದರ ಬೀಗ ಒಡೆದು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಸ್ವತ: ಸುಧಾಕರ್‌ ರಾವ್‌ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿದ್ದಾರೆ.

ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು
ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು

ನಟಿ ಶ್ರೀಲೀಲಾ ಒಂದೆಡೆ ಸಿನಿಮಾಗಳಲ್ಲಿ ಬ್ಯುಸಿ ಇದ್ದರೆ, ಮತ್ತೊಂದೆಡೆ ಅವರ ತಾಯಿ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದೂ ಅಲ್ಲದೆ, ಅಲ್ಲಿನ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪ ಎದುರಿಸಿದ್ದರು. ಇದೀಗ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎನ್ನಲಾಗಿದೆ.

ಶ್ರೀಲೀಲಾ ತಾಯಿ ಸ್ವರ್ಣಲತಾ ವೃತ್ತಿಯಲ್ಲಿ ಗೈನೋಕಾಲಜಿಸ್ಟ್‌ ಆಗಿದ್ದಾರೆ. ಸುಮಾರು 20 ವರ್ಷಗಳಿಂದ ಅವರು ಪತಿಯಿಂದ ದೂರಾಗಿ ಮಗಳನ್ನು ಬೆಳೆಸಿದ್ದಾರೆ. ಇದೀಗ ಕಾನೂನಿನ ಪ್ರಕಾರ ಪತಿ ಸುಧಾಕರ್ ರಾವ್ ಸುರಪನೇನಿಯಿಂದ ಸ್ವರ್ಣಲತಾ ದೂರಾಗುತ್ತಿದ್ದು ಈ ಕೇಸ್‌ ನ್ಯಾಯಾಲಯದಲ್ಲಿದೆ. ಸುಧಾಕರ್‌ ರಾವ್‌ಗೆ ಸೇರಿದ ಒಂದು ಅಪಾರ್ಟ್‌ಮೆಂಟ್‌ ಬೆಂಗಳೂರಿನ ಕೋರಮಂಗಲದಲ್ಲಿದೆ. ಡಾ. ಸ್ವರ್ಣಲತಾ, ಈ ಅಪಾರ್ಟ್‌ಮೆಂಟ್‌ ಒಳನುಗ್ಗಿರುವುದು ಅಲ್ಲದೆ, ಅಲ್ಲಿನ ರೂಮ್‌ವೊಂದರ ಬೀಗ ಒಡೆದು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಸ್ವತ: ಸುಧಾಕರ್‌ ರಾವ್‌ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು ಸ್ವರ್ಣಲತಾ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.

ಏನಿದು ಅಲಯನ್ಸ್‌ ವಿವಿ ಪ್ರಕರಣ..?

ಅಲಯನ್ಸ್‌ ಕಾಲೇಜು ಒಡೆತನಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ಕಿರಿಕ್‌ ನಡೆಯುತ್ತಲೇ ಇದೆ. ಈ ಪ್ರಕರಣ ಕೋರ್ಟ್‌ನಲ್ಲಿದೆ. ಇಷ್ಟಾದರೂ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ, ಮಧು ಅಂಗೂರ್‌ ಎಂಬುವವರು ಹಾಗೂ ಕೆಲವು ಬೌನ್ಸರ್‌ಗಳೊಂದಿಗೆ ವಿಶ್ವವಿದ್ಯಾಲಯದ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದೂ ಅಲ್ಲದೆ ಈ ಕಾಲೇಜಿನ ಮುಂದಿನ ಚಾನ್ಸಲರ್‌ ನಾನೇ ಎಂದು ಆವಾಜ್‌ ಹಾಕಿದ್ದರೆಂಬ ಆರೋಪ ಇದೆ. ಕಾಲೇಜಿನ ಸಿಬ್ಬಂದಿಯೊಬ್ಬರು ಸ್ವರ್ಣಲತಾ ಅವರ ಫೋನ್‌ ಕಸಿದುಕೊಳ್ಳಲು ಯತ್ನಿಸಿದಾಗ ಕೋಪಗೊಂಡ ಸ್ವರ್ಣಲತಾ, ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಸ್ವರ್ಣಲತಾ, ವಿವಿ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸಮೀಪದಲ್ಲೇ ಇದ್ದವರು ರೆಕಾರ್ಡ್‌ ಮಾಡಿ ಮಾಧ್ಯಮಗಳಿಗೆ ನೀಡಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು. ಸ್ವರ್ಣಲತಾ ಅವರ ನಡವಳಿಕೆ ನೋಡಿ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಕಾಲೇಜಿನ ಸಿಬ್ಬಂದಿಯೊಬ್ಬರು ಸ್ವರ್ಣಲತಾ, ಮಧು ಅಂಗೂರ್‌ ಸೇರಿದಂತೆ ಇನ್ನೂ 7 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ಈ ಸಮಯದಲ್ಲಿ ತಲೆಮರೆಸಿಕೊಂಡಿದ್ದ ಸ್ವರ್ಣಲತಾ ನಂತರ ಜಾಮೀನು ಪಡೆದಿದ್ದರು. ಇದೀಗ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು ಇದನ್ನು ಸ್ವರ್ಣಲತಾ ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಚಿತ್ರರಂಗದಲ್ಲಿ ಬ್ಯುಸಿ ಇರುವ ಶ್ರೀಲೀಲಾ

'ಕಿಸ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಹೃದಯ ಕದ್ದ ಕ್ಯೂಟ್ ಹುಡುಗಿ ಶ್ರೀಲೀಲಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅತಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿಯರಲ್ಲಿ ಈ ಚೆಲುವೆ ಕೂಡಾ ಒಬ್ಬರು. ಕಿಸ್ ನಂತರ ಶ್ರೀಮುರಳಿ ಜೊತೆ 'ಭರಾಟೆ' ಚಿತ್ರದಲ್ಲಿ ನಟಿಸಿದ ಕ್ಯೂಟ್ ಹುಡುಗಿ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಕೂಡಾ ಆಫರ್ ಬಂತು. ಹಿರಿಯ ನಟ ಶ್ರೀಕಾಂತ್ ಮೇಕ ಪುತ್ರ ರೋಷನ್​​​​​​​​ನೊಂದಿಗೆ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಅವರು ಟಾಲಿವುಡ್​​​​ಗೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ಶ್ರೀಲೀಲಾ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಜೊತೆಗೆ ಜೂನಿಯರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಜೊತೆ 'ದುಬಾರಿ' ಚಿತ್ರದಲ್ಲಿ ಕೂಡಾ ಶ್ರೀಲೀಲಾ ನಟಿಸಬೇಕಿದೆ. ಆದರೆ ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

IPL_Entry_Point

ವಿಭಾಗ