ಕನ್ನಡ ಸುದ್ದಿ  /  Entertainment  /  Puneeth Rajkumar In Simhapriya Reception, Edited Photo Goes Viral

Appu in Simhapriya Reception: ಸಿಂಹಪ್ರಿಯ ಆರತಕ್ಷತೆಯಲ್ಲಿ ಅಪ್ಪು..ಭಾವನೆ ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ ಎಂದ ವಸಿಷ್ಠ!

ಈ ಫೋಟೋ ನೋಡಿದಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಈ ಫೋಟೋ ಎಡಿಟ್‌ ಮಾಡಿದವರಿಗೆ ಬಹಳ ಧನ್ಯವಾದಗಳು ಎಂದು ಧನ್ಯವಾದ ಅರ್ಪಿಸಿದ್ದಾರೆ.

ಸಿಂಹಪ್ರಿಯ ಆರತಕ್ಷತೆಯಲ್ಲಿ ಪುನೀತ್‌ ರಾಜ್‌ಕುಮಾರ್‌
ಸಿಂಹಪ್ರಿಯ ಆರತಕ್ಷತೆಯಲ್ಲಿ ಪುನೀತ್‌ ರಾಜ್‌ಕುಮಾರ್‌ (PC: akashwadageriamw Instagram)

ಸ್ಯಾಂಡಲ್‌ವುಡ್‌ ಚಾಕೊಲೇಟ್‌ ಹೀರೋ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಗೊತ್ತಿರುವ ವಿಚಾರ. ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯ ಮದುವೆ ನೆರವೇರಿದೆ. ಮದುವೆ ನಂತರ ಬೆಂಗಳೂರಿನ ರೆಸಾರ್ಟ್‌ ಒಂದರಲ್ಲಿ ಈ ಜೋಡಿ ಅದ್ಧೂರಿ ಆರತಕ್ಷತೆ ಕೂಡಾ ಏರ್ಪಡಿಸಿತ್ತು.

ಸಿಂಹಪ್ರಿಯ ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ಬಹುತೇಕ ಗಣ್ಯರು ಆಗಮಿಸಿದ್ದರು. ನಟಿ ಶ್ರುತಿ, ಮಗಳು ಗೌರಿ, ಮಾಳವಿಕಾ ,ಅವಿನಾಶ್‌, ಶರಣ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ಮಾಲಾಶ್ರೀ, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಸುಧಾರಾಣಿ, ರಮೇಶ್‌ ಅರವಿಂದ್‌ ಸೇರಿ ಅನೇಕ ಮಂದಿ ಬಂದು ನವ ವಧು ವರರಿಗೆ ಶುಭ ಕೋರಿದ್ದರು. ಆದರೆ ಈ ಆರತಕ್ಷೆಯಲ್ಲಿ ಮುಖ್ಯ ಅತಿಥಿಯಾಗಿ ಗಮನ ಸೆಳೆದದ್ದು ನಮ್ಮೆಲ್ಲರ ಪ್ರೀತಿಯ ಪುನೀತ್‌ ರಾಜ್‌ಕುಮಾರ್‌. ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ರಿಸೆಪ್ಷನ್‌ಗೆ ಅಪ್ಪು ಬಂದು ಶುಭ ಕೋರಿದ್ದು, ನಗು ನಗುತ್ತಾ ಹೊಸ ಜೋಡಿಯೊಂದಿಗೆ ಫೋಟೋ ತೆಗೆಸಿಕೊಂಡದ್ದು ಗಮನ ಸೆಳೆದಿತ್ತು. ಆದರೆ ನಿಜಕ್ಕೂ ಹೀಗೆ ಆಗಿದಿದ್ರೆ ಚೆನ್ನಾಗಿರ್ತಿತ್ತೇನೋ.

ಸಿಂಹಪ್ರಿಯ ಮದುವೆ ಹಾಗೂ ಮದುವೆ ಆರತಕ್ಷೆಯಲ್ಲಿ ಮಿಸ್‌ ಆಗಿದ್ದು ನಮ್ಮೆಲ್ಲರ ನಗು ಮೊಗದ ರಾಜಕುಮಾರ ಅಪ್ಪು. ಪುನೀತ್‌ ರಾಜ್‌ಕುಮಾರ್‌ ಇದ್ದಿದ್ದರೆ, ಇಂದು ನಿಜಕ್ಕೂ ಅವರು ಸಿಂಹಪ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಪತ್ನಿ ಅಶ್ವಿನಿ ಅವರೊಂದಿಗೆ ಹಾಜರಿರುತ್ತಿದ್ದರು. ಆದರೆ ಇಡೀ ಚಿತ್ರರಂಗ, ಅಭಿಮಾನಿಗಳು ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದೆ. ಸಿಂಹ ಪ್ರಿಯ ಕೂಡಾ ಅಪ್ಪು ಅವರನ್ನು ತಮ್ಮ ಮದುವೆಗೆ ಮಿಸ್‌ ಮಾಡಿಕೊಂಡಿದ್ದಾರೆ. ಆದರೆ ಈ ಜೋಡಿಯ ಪಕ್ಕ ಪುನೀತ್‌ ರಾಜ್‌ಕುಮಾರ್‌ ಇರುವಂತೆ ಎಡಿಟ್‌ ಮಾಡಲಾದ ಫೋಟೋವೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನು ವಸಿಷ್ಠ ಸಿಂಹ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು ಆಕಾಶ ವಡಗೇರಿ ಎಂಬ ಅಭಿಮಾನಿಯೊಬ್ಬರು ಎಡಿಟ್‌ ಮಾಡಿದ್ದಾರೆ. ಇದನ್ನು ನೋಡಿದರೆ ಎಡಿಟ್‌ ಮಾಡಲಾದ ಫೋಟೋ ಎಂದು ಕಂಡುಹಿಡಿಯುವುದು ಕಷ್ಟ. ಇದನ್ನು ಹಂಚಿಕೊಂಡಿರುವ ವಷಿಷ್ಠ, ''ಈ ಫೋಟೋ ನೋಡಿದಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಈ ಫೋಟೋ ಎಡಿಟ್‌ ಮಾಡಿದವರಿಗೆ ಬಹಳ ಧನ್ಯವಾದಗಳು'' ಎಂದು ಧನ್ಯವಾದ ಅರ್ಪಿಸಿದ್ದಾರೆ. ''ಅಪ್ಪು ಅವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ'' ಎಂದು ನೆಟಿಜನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಮದುವೆಗೆ ಕೆಲವು ದಿನಗಳ ಮುನ್ನ ಪ್ರೀತಿ ವಿಚಾರ ರಿವೀಲ್‌ ಮಾಡಿದ್ದ ಸಿಂಹಪ್ರಿಯ

ನಮ್ಮಿಬ್ಬರಿಗೂ 2016 ರಿಂದ ಪರಿಚಯ. ಅದಕ್ಕೂ ಮುನ್ನ ನಾನು ಅವರ ಅಭಿಮಾನಿಯಾಗಿದ್ದೆ. ನಾನು ಅಭಿನಯಿಸಿದ್ದ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾ ನೋಡಿ ಅವರೇ ನನ್ನನ್ನು ಮಾತನಾಡಿಸಿ ನನ್ನ ಆಕ್ಟಿಂಗ್‌ ಬಗ್ಗೆ ಕಾಂಪ್ಲಿಮೆಂಟ್ಸ್‌ ಕೊಟ್ಟಿದ್ದರು. ಆಗಿನಿಂದ ಇಬ್ಬರೂ ಮಾತಾಡುತ್ತಿದ್ದೆವು. ಚಿತ್ರರಂಗದಲ್ಲಿ ಆಕೆ ನನಗಿಂತ ಸೀನಿಯರ್‌ ಆಗಿದ್ರೂ ನನಗೆ ವಿಶ್‌ ಮಾಡಿದ್ದು ಬಹಳ ಖುಷಿಯಾಗಿತ್ತು. ನಮ್ಮಿಬ್ಬರ ಪರಿಚಯ, ಸ್ನೇಹಕ್ಕೆ ತಿರುಗಿ, ನಂತರ ಲವ್‌ ಆಯ್ತು. ಹರಿಪ್ರಿಯಾಗೆ ಶ್ವಾನಗಳು ಎಂದರೆ ಬಹಳ ಇಷ್ಟ. ಅವರ ಮನೆಯಲ್ಲಿ ಲಕ್ಕಿ ಎಂಬ ನಾಯಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿತ್ತು. ಅದರಿಂದ ಆಕೆಗೆ ಬಹಳ ನೋವಾಗಿತ್ತು. ಬೇರೆ ನಾಯಿ ಕೊಟ್ಟರೆ ಆಕೆಯ ದು:ಖ ಕಡಿಮೆಯಾಗಬಹುದು ಎಂದುಕೊಂಡು ನಾನು ಒಂದು ನಾಯಿಮರಿ ಗಿಫ್ಟ್‌ ಮಾಡಿದ್ದೆ, ಆದರೆ ಅದಕ್ಕೂ ಮುನ್ನವೇ ಇಬ್ಬರಿಗೂ ಲವ್‌ ಆಗಿತ್ತು.'' ಎಂದು ವಸಿಷ್ಠ ಹೇಳಿದ್ದರು.

IPL_Entry_Point