Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ

Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಆಡಿದ ಮಾತನ್ನು ಕೇಳಿ ಗಾಬರಿಯಿಂದ ಚಾರು ರಾಮಾಚಾರಿಯನ್ನು ಹುಡುಕಿಕೊಂಡು ಹೋಗುತ್ತಾಳೆ. ಆದರೆ ಅಲ್ಲಿ ಅವಳು ಅಂದುಕೊಂಡಂತೆ ಏನೂ ಆಗಿರೋದಿಲ್ಲ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

ರಾಮಾಚಾರಿ ಧಾರಾವಾಹಿಯಲ್ಲಿ ಜೈಲಿನಿಂದ ಮತ್ತೆ ಮನೆಗೆ ಬಂದ ವೈಶಾಖಾ ತನ್ನ ಹಳೆ ಬುದ್ದಿಯನ್ನೇ ಮುಂದುವರೆಸಿದ್ದಾಳೆ. ಚಾರು ಜೀವನದಲ್ಲಿ ಮತ್ತೆ ಇವಳೊಂದು ಮುಳ್ಳಾಗಿ ಬಂದಿದ್ದಾಳೆ. ವೈಶಾಖಾ ಹೇಳಿದ ಪ್ರಕಾರ ಅವಳು ರಾಮಾಚಾರಿಯನ್ನು ಕೊಲ್ಲಲು ಬಯಸಿದ್ದಳು. ಆದರೆ ಅವಳ ಉಪಾಯ ಬದಲಿಸಿ ಅವನನ್ನು ಜೀವಂತ ಉಳಿಸಿದ್ದಾಳೆ. ರಾಮಾಚಾರಿ ದಾರಿಯಲ್ಲಿ ಹೋಗುವಾಗ ಅವನಿಗೆ ಯಾರಾದರೂ ಆಕ್ಸಿಡೆಂಟ್ ಮಾಡಿ ಸಾಯಿಸಬಹುದು ಎಂದು ಅಂದುಕೊಂಡ ಚಾರು ಅವನ ಹಿಂದಿನಿಂದ ಆಟೋ ಮಾಡಿಕೊಂಡು ಹೋಗುತ್ತಾಳೆ. ಆದರೆ ಅವನಿಗೆ ಏನೂ ಆಗಿರೋದಿಲ್ಲ.

ಯಾರೋ ಬೇರೆಯವರಿಗೆ ಆಕ್ಸಿಡೆಂಟ್ ಆಗಿದೆ ಎಂದು ಅವನು ತನ್ನ ಗಾಡಿಯನ್ನು ಬಿಟ್ಟು ಅವರಿಗೆ ಸಹಾಯ ಮಾಡಲು ಹೋಗಿರುತ್ತಾನೆ. ಅದರೆ ಚಾರು ಅಂದುಕೊಂಡಿದ್ದೇ ಬೇರೆಯಾಗಿರುತ್ತದೆ. ಆ ನಂತರ ರಾಮಾಚಾರಿ ನೇರವಾಗಿ ಚಾರು ಹತ್ತಿರ ಬರುತ್ತಾನೆ. ಬಂದು ಅವಳನ್ನು ವಿಚಾರಿಸುತ್ತಾನೆ. “ಮೇಡಂ ಯಾಕೆ ನೀವಿಷ್ಟು ಭಯದಿಂದಿದ್ದೀರಿ? ಏನಾಯ್ತು?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಚಾರು ಎಲ್ಲವನ್ನೂ ವಿವರಿಸುತ್ತಾಳೆ. “ನೀನು ಮನೆಯಿಂದ ಬರುವಾಗ ಅಪಶಕುನ ಆಯ್ತು, ನಾನು ದಾರಿಯಲ್ಲಿ ಬರುವಾಗ ನನ್ನ ತಾಳಿ ತುಂಡಾಯ್ತು. ಇದನ್ನೆಲ್ಲ ನೋಡಿ ನನಗೆ ಭಯ ಆಯ್ತು” ಎಂದು ಹೇಳುತ್ತಾಳೆ. ನಂತರ ರಾಮಾಚಾರಿ ಅವಳನ್ನು ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲೇ ಒಂದು ಆಲದ ಮರ ಇರುತ್ತದೆ. ಅಲ್ಲಿ ಸಾಕಷ್ಟು ಅರಶಿನ ದಾರ ಕಟ್ಟಿಕೊಂಡಿರುತ್ತದೆ. ಚಾರು ಮನಸಿಗೆ ಭದ್ರತೆ ಸಿಗಲಿ ಎನ್ನುವ ಕಾರಣಕ್ಕಾಗಿ ಅವನು ಅವಳ ಕೊರಳಿಗೆ ಅರಶಿನದ ದಾರವನ್ನು ಕಟ್ಟುತ್ತಾನೆ. ಆಗ ಅವಳಿಗೆ ಸಮಾಧಾನ ಆಗುತ್ತದೆ.

ಚಾರು ವೈಶಾಖಾ ಜಗಳ

ಅಲ್ಲಿಂದ ಅವನು ಸಮಾಧಾನ ಮಾಡಿ ಕಳಿಸಿದ ನಂತರ ಚಾರು ನೇರವಾಗಿ ಮನೆಗೆ ಬರುತ್ತಾಲೆ. ಬಂದವಳೇ ವೈಶಾಖಾಳ ಹೆಸರನ್ನು ಕೂಗುತ್ತಾಳೆ. ವೈಶಾಖಾ ಮಾತ್ರ ಚಾರು ಬರುವುದಕ್ಕಾಗಿಯೇ ಕಾಯುತ್ತಾ ಇರುತ್ತಾಳೆ. ಚಾರು ಹೋದವಳೇ ರಾಮಾಚಾರಿ ಫೋಟೋ ನೋಡುತ್ತಾಳೆ. ಆ ಫೋಟೋಗೆ ಗಂಧದ ಹಾರ ಹಾಕಿರುತ್ತಾರೆ. ಅದನ್ನು ನೋಡಿ ಸಿಟ್ಟಾಗುತ್ತಾಳೆ. “ನಾನೇ ಬೇಕು ಎಂದು ಈ ಫೋಟೋಗೆ ಹಾರ ಹಾಕಿದ್ದು, ಹೇಗಿದೆ ಅಲಂಕಾರ?” ಎಂದು ಅಹಂಕಾರದಿಂದ ಪ್ರಶ್ನೆ ಮಾಡುತ್ತಾಳೆ. ಹೀಗೆ ಅವರಿಬ್ಬರ ನಡುವೆ ಮಾತು ಬೆಳೆದು ಜಗಳವಾಗುತ್ತದೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner