ʻಅಧಿಕಾರದಲ್ಲಿರುವ ಕೆಲವು ಶಕ್ತಿಗಳು ಸ್ವಾರ್ಥಕ್ಕಾಗಿ ಮಾಡಿದ ಕುಶಲತೆಯೇ?ʼ; ಜಾತಿ ಗಣತಿ ಬಗ್ಗೆ ಚೇತನ್ ಅಹಿಂಸಾ ಸರಣಿ ಪೋಸ್ಟ್
ಸದ್ಯ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಜಾತಿ ಗಣತಿ ಬಗ್ಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ನಡೆದ ಚರ್ಚೆಯ ಬಗ್ಗೆ ನಿತ್ಯ ಒಂದಿಲ್ಲೊಂದು ಪೋಸ್ಟ್ ಹಂಚಿಕೊಳ್ಳುತ್ತಲೇ ಬಂದಿದ್ದಾರೆ ಚೇತನ್ ಅಹಿಂಸಾ.

ಸ್ಯಾಂಡಲ್ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜಕೀಯ ವಿಚಾರಗಳ ಬಗ್ಗೆ, ಸಿನಿಮಾ ಆಗು ಹೋಗುಗಳ ಬಗ್ಗೆ ತಮ್ಮ ವೈಯಕ್ತಿಕ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇದೀಗ, ಸದ್ಯ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಜಾತಿ ಗಣತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ನಡೆದ ಚರ್ಚೆಯ ಬಗ್ಗೆ ನಿತ್ಯ ಒಂದಿಲ್ಲೊಂದು ಪೋಸ್ಟ್ ಹಂಚಿಕೊಳ್ಳುತ್ತಲೇ ಬಂದಿದ್ದಾರೆ ಚೇತನ್ ಅಹಿಂಸಾ. ಇಲ್ಲಿವೆ ಅವರ ಹಲವು ಅನಿಸಿಕೆ ಅಭಿಪ್ರಾಯದ ಪೋಸ್ಟ್ಗಳು.
ಜಾತಿ ಗಣತಿ ಬಗ್ಗೆ ಚೇತನ್ ಅಹಿಂಸಾ ಸರಣಿ ಪೋಸ್ಟ್
ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಚೇತನ್ ಅಹಿಂಸಾ, "ಕರ್ನಾಟಕದ ಜಾತಿ ಜನಗಣತಿಯು ಕುರುಬ ಸಮುದಾಯವು ರಾಜ್ಯದ ಅತ್ಯಂತ ಹಿಂದುಳಿದ ಗುಂಪುಗಳಲ್ಲಿ ಒಂದಾಗಿದೆ — ಅಲೆಮಾರಿಗಳಿಗಿಂತಲೂ ಹೆಚ್ಚು ಹಿಂದುಳಿದಿದೆ ಎಂದು ತೋರಿಸುತ್ತದೆ. ಇದು ಇಂದಿನ ವಾಸ್ತವವೇ ಅಥವಾ ಅಧಿಕಾರದಲ್ಲಿರುವ ಕೆಲವು ಶಕ್ತಿಗಳು ಸ್ವಾರ್ಥಕ್ಕಾಗಿ ಮಾಡಿದ ಕುಶಲತೆಯೇ? ನಿರಾಶಾದಾಯಕ. ಇದು ನಿಜವಾದರೆ, ಇಡೀ ಜಾತಿ ಜನಗಣತಿ, ಪರಿವರ್ತಕ, ಬಹಳ ಅಗತ್ಯವಿರುವ ನೀತಿ. ಪಾರದರ್ಶಕತೆಯ ಕೊರತೆಯಿಂದ ಕಳಂಕಿತವಾಗಿದೆ" ಎಂದಿದ್ದಾರೆ.
ಅವೈಜ್ಞಾನಿಕ ಮತ್ತು ಸ್ವಾರ್ಥಪರ
"ಜಾತಿ ಜನಗಣತಿಯ ದೊಡ್ಡ ಸಮಸ್ಯೆ ಎಂದರೆ ಕುರುಬ ಸಮುದಾಯವನ್ನು (43,72,848 ಜನಸಂಖ್ಯೆ) ಹೇಗೆ ಚಿತ್ರಿಸುತ್ತದೆ ಎಂಬುದು. ವರ್ಗ 1B ಇಲ್ಲಿಯವರೆಗೆ ಅಸ್ತಿತ್ವದಲ್ಲಿರಲಿಲ್ಲ; ಮತ್ತು ಅದರಲ್ಲಿ, ಕುರುಬರನ್ನು 85 ಸಮುದಾಯಗಳಲ್ಲಿ 8 ನೇ ಅತ್ಯಂತ ಹಿಂದುಳಿದವರು ಎಂದು ಪರಿಗಣಿಸಲಾಗಿದೆ - ಒಂದೇ ಗುಂಪಿನಲ್ಲಿ ಹಾಲಕ್ಕಿ ವಕ್ಕಲಿಗರು ಮತ್ತು ದೇವದಾಸಿಯರಿಗಿಂತ ಹೆಚ್ಚು ಹಿಂದುಳಿದವರು ಅಂತ. ಇದು ಅವೈಜ್ಞಾನಿಕ ಮತ್ತು ಸ್ವಾರ್ಥಪರವಾಗಿ ಕಾಣುತ್ತದೆ" ಎಂದಿದ್ದಾರೆ.
ರಾಹುಲ್ ಗಾಂಧಿ ಅವರದ್ದು ಬರೀ ಬಾಯಿ ಮಾತು..
"ಸತ್ಯ ಮತ್ತು ಧೈರ್ಯ ನೆಹರೂ ಅವರಿಂದ ರಕ್ತಗತವಾಗಿ ನನಗೆ ಬಂದಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೊದಲನೆಯದಾಗಿ, ನಿಮ್ಮ ಬಳಿ ಅಥವಾ ನೆಹರೂ ಬಳಿ ಸತ್ಯವಿಲ್ಲ - ವಾಸ್ತವವಾಗಿ, ನಿಮ್ಮ ಯಥಾಸ್ಥಿತಿ, ಮನುವಾದ ಸತ್ಯಕ್ಕೆ ಶತ್ರು; ಸತ್ಯ ಎಂದರೆ ನಮ್ಮ ಸಮಾನತಾ ವಾದವಾಗಿದೆ. ಕರ್ನಾಟಕದಲ್ಲಿ ಜಾತಿ ಜನಗಣತಿಯ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಮೂಲಕ ನಿಮ್ಮ ಧೈರ್ಯವನ್ನು ತೋರಿಸಿ. ರಾಹುಲ್ ಗಾಂಧಿ ಅವರ ಕೇವಲ ಬಾಯಿಯ ಮಾತು, ಕಾರ್ಯವಿಲ್ಲ" ಎಂದಿದ್ದಾರೆ.
"ಈಗಾಗಲೇ ಅಸಮಾನ ಮತ್ತು ಅನ್ಯಾಯವಾಗಿರುವ ಈ ವ್ಯವಸ್ಥೆಯನ್ನು ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳು ಇನ್ನಷ್ಟು ಅಸಮಾನ ಮತ್ತು ಅನ್ಯಾಯವನ್ನಾಗಿ ಮಾಡುತ್ತಿವೆ. ಅಗತ್ಯವಾದ ಡೇಟಾವನ್ನು ಒದಗಿಸುವ ಜಾತಿ ಜನಗಣತಿ ಅತ್ಯಗತ್ಯ - ಆದ್ದರಿಂದ ಸರ್ಕಾರಗಳು ನ್ಯಾಯ ಆಧಾರಿತ ನೀತಿಗಳನ್ನು ಜಾರಿಗೆ ತರಬೇಕು" ಎಂದು ಎರಡು ವರ್ಷಗಳ ಹಿಂದಿನ ಸಂದರ್ಶನದ ವಿಡಿಯೋ ಹಂಚಿಕೊಂಡು ಆವತ್ತೇ ತಮ್ಮ ನಿಲುವಿನ ಬಗ್ಗೆ ಹೇಳಿಕೊಂಡಿದ್ದರು.
"2024 ರಲ್ಲಿ, ಕರ್ನಾಟಕ ಸರ್ಕಾರವು ಖಾಸಗಿ ವಲಯದ ಉದ್ಯೋಗಗಳಲ್ಲಿ 50-75% ಭೌಗೋಳಿಕ ಮೀಸಲಾತಿಯನ್ನು ಬೆಳಿಗ್ಗೆ ತಂದಿತು ಮತ್ತು ನಂತರ ಕೆಲವು ಕಾರ್ಪೊರೇಟ್ ವ್ಯಕ್ತಿಗಳ ವಿರೋಧದ ನಂತರ ಮಧ್ಯಾಹ್ನದ ವೇಳೆಗೆ ಅದನ್ನು ರದ್ದುಗೊಳಿಸಿತು. ಈಗ, ಕರ್ನಾಟಕ ಸರ್ಕಾರವು ಕೆಲವು ಊಳಿಗಮಾನ್ಯ ಗುಂಪುಗಳ ವಿರೋಧದಿಂದಾಗಿ ಜಾತಿ ಜನಗಣತಿಯನ್ನು ತರಲು ಹಿಂಜರಿಯುತ್ತಿದೆ. ಧೈರ್ಯವು ಕೈಯಲ್ಲಿ ಮೈಕ್ ಇದ್ದಾಗ ಅಷ್ಟೇ ಅಲ್ಲ, ನೀವು ಜಾರಿಗೆ ತರುವ ಜನಪರ ನೀತಿಗಳೊಂದಿಗೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದೂ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೈ ಸರ್ಕಾರದ ಏಕೈಕ ಪರಿವರ್ತನಾ ನೀತಿ
"ಸಿದ್ದರಾಮಯ್ಯ ಅವರು ಆಡಳಿತವು ತನ್ನ 7 ವರ್ಷಗಳ ಅಧಿಕಾರದಲ್ಲಿ ತಂದ ಏಕೈಕ ಪರಿವರ್ತನಾ ನೀತಿ ಎಂದರೆ ಜಾತಿ ಜನಗಣತಿಯಾಗಿದೆ. ಜನ್ಮಸಿದ್ಧ ಹಕ್ಕು ಆಧಾರಿತ ಸವಲತ್ತುಗಳ ಶ್ರೇಣಿಯನ್ನು (ಬ್ರಾಹ್ಮಣ್ಯ) ದುರ್ಬಲಗೊಳಿಸಲು ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಅತ್ಯಗತ್ಯವಾಗಿದೆ 2023 ರಲ್ಲಿ ಜಾತಿ ಜನಗಣತಿಯನ್ನು ಬಿಹಾರ್ನಲ್ಲಿ ತಂದ ಜೆಡಿಯು ಇನ್ನೂ ಮನುವಾದಿಗಳಂತೆಯೇ, ಕರ್ನಾಟಕದ ಕಾಂಗ್ರೆಸ್ ಕೂಡ ಇನ್ನೂ ಮನುವಾದಿ ಯಾಗಿ ಉಳಿದಿದೆ" ಎಂದಿದ್ದಾರೆ.
ವಿಭಾಗ