ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ
ಕನ್ನಡ ಸುದ್ದಿ  /  ಮನರಂಜನೆ  /  ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ

ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ

ದುನಿಯಾ ವಿನಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಮಗಳು ಮೋನಿಷಾ ಅವರನ್ನು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ವಿಜಯ್.‌ ನಾಯಕನಾಗಿ ವಿನಯ್‌ ರಾಜ್‌ಕುಮಾರ್‌ ನಟಿಸಲಿದ್ದಾರೆ.

ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ
ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ

City Lights Movie Launched: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಂಡವರು. ಇದೀಗ ಇದೇ ವಿಜಯ್‌ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತಂದಿದ್ದಾರೆ. ಈಗಾಗಾಲೇ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಸದ್ಯ ಎರಡನೇ ಪುತ್ರಿಯ ಸರದಿ. ಸಿಟಿ ಲೈಟ್ಸ್ ಸಿನಿಮಾ ಮೂಲಕ ವಿಜಿ 2ನೇ ಪುತ್ರಿ ಮೋನಿಷಾ ಸಿನಿಮಾರಂಗಕ್ಕೆ ಆಗಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿನಯ್ ರಾಜ್‌ಕುಮಾರ್ ನಾಯಕ ಎಂಬುದು ವಿಶೇಷ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಸಿಟಿ ಲೈಟ್ಸ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಾಘವೇಂದ್ರ ರಾಜ್‌ಕುಮಾರ್ ದಂಪತಿ ಕ್ಲ್ಯಾಪ್ ಮಾಡುವ ಮೂಲಕ ಮಗನ ಚಿತ್ರಕ್ಕೆ ಶುಭಕೋರಿದರು. ರಾಜ್‌ಕುಮಾರ್‌ ಅವರ ಡ್ರೈವರ್‌ ಹನುಮಂತು ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ ತಂಡಕ್ಕೆ ಶುಭಕೋರಿದರು. ಮುಹೂರ್ತಕ್ಕೆ ಯುವ ರಾಜ್‌ಕುಮಾರ್, ನಿನಾಸಂ ಸತೀಶ್‌, ನವೀನ್‌ ಶಂಕರ್‌, ಪ್ರವೀಣ್‌ ತೇಜ್‌ , ಲೂಸ್‌ ಮಾದ ಯೋಗಿ, ಕೆ ಮಂಜು, ಬಿ ಸುರೇಶ್‌, ಕೆಪಿ ಶ್ರೀಕಾಂತ್‌, ಉಮಾಪತಿ ಸೇರಿದಂತೆ ಇನ್ನು ಅನೇಕರು ಭಾಗಿಯಾಗಿ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

ಸಿಟಿ ಲೈಟ್ಸ್ ಚಿತ್ರಕ್ಕೆ ದುನಿಯಾ ವಿಜಯ್‌ ನಿರ್ದೇಶನ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ನಿರ್ಮಾಣವನ್ನು ವಹಿಸಿಕೊಂಡಿದ್ದಾರೆ. ನಿರ್ದೇಶಕ ದುನಿಯಾ ವಿಜಯ್ ಈ ಸಿನಿಮಾ ಬಗ್ಗೆ ಮಾತನಾಡಿ, ಜವಾಬ್ದಾರಿಗಳನ್ನು ದೀಪಗಳಾಗಿ ಮಾಡಿ ನನ್ನ ಇಬ್ಬರೂ ಮಕ್ಕಳಾದ ಮೋನಿಷಾ ಮತ್ತು ಮೋನಿಕಾ ಕೈಗೆ ಕೊಟ್ಟಿದ್ದೇನೆ. ಇಬ್ಬರೂ ಉಳಿಸಿಕೊಂಡು ಹೋಗ್ತಾರೆ ಇನ್ನುವ ನಂಬಿಕೆ ಇದೆ. ಇನ್ನು ವಿನಯ್ ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಜೊತೆ ನನ್ನ ಹಾಗೆ ಇರುವ ಜೀವ. ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಈಗ ಅವರ ಮೊಮ್ಮಕ್ಕಳಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ನಾನು ಯಾವುದು ತಂಡ ಕಟ್ಟಿಲ್ಲ, ಒಬ್ಬನೇ ಬೆಳೆದವನು ನಾನು. ನನಗೆ ಯಾರ ಸಪೋರ್ಟ್ ಇರಲಿಲ್ಲ, ನನ್ನ ಛಲ ನನ್ನನ್ನು ಇಲ್ಲಿಗೆ ಕರ್ಕೊಂಡು ಬಂದಿದೆ' ಎಂದರು.

ವಿನಯ್ ರಾಜ್‌ಕುಮಾರ್‌ ಸಹ ಸಿನಿಮಾ ಬಗ್ಗೆ ಮಾತನಾಡಿದರು. 'ವಿಜಯ್ ಸರ್, ಚರಣ್ ರಾಜ್ ಹಾಗೂ ಮಾಸ್ತಿ ಅವರ ಜೊತೆ ಕೆಲಸ ಮಾಡಲು ತುಂಬ ಖುಷಿ ಆಗುತ್ತೆ. ಇವರೆಲ್ಲರ ಜೊತೆ ಕೆಲಸ ಮಾಡಬೇಕು ಎನ್ನುವುದು ಬಹುದಿನಗಳ ಆಸೆ. ಈಗ ಅವಕಾಶ ಸಿಕ್ಕಿದೆ. ಊರಿಂದ ಇಬ್ಬರು ಬೆಂಗಳೂರಿಗೆ ಬಂದು ಬಳಿಕ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದೇ ಈ ಸಿನಿಮಾ' ಎಂದರು. ಇನ್ನು ನಾಯಕಿ ಮೋನಿಷಾ ಮಾತನಾಡಿ, 'ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಲಂಡನ್‌ನಲ್ಲಿ ಆಕ್ಟಿಂಗ್ ಕಲಿತ್ತಿದ್ದೇನೆ. ಆದರೆ ಈ ಸಿನಿಮಾದ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದೇನೆ' ಎಂದರು.

ಸಲಗ, ಭೀಮ ಸಿನಿಮಾಗಳಲ್ಲಿ ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತ ಪ್ರಮುಖ ಪಾತ್ರ ವಹಿಸಿದ್ದವು. ಈ ಬಾರಿಯೂ ಆ ಮ್ಯಾಜಿಕ್ ಮುಂದುವರೆಯಲಿದೆ. ಕಾಕ್ರೋಚ್ ಖ್ಯಾತಿಯ ಸುಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಅನೇಕ ಹೊಸ ಕಲಾವಿದರು ಈ ಸಿನಿಮಾದ ಭಾಗವಾಗಲಿದ್ದಾರೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಇನ್ನುಳಿದ ಮಾಹಿತಿ ನೀಡಲಿದೆ ಚಿತ್ರತಂಡ.

Whats_app_banner