ಶಿವರಾಜ್‌ ಕುಮಾರ್‌ ಟು ಕಿಚ್ಚ ಸುದೀಪ್‌: ಮಿಲಿಟರಿ ಉಡುಗೆಯಲ್ಲಿ ದೇಶಭಕ್ತಿಯಿಂದ ತೆರೆಮೇಲೆ ಅಬ್ಬರಿಸಿದ ಕನ್ನಡ ನಟರಿಗೆ ಜೈಹೋ
ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ ಕುಮಾರ್‌ ಟು ಕಿಚ್ಚ ಸುದೀಪ್‌: ಮಿಲಿಟರಿ ಉಡುಗೆಯಲ್ಲಿ ದೇಶಭಕ್ತಿಯಿಂದ ತೆರೆಮೇಲೆ ಅಬ್ಬರಿಸಿದ ಕನ್ನಡ ನಟರಿಗೆ ಜೈಹೋ

ಶಿವರಾಜ್‌ ಕುಮಾರ್‌ ಟು ಕಿಚ್ಚ ಸುದೀಪ್‌: ಮಿಲಿಟರಿ ಉಡುಗೆಯಲ್ಲಿ ದೇಶಭಕ್ತಿಯಿಂದ ತೆರೆಮೇಲೆ ಅಬ್ಬರಿಸಿದ ಕನ್ನಡ ನಟರಿಗೆ ಜೈಹೋ

ಕನ್ನಡ ಚಿತ್ರರಂಗದಲ್ಲಿ ಭಾರತೀಯ ಸೇನೆ ಮತ್ತು ದೇಶಭಕ್ತಿ ಸಾರುವ ಹಲವು ಸಿನಿಮಾಗಳು ಬಂದಿವೆ. ಆಪರೇಷನ್‌ ಸಿಂಧೂರದ ಮೂಲಕ ಎಲ್ಲೆಡೆ ದೇಶಭಕ್ತಿಯ ಕಹಳೆ ಮೊಳಗುತ್ತಿರುವ ಸಮಯದಲ್ಲಿ ಕನ್ನಡದ ಪ್ರಮುಖ ನಟರು ನಟಿಸಿದ ಇತ್ತೀಚಿನ ಕೆಲವು ಉಗ್ರ ವಿರೋಧಿ ಸಿನಿಮಾಗಳನ್ನು ನೋಡೋಣ.

ಶಿವರಾಜ್‌ ಕುಮಾರ್‌ ಟು ಕಿಚ್ಚ ಸುದೀಪ್‌: ಮಿಲಿಟರಿ ಉಡುಗೆಯಲ್ಲಿ ದೇಶಭಕ್ತಿಯಿಂದ ತೆರೆಮೇಲೆ ಅಬ್ಬರಿಸಿದ ಕನ್ನಡ ನಟರಿಗೆ ಜೈಹೋ
ಶಿವರಾಜ್‌ ಕುಮಾರ್‌ ಟು ಕಿಚ್ಚ ಸುದೀಪ್‌: ಮಿಲಿಟರಿ ಉಡುಗೆಯಲ್ಲಿ ದೇಶಭಕ್ತಿಯಿಂದ ತೆರೆಮೇಲೆ ಅಬ್ಬರಿಸಿದ ಕನ್ನಡ ನಟರಿಗೆ ಜೈಹೋ

ಕನ್ನಡ ಚಿತ್ರರಂಗದಲ್ಲಿ ಆರಂಭದ ಕಾಲದಿಂದ ಈಗಿನವರೆಗೆ ಹಲವು ನಟರು ಯೋಧರ ಉಡುಗೆಯಲ್ಲಿ ದೇಶಭಕ್ತಿಯಿಂದ ನಟಿಸಿದ್ದಾಎರೆ. ಸಾಹಸ ಸಿಂಹ ವಿಷ್ಣುವರ್ಧನ್‌ ಸೇರಿದಂತೆ ಹಲವು ನಟರು ಸೈನಿಕರಾಗಿ ನಟಿಸಿದ್ದಾರೆ. ರವಿಚಂದ್ರನ್‌, ಶಿವರಾಜಕುಮಾರ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ವಿಕ್ಕಿ ವರುಣ್‌ ಸೇರಿದಂತೆ ಹಲವು ನಟರು ಸೈನಿಕನಾಗಿ ತೆರೆಮೇಲೆ ಶತ್ರುಸಂಹಾರ ಮಾಡಿದ್ದಾರೆ. ಭಾರತದ ಸೇನೆಯು ಆಪರೇಷನ್‌ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಮತ್ತು ಉಗ್ರರ ವಿರುದ್ಧ ತೊಡೆ ತಟ್ಟಿರುವ ಸಮಯದಲ್ಲಿ ಈ ಸಿನಿಮಾಗಳು ನಿಮ್ಮೊಳಗೆ ದೇಶಭಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಇಂತಹ ಕೆಲವೊಂದು ಸಿನಿಮಾಗಳ ವಿವರ ಇಲ್ಲಿದೆ.

ಮಾಸ್‌ ಲೀಡರ್‌

2017ರ ಆಕ್ಷನ್‌ ಸಿನಿಮಾ ಮಾಸ್‌ ಲೀಡರ್‌ಗೆ ನಿರ್ದೇಶಕ ನರಸಿಂಹ ಆಕ್ಷನ್‌ ಕಟ್‌ ಹೇಳಿದ್ದರು. ಶಿವಣ್ಣ ಈ ಸಿನಿಮಾದಲ್ಲಿ ಐಎನ್‌ಎ ಕ್ಯಾಪ್ಟನ್‌ ಶಿವರಾಜ್‌ ಪಾತ್ರದಲ್ಲಿ ನಟಿಸಿದ್ದರು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಉಗ್ರರ ವಿರುದ್ಧ ಶಿವಣ್ಣ ಹೋರಾಡಿದ್ದರು. ಈ ಸಿನಿಮಾದಲ್ಲಿ ಪ್ರಣೀತಾ ವಂಶಿ ಕೃಷ್ಣ, ವಿಜಯ ರಾಘವೇಂದ್ರ, ಯೋಗೇಶ್‌, ಗುರುರಾಜ್‌ ಜಗ್ಗೇಶ್‌, ಶರ್ಮಿಲಾ ಮಾಂಡ್ರೆ. ಆಶಿಕಾ ರಂಗನಾಥ್‌ ಮತ್ತು ಪರಿಣಿತ ಕಿಟ್ಟಿ ಮುಂತಾದವರು ನಟಿಸಿದ್ದಾರೆ.

ಹೆಬ್ಬುಲಿ

ಕಿಚ್ಚ ಸುದೀಪ್‌ ಅವರು ತನ್ನ ಕರಿಯರ್‌ನಲ್ಲಿ ಹೆಬ್ಬುಲಿ ಸಿನಿಮಾದಲ್ಲಿ ಪ್ಯಾರಾ ಕಮಾಂಡೋ ಪಾತ್ರದಲ್ಲಿ ನಟಿಸಿದ್ದರು. ಎಸ್‌ ಕೃಷ್ಣ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಉಗ್ರರಿಂದ ನಾಯಕಿಯನ್ನು ಕಾಪಾಡುವ ಸಾಹಸದಲ್ಲಿ ನಾಯನ ನಟಿಸಿದ್ದಾನೆ. ತನ್ನ ಸಹೋದರನ ನಿಗೂಢ ಸಾವಿನ ಬೆನ್ನೆತ್ತುವ ಕೆಲಸವನ್ನೂ ನಾಯಕ ಮಾಡುತ್ತಾನೆ. ಈ ಸಿನಿಮಾದಲ್ಲಿ ಸುದೀಪ್‌ ಸಹೋದರನ ಮಾತ್ರದಲ್ಲಿ ರವಿಚಂದ್ರನ್‌ ನಟಿಸಿದ್ದಾರೆ. ಅಮಲಾ ಪೌಲ್‌, ರವಿ ಕಾಳೆ, ಪಿ. ರವಿಶಂಕರ್‌, ಕಬೀರ್‌ ದಹಾನ್‌ ಸಿಂಗ್‌, ರವಿ ಕಿಶನ್‌, ಅವಿನಾಶ್‌, ಚಿಕ್ಕಣ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಜೇಮ್ಸ್‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ಅವರ ಕೊನೆಯ ಸಿನಿಮಾ ಜೇಮ್ಸ್‌ ನಿಮಗೆ ನೆನಪಿರಬಹುದು. ಪುನೀತ್‌ ರಾಜ್‌ಕುಮಾರ್‌ ಹಾರ್ಟ್‌ ಅಟ್ಯಾಕ್‌ನಿಂದ ಮೃತಪಟ್ಟು ಅಭಿಮಾನಿಗಳನ್ನು ದುಃಖದ ಮಡುವಿಗೆ ದೂಡಿದ್ದರು. ಜೇಮ್ಸ್‌ ಸಿನಿಮಾದಲ್ಲಿ ಪುನೀತ್‌ಗೆ ಶಿವರಾಜ್‌ ಕುಮಾರ್‌ ಧ್ವನಿ ನೀಡಿದ್ದರು. ಬಳಿಕ ಪುನೀತ್‌ ಧ್ವನಿಯನ್ನು ಎಐ ತಂತ್ರಜ್ಞಾನದ ಮೂಲಕ ನೀಡಲಾಗಿತ್ತು. ಭಾರತೀಯ ಸೇನೆಯ ಮೇಜರ್‌ ಪಾತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ನಟಿಸಿದ್ದರು.

ಕಾಲಾಪತ್ಹರ್‌

ಕೆಂಡ ಸಂಪಿಗೆ ಮೂಲಕ ಖ್ಯಾತಿ ಪಡೆದಿರುವ ವಿಕ್ಕಿ ವರುಣ್‌ ನಿರ್ದೇಶನದ ಕಾಲಾಪತ್ಹರ್‌ ಸಿನಿಮಾದಲ್ಲಿ ಬಿಎಸ್‌ಎಫ್‌ ಜವಾನ್‌ ಪಾತ್ರದಲ್ಲಿ ನಟಿಸಿದ್ದರು. ಬ್ಯಾರೇಕ್‌ಗೆ ಬಂದ ಉಗ್ರರ ವಿರುದ್ಧ ಹೋರಾಟ ನಡೆಸಿದ ಕತೆಯನ್ನು ಇದು ಹೊಂದಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in