ಸೋನು ನಿಗಮ್‌ ಕುರಿತು ಫಿಲ್ಮ್‌ ಚೇಂಬರ್‌ನಲ್ಲಿ ಇಂದು ಸಭೆ; ಗಾಯಕನಿಗೆ ನೋಟಿಸ್‌ ನೀಡ್ತಾರ ಬೆಂಗಳೂರು ಪೊಲೀಸರು
ಕನ್ನಡ ಸುದ್ದಿ  /  ಮನರಂಜನೆ  /  ಸೋನು ನಿಗಮ್‌ ಕುರಿತು ಫಿಲ್ಮ್‌ ಚೇಂಬರ್‌ನಲ್ಲಿ ಇಂದು ಸಭೆ; ಗಾಯಕನಿಗೆ ನೋಟಿಸ್‌ ನೀಡ್ತಾರ ಬೆಂಗಳೂರು ಪೊಲೀಸರು

ಸೋನು ನಿಗಮ್‌ ಕುರಿತು ಫಿಲ್ಮ್‌ ಚೇಂಬರ್‌ನಲ್ಲಿ ಇಂದು ಸಭೆ; ಗಾಯಕನಿಗೆ ನೋಟಿಸ್‌ ನೀಡ್ತಾರ ಬೆಂಗಳೂರು ಪೊಲೀಸರು

ಗಾಯಕ ಸೋನು ನಿಗಮ್‌ ಅವರ "ಕನ್ನಡ ಹಾಡು ಮತ್ತು ಪೆಹಲ್ಗಾಮ್‌" ಹೇಳಿಕೆಗೆ ಸಂಬಂಧಪಟ್ಟಂತೆ ಮಧ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನ ಫಿಲ್ಮ್‌ ಚೇಂಬರ್‌ನಲ್ಲಿ ಕನ್ನಡ ಚಿತ್ರರಂಗದ ಅನೇಕ ಸಂಗೀತ ನಿರ್ದೇಶಕರು ಸಭೆ ಸೇರಿ ನಿರ್ಣಯ ಕೈಗೊಳ್ಳಲಿದ್ದಾರೆ.

ಸೋನು ನಿಗಮ್‌ ಕುರಿತು ಫಿಲ್ಮ್‌ ಚೇಂಬರ್‌ನಲ್ಲಿ ಇಂದು ಸಭೆ; ಗಾಯಕನಿಗೆ ನೋಟಿಸ್‌ ನೀಡ್ತಾರ ಬೆಂಗಳೂರು ಪೊಲೀಸರು
ಸೋನು ನಿಗಮ್‌ ಕುರಿತು ಫಿಲ್ಮ್‌ ಚೇಂಬರ್‌ನಲ್ಲಿ ಇಂದು ಸಭೆ; ಗಾಯಕನಿಗೆ ನೋಟಿಸ್‌ ನೀಡ್ತಾರ ಬೆಂಗಳೂರು ಪೊಲೀಸರು

ಬೆಂಗಳೂರು: ಗಾಯಕ ಸೋನು ನಿಗಮ್‌ ಅವರ "ಕನ್ನಡ ಹಾಡು ಮತ್ತು ಪೆಹಲ್ಗಾಮ್‌" ಹೇಳಿಕೆಗೆ ಸಂಬಂಧಪಟ್ಟಂತೆ ಮಧ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನ ಫಿಲ್ಮ್‌ ಚೇಂಬರ್‌ನಲ್ಲಿ ಕನ್ನಡ ಚಿತ್ರರಂಗದ ಅನೇಕ ಸಂಗೀತ ನಿರ್ದೇಶಕರು ಸಭೆ ಸೇರಿ ನಿರ್ಣಯ ಕೈಗೊಳ್ಳಲಿದ್ದಾರೆ. ಇದು ಮುಗಿದ ಬಳಿಕ ಒಂದೂವರೆ ಗಂಟೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ. ಈ ಸಭೆಯಲ್ಲಿ ಸೋನು ನಿಗಮ್‌ ಕುರಿತು ಕನ್ನಡ ಚಿತ್ರರಂಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಖ್ಯಾತ ಗಾಯಕನಿಗೆ ಕನ್ನಡ ಚಿತ್ರರಂಗದಿಂದ ನಿಷೇಧ ಹೇರಳಾಗುವುದೇ ಎಂದು ಕಾದು ನೋಡಬೇಕಿದೆ.

ಇದೇ ಸಮಯದಲ್ಲಿ ಕನ್ನಡಿಗರ ಕನ್ನಡ ಅಭಿಮಾನವನ್ನು ಪೆಹಲ್ಗಾಮ್‌ ದಾಳಿಗೆ ಹೋಲಿಸಿರುವುದು ಮತ್ತು ಭಯೋತ್ಪಾದನೆಗೆ ಹೋಲಿಸಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಗಾಯಕನ ವಿರುದ್ಧ ದೂರು ನೀಡಲಾಗಿದೆ. ಆದರೆ, ಎಫ್‌ಐಆರ್‌ ದಾಖಲಾದ ಕುರಿತು ಮಾಹಿತಿ ಲಭ್ಯವಿಲ್ಲ. ಬೆಂಗಳೂರು ಪೊಲೀಸರು ಈ ದೂರುಗಳಿಗೆ ಸಂಬಂಧಪಟ್ಟಂತೆ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಸಜ್ಜಾಗಿದ್ದಾರೆ. ಪೊಲೀಸರು ಇಮೇಲ್‌ ಮೂಲಕ ಗಾಯಕನಿಗೆ ನೋಟಿಸ್‌ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಇಮೇಲ್‌ ಕಳುಹಿಸಲಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಇತ್ತೀಚೆಗೆ ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ಖ್ಯಾತ ಗಾಯಕ ಸೋನು ನಿಗಮ್‌‌ ಕಾರ್ಯಕ್ರಮ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಒಂದಿಷ್ಟು ಜನರು "ಕನ್ನಡ... ಕನ್ನಡ.... ಕನ್ನಡ...." ಎಂದು ಕನ್ನಡ ಹಾಡುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಸೋನು ನಿಗಮ್‌ ಅವರು "ಕನ್ನಡ... ಕನ್ನಡ... ಪಹಲ್ಗಾಮ್‌ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಕನ್ನಡ ಹಾಡಿನ ಕೋರಿಕೆಯನ್ನು ಪೆಹಲ್ಗಾಮ್‌ ಉಗ್ರ ದಾಳಿಗೆ ಹೋಲಿಸಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

"ನಾನು ಕನ್ನಡ ಇಷ್ಟಪಡುವೆ. ಆದರೆ, ಕ...ನ್ನ....ಡ , ... ಕನ್ನಡ..ಡ ಎಂದು ನನಗೆ ಬೆದರಿಕೆ ಹಾಕುವುದ್ಯಾಕೆ. ಕನ್ನಡ... ಕನ್ನಡ... ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ದಾಳಿಯಾಗಿರುವುದು" ಎಂದು ಸೋನು ನಿಗಮ್‌ ಹೇಳಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿರುವ ಈ ಜನಪ್ರಿಯ ಗಾಯಕ ಮಾತಿನ ಭರದಲ್ಲಿ "ಪಹಲ್ಗಾಮ್‌" ತಂದಿರುವುದು ವಿವಾದಕ್ಕೆ ಕಾರಣವಾಗಿದೆ. ಸೋನು ನಿಗಮ್‌ ಕ್ಷಮೆ ಕೋರಬೇಕೆಂದು ಜನರು ಆಗ್ರಹಿಸಿದ್ದರು. ಇದಾದ ಬಳಿಕ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಗಾಯಕ "ನಾನು ಏಕೆ ಪೆಹಲ್ಗಾಮ್‌ ಉಲ್ಲೇಖಿಸಿದೆ" ಎಂದು ಹೇಳಿದ್ದರು. "ಎದುರಲ್ಲಿದ್ದ ನಾಲ್ಕೈದು ಜನರು ಗೂಂಡಾಗಳಿಗೆ ಮಾತ್ರ ನಾನು ಈ ರೀತಿ ಹೇಳಿದೆ. ಅವರಿಗೆ ನಾನು ಇಂತಹ ಬೆದರಿಕೆಯ ಕುರಿತು ತಿಳಿಸಬೇಕಿತ್ತು" ಎಂದು ಹೇಳಿದ್ದರು.

ನಾನು ಕನ್ನಡ ಹಾಡುಗಳನ್ನು ಹಾಡಲು ಇಷ್ಟಪಡುವೆ. ನನಗೆ ಕರ್ನಾಟಕದ ಜನರ ಮೇಲೆ ಗೌರವವಿದೆ ಎಂದು ವಿಡಿಯೋದಲ್ಲಿ ಸೋನು ನಿಗಮ್‌ ಹೇಳಿದ್ದಾರೆ. "ನಾನು ಎಲ್ಲಾ ಭಾಷೆಗಳಲ್ಲಿಯೂ ಹಾಡುವೆ. ಆದರೆ, ನನ್ನ ಜೀವನದಲ್ಲಿ ಅತ್ಯುತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ನಾನು ನಿಮ್ಮ ಕಡೆಗೆ ಅತ್ಯಂತ ಪ್ರೀತಿಯಿಂದ ಆಗಮಿಸುವೆ. ನಾನು ಪ್ರತಿದಿನ ಶೋಗಳನ್ನು ನೀಡುತ್ತಿರುತ್ತೇನೆ. ಆದರೆ, ಕರ್ನಾಟಕದಲ್ಲಿ ಎಲ್ಲಿಯಾದರೂ ಶೋ ನಡೆಸಲು ಇದ್ದರೆ ತುಂಬಾ ಗೌರವದಿಂದ ಬರುವೆ. ಏಕೆಂದರೆ, ನೀವೆಲ್ಲ ನಮ್ಮನ್ನು ನಿಮ್ಮ ಕುಟುಂಬದವರನ್ನಾಗಿ ಮಾಡಿದ್ದೀರಿ" ಎಂದು ಸೋನು ನಿಗಮ್‌ ಬೆಂಗಳೂರಿನ ಕಾಲೇಜು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in