ಸಾವಿನ ನೋವಿನಲ್ಲೂ ಪರಿಸರದ ಬಗ್ಗೆ ಕಾಳಜಿ; ದಯವಿಟ್ಟು ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ
ಕನ್ನಡ ಸುದ್ದಿ  /  ಮನರಂಜನೆ  /  ಸಾವಿನ ನೋವಿನಲ್ಲೂ ಪರಿಸರದ ಬಗ್ಗೆ ಕಾಳಜಿ; ದಯವಿಟ್ಟು ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ

ಸಾವಿನ ನೋವಿನಲ್ಲೂ ಪರಿಸರದ ಬಗ್ಗೆ ಕಾಳಜಿ; ದಯವಿಟ್ಟು ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ, ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಪರ್ಣಾ ಅವರ ಅಂತ್ಯಕ್ರಿಯೆ ಇಂದು (ಶುಕ್ರವಾರ) ನೆರವೇರಲಿದೆ. ಅಪರ್ಣಾ ಅಂತಿಮ ದರ್ಶನ ಪಡೆಯಲು ಬರುವವರು ದಯವಿಟ್ಟು ಹೂವು-ಹಣ್ಣು, ಪ್ಲಾಸ್ಟಿಕ್‌ ವಸ್ತುಗಳನ್ನು ತರಬೇಡಿ ಎಂದು ಪತಿ ನಾಗರಾಜ್‌ ವಸ್ತಾರೆ ಮನವಿ ಮಾಡಿದ್ದಾರೆ.

ಸಾವಿನ ನೋವಿನಲ್ಲೂ ಪರಿಸರದ ಬಗ್ಗೆ ಕಾಳಜಿ; ದಯವಿಟ್ಟು ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ
ಸಾವಿನ ನೋವಿನಲ್ಲೂ ಪರಿಸರದ ಬಗ್ಗೆ ಕಾಳಜಿ; ದಯವಿಟ್ಟು ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ (PC: Aparna Vastarey , Nagaraj Ramaswamy Vastarey Facebook)

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪರ್ಣಾ ಅವರ ನಿಧನ ಕನ್ನಡ ಚಿತ್ರರಂಗ, ಕಿರುತೆರೆಗೆ ದೊಡ್ಡ ಆಘಾತ ನೀಡಿದೆ. ಕನ್ನಡದ ನಂಬರ್‌ ಒನ್‌ ನಿರೂಪಕಿ ಎಂದು ಹೆಸರಾಗಿದ್ದ ಅಪರ್ಣಾ ಅವರ ಸಾವನ್ನು ಇನ್ನೂ ಎಷ್ಟೋ ಜನರಿಗೆ ಅರಿಗಿಸಿಕೊಳ್ಳಲಾಗುತ್ತಿಲ್ಲ.

ಅಪರ್ಣಾ ನಿಧನಕ್ಕೆ ಗಣ್ಯರಿಂದ ಸಂತಾಪ

ಅಪರ್ಣಾ ವಸ್ತಾರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಸಿನಿಮಾ, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಪಷ್ಟವಾಗಿ, ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದ ಅಪರ್ಣಾ, ಕನ್ನಡಿಗರಿಗೆ ಮಾದರಿ ಎನಿಸಿಕೊಂಡಿದ್ದರು. ಅಪರ್ಣಾ ಅವರಿಗೆ 58 ವರ್ಷ ಆದರೂ ಯುವತಿಯರೂ ನಾಚುವಂತೆ ನೋಡಲು ಸುಂದರಿಯಾಗಿದ್ದರು. ಅಚ್ಚ ಕನ್ನಡತಿ, ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಬೆಂಗಳೂರು ಮೆಟ್ರೋಗೆ ಕೂಡಾ ದನಿಯಾಗಿದ್ದರು. ಅಪರ್ಣಾ ಅವರ ಅಂತ್ಯಸಂಸ್ಕಾರ ಇಂದು ಬನಶಂಕರಿಯಲ್ಲಿ ನೆರವೇರಲಿದೆ. ಈ ನಡುವೆ ಅಪರ್ಣಾ ಅವರ ಪತಿ ನಾಗರಾಜ್‌ ವಸ್ತಾರೆ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೊಂದು ಸಂದೇಶ ನೀಡಿದ್ದಾರೆ.

ಹೂವು-ಹಾರ ತರದಂತೆ ಮನವಿ

ಅಪರ್ಣಾ ಅವರ ವಿಡಿಯೋ ಹಾಗೂ ಒಂದು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಾಗರಾಜ್‌, ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದು ನಾಗರಾಜ್‌ ರಾಮಸ್ವಾಮಿ ವಸ್ತಾರೆ ಮನವಿ ಮಾಡಿದ್ದಾರೆ.

ಸಾಂತ್ವನ ಹೇಳಿದ ಅಭಿಮಾನಿಗಳು

ನಾಗರಾಜ್‌ ಅವರ ಪೋಸ್ಟ್‌ಗೆ ಸೋಷಿಯಲ್‌ ಮೀಡಿಯಾ ಯೂಸರ್‌ ಕಾಮೆಂಟ್‌ ಮಾಡಿ, ಇಂತ ಹೊತ್ತಿನಲ್ಲೂ ನಿಮ್ಮ ಪರಿಸರ ಕಾಳಜಿಗೆ ಮೆಚ್ಚಲೇಬೇಕು ಎಂದಿದ್ದಾರೆ. ಭಗವಂತ ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ, ಇಡೀ ರಾಜ್ಯದ ಎಲ್ಲರೂ ನಿಮ್ಮ ದುಃಖದಲ್ಲಿ ಭಾಗಿಗಳು ಕನ್ನಡ ಪ್ರೇಮಿ ಅಪ್ಪಟ ಕನ್ನಡತಿ ಕನ್ನಡಿಗರ ಮನೆ ಮನೆಗಳಲ್ಲಿ ಅಜರಾಮರ, ಇಂಥ ಅತಿ ನೋವಿನ ಸಮಯದಲ್ಲೂ ಸಾಮಾಜಿಕ ಕಳಕಳಿಯ ಮೆರೆಯುತ್ತಿದ್ದೀರಿ ಧನ್ಯೋಸ್ಮಿ 🙏🙏, ಭಗವಂತ ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ ಸಂಜೆ ಮೆಟ್ರೋ ದಲ್ಲಿ ಬರುವಾಗ ನೆನಪು ಮಾಡ್ಕೊಂಡಿದ್ದೆ ಸರ್.. ಭಗವಂತ ನಿಮಗೆ ಅವರ ಅಗಲಿಕೆಯ ನೋವನ್ನು ತಡೆಯುವ ಶಕ್ತಿ ಕೊಡಲಿ ಎಂದು ಕಾಮೆಂಟ್‌ ಮಾಡುವ ಮೂಲಕ ನಾಗರಾಜ್‌ ಅವರಿಗೆ ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.