ಅಪ್ಪ ಮಿಸ್ ಯೂ, ನೀವೇ ನನ್ನ ಹೀರೋ; ಕಸ್ಟಡಿಯಲ್ಲಿರೋ ದರ್ಶನ್ಗೆ ಮಗ ವಿನೀಶ್ ಕಡೆಯಿಂದ ಅಪ್ಪನ ದಿನದ ಭಾವುಕ ಪೋಸ್ಟ್
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಲವು ಕೋನಗಳಲ್ಲಿ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಇತ್ತ ಫಾದರ್ಸ್ ಡೇ ಪ್ರಯುಕ್ತ ನಟ ದರ್ಶನ್ ಅವರ ಮಗ ವಿನೀಶ್, ಅಪ್ಪನಿಗೆ ಫಾದರ್ಸ್ ಡೇ ಶುಭಾಶಯ ರವಾನಿಸಿದ್ದಾನೆ.
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಲವು ಕೋನಗಳಲ್ಲಿ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಇತ್ತ ಫಾದರ್ಸ್ ಡೇ ಪ್ರಯುಕ್ತ ನಟ ದರ್ಶನ್ ಅವರ ಮಗ ವಿನೀಶ್, ಅಪ್ಪನಿಗೆ ಫಾದರ್ಸ್ ಡೇ ಶುಭಾಶಯ ರವಾನಿಸಿದ್ದಾನೆ.
(1 / 6)
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಹತ್ಯೆ ಆರೋಪದಲ್ಲಿ ದರ್ಶನ್ ಸೇರಿ ಅವರ ಗ್ಯಾಂಗ್ ಅಂದರ್ ಆಗಿದೆ.
(2 / 6)
ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದು ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಇರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.
(3 / 6)
ಇದೇ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಕೊಲೆ ಆರೋಪದಲ್ಲಿ ಭಾಗಿಯಾದ ಬಹುತೇಕರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.
(4 / 6)
ಈ ನಡುವೆ ಇಂದು (ಜೂನ್ 16) ಫಾದರ್ಸ್ ಡೇ. ಈ ನಿಮಿತ್ತ ದರ್ಶನ್ ಪುತ್ರ ವಿನೀಶ್ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಅಪ್ಪನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
(5 / 6)
ಹ್ಯಾಪಿ ಫಾದರ್ಸ್ ಡೇ ಅಪ್ಪ. ಐ ಮಿಸ್ ಯೂ ಐ ಲವ್ ಯೂ, ನೀನು ಯಾವತ್ತಿದ್ದರೂ ನನ್ನ ಹೀರೋ ಎಂದು ಅಪ್ಪನ ಜತೆಗಿನ ಫೋಟೋಗಳ ಜತೆಗೆ ಸ್ಟೋರಿ ಶೇರ್ ಮಾಡಿದ್ದಾನೆ.
ಇತರ ಗ್ಯಾಲರಿಗಳು