ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!; ತರುಣ್‌ ಸುಧೀರ್‌
ಕನ್ನಡ ಸುದ್ದಿ  /  ಮನರಂಜನೆ  /  ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!; ತರುಣ್‌ ಸುಧೀರ್‌

ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!; ತರುಣ್‌ ಸುಧೀರ್‌

ಅವಮಾನದ ದಿನಗಳನ್ನು ನಿರ್ದೇಶಕ ತರುಣ್‌ ಸುಧೀರ್‌ ನೆನಪು ಮಾಡಿಕೊಂಡಿದ್ದಾರೆ. ಖ್ಯಾತ ನಟ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ. ಅಂದಿನ ಅವಮಾನ ಸ್ವೀಕರಿಸಿಯೇ ನಾನೀಗ ಸನ್ಮಾನಿತನಾಗಿದ್ದೇನೆ ಎಂದು ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!
ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!

Tharun Sudhir: ಅವಮಾನದ ಬಳಿಕವೇ ಸನ್ಮಾನ.. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಈ ಸಲ ಮಹಾನಟಿ ಶೋನ ಜಡ್ಜ್‌, ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಆಗಮಿಸಿ, ತಮ್ಮ ಹಿಂದಿನ ದಿನಗಳ ಪಯಣ ಹೇಗಿತ್ತು ಎಂಬುದನ್ನು ಹೇಳಿಕೊಂಡರು. ಆವತ್ತು ನನಗಾದ ಅವಮಾನವೇ ನನ್ನನ್ನು ಇದೀಗ ಜಡ್ಜ್‌ ಮಾಡಿದೆ ಎಂದೂ ಒಂದಷ್ಟು ಘಟನೆಗಳನ್ನು ನೆನಪಿಸಿಕೊಂಡು ನಸುನಕ್ಕರು. ಅವರ ಈ ಹಳೇ ನೆನಪುಗಳನ್ನು ಕೆಣಕುವಂತೆ ಮಾಡಿದ್ದು ಜಗಮಗ ಜಗಪ್ಪ ಅವರ ಮಾತುಗಳು. ಭಾವುಕವಾಗಿಯೇ ಜಗಪ್ಪ ಅನುಭವಿಸಿದ ಅವಮಾನಗಳನ್ನು ಹೇಳಿಕೊಳ್ಳುತ್ತಿದ್ದಂತೆ, ತರುಣ್‌ ಕಿಶೋರ್‌ ಸುಧೀರ್‌ ಸಹ ಅದಕ್ಕೆ ಧ್ವನಿಯಾದರು.

ಚಂದನವನ ಕಂಡ ಧೀಮಂತ ನಟರ ಸಾಲಿನಲ್ಲಿ ನಿಲ್ಲುವ, ಖಳನಟನಾಗಿಯೇ ಜನಮನಗೆದ್ದ ಹಿರಿಯ ನಟ ಸುಧೀರ್‌ ಅವರ ಕಿರಿ ಮಗ ತರುಣ್‌ ಸುಧೀರ್‌. ಅಪ್ಪ ದೊಡ್ಡ ನಟನಾದರೂ, ಸ್ಟಾರ್‌ಡಮ್‌ನಲ್ಲಿ ಬೆಳೆದರೂ, ಚಿತ್ರರಂಗದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಅಪ್ಪ ಹೋದ ಮೇಲಂತೂ ಅದು ಇನ್ನೂ ಕಠಿಣವಾಗಿತ್ತು. ನಟನಾಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಅದು ಹೆಚ್ಚು ಮನ್ನಣೆ ತಂದು ಕೊಡಲಿಲ್ಲ. ಹೀಗಿರುವಾಗ ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ನಿರ್ಮಾಣ ಮಾಡುವ ಕೆಲಸಕ್ಕಿಳಿಯುತ್ತಾರೆ. ಅಲ್ಲಿಯೂ ಚುಚ್ಚು ಮಾತುಗಳನ್ನು ಅನುಭವಿಸಿದ್ದಾರೆ. ಆದರೆ, ಅಲ್ಲಿಂದಲೇ ಗೆಲುವು ಹಳಿಗೇರಿತು!

ನಟನಾಗಿ ಉದ್ಧಾರ ಆಗ್ಲಿಲ್ಲ ಎಂದಿದ್ರು..

ಈ ಸೋಲಿನಿಂದ, ಅವಮಾನದಿಂದ ಹೇಗೆ ಸನ್ಮಾನದ ವರೆಗೂ ಬಂತು ಎಂಬುದನ್ನು ನಿರ್ದೇಶಕ ತರುಣ್ ಸುಧೀರ್‌ ಹೇಳಿಕೊಂಡಿದ್ದಾರೆ. "ನಮ್ಮ ಇಂಡಸ್ಟ್ರಿಯದ್ದು ಪ್ಲಸೂ ಅದೇ ಮೈನಸ್ಸೂ ಅದೇ. ನಮಗೆ ಏನೇ ಆದರೂ ಅವಮಾನದಿಂದಲೇ ಶುರುವಾಗೋದು. ಅದು ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಅವಮಾನ ಆಗಿ ಅದಾದ ಬಳಿಕ ನಾವು ಸನ್ಮಾನಕ್ಕೆ ಬರ್ತೀವಿ. ಜಗಪ್ಪ ಕ್ಯಾಬ್‌ ಡ್ರೈವರ್‌ ಆಗಿ ಇಲ್ಲಿಯವರೆಗೂ ಬಂದಿದ್ದಾನೆ ಅಂತಲ್ಲ. ಹಿರಿಯ ಕಲಾವಿದ, ಸ್ಟಾರ್‌ ನಟ ಆಗಿರೋ ಸುಧೀರ್‌ ಮಗ ಆದವನೂ ಕೂಡ ಅದನ್ನೇ ಎದುರಿಸ್ತಾನೆ"

"ನಾನು ಮೊದಲಿಗೆ ರ್ಯಂಬೋ ಅಂತ ಸಿನಿಮಾ ಶುರುಮಾಡ್ತಿನಿ. ಶರಣ್‌ ಪ್ರೊಡ್ಯೂಸರ್‌ ಆಗ್ತಾನೆ. ಅಂದುಕೊಂಡಿದ್ದ ಬಜೆಟ್‌ಗೆ ದುಡ್ಡು ಸಾಕಾಗಲ್ಲ. ಇನ್ನೊಬ್ಬರು ಪ್ರೊಡ್ಯೂಸರ್‌ ಬರಬೇಕಿತ್ತು. ಅವರೂ ಬರಲ್ಲ. ಆಗ ಶರಣ್‌ ತನ್ನ ಮನೆ ಅಡ ಇಡ್ತಾನೆ. ಅದೇ ದುಡ್ಡು ತರ್ತಾನೆ. ಆಗ ಶೂಟಿಂಗ್‌ ಮಾಡ್ತಿದಿವಿ ಅನ್ನೋ ಖುಷಿ ನಮ್ಮೆಲ್ಲರಿಗೂ. ಹೊರಗಡೆ ಏನಾಗ್ತಿದೆ ಅಂತಾನೇ ನಮಗೆ ಗೊತ್ತಿಲ್ಲ. ಯಾವತ್ತೋ ನಮ್ಮ ಪಕ್ಕದಲ್ಲಿ ಒಬ್ಬರು ಪ್ರೊಡಕ್ಷನ್‌ ಮ್ಯಾನೇಜರ್, ನನ್ನ ಫ್ರೆಂಡ್‌ಗೆ ಫೋನ್‌ನಲ್ಲಿ ಔಟ್‌ ಸ್ಪೀಕರ್‌ ಇಟ್ಟು ಮಾತನಾಡ್ತಿದ್ರು. ಆಗ ಅವರಾಡಿದ ಮಾತು ನನಗೂ ಕೇಳಿಸಿತು"

ಆಪ್ತ ಸ್ನೇಹಿತನೇ ಚುಚ್ಚು ಮಾತನಾಡಿದ..

"ಯಾವ ಸಿನಿಮಾ ಮಾಡ್ತಿದಿರಿ ಎಂದೆಲ್ಲ ವಿಚಾರಿಸಿದ್ದಾರೆ. ಆಗ ರ್ಯಾಂಬೋ ಎಂದು ಪ್ರೊಡಕ್ಷನ್‌ ಮ್ಯಾನೇಜರ್‌ ಹೇಳಿದ್ದಾರೆ. ಓಹ್‌ ತರುಣಂದು ಅಲ್ವಾ? ಅವ್ನು ಆಕ್ಟರ್‌ ಆಗಿಯಂತೂ ಉದ್ಧಾರ ಆಗಲಿಲ್ಲ. ಶರಣ ಹೆಂಗೋ ಕಾಮಿಡಿ ಮಾಡ್ತಾ ಹೊಟ್ಟೆಪಾಡು ನಡೆಸ್ತಿದ್ದ. ಇದೀಗ ಅವನ್ನೂ ಕರೆದಿಕೊಂಡು ಬಂದು, ಮನೆನೂ ಅಡ ಇಡಿಸಿ ತರುಣನೂ ಬೀದಿಗೆ ಬರ್ತಾನೆ, ಶರಣನೂ ಬೀದಿಗೆ ಬರ್ತಾನೆ ನೋಡ್ತಿರು ಎಂದಿದ್ದರು. ಹಾಗೆ ಹೇಳಿದವನು ಬೇರಾರು ಅಲ್ಲ ನನ್ನ ಸ್ನೇಹಿತ. ದಿನನಿತ್ಯ ನಮ್ಮ ಒಡನಾಟ ಇದೆ. ಅವನ ಮೇಲೆ ನನಗೆ ಬೇಜಾರ್‌ ಆಗ್ಲಿಲ್ಲ.

“ಹೌದಲ್ವ ನಾನು ಈ ವರೆಗೂ ಪ್ರೂವ್‌ ಮಾಡಿಲ್ವಲ್ಲ ಅನ್ಕೋಳ್ತಿನಿ. ಆಗ ರ್ಯಾಂಬೋ ಹಿಟ್‌ ಆಗುತ್ತೆ. ಅದಾದ ಮೇಲೆ ಅಣ್ಣ ನಂದಕಿಶೋರ್‌ನ ಡೈರೆಕ್ಷನ್‌ನ ಕರೆದುಕೊಂಡು ಬರ್ತೀನಿ. ವಿಕ್ಟರಿ ಮಾಡ್ತಿವಿ, ಅಧ್ಯಕ್ಷ ಆಗುತ್ತೆ. ರನ್ನ ಬ್ಲಾಕ್‌ ಬಸ್ಟರ್‌ ಹಿಟ್‌ ಆಗುತ್ತೆ. ಆಗ ನನ್ನ ನಿರ್ದೇಶನದಲ್ಲಿ ಚೌಕ ಶುರುವಾಗುತ್ತೆ. ಆಗಲೂ ಮತ್ತೊಂದು ಟಾಕ್‌ ಕೇಳಿಬರುತ್ತೆ. ಅವರ ಅಣ್ಣನ ನೆರಳಿನಲ್ಲಿ ಬಂದ ಎಂದು ಚುಚ್ಚು ಮಾತಾಡ್ತಾರೆ. ಈಗ ಅವ್ನು ಚೌಕ್‌ ಮೂಲಕ ಇಂಡಿಪೆಂಡೆಂಟ್‌ ಆಗಿ ಬರ್ತಾನಲ್ಲ. ನೋಡೋಣ ಏನ್‌ ಮಾಡ್ತಾನೆ ಅಂತ ಅಂತಾರೆ”

ಇದೀಗ ಗೆಲುವು ನನ್ನ ಜತೆಗಿದೆ..

ಆವಾಗಲೇ ನಾನು ಸ್ಟಾರ್‌ ಹೀರೋ ಜತೆ ಬರಬಹುದಿತ್ತು. ಬರಲಿಲ್ಲ. ನನ್ನ ತಲೆಯಲ್ಲಿ ಇದ್ದಿದ್ದು ಏನಂದ್ರೆ ನಾನು ನಿರ್ದೇಶಕನಾಗಿ ಪ್ರೂವ್‌ ಆಗಬೇಕು ಎಂದುಕೊಂಡು ಆವತ್ತಿನ ದಿನಗಳಲ್ಲಿ ನಾಲ್ಕು ಜನ ಸ್ಟ್ರಗಲ್‌ ಮಾಡ್ತಿದ್ದ ನಟರನ್ನು ಕರೆದುಕೊಂಡು ಬಂದೆ. ಅವರ ಜತೆ ಸೇರಿ ಚೌಕ ಸಿನಿಮಾ ಮೂಡಿಬರುತ್ತೆ. ಆ ಸಿನಿಮಾ ದೇವರು ಕೈ ಹಿಡೀತಾನೆ. ಅಲ್ಲಿಂದ ನನಗೆ ಒಬ್ಬ ಸೂಪರ್‌ಸ್ಟಾರ್‌ ಸಾಥ್‌ ಕೊಡ್ತಾರೆ. ಅಲ್ಲಿಂದ ನನ್ನ ಜರ್ನಿ ಇದೀಗ ಕಾಟೇರ ವರೆಗೂ ಬಂದು ನಿಂತು, ಈ ವೇದಿಕೆ ಮೇಲೆ ತೀರ್ಪುಗಾರನಾಗಿ ಕಾಣಿಸಿಕೊಳ್ತಿನಿ ಅಂದ್ರೆ, ಆವತ್ತಿನ ಅವಮಾನವೇ ಕಾರಣ" ಎಂದಿದ್ದಾರೆ ತರುಣ್‌ ಸುಧೀರ್.

Whats_app_banner