ಕನ್ನಡ ಸುದ್ದಿ  /  Entertainment  /  Sandalwood News Pavitra Lokesh Naresh Krishna Starrer Matte Maduve Movie Failed To Get Investment Tollywood Amount Rsm

Matte Maduve: ತಲೆಕೆಳಗಾದ ಪವಿತ್ರಾ ಲೋಕೇಶ್‌ ನರೇಶ್‌ ಕೃಷ್ಣ ಲೆಕ್ಕಾಚಾರ: ಹಾಕಿದ ಬಂಡವಾಳವನ್ನೂ ಗಳಿಸಲು ವಿಫಲವಾಯ್ತು ಮಳ್ಳಿ ಪೆಳ್ಳಿ ಸಿನಿಮಾ

'ಮಳ್ಳಿ ಪೆಳ್ಳಿ' ಸಿನಿಮಾಗೆ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾ ದೊಡ್ಡ ಹಿಟ್‌ ಆಗಲಿದೆ, ಕೋಟ್ಯಂತರ ಹಣ ಕಲೆಕ್ಷನ್‌ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಹಾಕಿದ ಬಂಡವಾಳದ ಕಾಲು ಭಾಗ ಹಣವನ್ನೂ ಕಲೆಕ್ಷನ್‌ ಮಾಡುವಲ್ಲಿ ಕೂಡಾ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ನರೇಶ್‌ ಕೃಷ್ಣ, ಪವಿತ್ರಾ ಲೋಕೇಶ್
ನರೇಶ್‌ ಕೃಷ್ಣ, ಪವಿತ್ರಾ ಲೋಕೇಶ್

ನರೇಶ್‌ ಕೃಷ್ಣ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ 'ಮಳ್ಳಿ ಪೆಳ್ಳಿ' ಸಿನಿಮಾ ಕಳೆದ ಮೇ 26ರಂದು ತೆರೆ ಕಂಡಿದೆ. ಕಳೆದ ವರ್ಷ ಇಬ್ಬರೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ನಂತರ ನಡೆದ ಘಟನೆಗಳ ತುಣುಕು ಸಿನಿಮಾ ಟ್ರೇಲರ್‌ನಲ್ಲಿ ಇದ್ದರೂ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಸಿನಿಮಾ ಅಲ್ಲ ಎಂದು ಇಬ್ಬರೂ ವಾದಿಸಿದ್ದರು.

ಸಿನಿಮಾ, ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ' ಹಾಗೂ ಕನ್ನಡದಲ್ಲಿ 'ಮತ್ತೆ ಮದುವೆ' ಹೆಸರಿನಲ್ಲಿ ರಿಲೀಸ್‌ ಆಗಿದೆ. ಇಬ್ಬರಿಗೂ ದೊರೆತ ಪಬ್ಲಿಸಿಟಿಯನ್ನು ನೋಡಿ, ಈ ಸಿನಿಮಾ ಕೂಡಾ ಭಾರೀ ಲಾಭ ಮಾಡಬಹುದು, ಸಿನಿಮಾ ದೊಡ್ಡ ಯಶಸ್ಸು ಕಾಣಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿದೆ. ನರೇಶ್‌ ಹಾಗೂ ಪವಿತ್ರಾ ಇದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಮಳ್ಳಿ ಪೆಳ್ಳಿ ಸಿನಿಮಾಗೆ ಅವರಿಗೆ ಸ್ಫೂರ್ತಿ ದೊರೆತದ್ದು ಇತ್ತೀಚೆಗೆ ಅವರ ಜೀವನದಲ್ಲಿ ನಡೆದ ಘಟನೆಗಳಿಂದ.

ನರೇಶ್‌ ಹಾಗೂ ಪವಿತ್ರಾ ಮದುವೆ ಆಗಲು ಹೊರಟಿದ್ದಾರೆ. ಆದರೆ ನರೇಶ್‌ ಎರಡನೇ ಪತ್ನಿ ರಮ್ಯಾ ರಘುಪತಿಗೆ ಇನ್ನೂ ಡಿವೋರ್ಸ್‌ ನೀಡಿಲ್ಲ ಎಂಬ ಸುದ್ದಿ ಬಹಳ ವೈರಲ್‌ ಆಯ್ತು. ಇದರ ಬೆನ್ನಲ್ಲೇ ಮೈಸೂರಿನ ಹೋಟೆಲ್‌ವೊಂದರಲ್ಲಿ ಇಬ್ಬರೂ ಒಟ್ಟಿಗೆ ಕ್ಯಾಮರಾಗಳ ಕಣ್ಣಿಗೆ ಬಿದ್ದರು. ತಮ್ಮ ಹಿಂದೆ ಬಿದ್ದಿರುವ ಮಾಧ್ಯಮಗಳ ವಿರುದ್ಧ ಪವಿತ್ರಾ ಲೋಕೇಶ್‌ ಪೊಲೀಸರಿಗೆ ದೂರು ನೀಡಿದ್ದರು. ನಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಂಡು ತಿರುತ್ತಿದ್ದ ಇಬ್ಬರೂ ಇತ್ತೀಚೆಗೆ 'ಮತ್ತೆ ಮದುವೆ' ಸಿನಿಮಾ ಪ್ರಮೋಷನ್‌ಗೆ ಬೆಂಗಳೂರಿಗೆ ಬಂದ ಸಮಯದಲ್ಲಿ ತಾವು ಲಿವ್‌ ಇನ್‌ ರಿಲೇಶನ್‌ನಲ್ಲಿ ಇರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು.

'ಮಳ್ಳಿ ಪೆಳ್ಳಿ' ಸಿನಿಮಾಗೆ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾ ದೊಡ್ಡ ಹಿಟ್‌ ಆಗಲಿದೆ, ಕೋಟ್ಯಂತರ ಹಣ ಕಲೆಕ್ಷನ್‌ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಹಾಕಿದ ಬಂಡವಾಳದ ಕಾಲು ಭಾಗ ಹಣವನ್ನೂ ಕಲೆಕ್ಷನ್‌ ಮಾಡುವಲ್ಲಿ ಕೂಡಾ ವಿಫಲವಾಗಿದೆ. ಮಾಹಿತಿ ಪ್ರಕಾರ ತೆಲುಗಿನಲ್ಲಿ ಈ ಸಿನಿಮಾ 30 ಲಕ್ಷ ರೂಪಾಯಿ ಮಾತ್ರ ಗಳಿಸಿದ್ದು ಕನ್ನಡದಲ್ಲಿ ಮತ್ತೆ ಮದುವೆ ಸಿನಿಮಾ ಜೂನ್‌ 9 ರಂದು ರಿಲೀಸ್‌ ಆಗುತ್ತಿದ್ದು ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕು.

'ಮತ್ತೆ ಮದುವೆ' ಸಿನಿಮಾವನ್ನು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ನರೇಶ್‌, ಪವಿತ್ರಾ ಲೋಕೇಶ್‌, ಜಯಸುಧ, ಶರತ್ ಬಾಬು, ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ನಟಿಸಿದ್ದಾರೆ.

ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ಪವಿತ್ರಾ ಲೋಕೇಶ್

ಇತ್ತೀಚೆಗೆ ನಟಿ ಪವಿತ್ರಾ ಲೋಕೇಶ್‌ ಬಳ್ಳಾರಿ ಹೊಸಪೇಟೆಯ ಹಂಪಿ ಕನ್ಡಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಒಂದು ವಾರದ ಹಿಂದೆ ಪ್ರೇಮಿ ನರೇಶ್‌ ಕೃಷ್ಣ ಜೊತೆಗೆ ಹಂಪಿಯ ವಿದ್ಯಾನಗರಕ್ಕೆ ಆಗಮಿಸಿದ್ದರು. ಪ್ರವೇಶ ಪರೀಕ್ಷೆ ಬರೆದ ನಂತರ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಸಿನಿಮಾ ಸೋತ ನಂತರ ನರೇಶ್‌ ಪವಿತ್ರಾ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು.

IPL_Entry_Point