ಧೀರೇನ್‌ ರಾಮ್‍ಕುಮಾರ್‌ಗೆ ಪ್ರೇಮ್‍ ಮಗಳು ನಾಯಕಿ; ‘ಟಗರು ಪಲ್ಯ’ ಚೆಲುವೆ ‘ಪಬ್ಬಾರ್‌’ ಚಿತ್ರದಲ್ಲಿ ನಟನೆ
ಕನ್ನಡ ಸುದ್ದಿ  /  ಮನರಂಜನೆ  /  ಧೀರೇನ್‌ ರಾಮ್‍ಕುಮಾರ್‌ಗೆ ಪ್ರೇಮ್‍ ಮಗಳು ನಾಯಕಿ; ‘ಟಗರು ಪಲ್ಯ’ ಚೆಲುವೆ ‘ಪಬ್ಬಾರ್‌’ ಚಿತ್ರದಲ್ಲಿ ನಟನೆ

ಧೀರೇನ್‌ ರಾಮ್‍ಕುಮಾರ್‌ಗೆ ಪ್ರೇಮ್‍ ಮಗಳು ನಾಯಕಿ; ‘ಟಗರು ಪಲ್ಯ’ ಚೆಲುವೆ ‘ಪಬ್ಬಾರ್‌’ ಚಿತ್ರದಲ್ಲಿ ನಟನೆ

‘ಟಗರು ಪಲ್ಯ’ ಚಿತ್ರದ ನಂತರ ‘ನೆನಪಿರಲಿ’ ಪ್ರೇಮ್‍ ಮಗಳು ಅಮೃತಾ ಪ್ರೇಮ್‍, ‘ಅಮ್ಮು’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಇದೀಗ ಅಮೃತಾ ಸದ್ದಿಲ್ಲದೆ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಅವರು ಧೀರೇನ್‍ ರಾಮ್‍ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. (ವರದಿ: ಚೇತನ್‌ ನಾಡಿಗೇರ್‌)

ಧೀರೇನ್‌ ರಾಮ್‍ಕುಮಾರ್‌ಗೆ ಪ್ರೇಮ್‍ ಮಗಳು ನಾಯಕಿ;  ‘ಪಬ್ಬಾರ್‌’ ಚಿತ್ರದಲ್ಲಿ ನಟನೆ
ಧೀರೇನ್‌ ರಾಮ್‍ಕುಮಾರ್‌ಗೆ ಪ್ರೇಮ್‍ ಮಗಳು ನಾಯಕಿ; ‘ಪಬ್ಬಾರ್‌’ ಚಿತ್ರದಲ್ಲಿ ನಟನೆ

‘ಟಗರು ಪಲ್ಯ’ ಚಿತ್ರದ ನಂತರ ‘ನೆನಪಿರಲಿ’ ಪ್ರೇಮ್‍ ಮಗಳು ಅಮೃತಾ ಪ್ರೇಮ್‍, ‘ಅಮ್ಮು’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಅದು ಬಿಟ್ಟು ಬೇರೆ ಯಾವ ಚಿತ್ರವನ್ನೂ ಅವರು ಒಪ್ಪಿರಲಿಲ್ಲ. ಇದೀಗ ಅಮೃತಾ ಸದ್ದಿಲ್ಲದೆ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಅವರು ಧೀರೇನ್‍ ರಾಮ್‍ಕುಮಾರ್‍ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

‘ಶಿವ 143’ ಚಿತ್ರದ ನಂತರ ಧೀರೇನ್‍, ಒಂದೆರಡು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತಾದರೂ, ಯಾವುದೇ ಚಿತ್ರವೂ ಸೆಟ್ಟೇರಿರಲಿಲ್ಲ. ಇದೀಗ ಅವರು ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕೆ ‘ಪಬ್ಬಾರ್‍’ ಎಂದು ಹೆಸರಿಡಲಾಗಿದೆ. ಈ ಹಿಂದೆ ‘ಶಾಖಾಹಾರಿ’ ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್‍ ಸುಂಕದ್‍ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಧೀರೇನ್‍ಗೆ ನಾಯಕಿಯಾಗಿ ಅಮೃತಾ ನಟಿಸುತ್ತಿರುವುದು ವಿಶೇಷ. ಈ ಚಿತ್ರದ ಮುಹೂರ್ತ ಇಂದು ನಡೆಯಲಿದೆ.

ಧೀರೇನ್‍, ‘ಶಾಖಾಹಾರಿ’ ಚಿತ್ರ ನೋಡಲು ಬಂದಿದ್ದಾಗ ಸಂದೀಪ್‍ ಸುಂಕದ್‍ ಪರಿಚಯವಾಯಿತಂತೆ. ಒಂದೊಳ್ಳೆಯ ಕಥೆ ಇದ್ದರೆ ಹೇಳಿ ಎಂದು ಆಗಲೇ ಹೇಳಿದ್ದರಂತೆ. ಅದರಂತೆ ಸಂದೀಪ್‍ ತಮ್ಮ ಸ್ಟಾಕ್‍ನಲ್ಲಿದ್ದ ಒಂದು ಕಥೆಯನ್ನು ಹೇಳಿದ್ದಾರೆ. ಅದು ಇಷ್ಟವಾಗಿ, ಧೀರೇನ್‍ ನಟಿಸಲು ಮುಂದಾದರಂತೆ. ಆ ನಂತರ ಶಿವರಾಜಕುಮಾರ್‍ ಮತ್ತು ಗೀತಾ ಶಿವರಾಜಕುಮಾರ್ ಕಥೆ ಕೇಳಿ, ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ.

ಶಾಖಾಹಾರಿ’ ಚಿತ್ರದ ಕಥೆ ತೀರ್ಥಹಳ್ಳಿಯಲ್ಲಿ ನಡೆದರೆ, ಈ ಚಿತ್ರದ ಕಥೆ ಕರ್ನಾಟಕದಿಂದ ಹಿಮಾಚಲ ಪ್ರದೇಶದವರೆಗೂ ನಡೆಯಲಿದೆ. ಈ ಚಿತ್ರಕ್ಕಾಗಿ ಧೀರೇನ್‍ ತಮ್ಮ ಲುಕ್‍ ಬದಲಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿಯೇ ಸುಮಾರು 12 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದಾರಂತೆ. ಇದೊಂದು ನೈಜ ಚಿತ್ರವಾಗಲಿದ್ದು, ಹೀರೋಯಿಸಂ, ನಾಯಕನ ವಿಜೃಂಭಣೆ ಯಾವುದೂ ಇರುವುದಿಲ್ಲವಂತೆ. ಈ ಚಿತ್ರದಲ್ಲಿ ಧೀರೇನ್‍ ಮತ್ತು ಅಮೃತಾ ಜೊತೆಗೆ ಅಚ್ಯುತ್‍ ಕುಮಾರ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸುತ್ತಿದ್ದಾರೆ.

‘ಪಬ್ಬಾರ್‌’ ಚಿತ್ರಕ್ಕೆ ಸಂದೀಪ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನವನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್‍ ರಾವ್‍ ಛಾಯಾಗ್ರಹಣ ಮತ್ತು ಮಯೂರ ಅಂಬೆಕಲ್ಲು ಅವರ ಸಂಗೀತವಿದೆ. ಬೆಂಗಳೂರು, ಮಡಿಕೇರಿ, ಮೈಸೂರು ಹಾಗೂ ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. (ವರದಿ: ಚೇತನ್‌ ನಾಡಿಗೇರ್‌)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in