ರವಿಚಂದ್ರನ್‌ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್‌ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು
ಕನ್ನಡ ಸುದ್ದಿ  /  ಮನರಂಜನೆ  /  ರವಿಚಂದ್ರನ್‌ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್‌ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು

ರವಿಚಂದ್ರನ್‌ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್‌ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು

ಶಾಂತಿಕ್ರಾಂತಿ ಸಿನಿಮಾವನ್ನು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್‌, ನಾಗಾರ್ಜುನ, ಜೂಹಿ ಚಾವ್ಲಾ ಎಂಬ ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದ್ದರು. ಈ ಸಿನಿಮಾಕ್ಕೆ ಕನ್ನಡ ನಟ ರವಿಚಂದ್ರನ್‌ ಕಥೆ, ನಿರ್ದೇಶನವಿತ್ತು. ಇವರೇ ನಿರ್ಮಿಸಿದ್ದರು. ಕನ್ನಡದಲ್ಲಿ ರವಿಚಂದ್ರನ್‌ ನಟಸಿದ್ದರು.

ರವಿಚಂದ್ರನ್‌ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್‌ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು
ರವಿಚಂದ್ರನ್‌ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್‌ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು

ರವಿಚಂದ್ರನ್‌ ಕನ್ನಡದ ಪ್ರತಿಭಾನ್ವಿತ ನಟ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದಾರೆ. ಅವರ ಸಿನಿ ಸಾಹಸಗಳಲ್ಲಿ ಶಾಂತಿ ಕ್ರಾಂತಿ ಸಿನಿಮಾವನ್ನು ಮರೆಯುವಂತೆ ಇಲ್ಲ. ಕೆಲವೊಮ್ಮೆ ಬಿಗ್‌ ಬಜೆಟ್‌ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್‌ಹಿಟ್‌ ಆಗಬೇಕೆಂದಿಲ್ಲ. 1991ರಲ್ಲಿ ಬಿಡುಗಡೆಯಾದ ಪ್ಯಾನ್‌ ಇಂಡಿಯಾ ಸಿನಿಮಾ "ಶಾಂತಿ ಕ್ರಾಂತಿ" ಇದಕ್ಕೆ ಸೂಕ್ತ ಉದಾಹರಣೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ರಜನಿಕಾಂತ್‌, ನಾಗಾರ್ಜುನಾ ಮತ್ತು ಜೂಹಿ ಚಾಹ್ಲಾ ಎಂಬ ಮೂವರು ಸೂಪರ್‌ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡ ನಟ ಮತ್ತು ನಿರ್ದೇಶಕ ವಿ ರವಿಚಂದ್ರನ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಇದು ಇವರದ್ದೇ ನಿರ್ಮಾಣದ ಸಿನಿಮಾ. ಕನ್ನಡ ವರ್ಷನ್‌ ಶಾಂತಿ ಕ್ರಾಂತಿಯಲ್ಲಿ ರವಿಚಂದ್ರನ್‌ ನಟಿಸಿದ್ದರು. ತೆಲುಗು ಭಾಷೆಯಲ್ಲಿ ನಾಗಾರ್ಜುನಾ‌ ನಟಿಸಿದ್ದರು. ಹಿಂದಿ ಮತ್ತು ತಮಿಳು ಭಾಷೆಯಲ್ಲ ರಜನಿಕಾಂತ್‌ ನಟಿಸಿದ್ದರು. ಜೂಹಿ ಚಾಹ್ಲಾ, ಖುಷ್ಬು, ಅನಂತ್‌ ನಾಗ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್‌ ಆಗುತ್ತಿದ್ದರೆ ಸ್ಯಾಂಡಲ್‌ವುಡ್‌‌ ಆ ಕಾಲದಲ್ಲಿ ಇನ್ನೊಂದು ಎತ್ತರಕ್ಕೆ ತಲುಪುತ್ತಿತ್ತು. ಕನ್ನಡದಿಂದಲೇ ಹಲವು ಪ್ಯಾನ್‌ ಇಂಡಿಯಾ ಸಿನಿಮಾಗಳು ತಯಾರಾಗುತ್ತಿತ್ತೋ ಏನೋ.

ಶಾಂತಿ ಕ್ರಾಂತಿ ಸಿನಿಮಾವು ಬಿಗ್‌ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ರವಿಚಂದ್ರನ್‌ ತನ್ನ ಜೀವಮಾನದ ಗಳಿಕೆಯನ್ನೆಲ್ಲ ಈ ಸಿನಿಮಾಕ್ಕೆ ಸುರಿದಿದ್ದರು. ಕ್ಲೈಮ್ಯಾಕ್ಸ್‌ ದೃಶ್ಯವನ್ನು 50 ಎಕರೆ ಬಾಡಿಗೆ ಸ್ಥಳದಲ್ಲಿ ಮಾಡಿದ್ದರು. ಸಿನಿಮಾದ ದೊಡ್ಡ ಸೆಟ್‌ಗಳಿಗೆ ಸಾಕಷ್ಟು ವೆಚ್ಚ ಮಾಡಿದ್ದರು. 1988 ರಲ್ಲಿ ಸಿನಿಮಾದ ಶೂಟಿಂಗ್‌ ಆರಂಭವಾಗಿತ್ತು. ಈ ಸಿನಿಮಾ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಯಿತು.

ಆ ಸಮಯದಲ್ಲಿ ಶಾಂತಿ ಕ್ರಾಂತಿಯು ಅತ್ಯಧಿಕ ದುಬಾರಿ ಬಜೆಟ್‌ನ ಸಿನಿಮಾವಾಗಿತ್ತು. ಆ ಕಾಲದಲ್ಲಿ 8 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಸೆಪ್ಟೆಂಬರ್‌1991ರಲ್ಲಿ ರಿಲೀಸ್‌ ಆಯಿತು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಮೂವರು ಬಿಗ್‌ ಸ್ಟಾರ್‌ಗಳು ಇದ್ರು. ಆದರೆ, ಯಾವುದೇ ಭಾಷೆಯಲ್ಲಿಯೂ ಉತ್ತಮ ಓಪನಿಂಗ್‌ ಪಡೆಯಲಿಲ್ಲ. ಈ ಸಿನಿಮಾದ ಒಟ್ಟು ಗಳಿಕೆ ಕೇವಲ 8 ಕೋಟಿ ರೂಪಾಯಿ ಆಗಿತ್ತು. ಹಾಕಿರುವ ಬಜೆಟ್‌ ವಾಪಸ್‌ ಬಂದಿರಲಿಲ್ಲ.

ಈ ಸಿನಿಮಾ ರವಿಚಂದ್ರನ್‌ ಅವರನ್ನು ದಿವಾಳಿಯಾಗಿಸಿತ್ತು. ಅಕ್ಷರಶಃ ಇವರನ್ನು ಬೀದಿಗೆ ತಂದು ನಿಲ್ಲಿಸಿತ್ತು. ಜೀವನದಲ್ಲಿ ಇಂತಹ ಅನೇಕ ಏಳುಬೀಳುಗಳ ನಡುವೆಯೂ ಸಿನಿಮಾ ಜರ್ನಿ ಮುಂದುವರೆಸಿದರು. ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.

ಶಾಂತಿಕ್ರಾಂತಿ ಸಿನಿಮಾದ ತೆಲುಗು ಮತ್ತು ಕನ್ನಡ ಆವೃತ್ತಿಗಳು ಸೆಪ್ಟೆಂಬರ್ 19, 1991 ರಂದು ಬಿಡುಗಡೆಯಾದವು. ನಂತರ ತಮಿಳು ಆವೃತ್ತಿಯು ಅಕ್ಟೋಬರ್ 2, 1991ರಂದು ಬಿಡುಗಡೆಯಾಯಿತು. ತಮಿಳು ಆವೃತ್ತಿಯನ್ನು ನಂತರ ತೆಲುಗಿಗೆ ಪೊಲೀಸ್ ಬುಲೆಟ್ ಎಂಬ ಶೀರ್ಷಿಕೆಯಡಿಯಲ್ಲಿ ಡಬ್ ಮಾಡಲಾಯಿತು . ಕನ್ನಡದಲ್ಲಿ ಶಾಂತಿಕ್ರಾಂತಿಯಲ್ಲಿ ರಮೇಶ್‌ ಅರವಿಂದ್‌, ಬೇಬಿ ಅನು ಪ್ರಭಾಕರ್‌, ರೇಖಾದಾಸ್‌ ಮಂತಾದವರು ನಟಿಸಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in