ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌
ಕನ್ನಡ ಸುದ್ದಿ  /  ಮನರಂಜನೆ  /  ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌

ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌

ಗಾಯಕ ಸೋನು ನಿಗಮ್‌ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ "ಕನ್ನಡ ಹಾಡು ಮತ್ತು ಪೆಹಲ್ಗಾಮ್‌ ಹೇಳಿಕೆ"ಗೆ ಸಂಬಂಧಪಟ್ಟಂತೆ ವಿವಾದಕ್ಕೆ ಈಡಾಗಿದ್ದರು. ಇಂದು ಕನ್ನಡ ಚಿತ್ರರಂಗದ ಪ್ರಮುಖರು ಫಿಲ್ಮ್‌ಚೇಂಬರ್‌ನಲ್ಲಿ ಸಭೆ ನಡೆಸಿದ್ದಾರೆ. ಇದಾದ ಬಳಿಕ ಗಾಯಕ ಸೋನು ನಿಗಮ್‌ ದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌
ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌

ಗಾಯಕ ಸೋನು ನಿಗಮ್‌ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ "ಕನ್ನಡ ಹಾಡು ಮತ್ತು ಪೆಹಲ್ಗಾಮ್‌ ಹೇಳಿಕೆ"ಗೆ ಸಂಬಂಧಪಟ್ಟಂತೆ ವಿವಾದಕ್ಕೆ ಈಡಾಗಿದ್ದರು. ಇಂದು ಕನ್ನಡ ಚಿತ್ರರಂಗದ ಪ್ರಮುಖರು ಫಿಲ್ಮ್‌ಚೇಂಬರ್‌ನಲ್ಲಿ ಸಭೆ ನಡೆಸಿದ್ದಾರೆ. ಇದಾದ ಬಳಿಕ ಗಾಯಕ ಸೋನು ನಿಗಮ್‌ ದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಈ ಹಿಂದಿನ ನಿಲುವಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. "ಯಾರ ತಪ್ಪು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಗಾಯಕ ಸೋನು ನಿಗಮ್‌ ಹೀಗಂದ್ರು

"ನಮಸ್ಕಾರ" (ಕನ್ನಡದಲ್ಲಿ ಬರೆದಿದ್ದಾರೆ).ಬಳಿಕ ಇಂಗ್ಲಿಷ್‌ನಲ್ಲಿ ಈ ರೀತಿ ಬರೆದಿದ್ದಾರೆ. "ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಎಲ್ಲೇ ಇದ್ದರೂ ರಾಜ್ಯದ ಜನರಿಗೆ, ಭಾಷೆಗೆ, ಸಂಸ್ಕೃತಿ, ಸಂಗೀತ, ಸಂಗೀತಗಾರರಿಗೆ ಅಭೂತಪೂರ್ವ ಗೌರವ ನೀಡಿದ್ದೇನೆ. ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು ಹೆಚ್ಚು ಗೌರವಿಸುತ್ತೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು ವೀಡಿಯೊಗಳು ಇವೆ. ಕರ್ನಾಟಕದಲ್ಲಿ ನೀಡುವ ಪ್ರತಿ ಸಂಗೀತ ಕಚೇರಿಗೂ ನಾನು ಸಿದ್ಧಪಡಿಸುವ ಕನ್ನಡ ಹಾಡುಗಳ ಪ್ಲೇ ಲಿಸ್ಟ್‌ 1 ಗಂಟೆಗೂ ಹೆಚ್ಚು ಇರುತ್ತದೆ" ಎಂದು ಅವರು ಹೇಳಿದ್ದಾರೆ.

ನನಗೆ 51 ವರ್ಷ ವಯಸ್ಸು, ನಾನು ಯುವಕನಲ್ಲ

"ಹೀಗಿದ್ದರೂ, ನಾನು ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವ ಯುವಕನಲ್ಲ. ನನಗೆ 51 ವರ್ಷ ವಯಸ್ಸಾಗಿದೆ . ನನ್ನ ಜೀವನದ ದ್ವಿತೀಯಾರ್ಧ ನಡೆಯುತ್ತಿದೆ. ನನ್ನ ಮಗನಂತಹ ಚಿಕ್ಕ ವ್ಯಕ್ತಿ, ಭಾಷೆಯ ಹೆಸರಿನಲ್ಲಿ ಸಾವಿರಾರು ಜನರ ಮುಂದೆ, ಕೆಲಸದ ದೃಷ್ಟಿಯಿಂದ ನನ್ನ ಎರಡನೇ ಭಾಷೆಯಾದ ಕನ್ನಡ ವಿಷಯವಾಗಿ ನೇರವಾಗಿ ನನ್ನನ್ನು ಬೆದರಿಸಿದ್ದಕ್ಕಾಗಿ ಕೋಪಗೊಳ್ಳುವ ಹಕ್ಕು ನನಗಿದೆ. ಅದೂ ನನ್ನ ಸಂಗೀತ ಕಾರ್ಯಕ್ರಮದ ಮೊದಲ ಹಾಡಿನ ಸಮಯದಲ್ಲಿ. ಆತ ತನ್ನೊಂದಿಗಿದ್ದ ಇನ್ನೂ ಕೆಲವರನ್ನೂ ಕೆರಳಿಸಿದ್ದಾನೆ. ಆತನೊಂದಿಗೆ ಇದ್ದವರೂ ಮುಜುಗರಕ್ಕೊಳಗಾಗಿದ್ದರು. ಆತನನ್ನು ಬಾಯಿ ಮುಚ್ಚಿಕೊಳ್ಳಲು ಕೇಳುತ್ತಿದ್ದರು.. ನಾನು ಅವರಿಗೆ ತುಂಬಾ ವಿನಮ್ರವಾಗಿ ಮತ್ತು ಪ್ರೀತಿಯಿಂದ ಹೇಳಿದೆ. ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ, ಇದು ನನ್ನ ಮೊದಲ ಹಾಡು ಮತ್ತು ನಾನು ಅವರನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದೆ.

"ನಾನು ಯೋಜಿಸಿದ ರೀತಿಯಲ್ಲಿ ಸಂಗೀತ ಕಚೇರಿಯನ್ನು ಮುಂದುವರಿಸಲು ನನಗೆ ಅವಕಾಶ ನೀಡಬೇಕು. ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು (ಪ್ಲೇ ಲಿಸ್ಟ್‌) ಸಿದ್ಧಪಡಿಸಿರುತ್ತಾರೆ. ಅದನ್ನು ಸಂಗೀತಗಾರರು ಮತ್ತು ತಂತ್ರಜ್ಞರು ಉಪಯೋಗಿಸುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು, ನನ್ನನ್ನು ಹುಚ್ಚುಚ್ಚಾಗಿ ಬೆದರಿಸಲು ಪ್ರಾರಂಭಿಸಲು ಮುಂದದಾದರು. ಈಗ ಹೇಳಿ, ತಪ್ಪು ಯಾರದ್ದು?" ಎಂದು ಸೋನು ನಿಗಮ್‌ ಪ್ರಶ್ನಿಸಿದ್ದಾರೆ.

"ನಾನು ದೇಶಭಕ್ತನಾಗಿರುವುದರಿಂದ, ವಿಶೇಷವಾಗಿ ಪಹಲ್ಗಾಮ್‌ನಲ್ಲಿ ನಡೆದ ಘಟನೆಯ ನಂತರ ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರನ್ನೂ ನಾನು ದ್ವೇಷಿಸುತ್ತೇನೆ. ಈ ಸಂದರ್ಭದಲ್ಲಿ ನನಗೆ ಬೆದರಿಕೆ ಹಾಕಿದವನಿಗೆ ಟೀಚ್‌ ಮಾಡಬೇಕಾಯಿತು. ಅದನ್ನು ನಾನು ಮಾಡಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಅಲ್ಲಿದ್ದ ಶಿಕ್ಷಕರು ಅದಕ್ಕಾಗಿ ನನ್ನನ್ನು ಹುರಿದುಂಬಿಸಿದರು. ಈ ವಿಷಯ ಅಲ್ಲಿಗೆ ಮುಗಿಯಿತು. ಇದಾದ ಬಳಿಕ ನಾನು ಒಂದು ಗಂಟೆಗೂ ಹೆಚ್ಚು ಸಮಯ ಕನ್ನಡ ಗೀತೆಗಳನ್ನು ಹಾಡಿದೆ. ಸಾಮಾಜಿಕ ಮಾಧ್ಯಮದ ಪಾಲೂ ಇದರಲ್ಲಿದೆ" ಎಂದು ಅವರು ವಿವರಣೆ ನೀಡಿದ್ದಾರೆ.

"ಇಲ್ಲಿ ತಪ್ಪು ಯಾರದು ಎಂದು ನಿರ್ಧರಿಸುವುದು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಸಂಸ್ಥೆಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ನಂಬುತ್ತೇನೆ. ಅವರು ನನ್ನಿಂದ ನಿರೀಕ್ಷಿಸುವದನ್ನು ಪಾಲಿಸುತ್ತೇನೆ. ನನಗೆ ಕರ್ನಾಟಕದಿಂದ ದೈವಿಕ ಪ್ರೀತಿ ಸಿಕ್ಕಿದೆ ಮತ್ತು ನಿಮ್ಮ ತೀರ್ಪು ಏನೇ ಇರಲಿ, ಯಾವುದೇ ದುರುದ್ದೇಶವಿಲ್ಲದೆ ಅದನ್ನು ಯಾವಾಗಲೂ ಪಾಲಿಸುತ್ತೇನೆ" ಎಂದು ಗಾಯಕ ಸೋನು ನಿಗಮ್‌ ವಿವರವಾಗಿ ಉತ್ತರಿಸಿದ್ದಾರೆ.

ಸೋನು ನಿಗಮ್‌ಗೆ ಬೆಂಗಳೂರಿನ ಅವಲಹಳ್ಳಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ರಿಜಿಸ್ಟಾರ್‌ ಪೋಸ್ಟ್‌ ಮೂಲಕ ನೋಟಿಸ್‌ ನೀಡಲಾಗಿದೆ. ನೋಟಿಸ್‌ ತಲುಪಿದ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇಂದು ಮಧ್ಯಾಹ್ನ ಬೆಂಗಳೂರಿನ ಫಿಲ್ಮ್‌ ಚೇಂಬರ್‌ನಲ್ಲಿ ಪ್ರಮುಖ ಗಾಯಕರನ್ನು ಒಳಗೊಂಡ ಪ್ರಮುಖರ ಸಭೆ ನಡೆದಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ "ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ" ಎಂಬ ಮಾಹಿತಿಯನ್ನು ಫಿಲ್ಮ್‌ಚೇಂಬರ್‌ ನೀಡಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in