ಕನ್ನಡ ಸುದ್ದಿ  /  Entertainment  /  Tamil Actor Daniel Balaji Recalls Yash Help

Daniel Balaji: 12 ವರ್ಷಗಳ ಹಿಂದೆಯೇ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿದ್ದರು.. ಯಶ್‌ ಸಹಾಯ ನೆನೆದ ತಮಿಳು ನಟ ಡೇನಿಯಲ್‌ ಬಾಲಾಜಿ

ಸಂಭಾವನೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಯಶ್‌ ಹಾಗೂ ಬಾಲಾಜಿ ಒಂದೆರಡು ನಿಮಿಷ ಮಾತನಾಡಿದ್ದಾರೆ. ನಂತರ ನಿರ್ಮಾಪಕರ ಬಳಿ ಮಾತನಾಡುವಂತೆ ಹೇಳಿ ಯಶ್‌ ಪೋನ್‌ ಇಟ್ಟಿದ್ದಾರೆ. ಅದಾದ ಮರುಕ್ಷಣ ಬಾಲಾಜಿ ಅವರ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಅದೇನು ಎಂದು ತೆರೆದು ನೋಡಿದರೆ ಯಶ್‌, ಬಾಲಾಜಿಗೆ ಒಂದಿಷ್ಟು ಹಣ ಕಳಿಸಿದ್ದಾರೆ.

ಯಶ್‌ ಸಹಾಯ ನೆನೆದ ತಮಿಳು ನಟ ಡೇನಿಯಲ್‌ ಬಾಲಾಜಿ
ಯಶ್‌ ಸಹಾಯ ನೆನೆದ ತಮಿಳು ನಟ ಡೇನಿಯಲ್‌ ಬಾಲಾಜಿ

ರಾಕಿಂಗ್‌ ಸ್ಟಾರ್‌ ಯಶ್‌, ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಕೈ ಜೋಡಿಸಿದ್ದಾರೆ. ಯಶೋಮಾರ್ಗ ಎಂಬ ಟ್ರಸ್ಟ್‌ ಸ್ಥಾಪಿಸಿ ಅದರ ಮೂಲಕ ಅನೇಕ ಬಡವರಿಗೆ ಸಹಾಯ ಮಾಡಿದ್ದಾರೆ. ಕೆರೆಗಳ ಹೂಳು ತೆಗೆಸಿದ್ದಾರೆ. ಆದರೆ ಯಶ್‌ ಚಿತ್ರರಂಗದ ಆರಂಭದ ದಿನಗಳಲ್ಲಿ ಕೂಡಾ ಅನೇಕರಿಗೆ ಹಣ ಸಹಾಯ ಮಾಡಿದ್ದಾರೆ. ತಮಿಳು ನಟ ಡೇನಿಯಲ್‌ ಬಾಲಾಜಿ ಯಶ್‌ ಸಹಾಯವನ್ನು ನೆನೆದಿದ್ದಾರೆ.

ಡೇನಿಯಲ್‌ ಬಾಲಾಜಿ ತಮಿಳು ಖ್ಯಾತ ನಟ ಸಿದ್ದಲಿಂಗಯ್ಯ ಅವರ ಸೋದರ ಸಂಬಂಧಿ. ತಮಿಳು ಸಿನಿಮಾರಂಗದಲ್ಲಿ ಬಾಲಾಜಿ ವಿಲನ್‌ ಆಗಿ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಕೂಡಾ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ತೆರೆ ಕಂಡ 'ಕಿರಾತಕ' ಚಿತ್ರದ ಮೂಲಕ ಡೇನಿಯಲ್‌ ಬಾಲಾಜಿ ಕನ್ನಡಕ್ಕೆ ಬಂದರು. ಕಿರಾತಕ ಸಿನಿಮಾದಲ್ಲಿ ನಟಿಸುವ ಮುನ್ನ ನಟ ಯಶ್‌, ತಮ್ಮ ಸಿನಿಮಾದಲ್ಲಿ ನಟಿಸಲು ಬಾಲಾಜಿ ಅವರಿಗೆ ಕರೆ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ಬಾಲಾಜಿ, ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದರಿಂದ ನನಗೆ ದೇವಸ್ಥಾನದ ಕೆಲಸ ಇದೆ ಆದ್ದರಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಭಾವನೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಯಶ್‌ ಹಾಗೂ ಬಾಲಾಜಿ ಒಂದೆರಡು ನಿಮಿಷ ಮಾತನಾಡಿದ್ದಾರೆ. ನಂತರ ನಿರ್ಮಾಪಕರ ಬಳಿ ಮಾತನಾಡುವಂತೆ ಹೇಳಿ ಯಶ್‌ ಪೋನ್‌ ಇಟ್ಟಿದ್ದಾರೆ. ಅದಾದ ಮರುಕ್ಷಣ ಬಾಲಾಜಿ ಅವರ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಅದೇನು ಎಂದು ತೆರೆದು ನೋಡಿದರೆ ಯಶ್‌, ಬಾಲಾಜಿಗೆ ಒಂದಿಷ್ಟು ಹಣ ಕಳಿಸಿದ್ದಾರೆ. ಆಶ್ಚರ್ಯ ವ್ಯಕ್ತಪಡಿಸಿದ ಬಾಲಾಜಿ ಯಶ್‌ಗೆ ಕರೆ ಮಾಡಿ, ಇದೇನು ಸರ್‌ ಇನ್ನೂ ನಾನು ಸಂಭಾವನೆ ವಿಚಾರವಾಗಿ ಮಾತನಾಡಿಲ್ಲ ಆಗಲೇ ದುಡ್ಡು ಕಳಿಸಿದ್ದೀರಿ? ಎಂದು ಕೇಳಿದಾಗ, ಇದು ನಾನು ನಿಮ್ಮ ದೇವಸ್ಥಾನಕ್ಕೆ ನೀಡುತ್ತಿರುವ ದೇಣಿಗೆ ಎಂದು ಯಶ್‌ ಹೇಳುತ್ತಾರೆ.

ಈ ವಿಚಾರವನ್ನು ಡೇನಿಯಲ್‌ ಬಾಲಾಜಿ ಇತ್ತೀಚೆಗೆ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಯಶ್‌ ಸಹಾಯದ ಮನೋಭಾವ ತಿಳಿದು ನೆಟಿಜನ್ಸ್‌ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಯಶ್‌ ಇಮೇಜ್‌ ಕೆಜಿಎಫ್‌ ನಂತರ ಸಂಪೂರ್ಣ ಬದಲಾಗಿದೆ. ಆದರೆ ಅದಕ್ಕೂ ಮುನ್ನವೇ ಯಶ್‌ ಜನರಿಗೆ ಈ ರೀತಿ ಸಹಾಯ ಮಾಡುತ್ತಿದ್ದರು ಎಂದು ಕೇಳಿ ಯಶ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ರಜನಿಕಾಂತ್‌ ಪುತ್ರಿ ಮನೆಯಲ್ಲಿ ದರೋಡೆ... ಪೊಲೀಸರಿಗೆ ದೂರು ನೀಡಿದ ಐಶ್ವರ್ಯ

ಖ್ಯಾತ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಕಳ್ಳತನವಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳತನವಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಐಶ್ವರ್ಯ ತೆನಾಂಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಘಟನೆ ಫೆಬ್ರವರಿ 10 ರಂದು ನಡೆದಿರುವ ಬಗ್ಗೆ ವರದಿಯಾಗಿದೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿದ ಬಾಲಿವುಡ್‌ ನಟಿ.. ವಿಡಿಯೋ ವೈರಲ್

ಸಾಲುಮರದ ತಿಮ್ಮಕ್ಕ ಅವರಿಗೆ ಈಗ 110 ವರ್ಷ ವಯಸ್ಸು. ಪದ್ಮಶ್ರೀ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಿಸಿ ಬಂದಿವೆ. ಹಿರಿಜೀವದ ಆಶೀರ್ವಾದ ಪಡೆಯಲು ಪ್ರತಿದಿನ ನೂರಾರು ಜನರು ಅವರನ್ನು ಭೇಟಿ ಮಾಡುತ್ತಾರೆ. ಇದೀಗ ಬಾಲಿವುಡ್‌ ನಟಿಯೊಬ್ಬರು ಸಾಲುಮರದ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

IPL_Entry_Point