ಕನ್ನಡ ಸುದ್ದಿ  /  Entertainment  /  Tamil Actor Silambarasan Praises Madhu Guruswamy

Madhu Guruswamy: ತಮಿಳು ಚಿತ್ರದಲ್ಲಿ ಮಧು ಗುರುಸ್ವಾಮಿ, ಕನ್ನಡಿಗನ ನಟನೆ ಹೊಗಳಿದ ಸಿಂಬು.. ವಿಡಿಯೋ

ಶಿವರಾಜ್‌ಕುಮಾರ್‌ ಹಾಗೂ ಶ್ರೀಮುರಳಿ ಅಭಿನಯದ ಕನ್ನಡದ 'ಮಫ್ತಿ' ಸಿನಿಮಾ ತಮಿಳಿಗೆ 'ಪತ್ತು ತಲಾ' ಹೆಸರಿನಲ್ಲಿ ರೀಮೇಕ್‌ ಆಗಿದೆ. ಈ ಚಿತ್ರದಲ್ಲಿ ತಮಿಳಿನ ಸಿಲಂಬರಸನ್‌ ನಾಯಕನಾಗಿ ನಟಿಸಿದ್ದಾರೆ. ಹಾಗೇ ಮಧು ಗುರುಸ್ವಾಮಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಧು ಗುರುಸ್ವಾಮಿ ನಟನೆಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

ಮಧು ಗುರುಸ್ವಾಮಿ ನಟನೆ ಹೊಗಳಿದ ಸಿಂಬು
ಮಧು ಗುರುಸ್ವಾಮಿ ನಟನೆ ಹೊಗಳಿದ ಸಿಂಬು

ಕನ್ನಡ ಚಿತ್ರರಂಗದಿಂದ ಅನೇಕ ನಟ-ನಟಿಯರು ಪರಭಾಷೆಗೆ ಹೋಗಿ ಹೆಸರು ಮಾಡಿದ್ದಾರೆ. ಅಲ್ಲಿನ ಜನರಿಂದ ಪ್ರಶಂಸೆ ಗಳಿಸಿದ್ದಾರೆ. ಇದೀಗ ಕನ್ನಡ ನಟ ಮಧು ಗುರುಸ್ವಾಮಿ ಕೂಡಾ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ತಮಿಳು ನಟ ಸಿಂಬು ಹಾಗೂ ಇನ್ನಿತರರು ಗುರುಸ್ವಾಮಿ ಅವರ ನಟನೆಯನ್ನು ಹೊಗಳಿಸಿದ್ದಾರೆ.

ಮಧು ಗುರುಸ್ವಾಮಿ ಕನ್ನಡದಲ್ಲಿ ಜೈ ಮಾರುತಿ 800, ಡೆಡ್ಲಿ 2, ಭಜರಂಗಿ, ಮಫ್ತಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಿವರಾಜ್‌ಕುಮಾರ್‌ ಹಾಗೂ ಶ್ರೀಮುರಳಿ ಅಭಿನಯದ ಕನ್ನಡದ 'ಮಫ್ತಿ' ಸಿನಿಮಾ ತಮಿಳಿಗೆ 'ಪತ್ತು ತಲಾ' ಹೆಸರಿನಲ್ಲಿ ರೀಮೇಕ್‌ ಆಗಿದೆ. ಈ ಚಿತ್ರದಲ್ಲಿ ತಮಿಳಿನ ಸಿಲಂಬರಸನ್‌ ನಾಯಕನಾಗಿ ನಟಿಸಿದ್ದಾರೆ. ಹಾಗೇ ಮಧು ಗುರುಸ್ವಾಮಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಧು ಗುರುಸ್ವಾಮಿ ನಟನೆಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಈ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಸಿಂಬು, ಗೌತಮ್‌ ಕಾರ್ತಿಕ್‌ ಹಾಗೂ ಇನ್ನಿತರರು ತಮ್ಮನ್ನು ಹೊಗಳಿರುವ ವಿಡಿಯೋವನ್ನು ಮಧು ಗುರುಸ್ವಾಮಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ 'ಸಲಾರ್‌' ಚಿತ್ರದಲ್ಲಿ ಕೂಡಾ ಮಧು ಗುರುಸ್ವಾಮಿ ನಟಿಸುತ್ತಿದ್ದಾರೆ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಆದ್ದರಿಂದ ಈ ಸಿನಿಮಾ ನಂತರ ಮಧು ಗುರುಸ್ವಾಮಿ ಅವರಿಗೆ ಚಿತ್ರರಂಗದಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.

'ಪತ್ತು ತಲಾ' ಚಿತ್ರವನ್ನು ಸ್ಟುಡಿಯೋ ಗ್ರೀನ್‌ ಹಾಗೂ ಪೆನ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಜಯಂತಿ ಲಾಲ್‌ ಹಾಗೂ ಕೆ.ಇ. ಜ್ಞಾನವೇಲ್‌ ರಾಜು ನಿರ್ಮಿಸಿದ್ದಾರೆ. ಎನ್‌ ಕೃಷ್ಣ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್‌. ರೆಹಮಾನ್‌ ಸಂಗೀತ ನೀಡಿದ್ದಾರೆ. ಮಾರ್ಚ್‌ 30 ರಂದು ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಸಿಂಬು, ಗೌತಮ್‌ ಕಾರ್ತಿಕ್‌, ಗೌತಮ್‌ ವಸುದೇವ್‌ ಮೆನನ್‌, ಪ್ರಿಯಾ ಭವಾನಿ ಶಂಕರ್‌ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. 'ಯುವರತ್ನ' ಚಿತ್ರದ ನಾಯಕಿ ಸಯೇಷಾ ಸೈಗಲ್‌ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

'ಉತ್ತರಕಾಂಡ'ಕ್ಕೆ ಶಿವಣ್ಣ ಎಂಟ್ರಿ... ರಮ್ಯಾ ಜೋಡಿ ಆಗ್ತಿರೋದು ಯಾರಿಗೆ , ಶಿವರಾಜ್‌ಕುಮಾರ್‌ ಅಥವಾ ಡಾಲಿ?

'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡಾ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಚಿತ್ರದ ಮುಹೂರ್ತ ನೆರವೇರಿದ್ದು ಶೂಟಿಂಗ್‌ ಕೂಡಾ ಆರಂಭವಾಗುತ್ತಿದೆ. ಕಾರ್ತಿಕ್‌ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿರುವ ವಿಚಾರವನ್ನು ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ರಮ್ಯಾ ಜೋಡಿ ಆಗ್ತಿರೋದು ಯಾರಿಗೆ ಎಂಬ ಅನುಮಾನ ಶುರುವಾಗಿದೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

ನಿಮ್ಮ ಸಣ್ಣತನದಿಂದ ನಮ್ಮಿಬ್ಬರ ಸಂಬಂಧ ಹಳಸುವಂತೆ ಮಾಡಬೇಡಿ ಎಂದ ಪ್ರಥಮ್‌.. ವಿಡಿಯೋ

ಪ್ರಥಮ್‌ ಪೋಸ್ಟ್‌ ನೋಡಿದ ದರ್ಶನ್‌ ಅಭಿಮಾನಿಗಳು ಆತನ ವಿರುದ್ಧ ಗರಂ ಆಗಿದ್ದರು. ನೀವು ದರ್ಶನ್‌ಗೆ ಬುದ್ಧಿ ಹೇಳುವಷ್ಟು ದೊಡ್ಡವರಲ್ಲ ಎಂದು ಅವರಿಗೇ ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಈಗ ಪ್ರಥಮ್‌ ಒಂದು ವಿಡಿಯೋ ಮಾಡಿ ನಾನು ದರ್ಶನ್‌ ವಿರೋಧಿಯಲ್ಲ ಎಂದಿದ್ಧಾರೆ. ಪ್ರಥಮ್‌ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point