ಅಮೃತಧಾರೆ ಧಾರಾವಾಹಿ: ಕಿಡ್ನ್ಯಾಪ್ ಆಗಿರುವ ಲಚ್ಚಿ ಪತ್ತೆಹಚ್ಚಲು ಸೃಜನ್ ನೆರವು; ಶಕುಂತಲಾದೇವಿಗೆ ಶುರುವಾಯ್ತು ಭೀತಿ
ಅಮೃತಧಾರೆ ಧಾರಾವಾಹಿ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಮಗು ಲಚ್ಚಿ ಕಾಣೆಯಾಗಿದ್ದಾಳೆ. ಆಕೆಯನ್ನು ಜೈದೇವ್ ಅಪಹರಣ ಮಾಡಿದ್ದಾನೆ. ಶಕುಂತಲಾ ಗ್ಯಾಂಗ್ನ ಈ ಕೆಲಸವನ್ನು ಸೃಜನ್ ಕಂಡುಹಿಡಿಯುವ ಸಾಧ್ಯತೆ ಇದೆ.

ಅಮೃತಧಾರೆ ಧಾರಾವಾಹಿ: ಲಚ್ಚಿ ಅಪಹರಣವಾಗಿದೆ. ಜೈದೇವ್ ತಾನೇ ಅಪಹರಣ ಮಾಡಿ ಸುಧಾಳಿಗೆ ಕಾಲ್ ಮಾಡುತ್ತಾನೆ. "ನಿಮಗೆ ಲಚ್ಚಿ ಸಿಗಬೇಕಾದರೆ ನಾನು ಕೇಳಿದ್ದನ್ನು ತಂದುಕೊಡಬೇಕು " ಎಂದು ಜೈದೇವ್ ಧ್ವನಿ ಬದಲಾಯಿಸಿ ಕಾಲ್ ಮಾಡುತ್ತಾನೆ. "ನನ್ನ ಮಗಳಿಗೆ ಏನೂ ಮಾಡಬೇಡಿ. ನಿಮಗೆ ಏನೂ ಬೇಕು" ಎಂದು ಕೇಳುತ್ತಾಳೆ. "ದುಡ್ಡುಬೇಕು" ಎಂದು ಕೇಳುತ್ತಾನೆ. ಅಲ್ಲೇ ಶಕುಂತಲಾದೇವಿ ಇರುತ್ತಾರೆ. ಆಮೇಲೆ ಅವರೇ ಫೋನ್ ರಿಸೀವ್ ಮಾಡ್ತಾರೆ. ಆ ಕಡೆಯಿಂದ ಜೈದೇವ್ ಮಾತನಾಡುತ್ತಾನೆ. "ನಾನಮ್ಮ ನಿಮ್ಮ ಮಗ" ಎನ್ನುತ್ತಾರೆ. ಒಟ್ಟಾರೆ, ಶಕುಂತಲಾದೇವಿ ಗ್ಯಾಂಗ್ ಮಾಡಿರುವ ಕಿಡ್ನ್ಯಾಪ್ ಮುಂದೆನಾಗುತ್ತದೆ ಎಂಬ ವೀಕ್ಷಕರಿಗೆ ಕಾಡಿದೆ. ಶಕುಂತಲಾದೇವಿ ಸುಮ್ಮನೆ ಅಳುವ ನಾಟಕ ಮಾಡುತ್ತಾರೆ. ಗೌತಮ್ ಇಂಟರ್ವ್ಯೂನಲ್ಲಿ ಬಿಝಿ ಇರುವ ಕಾರಣ ಫೋನ್ ಎತ್ತೋಲ್ಲ. ಆಮೇಲೆ ಭೂಮಿಕಾಗೆ ಕಾಲ್ ಮಾಡುತ್ತಾರೆ. ಆಕೆಯನ್ನು ವಾಪಸ್ ಬರಿಸೋದು ಇವರ ಉದ್ದೇಶ. ಇಲ್ಲವಾದರೆ ತಮ್ಮ ಮೈಕ್ ನಾಟಕ ಹೊರಬೀಳುತ್ತದೆ ಎಂಬ ಭಯ ಅವರಿಗಿದೆ.
ಭೂಮಿಕಾಳಿಗೆ ಕಾಲ್ ಮಾಡಿ "ಎಲ್ಲಿದ್ದರೂ ಇಲ್ಲಿಗೆ ಬಾಮ್ಮ" ಎನ್ನುತ್ತಾರೆ. ಮಗು ಕಿಡ್ನ್ಯಾಪ್ ಆಗಿರುವ ವಿಷಯ ತಿಳಿಸುತ್ತಾರೆ. "ಲಚ್ಚಿ ಕಿಡ್ನ್ಯಾಪ್ ಆಗಿದ್ದಾಳೆ. ನಮಗೆ ಏನೂ ಮಾಡಬೇಕು ಎಂದು ತಿಳಿಯುತ್ತಿಲ್ಲ. ಗೌತಮ್ ಫೋನ್ ತೆಗಿತಿಲ್ಲ. ಸುಧಾ ಅಳ್ತಾ ಇದ್ದಾಳೆ. ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದು ಶಕುಂತಲಾದೇವಿ ಅಳುವ ನಾಟಕವಾಡುತ್ತ ಹೇಳುತ್ತಾರೆ. ಇದನ್ನು ಕೇಳಿ ಭೂಮಿಕಾಗೆ ಶಾಕ್ ಆಗುತ್ತದೆ. ಅವಲ ಜತೆ ಸೃಜನ್ ಕೂಡ ಇದ್ದಾನೆ.
"ಸೃಜನ್ ಅರ್ಜೆಂಟ್ ಮನೆಗೆ ಹೋಗಬೇಕು" ಎನ್ನುತ್ತಾರೆ ಭೂಮಿಕಾ. "ಇನ್ನೊಂದು ಐದು ನಿಮಿಷ ಅವನು ಬಂದು ಬಿಡ್ತಾನೆ" ಎಂದು ಸೃಜನ್ ಹೇಳುತ್ತಾನೆ. "ನಾವು ಅರ್ಜೆಂಟ್ ಹೋಗಬೇಕು. ಲಚ್ಚಿ ಕಿಡ್ನ್ಯಾಪ್ ಆಗಿದ್ದಾಳೆ" ಎನ್ನುತ್ತಾರೆ. ಇನ್ನೊಂದೆಡೆ ಶಕುಂತಲಾದೇವಿಯ ಸ್ವಗತ ಇರುತ್ತದೆ. "ನನಗೆ ಚಳ್ಳೆಹಣ್ಣು ತಿನ್ನಿಸ್ತಾಳ. ಈಗ ಅವಳು ಓಡೋಡಿ ಬರುತ್ತಾಳೆ" ಎಂದು ಹೇಳಿಕೊಳ್ಳುತ್ತಾಳೆ.
ಇನ್ನೊಂದು ಕಡೆ ಗೌತಮ್ ದಿವಾನ್ ಸಂದರ್ಶನ ನಡೆಯುತ್ತದೆ. ಟಿವಿ ಸಂದರ್ಶನದಲ್ಲಿ ಗೌತಮ್ ಸ್ಪೂರ್ತಿದಾಯಕ ಮಾತನಾಡುತ್ತಾರೆ. ನಿಮಗೆ ರೋಲ್ ಮಾಡೆಲ್ ಯಾರು ಸರ್ ಎಂದು ಸಂದರ್ಶಕಿ ಕೇಳಿದಾಗ "ಮುಖ್ಯವಾಗಿ ನನ್ನ ತಂದೆ, ನನ್ನ ಮನೆಯವರು, ನನ್ನ ಹೆಂಡತಿ" ಎಂದು ಹೇಳುತ್ತಾರೆ ಗೌತಮ್. "ನನ್ನ ಜೀವನಕ್ಕೆ ಹೊಸ ಅರ್ಥ ದೊರಕಿದ್ದು ಭೂಮಿಕಾಳಿಂದ. ಅವಳು ಒಳ್ಳೆಯ ಪಾಟ್ನರ್. ನಾನು ಅವಳ ಫ್ಯಾನ್. ವೃತ್ತಿಪರವಾಗಿ ಅವರು ಟೀಚರ್. ನನ್ನ ಪಾಲಿಗೂ ಟೀಚರ್" ಎಂದು ಹೆಂಡತಿಯ ಗುಣಗಾನ ಮಾಡುತ್ತಾರೆ. ಅಲ್ಲಿ ಆನಂದ್ ಕೂಡ ಇರುತ್ತಾನೆ. ಆಗ ಭೂಮಿಕಾ ಆನಂದ್ಗೆ ಕರೆ ಮಾಡುತ್ತಾಳೆ. "ನೀವು ಈ ವಿಷಯವನ್ನು ಈಗಲೇ ಗೌತಮ್ಗೆ ತಿಳಿಸಿ" ಎಂದು ಹೇಳುತ್ತಾಳೆ. ಗೌತಮ್ಗೆ ವಿಷಯ ತಿಳಿಸುತ್ತಾನೆ. ಗೌತಮ್ ಕೂಡ ಗಾಬರಿಯಾಗುತ್ತಾರೆ.
ಭೂಮಿಕಾ ಮತ್ತು ಸೃಜನ್ ಮನೆಗೆ ಬರುತ್ತಾರೆ. ಅವರ ಮುಂದೆ ಶಕುಂತಲಾದೇವಿ ನಾಟಕ ಮುಂದುವರೆಯುತ್ತದೆ. ಯಾರೂ ಭಯಪಡಬೇಡಿ ಎಂದು ಭೂಮಿಕಾ ಧೈರ್ಯ ಹೇಳುತ್ತಾಳೆ. ಒಟ್ಟಾರೆ ಭೂಮಿಕಾಳನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಶಕುಂತಲಾದೇವಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಗೌತಮ್ ಬರುತ್ತಾರೆ. "ಇದೆಲ್ಲ ಹೇಗಾಯ್ತು" ಎಂದು ಕೇಳುತ್ತಾರೆ. "ಲಚ್ಚಿ ಬೋರಾಯ್ತು ಅಂದಳು. ನಾವಿಬ್ಬರು ಕಣ್ಣಿಗೆ ಬಟ್ಟಿ ಕಟ್ಟಿ ಆಡಿದ್ವಿ. ಅಷ್ಟರಲ್ಲಿ ಅವಳು ಕಾಣಿಸಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ.
ಈ ಸಂದರ್ಭದಲ್ಲಿ ಭೂಮಿಕಾ ಕೂಡ ಹೊರಗೆ ಇದ್ರು ಎಂದು ಶಕುಂತಲಾದೇವಿ ಹೇಳುತ್ತಾಳೆ. "ನೀವು ಮತ್ತೆ ಎಲ್ಲಿಗೆ ಹೋಗಿದ್ರಿ" ಎಂದು ಕೇಳುತ್ತಾರೆ ಗೌತಮ್. ಈ ಸಂದರ್ಭದಲ್ಲಿ ಸೃಜನ್ "ಅವರು ಟ್ಯಾಬ್ಲೆಟ್ ಬೇಕು ಅಂದ್ರು. ಅದಕ್ಕೆ ನಾನೂ ಅವರೂ ಹೊರಗೆ ಹೋದೆವು" ಎಂದು ಹೇಳುತ್ತಾನೆ. "ಆನಂದ್ ಕಮಿಷನರ್ಗೆ ಫೋನ್ ಮಾಡು" ಎಂದು ಗೌತಮ್ ಹೇಳುತ್ತಾರೆ. ತಕ್ಷಣ ಶಕುಂತಲಾದೇವಿ "ಬೇಡ ಗೌತಮ್, ಪೊಲೀಸರಿಗೆ ತಿಳಿಸಬಾರದು ಎಂದಿದ್ದಾರೆ. ಮಗುವಿಗೆ ತೊಂದರೆಯಾಗಬಹುದು" ಎಂದು ಶಕುಂತಲಾದೇವಿ ಹೇಳುತ್ತಾರೆ. ಸುಧಾ ಕೂಡ ಇದನ್ನು ಕೇಳಿ ಭಯಪಡುತ್ತಾಳೆ. ಇನ್ನೊಂದೆಡೆ ಜೈದೇವ್ ಗೂಂಡಾಗಳ ಜತೆ ಲಚ್ಚಿ ಜತೆ ಮಾತನಾಡುತ್ತ ಇರುತ್ತಾನೆ.
ಪೊಲೀಸರಿಗೆ ತಿಳಿಸಿದ್ರೆ ಲೊಕೆಷನ್ ಅಥವಾ ಫೋನ್ ಟ್ರ್ಯಾಕ್ ಮಾಡ್ತಾ ಇದ್ರು. ಇವರು ನೋಡಿದ್ರೆ ಏನೂ ಮಾಡೋದು ಬೇಡ ಅಂತಿದ್ದಾರೆ. ಈಗ ಹ್ಯಾಕರ್ಗಳನ್ನು ಎಲ್ಲಿ ಹುಡುಕೋದು ಎಂದು ಗೌತಮ್ ಹೇಳುತ್ತಾರೆ. ಆಗ ಅಲ್ಲಿ ಇದ್ದ ಸೃಜನ್ "ಸರ್ ನಾನೇ ಮಾಡುವೆ" ಎನ್ನುತ್ತಾನೆ. ಇದು ಶಕುಂತಲಾ ಟೀಮ್ಗೆ ಅನಿರೀಕ್ಷಿತ. "ಸರ್ ನಾನು ಅದೇ ಓದಿರುವುದು. ಈ ಹಿಂದೆ ಹ್ಯಾಕಿಂಗ್ ಮಾಡಿಲ್ಲ. ಆದರೆ, ಅದರ ಬಗ್ಗೆ ಎಲ್ಲವೂ ಗೊತ್ತಿದೆ" ಎನ್ನುತ್ತಾನೆ. "ಗೆಳೆಯ ಇವನು ಇಷ್ಟೊಂದು ಕಾನ್ಫಿಡೆಂಟ್ ಆಗಿ ಹೇಳ್ತಾ ಇದ್ದಾನೆ ಅಂದರೆ ಇವನು ಗ್ಯಾರಂಟಿ ಮಾಡ್ತಾನೆ. ಮಾಡಲಿ ಬಿಡು" ಎಂದು ಆನಂದ್ ಹೇಳುತ್ತಾನೆ. "ಇವರು ಏನಾದರೂ ಟ್ರ್ಯಾಕ್ ಮಾಡಿದ್ರೆ ಜೈ ಸಿಕ್ಕಿ ಹಾಕಿಕೊಳ್ಳುತ್ತಾನೆ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ.
ವಿಭಾಗ