Annayya Serial: ಮದುವೆಯ ದಿನವೇ ಡಿವೋರ್ಸ್ ಕೇಳಿದ ಪಾರು; ಬೇಸರವಾದರೂ ಮರು ಮಾತಾಡದೆ ಕಠೋರ ನಿರ್ಧಾರ ತೆಗೆದುಕೊಂಡ ಶಿವು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮದುವೆಯ ದಿನವೇ ಡಿವೋರ್ಸ್ ಕೇಳಿದ್ದಾಳೆ. ಅಣ್ಣಯ್ಯ ತನ್ನ ಎಲ್ಲಾ ಆಸೆಗಳನ್ನು ಅದುಮಿಕೊಂಡು ಅವಳು ಹೇಳಿದ್ದಕ್ಕೆಲ್ಲ ಒಪ್ಪುತ್ತಾನೆ.

ಅಣ್ಣಯ್ಯ ಧಾರಾವಾಹಿಯಲ್ಲಿ ದಿನೇ ದಿನೇ ತಿರುವುಗಳು ಹೆಚ್ಚುತ್ತಿದೆ. ಇದರಿಂದಾಗಿ ನೋಡುಗರಿಗೂ ಈ ಧಾರಾವಾಹಿ ಇಷ್ಟವಾಗುತ್ತಿದೆ. ಮದುವೆಯಾದ ದಿನವೇ ಪಾರು ತನ್ನ ಗಂಡ ಶಿವು ಹತ್ತಿರ ಡಿವೋರ್ಸ್ ಬೇಕು ಎಂದು ಕೇಳಿದ್ದಾಳೆ. ಈ ಮದುವೆ ಅವರಿಬ್ಬರ ಇಷ್ಟದ ಪ್ರಕಾರ ನಡೆದಿರುವುದಿಲ್ಲ. ಬದಲಾಗಿ ವೀರಭದ್ರ ಅಂದರೆ ಪಾರು ತಂದೆಯ ಒತ್ತಾಯದ ಮೇರೆಗೆ ನಡೆದಿರುತ್ತದೆ. ಮದುವೆ ಆಗುವ ಸಂದರ್ಭದಲ್ಲಿ ಶಿವುಗೂ ಇದರ ಬಗ್ಗೆ ತಿಳಿದಿರುತ್ತದೆ. ಪಾರು ಇನ್ನೊಬ್ಬ ಹುಡುಗನನ್ನು ಪ್ರೀತಿಸುತ್ತಾ ಇದ್ದಳು ಎನ್ನುವ ಸತ್ಯಾಂಶ ತಿಳಿದಿದ್ದರೂ ತಾಳಿ ಕಟ್ಟಲೇಬೇಕಾದ ಪ್ರಸಂಗ ಎದುರಾಗಿ ಶಿವು ತಾಳಿ ಕಟ್ಟಿರುತ್ತಾನೆ. ಆದರೆ ಪಾರು ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ.
ಬದಲಾಗಿ ಅವನ ಬಳಿ ಕೂಗುತ್ತಾಳೆ. ಅರ್ಥವಿಲ್ಲದ ಮಾತುಗಳನ್ನು ಆಡಿ ಶಿವು ಮನಸಿಗೆ ನೋವು ಮಾಡುತ್ತಾಳೆ. “ಇಲ್ಲ ಪಾರು ಹಾಗೆ ಮಾತಾಡ್ಬೇಡ, ನಾನು ಹೇಳೋದನ್ನು ಕೇಳು” ಎಂದು ಶಿವು ಎಷ್ಟು ಅರ್ಥ ಮಾಡಿಸುವ ಪ್ರಯತ್ನ ಮಾಡಿದರೂ ಪಾರು ಮಾತ್ರ ಅದ್ಯಾವುದನ್ನೂ ಒಪ್ಪುತ್ತಾ ಇರಲಿಲ್ಲ. ಹೀಗಿರುವಾಗ ಒಂದೇ ಸಲ ಪಾರು ಅಳು ನಿಲ್ಲಿಸಿ “ನನಗೆ ಡಿವೋರ್ಸ್ ಬೇಕು, ಕೊಡ್ತೀನಿ ಅಂತ ಪ್ರಮಾಣ ಮಾಡು” ಎಂದು ಕೈ ಮುಂದಿಡುತ್ತಾಳೆ.
ಪಾರು ನಿರ್ಧಾರಕ್ಕೆ ಶಿವು ಸಮ್ಮತಿ
ಬಡಪಾಯಿ ಶಿವುಗೆ ಹಾಗಂದ್ರೆ ಏನು ಅಂತನೇ ಗೊತ್ತಿರೋದಿಲ್ಲ. ನೀನು ಏನಂದೆ ಇನ್ನೊಮ್ಮೆ ಹೇಳ್ತೀಯಾ? ಅಂತ ಮತ್ತೆ ಶಿವು ಕೇಳಿದಾಗ ಎಲ್ಲವನ್ನೂ ವಿವರಿಸಿ ಹೇಳುತ್ತಾಳೆ. ಮುಂದೊಂದು ದಿನ ನಾನು ಪ್ರೀತಿ ಮಾಡಿದ ಸಿದ್ದಾರ್ಥ್ ಬಂದು ಕೇಳಿದ್ರೆ ನಾನು ಏನು ಅಂತ ಉತ್ತರ ಕೊಡೋದು? ಮದುವೆ ಆಗಿದೆ ಅಂತ ಹೇಳೋಕೆ ಆಗೋದಿಲ್ಲ. ಅದಿಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡಿದ್ದು. ನೀನು ನನಗೆ ಡಿವೋರ್ಸ್ ಕೊಡಲೇಬೇಕು. ಕೊಡ್ತೀನಿ ಅಂತ ಮಾತು ಕೊಡು ಎಂದು ಕೇಳುತ್ತಾಳೆ. ಆಗ ಅವನಿಗೆ ಅರ್ಥ ಆಗುತ್ತದೆ. ಅಳುತ್ತಲೇ ಅವನು ಅದಕ್ಕೆ ಒಪ್ಪಿಕೊಳ್ಳುತ್ತಾನೆ.
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್ನ ಎಲ್ಲಾ ಎಪಿಸೋಡ್ಗಳ ಕಥೆ ಇಲ್ಲಿ ಓದಬಹುದು.