Lakshmi Baramma Serial: ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು; ವೈಷ್ಣವ್ ನಂಬಿಕೆಯ ಗೋಪುರ ಕುಸಿಯಲು ಕ್ಷಣ ಸಾಕು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು; ವೈಷ್ಣವ್ ನಂಬಿಕೆಯ ಗೋಪುರ ಕುಸಿಯಲು ಕ್ಷಣ ಸಾಕು

Lakshmi Baramma Serial: ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು; ವೈಷ್ಣವ್ ನಂಬಿಕೆಯ ಗೋಪುರ ಕುಸಿಯಲು ಕ್ಷಣ ಸಾಕು

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಲಕ್ಷ್ಮೀ ತುಂಬಾ ಸೋತು ಹೋಗಿದ್ದಾಳೆ. ಮನೆ ಕೆಲಸದ ಗಂಗಕ್ಕ ಆಡಿದ ಮಾತು ವೈಷ್ಣವ್ ಹಾಗೂ ಲಕ್ಷ್ಮೀ ಬದುಕಿನಲ್ಲೇ ಬಿರುಗಾಳಿ ಏಳುವಂತಾಗಿದೆ.

ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು
ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಲಕ್ಷ್ಮೀ ತುಂಬಾ ಸೋತು ಹೋಗಿದ್ದಾಳೆ. ಹೇಗೋ ಮಾಡಿ ಪ್ರಾಣಾಪಾಯದಿಂದ ಬಚಾವಾಗಿ ಬಂದಿದ್ಧಾಳೆ. ಆದರೆ ವೈಷ್ಣವ್‌ಗೆ ಈ ಯಾವ ವಿಚಾರವೂ ತಿಳಿಯುತ್ತಿಲ್ಲ. ಅವನು ಲಕ್ಷ್ಮೀಗೆ ಸಮಾಧಾನ ಮಾಡುತ್ತಾ ಇದ್ದಾನೆ. “ಲಕ್ಷ್ಮೀ ದಯವಿಟ್ಟು ನೀವು ಕೀರ್ತಿ ವಿಚಾರವನ್ನು ನಿಮ್ಮ ತಲೆಯಿಂದ ಕಿತ್ತು ಹಾಕಿ. ಇಲ್ಲವಾದರೆ ನಿಮ್ಮ ಬದುಕಿಗೇ ಅದು ತೊಂದರೆ ಆಗುತ್ತದೆ. ನೀವು ಅಂದುಕೊಂಡ ಹಾಗೆ ಇಲ್ಲಿ ಯಾವುದೂ ಇಲ್ಲ. ಕೀರ್ತಿ ಸಾವಿನಿಂದ ನೀವು ಇಷ್ಟೊಂದು ನೊಂದುಕೊಂಡು ಕೂತರೆ ನಮ್ಮ ಬದುಕು ಮುಂದೆ ಸಾಗೋದಿಲ್ಲ. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು” ನೀವು ಎಂದು ಪದೇ ಪದೇ ಹೇಳುತ್ತಾ ಇರುತ್ತಾನೆ.

ಆದರೆ ಲಕ್ಷ್ಮೀ ತನ್ನ ನಾಟಕವನ್ನು ಮುಂದುವರೆಸುತ್ತಾಳೆ. ಹೋಗಿ ವೈಷ್ಣವ್‌ನನ್ನು ತಬ್ಬಿಕೊಳ್ಳುತ್ತಾಳೆ. ನೀವು ಇಷ್ಟೊಂದು ಅತ್ತರೆ ನಾನಾದ್ರೂ ಹೇಗೆ ಸಮಾಧಾನ ಮಾಡ್ಲಿ ಎಂದು ಅವನು ಕೇಳುತ್ತಾನೆ. ಇನ್ನು ಮುಂದೆ ನೀವು ಸಮಾಧಾನವಾಗಿರಿ ಕೀರ್ತಿಯಂತು ಈಗ ಮತ್ತೆ ಬದುಕಿ ಬರೋದಿಲ್ಲ ಎಂದು ಹೇಳುತ್ತಾಳೆ. ಆದರೆ ಲಕ್ಷ್ಮೀ ಅವನ ಎಲ್ಲಾ ಮಾತುಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರೋದಿಲ್ಲ. ಅವಳ ಮನದ ಮಾತೇ ಬೇರೆ ಇದೆ.

ಕಾವೇರಿ ಮಾಡಿದ ಮೋಸ ಏನು ಎನ್ನುವುದು ಲಕ್ಷ್ಮೀಗೆ ಮಾತ್ರ ಗೊತ್ತಿದೆ. ಆದರೆ ಎಲ್ಲರ ಎದುರು ಅದನ್ನು ಬಯಲು ಮಾಡಲು ಅವಳು ಸಾಕ್ಷಿಗಾಗಿ ಕಾಯುತ್ತಿದ್ದಾಳೆ. ಆದರೆ ಯಾವುದೇ ಸಾಕ್ಷಿ ಸಿಗುವವರೆಗೂ ತಾನು ನಾಟಕ ಮಾಡಲೇಬೇಕು ಎಂದು ಆಗಾಗ ಕೀರ್ತಿ ಆತ್ಮ ತನ್ನ ಮೈಮೇಲೆ ಬಂದ ರೀತಿ ವರ್ತನೆ ಮಾಡುತ್ತಾಳೆ. ಲಕ್ಷ್ಮೀ ಈ ರೀತಿ ವರ್ತನೆ ಮಾಡಿದಾಗಲೆಲ್ಲ ಅವಳಿಗೆ ಹುಚ್ಚು ಹಿಡಿದಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ ನಿಜಾಂಶ ಏನು ಎನ್ನುವುದು ಮನೆ ಕೆಲಸದ ಗಂಗಕ್ಕನಿಗೆ ಗೊತ್ತಿದೆ.

ವೈಷ್ಣವ್ ಪದೇ ಪದೇ ಲಕ್ಷ್ಮೀಗೆ ಬುದ್ದಿವಾದ ಹೇಳುತ್ತಾ ಇರುವುದನ್ನು ಕಂಡ ಗಂಗಕ್ಕ ತಾಳ್ಮೆ ಕಳೆದುಕೊಳ್ಳುತ್ತಾಳೆ. ಅವಳಿಗೆ ತುಂಬಾ ಕೋಪವೂ ಬಂದಿರುತ್ತದೆ. ಲಕ್ಷ್ಮೀ ರೂಮಿಗೆ ಹಾಲು ಕೊಡುವುದಕ್ಕಾಗಿ ಅವಳು ಬಂದಿರುತ್ತಾಳೆ. ಈ ರೀತಿ ಬಂದ ಸಂದರ್ಭದಲ್ಲಿ ಅವಳಿಗೆ ವೈಷ್ಣವ್ ಮತ್ತೆ ಲಕ್ಷ್ಮೀಗೆ ಬುದ್ದಿವಾದ ಹೇಳುತ್ತಿರುವುದು ಕಂಡು ಅವಳು ಲಕ್ಷ್ಮೀ ಇಷ್ಟು ದಿನ ಮಾಡಿದ್ದು ನಾಟಕ ಎಂದು ಹೇಳಿಬಿಡುತ್ತಾಳೆ. ಆಗ ವೈಷ್ಣವ್‌ಗೆ ಶಾಕ್ ಆಗಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.