Lakshmi Baramma Serial: ದುರ್ಗೆಯಾಗಿ ಬಂದ ಲಕ್ಷ್ಮೀ; ಕಾವೇರಿ ಅಂದುಕೊಂಡಂತೆ ಏನೂ ನಡೆಯೋದಿಲ್ಲ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ದುರ್ಗೆಯಾಗಿ ಬಂದ ಲಕ್ಷ್ಮೀ; ಕಾವೇರಿ ಅಂದುಕೊಂಡಂತೆ ಏನೂ ನಡೆಯೋದಿಲ್ಲ

Lakshmi Baramma Serial: ದುರ್ಗೆಯಾಗಿ ಬಂದ ಲಕ್ಷ್ಮೀ; ಕಾವೇರಿ ಅಂದುಕೊಂಡಂತೆ ಏನೂ ನಡೆಯೋದಿಲ್ಲ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ದುರ್ಗೆಯ ಮೂರ್ತಿಯನ್ನು ಮನೆಗೆ ತಂದಿದ್ದಾಳೆ. ವಿಜಯ ದಶಮಿಯನ್ನು ತಾನು ಈ ಮನೆಯಲ್ಲಿ ಆಚರಿಸುತ್ತೇನೆ ಎಂಬ ವಿಶ್ವಾಸ ಲಕ್ಷ್ಮೀಗೆ ಇದ್ದಂತೆ ಕಾಣುತ್ತದೆ.

ದುರ್ಗೆಯಾಗಿ ಬಂದ ಲಕ್ಷ್ಮೀ, ಕಾವೇರಿ ಇಷ್ಟಾರ್ಥ ಖಂಡಿತ ಸಿದ್ಧಿಯಾಗೋದಿಲ್ಲ
ದುರ್ಗೆಯಾಗಿ ಬಂದ ಲಕ್ಷ್ಮೀ, ಕಾವೇರಿ ಇಷ್ಟಾರ್ಥ ಖಂಡಿತ ಸಿದ್ಧಿಯಾಗೋದಿಲ್ಲ (ಕಲರ್ಸ್‌ ಕನ್ನಡ)

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಭಾನುಮತಿ ಹಾಗೂ ಕಾವೇರಿ ಸೇರಿಕೊಂಡು ಕೆಟ್ಟ ಉಪಾಯ ಮಾಡಿರುತ್ತಾರೆ. ಆ ಉಪಾಯದ ಪ್ರಕಾರ ಲಕ್ಷ್ಮೀ ಸಾಯಬೇಕಾಗಿತ್ತು, ಆದರೆ ಲಕ್ಷ್ಮೀ ದೇವಿಯ ಕೃಪೆಯಿಂದ ಬದುಕಿ ಬಂದಿದ್ದಾಳೆ. ಲಕ್ಷ್ಮೀಗೆ ಎಲ್ಲಾ ಸತ್ಯ ಗೊತ್ತಿದೆ. ಅವಳು ಬೇಕು ಎಂದೇ ಎಲ್ಲಾ ಗೊತ್ತಿದ್ದರೂ ಏನೂ ಗೊತ್ತಿಲ್ಲದವಳ ರೀತಿ ಬದುಕಿ ತೋರಿಸುತ್ತಾ ಇದ್ದಾಳೆ. ತನ್ನ ಅತ್ತೆ ಕಾವೇರಿ ಮಾಡಿದ ಮೋಸವನ್ನು ಎಲ್ಲರಿಗೂ ತೋರಿಸಬೇಕು ಎಂದು ಅವಳು ಅಂದುಕೊಂಡಿದ್ದಾಳೆ. ಕಾವೇರಿಯಂತು ಒಂದು ದಿನವೂ ಬಿಡದೇ ಬೇಕು ಎಂದೇ ಲಕ್ಷ್ಮೀಯನ್ನು ಟಾರ್ಗೆಟ್ ಮಾಡುತ್ತಾ ಇದ್ದಾಳೆ. ಎಲ್ಲಿ ಹೇಗೆ ಲಕ್ಷ್ಮೀಯನ್ನು ಕೊಲ್ಲಬೇಕು ಎಂದು ಆಲೋಚನೆ ಮಾಡುವುದೇ ಅವಳ ಕೆಲಸವಾಗಿದೆ.

ಅದೇ ಸಮಯಕ್ಕೆ ಕಾವೇರಿ ತನ್ನ ಐಡಿಯಾ ಹಾಳಾಗಿರುವುದಕ್ಕೆ ಕಾರಣವಾದವರಿಗೆ ಕಾಲ್ ಮಾಡಿ ಬೈಯ್ಯುತ್ತಾ ಇದ್ದಾಳೆ. ನಾನು ಅಂದುಕೊಂಡದ್ದು ಒಂದಾದರೆ ನೀವು ಮಾಡ್ತಾ ಇರೋದೇ ಇನ್ನೊಂದು. ಯಾಕೆ ಪದೇ ಪದೇ ನೀವು ಲಕ್ಷ್ಮೀನಾ ಕೊಲೆ ಮಾಡುವಲ್ಲಿ ಮೋಸ ಹೋಗ್ತಾ ಇದ್ದೀರಾ? ಅವಳು ಜಾಸ್ತಿ ದಿನ ಬದುಕಿದರೆ ನಮಗೇ ತೊಂದರೆ ಎಂದು ಹೇಳುತ್ತಿದ್ದಾಳೆ. ಅವರೆಲ್ಲೂ ಸೇರಿ ಲಕ್ಷ್ಮೀ ಕೊಲೆ ಮಾಡಲು ಮತ್ತೊಂದು ಉಪಾಯವನ್ನು ಹುಡುಕಿದ್ದಾರೆ. ಇನ್ನು ಲಕ್ಷ್ಮೀ ಪೂಜೆಗೆಂದು ದುರ್ಗೆಯ ಮೂರ್ತಿಯನ್ನು ಕೈಯ್ಯಲ್ಲಿ ಎತ್ತಿಕೊಂಡು ಬರುತ್ತಾಳೆ.

ಇನ್ನು ವೈಷ್ಣವ್ ಕೂಡ ಲಕ್ಷ್ಮೀ ಜೊತೆಯಲ್ಲಿ ಬರುತ್ತಾನೆ. ಮೊದಲಿಗೆ ಶಂಕ ನಾದ ಮೊಳಗುತ್ತದೆ. ಶಂಕ ನಾದ ಮೊಳಗಿದ ತಕ್ಷಣ ಎಲ್ಲರೂ ಮನೆಯ ಬಾಗಿಲ ಬಳಿ ಬರುತ್ತಾರೆ. ಬಂದು ನಿಂತಾಗ ಅಲ್ಲಿ ಲಕ್ಷ್ಮೀ ಕೈಯ್ಯಲ್ಲಿ ದುರ್ಗೆಯ ಮೂರ್ತಿಯನ್ನು ಹಿಡಿದಿರುತ್ತಾಳೆ. ಅವಳು ಕೈಯ್ಯಲ್ಲಿ ದುರ್ಗೆ ಮೂರ್ತಿ ಹಿಡಿದುಕೊಂಡು ಬಂದಿರುವುದನ್ನು ನೋಡಿ ಅಜ್ಜಿ ಹಾಗೂ ಮನೆಯವರೆಲ್ಲ ಓಡಿ ಬಂದು ಸರಿಯಾದ ಮುಹೂರ್ತಕ್ಕೆ ಮನೆಗೆ ದೇವಿ ಬಂದಿದ್ದಾಳೆ ಇನ್ನು ಯಾವ ದುಷ್ಟ ಶಕ್ತಿಗಳೂ ಇರುವುದಿಲ್ಲ ಎಂದು ಹೇಳಿದ್ದಾರೆ. ನಂತರ ಕಾವೇರಿಯೇ ಬಂದು ಆರತಿ ಮಾಡಿದ್ದಾಳೆ. ಆದರೆ ಮನಸಿನಲ್ಲಿ ವಿಷ ಕಾರುತ್ತಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.