Lakshmi Baramma Serial: ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣ; ಎಲ್ಲರಿಗೂ ಖುಷಿಯಾದರೆ ಕಾವೇರಿಗೆ ಮಾತ್ರ ಬಿಸಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣ; ಎಲ್ಲರಿಗೂ ಖುಷಿಯಾದರೆ ಕಾವೇರಿಗೆ ಮಾತ್ರ ಬಿಸಿ

Lakshmi Baramma Serial: ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣ; ಎಲ್ಲರಿಗೂ ಖುಷಿಯಾದರೆ ಕಾವೇರಿಗೆ ಮಾತ್ರ ಬಿಸಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಲಕ್ಷ್ಮೀ ಹಾಗೂ ಕಾವೇರಿಗೆ ಮಾತ್ರ ಎಂದಿನಂತೆ ಈಗಲೂ ಮನಸ್ತಾಪವಿದೆ. ಮುಂದೇನಾಗಿದೆ ನೋಡಿ.

ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣ
ವೈಷ್ಣವ್‌ ಮನೆಯಲ್ಲಿ ಹಬ್ಬದ ವಾತಾವರಣ (ಕಲರ್ಸ್‌ ಕನ್ನಡ)

ದುರ್ಗಾದೇವಿಯನ್ನು ಮನೆಗೆ ತಂದು ಪೂಜೆ ಮಾಡಲು ಲಕ್ಷ್ಮೀ ರೆಡಿಯಾಗಿದ್ದಾಳೆ. ಕಾವೇರಿ ತಾಯಿ ಈ ಪೂಜೆ ಬಗ್ಗೆ ತುಂಬಾ ಭಕ್ತಿ ಇಟ್ಟುಕೊಂಡಿದ್ದಾರೆ. ಕಾವೇರಿ ಲಕ್ಷ್ಮೀಗೆ ಆರತಿ ಮಾಡಿ ಒಳಗಡೆ ಕರೆದುಕೊಂಡಿದ್ದಾಳೆ. ದುರ್ಗೆಯನ್ನು ಸ್ಥಾಪನೆ ಮಾಡಿದ ನಂತರದಲ್ಲಿ ಅಜ್ಜಿ ಮಾತಾಡ್ತಾರೆ. ಲಕ್ಷ್ಮೀ ನೋಡು ನೀನು ಇದನ್ನು ವೃತದ ರೂಪದಲ್ಲಿ ಆರಾಧನೆ ಮಾಡಬೇಕು. ಪ್ರತಿನಿತ್ಯ ಪೂಜೆ ಮಾಡಿ ನೈವೇದ್ಯಕ್ಕೆ ಇಡಬೇಕು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳುತ್ತಾ ಇದ್ದ ಹಾಗೇ ಲಕ್ಷ್ಮೀ ಆಯ್ತು ಎಂದು ಒಪ್ಪಿಕೊಳ್ಳುತ್ತಾಳೆ. ಆಗ ಕಾವೇರಿಗೆ ಒಂದು ಪ್ರಶ್ನೆ ಬರುತ್ತದೆ.

“ಅಮ್ಮಾ ಒಂದು ಹೊತ್ತು ಪೂಜೆ ಮಾಡದೇ ಇದ್ದರೂ ಅಥವಾ ಏನಾದರೂ ಆಗಿ ತಪ್ಪಿ ಹೋದರೂ ಅಪಚಾರ ಆಗುತ್ತಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅಜ್ಜಿ ಕೋಪ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಆ ರೀತಿ ಶುಭಾರಂಭದಲ್ಲಿ ಈ ರೀತಿ ಅಪಚಾರದ ಮಾತಾಡುವುದು ಅವರಿಗೆ ಇಷ್ಟ ಆಗೋದಿಲ್ಲ. ಆಗ ಲಕ್ಷ್ಮೀ “ನೀವೇನು ಚಿಂತೆ ಮಾಡ್ಬೇಡಿ ಅತ್ತೆ ನನಗೆ ಗೊತ್ತು ಯಾವಾಗ ಏನು ಮಾಡಬೇಕು ಎಂದು” ನೀವು ಸುಮ್ಮನಿದ್ದರೆ ಅಷ್ಟೇ ಸಾಕು ಎನ್ನುವ ರೀತಿಯಲ್ಲಿ ಮಾತಾಡುತ್ತಾಳೆ.

ಕಾವೇರಿ ಈ ಮಾತಿಗೂ ಕೋಪ ಮಾಡಿಕೊಳ್ಳುತ್ತಾಳೆ. ಅದಾದ ನಂತರದಲ್ಲಿ. ಈಗ ಪೂಜೆ ಮುಗೀತು ಮುಂದಿನ ಕಾರ್ಯಕ್ರಮ ಮಾಡೋಣ್ವಾ? ಎಂದು ಕೃಷ್ಣ ಕೇಳುತ್ತಾರೆ. ಆಗ ವೈಷ್ಣವ್ ಮುಂದಿನ ಕಾರ್ಯಕ್ರಮನಾ? ಹಾಗಂದ್ರೆ ಏನು ಅಂತ ಪ್ರಶ್ನೆ ಮಾಡುತ್ತಾನೆ. ಆಗ ಕೃಷ್ಣ ಏನಿಲ್ಲ ಕಣೋ, ಊಟ ಮಾಡೋದು ಎಂದು ಹೇಳುತ್ತಾರೆ. ಆಗ ಗಂಗಕ್ಕ ಅದಕ್ಕೆಲ್ಲ ಚಿಂತೆ ಮಾಡ್ಬೇಡಿ ನಾನು ಈಗಲೆ ಎಲ್ಲ ರೆಡಿ ಮಾಡ್ತೀನಿ ಎಂದು ಹೇಳುತ್ತಾರೆ. ವೈಷ್ಣವ್ ಇದಕ್ಕೆ ಒಪ್ಪೋದಿಲ್ಲ. ನಾನೇ ಇಂದು ಎಲ್ಲ ಅಡುಗೆ ಮಾಡೋದು ಎಂದು ಹೇಳುತ್ತಾನೆ. ಆಗ ಮನೆಯವರಿಗೆಲ್ಲ ನಗು ಬರುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.